ಕನ್ನಡದಿಂದ ಬೆಳೆದ ನಟರು ಪ್ಯಾನ್ ಇಂಡಿಯಾ ಮೂವಿ ಎನ್ನುತ್ತಿದ್ದಾರೆ
ಕನ್ನಡದವ್ರಲ್ಲ, ಕನ್ನಡ ಸಿನಿಮಾಗಳೇ ಚಿತ್ರಮಂದಿರಕ್ಕೆ ಬರುತ್ತಿಲ್ಲ ಈಗ
ದರ್ಶನ್ ಮಾಸ್ ಹೀರೋ, ಅವರಿಗೆ ರಾಜ್ಯಾದ್ಯಂತ ಫ್ಯಾನ್ಸ್ ಇದ್ದಾರೆ
ಬೆಂಗಳೂರು: ನಟ ದರ್ಶನ್ ಅವರು ಜೈಲಿನಲ್ಲಿದ್ರೂ ಅವರು ಅಭಿನಯ ಮಾಡಿರುವ ಸಿನಿಮಾಗಳು ಭಾರೀ ಸದ್ದು ಮಾಡುತ್ತಿವೆ. ಇದೀಗ ಅವರು ನಟಿಸಿದ್ದ ಶಾಸ್ತ್ರಿ ಸಿನಿಮಾವನ್ನು ರೀ ರಿಲೀಸ್ ಮಾಡಲಾಗುತ್ತಿದೆ. ಕನ್ನಡ ಸಿನಿಮಾಗಳು ಯಾವುದು ಥಿಯೇಟರ್ಗಳಿಗೆ ಬರುತ್ತಿಲ್ಲ. ಆ ಕಾರಣಕ್ಕಾಗಿ ಶಾಸ್ತ್ರಿ ಮೂವಿಯನ್ನು ರೀ ರಿಲೀಸ್ ಮಾಡಲಾಗುತ್ತಿದೆ ಎಂದು ಕನ್ನಡ ಸಿನಿಮಾ ವಿತರಕ ಶಂಕರ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ ಮೊಬೈಲ್ ವಾಲ್ಪೇಪರ್ಗೆ ಯಾರ ಫೋಟೋ ಇದೆ..? ಫ್ಯಾಮಿಲಿದಂತೂ ಅಲ್ವೇ ಅಲ್ಲ!
ಶಾಸ್ತ್ರಿ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡುವ ಕುರಿತು ನ್ಯೂಸ್ಫಸ್ಟ್ ಜೊತೆ ಮಾತನಾಡಿದ ಶಂಕರ್, ಕನ್ನಡದಿಂದಲೇ ಬೆಳೆದ ನಟರು ಪ್ಯಾನ್ ಇಂಡಿಯಾ ಮೂವಿ ಅಂತ ಹೋಗುತ್ತಿದ್ದಾರೆ. ಕನ್ನಡ ಚಿತ್ರಗಳ ಮೇಲೆ ಅಭಿಮಾನ ಇಲ್ಲ. ದರ್ಶನ್ ಮಾಸ್ ಹೀರೋ. ಅವರಿಗೆ ರಾಜ್ಯಾದ್ಯಂತ ಫ್ಯಾನ್ಸ್ ಇದ್ದಾರೆ. ಕನ್ನಡ ಸಿನಿಮಾಗಳು ಯಾವುದು ಚಿತ್ರಮಂದಿರಕ್ಕೆ ಬರ್ತಿಲ್ಲ. ಆ ಕಾರಣಕ್ಕೆ ಶಾಸ್ತ್ರಿ ಚಿತ್ರವನ್ನು ರೀ-ರಿಲೀಸ್ ಮಾಡಲಾಗುತ್ತಿದೆ. ಕಾಟೇರ ರಿಲೀಸ್ಗೂ ಮೊದಲು 80 ಥಿಯೇಟರ್ಗಳು ಮುಚ್ಚಿದ್ದವು. ಆದರೆ ಕಾಟೇರ ರಿಲೀಸ್ ಆದ ಮೇಲೆ ಎಲ್ಲ ಓಪನ್ ಆದವು. ಒಂದು ಥಿಯೇಟರ್ಗೆ 5 ಕೆಲಸದವರು ಎಂದರೆ 500- 600 ಜನರಿಗೆ ಕೆಲಸ ಸಿಕ್ಕಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ರಸೆಲ್.. ಹೃದಯ ಗುಜರಾತಿ, ಆತ್ಮ ಮಾತ್ರ ಕೆರಿಬಿಯನ್ ಅನ್ನೋದ್ಯಾಕೆ..?
ಶಾಸ್ತ್ರಿ ಮೂವಿ ಮಾಸ್ ಸಿನಿಮಾ. ಒಳ್ಳೆ ಸಿನಿಮಾ. ಜನ ಥಿಯೇಟರ್ಗೆ ಬಂದೇ ಬರುತ್ತಾರೆ. ದರ್ಶನ್ ಅವರ ವೈಯಕ್ತಿಕ ವಿಚಾರ ಇದಕ್ಕೆ ಸಂಬಂಧಿಸಿಲ್ಲ. ಈ ಸಿನಿಮಾವನ್ನು ಬಿಡುಗಡೆ ಮಾಡುವುದು ಕಮರ್ಷಿಯಲ್ ಉದ್ದೇಶ ಅಷ್ಟೇ. ನಟ ಉಪೇಂದ್ರ ಅವರ ‘ಎ’ ಸಿನಿಮಾ ರೀ ರಿಲೀಸ್ ಮಾಡಿದ್ದು ನಾನೇ. ಬೆಳಗ್ಗೆ 6 ಗಂಟೆ ಶೋ ಹೌಸ್ಫುಲ್ ಆಗಿತ್ತು. ಕನ್ನಡ ಸಿನಿಮಾ ಅಂದ್ರೆ ಜನ ಬಂದು ನೋಡೇ ನೋಡ್ತಾರೆ. ಇದರಿಂದ ಒಂದೆರಡು ಕಾಸು ಆಗುತ್ತೆ ಅನ್ನೋದಷ್ಟೇ ಇಲ್ಲಿನ ಪ್ರಮುಖ ಉದ್ದೇಶ ಎಂದು ಶಂಕರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕನ್ನಡದಿಂದ ಬೆಳೆದ ನಟರು ಪ್ಯಾನ್ ಇಂಡಿಯಾ ಮೂವಿ ಎನ್ನುತ್ತಿದ್ದಾರೆ
ಕನ್ನಡದವ್ರಲ್ಲ, ಕನ್ನಡ ಸಿನಿಮಾಗಳೇ ಚಿತ್ರಮಂದಿರಕ್ಕೆ ಬರುತ್ತಿಲ್ಲ ಈಗ
ದರ್ಶನ್ ಮಾಸ್ ಹೀರೋ, ಅವರಿಗೆ ರಾಜ್ಯಾದ್ಯಂತ ಫ್ಯಾನ್ಸ್ ಇದ್ದಾರೆ
ಬೆಂಗಳೂರು: ನಟ ದರ್ಶನ್ ಅವರು ಜೈಲಿನಲ್ಲಿದ್ರೂ ಅವರು ಅಭಿನಯ ಮಾಡಿರುವ ಸಿನಿಮಾಗಳು ಭಾರೀ ಸದ್ದು ಮಾಡುತ್ತಿವೆ. ಇದೀಗ ಅವರು ನಟಿಸಿದ್ದ ಶಾಸ್ತ್ರಿ ಸಿನಿಮಾವನ್ನು ರೀ ರಿಲೀಸ್ ಮಾಡಲಾಗುತ್ತಿದೆ. ಕನ್ನಡ ಸಿನಿಮಾಗಳು ಯಾವುದು ಥಿಯೇಟರ್ಗಳಿಗೆ ಬರುತ್ತಿಲ್ಲ. ಆ ಕಾರಣಕ್ಕಾಗಿ ಶಾಸ್ತ್ರಿ ಮೂವಿಯನ್ನು ರೀ ರಿಲೀಸ್ ಮಾಡಲಾಗುತ್ತಿದೆ ಎಂದು ಕನ್ನಡ ಸಿನಿಮಾ ವಿತರಕ ಶಂಕರ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ ಮೊಬೈಲ್ ವಾಲ್ಪೇಪರ್ಗೆ ಯಾರ ಫೋಟೋ ಇದೆ..? ಫ್ಯಾಮಿಲಿದಂತೂ ಅಲ್ವೇ ಅಲ್ಲ!
ಶಾಸ್ತ್ರಿ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡುವ ಕುರಿತು ನ್ಯೂಸ್ಫಸ್ಟ್ ಜೊತೆ ಮಾತನಾಡಿದ ಶಂಕರ್, ಕನ್ನಡದಿಂದಲೇ ಬೆಳೆದ ನಟರು ಪ್ಯಾನ್ ಇಂಡಿಯಾ ಮೂವಿ ಅಂತ ಹೋಗುತ್ತಿದ್ದಾರೆ. ಕನ್ನಡ ಚಿತ್ರಗಳ ಮೇಲೆ ಅಭಿಮಾನ ಇಲ್ಲ. ದರ್ಶನ್ ಮಾಸ್ ಹೀರೋ. ಅವರಿಗೆ ರಾಜ್ಯಾದ್ಯಂತ ಫ್ಯಾನ್ಸ್ ಇದ್ದಾರೆ. ಕನ್ನಡ ಸಿನಿಮಾಗಳು ಯಾವುದು ಚಿತ್ರಮಂದಿರಕ್ಕೆ ಬರ್ತಿಲ್ಲ. ಆ ಕಾರಣಕ್ಕೆ ಶಾಸ್ತ್ರಿ ಚಿತ್ರವನ್ನು ರೀ-ರಿಲೀಸ್ ಮಾಡಲಾಗುತ್ತಿದೆ. ಕಾಟೇರ ರಿಲೀಸ್ಗೂ ಮೊದಲು 80 ಥಿಯೇಟರ್ಗಳು ಮುಚ್ಚಿದ್ದವು. ಆದರೆ ಕಾಟೇರ ರಿಲೀಸ್ ಆದ ಮೇಲೆ ಎಲ್ಲ ಓಪನ್ ಆದವು. ಒಂದು ಥಿಯೇಟರ್ಗೆ 5 ಕೆಲಸದವರು ಎಂದರೆ 500- 600 ಜನರಿಗೆ ಕೆಲಸ ಸಿಕ್ಕಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ರಸೆಲ್.. ಹೃದಯ ಗುಜರಾತಿ, ಆತ್ಮ ಮಾತ್ರ ಕೆರಿಬಿಯನ್ ಅನ್ನೋದ್ಯಾಕೆ..?
ಶಾಸ್ತ್ರಿ ಮೂವಿ ಮಾಸ್ ಸಿನಿಮಾ. ಒಳ್ಳೆ ಸಿನಿಮಾ. ಜನ ಥಿಯೇಟರ್ಗೆ ಬಂದೇ ಬರುತ್ತಾರೆ. ದರ್ಶನ್ ಅವರ ವೈಯಕ್ತಿಕ ವಿಚಾರ ಇದಕ್ಕೆ ಸಂಬಂಧಿಸಿಲ್ಲ. ಈ ಸಿನಿಮಾವನ್ನು ಬಿಡುಗಡೆ ಮಾಡುವುದು ಕಮರ್ಷಿಯಲ್ ಉದ್ದೇಶ ಅಷ್ಟೇ. ನಟ ಉಪೇಂದ್ರ ಅವರ ‘ಎ’ ಸಿನಿಮಾ ರೀ ರಿಲೀಸ್ ಮಾಡಿದ್ದು ನಾನೇ. ಬೆಳಗ್ಗೆ 6 ಗಂಟೆ ಶೋ ಹೌಸ್ಫುಲ್ ಆಗಿತ್ತು. ಕನ್ನಡ ಸಿನಿಮಾ ಅಂದ್ರೆ ಜನ ಬಂದು ನೋಡೇ ನೋಡ್ತಾರೆ. ಇದರಿಂದ ಒಂದೆರಡು ಕಾಸು ಆಗುತ್ತೆ ಅನ್ನೋದಷ್ಟೇ ಇಲ್ಲಿನ ಪ್ರಮುಖ ಉದ್ದೇಶ ಎಂದು ಶಂಕರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ