ವಿನಯ್ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಓನರ್
ದರ್ಶನ್ ಆಪ್ತ ವಲಯದಲ್ಲಿ ವಿನಯ್ ಕಾಯಂ ಸದಸ್ಯ
ದರ್ಶನ್ ಪಟ್ಟಣಗೆರೆ ಶೆಡ್ ಪರಿಚಯಿಸಿದ್ದೇ ವಿನಯ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆ್ಯಂಡ್ ಟೀಂ ಅರೆಸ್ಟ್ ಆಗಿದ್ದಾರೆ. ಸದ್ಯ ವಿಚಾರಣೆ ನಡೆಯುತ್ತಿದೆ. ದರ್ಶನ್ ತಂಡದಲ್ಲಿ ಆತನ ಸ್ನೇಹಿತ ವಿನಯ್ ಕೂಡ ಭಾಗಿಯಾಗಿದ್ದು, ಎ10 ಆರೋಪಿಯಾಗಿದ್ದಾರೆ. ಆದರೆ ವಿನಯ್ ಮತ್ತು ದರ್ಶನ್ ಸ್ನೇಹ ಹೇಗೆ ಶುರುವಾಯ್ತು ಎಂಬುದು ಗೊತ್ತಾ? ಇಲ್ಲಿದೆ ಮಾಹಿತಿ.
ವಿನಯ್ ಹೋಟೆಲ್ ಉದ್ಯಮಿ ಮತ್ತು ಫೈನಾಶ್ಯಿಯರ್ ಕೂಡ ಆಗಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆತನ ಕೈವಾಡವು ಇದೆ ಎಂಬುದು ಸಾಬೀತಾಗಿದೆ. ಹೀಗಾಗಿ ದರ್ಶನ್ ಜೊತೆಗೆ ಈ ಕೇಸ್ನಲ್ಲಿ ತಗಲಾಕಿಕೊಂಡಿದ್ದಾರೆ.
ಖ್ಯಾತ ಸಿನಿಮಾ ನಟನಿಂದ ವಿನಯ್ ಪರಿಚಯ
ಆರ್ ಆರ್ ನಗರದಲ್ಲಿರುವ ಖ್ಯಾತ ಸಿನಿಮಾ ನಟನಿಂದ ವಿನಯ್ಗೆ ದರ್ಶನ್ ಪರಿಚಯವಾಗುತ್ತದೆ. ಐದಾರು ವರ್ಷಗಳ ಹಿಂದೆ ಪಾರ್ಟಿಯಲ್ಲಿ ಪರಿಚಯವಾಗುತ್ತದೆ.
ಇದನ್ನೂ ಓದಿ: ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದ ದರ್ಶನ್ ಆ್ಯಂಡ್ ಗ್ಯಾಂಗ್.. ಇಂದು ಮತ್ತೊಮ್ಮೆ ಪೊಲೀಸರಿಂದ ವಿಚಾರಣೆ
ವಿನಯ್ ಗೆ ಪ್ರಭಾವಿಗಳ ಪರಿಚಯ
ವಿನಯ್ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಓನರ್ ಆಗಿದ್ದು, ಈ ರೆಸ್ಟೋರೆಂಟ್ ಗೆ ದರ್ಶನ್ ಬಂದಾಗ ವಿನಯ್ ರಾಜಾದಿತ್ಯ ನೀಡುತ್ತಿದ್ದರು. ವಿನಯ್ ಗೆ ಪ್ರಭಾವಿಗಳ ಪರಿಚಯವಿದ್ದ ಹಿನ್ನೆಲೆಯಲ್ಲಿ ದರ್ಶನ್ ಆತನೊಂದಿಗೆ ಕ್ಲೋಸ್ ಆಗುತ್ತಾರೆ.
ಇದನ್ನೂ ಓದಿ: ನಿಮ್ಮನ್ನ ಮಿಸ್ ಮಾಡಿಕೊಳ್ತಿದ್ದೇನೆ ಅಪ್ಪ.. ದರ್ಶನ್ ನೆನೆದು ‘ಫಾದರ್ಸ್ ಡೇ’ ಶುಭಾಶಯ ತಿಳಿಸಿದ ಮಗ ವಿನೀಶ್
ದರ್ಶನ್ ಪಾರ್ಟಿಗಳನ್ನ ಆಯೋಜಿಸಿದ್ದ ವಿನಯ್
ವಿನಯ್ ಫ್ಲವರ್, ಬೊಕ್ಕೆಗಳ ಮೂಲಕ ದರ್ಶನ್ ಅವರನ್ನು ಅಟ್ರಾಕ್ಟ್ ಮಾಡುತ್ತಿದ್ದರು. ಹೀಗಾಗಿ ದರ್ಶನ್ ಆಪ್ತ ವಲಯದ ಕಾಯಂ ಸದಸ್ಯನಾಗಿ ವಿನಯ್ ಕಾಣಿಸಿಕೊಂಡರು. ಬರ್ತಾ ಬರ್ತಾ ದರ್ಶನ್ ಪಾರ್ಟಿಗಳನ್ನ ವಿನಯ್ ಆಯೋಜಿಸುತ್ತಿದ್ದರು.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್; ನಟ ದರ್ಶನ್ಗೆ ಯಾವ್ಯಾವ ಶಿಕ್ಷೆ ನೀಡ್ಬೋದು ಗೊತ್ತಾ?
ರೆಡ್ ಕಲರ್ ಜೀಪ್
ವಿನಯ್ ರೆಡ್ ಕಲರ್ ಜೀಪ್ ಖರೀದಿಸಿದ ನಂತರ ದರ್ಶನ್ ಮತ್ತು ಆತನ ಓಡಾಟ ಹೆಚ್ಚಾಯ್ತು. ದರ್ಶನ್ನನ್ನು ವಿನಯ್ ಹಲವೆಡೆ ಕರೆದುಕೊಂಡು ಹೋಗುತ್ತಿದ್ದರು. ಅಷ್ಟು ಮಾತ್ರವಲ್ಲದೆ ದರ್ಶನ್ ಪಟ್ಟಣಗೆರೆ ಶೆಡ್ ಪರಿಚಯಿಸಿದ್ದೇ ವಿನಯ್. ಕೆಲ ವರ್ಷಗಳಿಂದ ದರ್ಶನ್ ಜೊತೆ ನಿತ್ಯ ಕಾಂಟಾಕ್ಟ್ ಹೊಂದಿದ್ದ ವಿನಯ್ ಶೂಟಿಂಗ್ ಇಲ್ಲದ ಸಮಯದಲ್ಲಿ ದರ್ಶನ್ ಜೊತೆಯೇ ಇರುತ್ತಿದ್ದರು. ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿನಯ್ ಪ್ರಮುಖ ಪಾತ್ರವಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಿನಯ್ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಓನರ್
ದರ್ಶನ್ ಆಪ್ತ ವಲಯದಲ್ಲಿ ವಿನಯ್ ಕಾಯಂ ಸದಸ್ಯ
ದರ್ಶನ್ ಪಟ್ಟಣಗೆರೆ ಶೆಡ್ ಪರಿಚಯಿಸಿದ್ದೇ ವಿನಯ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆ್ಯಂಡ್ ಟೀಂ ಅರೆಸ್ಟ್ ಆಗಿದ್ದಾರೆ. ಸದ್ಯ ವಿಚಾರಣೆ ನಡೆಯುತ್ತಿದೆ. ದರ್ಶನ್ ತಂಡದಲ್ಲಿ ಆತನ ಸ್ನೇಹಿತ ವಿನಯ್ ಕೂಡ ಭಾಗಿಯಾಗಿದ್ದು, ಎ10 ಆರೋಪಿಯಾಗಿದ್ದಾರೆ. ಆದರೆ ವಿನಯ್ ಮತ್ತು ದರ್ಶನ್ ಸ್ನೇಹ ಹೇಗೆ ಶುರುವಾಯ್ತು ಎಂಬುದು ಗೊತ್ತಾ? ಇಲ್ಲಿದೆ ಮಾಹಿತಿ.
ವಿನಯ್ ಹೋಟೆಲ್ ಉದ್ಯಮಿ ಮತ್ತು ಫೈನಾಶ್ಯಿಯರ್ ಕೂಡ ಆಗಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆತನ ಕೈವಾಡವು ಇದೆ ಎಂಬುದು ಸಾಬೀತಾಗಿದೆ. ಹೀಗಾಗಿ ದರ್ಶನ್ ಜೊತೆಗೆ ಈ ಕೇಸ್ನಲ್ಲಿ ತಗಲಾಕಿಕೊಂಡಿದ್ದಾರೆ.
ಖ್ಯಾತ ಸಿನಿಮಾ ನಟನಿಂದ ವಿನಯ್ ಪರಿಚಯ
ಆರ್ ಆರ್ ನಗರದಲ್ಲಿರುವ ಖ್ಯಾತ ಸಿನಿಮಾ ನಟನಿಂದ ವಿನಯ್ಗೆ ದರ್ಶನ್ ಪರಿಚಯವಾಗುತ್ತದೆ. ಐದಾರು ವರ್ಷಗಳ ಹಿಂದೆ ಪಾರ್ಟಿಯಲ್ಲಿ ಪರಿಚಯವಾಗುತ್ತದೆ.
ಇದನ್ನೂ ಓದಿ: ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದ ದರ್ಶನ್ ಆ್ಯಂಡ್ ಗ್ಯಾಂಗ್.. ಇಂದು ಮತ್ತೊಮ್ಮೆ ಪೊಲೀಸರಿಂದ ವಿಚಾರಣೆ
ವಿನಯ್ ಗೆ ಪ್ರಭಾವಿಗಳ ಪರಿಚಯ
ವಿನಯ್ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಓನರ್ ಆಗಿದ್ದು, ಈ ರೆಸ್ಟೋರೆಂಟ್ ಗೆ ದರ್ಶನ್ ಬಂದಾಗ ವಿನಯ್ ರಾಜಾದಿತ್ಯ ನೀಡುತ್ತಿದ್ದರು. ವಿನಯ್ ಗೆ ಪ್ರಭಾವಿಗಳ ಪರಿಚಯವಿದ್ದ ಹಿನ್ನೆಲೆಯಲ್ಲಿ ದರ್ಶನ್ ಆತನೊಂದಿಗೆ ಕ್ಲೋಸ್ ಆಗುತ್ತಾರೆ.
ಇದನ್ನೂ ಓದಿ: ನಿಮ್ಮನ್ನ ಮಿಸ್ ಮಾಡಿಕೊಳ್ತಿದ್ದೇನೆ ಅಪ್ಪ.. ದರ್ಶನ್ ನೆನೆದು ‘ಫಾದರ್ಸ್ ಡೇ’ ಶುಭಾಶಯ ತಿಳಿಸಿದ ಮಗ ವಿನೀಶ್
ದರ್ಶನ್ ಪಾರ್ಟಿಗಳನ್ನ ಆಯೋಜಿಸಿದ್ದ ವಿನಯ್
ವಿನಯ್ ಫ್ಲವರ್, ಬೊಕ್ಕೆಗಳ ಮೂಲಕ ದರ್ಶನ್ ಅವರನ್ನು ಅಟ್ರಾಕ್ಟ್ ಮಾಡುತ್ತಿದ್ದರು. ಹೀಗಾಗಿ ದರ್ಶನ್ ಆಪ್ತ ವಲಯದ ಕಾಯಂ ಸದಸ್ಯನಾಗಿ ವಿನಯ್ ಕಾಣಿಸಿಕೊಂಡರು. ಬರ್ತಾ ಬರ್ತಾ ದರ್ಶನ್ ಪಾರ್ಟಿಗಳನ್ನ ವಿನಯ್ ಆಯೋಜಿಸುತ್ತಿದ್ದರು.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್; ನಟ ದರ್ಶನ್ಗೆ ಯಾವ್ಯಾವ ಶಿಕ್ಷೆ ನೀಡ್ಬೋದು ಗೊತ್ತಾ?
ರೆಡ್ ಕಲರ್ ಜೀಪ್
ವಿನಯ್ ರೆಡ್ ಕಲರ್ ಜೀಪ್ ಖರೀದಿಸಿದ ನಂತರ ದರ್ಶನ್ ಮತ್ತು ಆತನ ಓಡಾಟ ಹೆಚ್ಚಾಯ್ತು. ದರ್ಶನ್ನನ್ನು ವಿನಯ್ ಹಲವೆಡೆ ಕರೆದುಕೊಂಡು ಹೋಗುತ್ತಿದ್ದರು. ಅಷ್ಟು ಮಾತ್ರವಲ್ಲದೆ ದರ್ಶನ್ ಪಟ್ಟಣಗೆರೆ ಶೆಡ್ ಪರಿಚಯಿಸಿದ್ದೇ ವಿನಯ್. ಕೆಲ ವರ್ಷಗಳಿಂದ ದರ್ಶನ್ ಜೊತೆ ನಿತ್ಯ ಕಾಂಟಾಕ್ಟ್ ಹೊಂದಿದ್ದ ವಿನಯ್ ಶೂಟಿಂಗ್ ಇಲ್ಲದ ಸಮಯದಲ್ಲಿ ದರ್ಶನ್ ಜೊತೆಯೇ ಇರುತ್ತಿದ್ದರು. ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿನಯ್ ಪ್ರಮುಖ ಪಾತ್ರವಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ