ಮೊದಲೊಂದು ಮದುವೆಯಾಗಿದ್ದ ನಟಿ ಪವಿತ್ರಾ ಗೌಡ
ಆ ಸಿನಿಮಾ ಆಡಿಷನ್ ವೇಳೆ ದರ್ಶನ್ ಪರಿಚಯವಾದ್ರಾ?
ಈ ಕೊಲೆಯಲ್ಲಿ ಪವಿತ್ರಾ ಗೌಡ ಕೈವಾಡ ಇದೆಯಾ? ಇಲ್ಲಿದೆ ಮಾಹಿತಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್ ಆಗಿದ್ದಾರೆ. ನಟಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿರುವ ಆರೋಪದ ಮೇರೆಗೆ ರೇಣುಕಾ ಸ್ವಾಮಿ ಎಂಬಾತನನ್ನು ಕೊಲೆ ಮಾಡಲಾಗಿದೆ. ಬಳಿಕ ಆತನನ್ನು ಕಾಪಾಕ್ಷಿ ಪಾಳಯದ ಬಳಿ ಮೋರಿಯಲ್ಲಿ ಎಸೆದಿದ್ದಾರೆ. ಆದರೀಗ ಪೊಲೀಸರು ನಟ ದರ್ಶನ್ ಜೊತೆಗೆ ನಟಿ ಪವಿತ್ರಾ ಗೌಡರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸುತ್ತಿದ್ದಾರೆ.
ಪವಿತ್ರಾ ಗೌಡ ಯಾರು? ದರ್ಶನ್ಗೂ ಆಕೆಗೆ ಏನು ಸಂಬಂಧ?
ಪವಿತ್ರಾ ಗೌಡ 18 ನೇ ವಯಸ್ಸಿಗೆ ಸಂಜಯ್ ಸಿಂಗ್ ಎಂಬವರ ಜೊತೆ ಸಪ್ತಪದಿ ತುಳಿದಿದ್ದರು. ಪ್ರೀತಿಸಿ ಮದುವೆಯಾಗಿದ್ದ ಜೋಡಿ ಚಾಮರಾಜಪೇಟೆಯಲ್ಲಿ ವಾಸವಿದ್ದರು. ಬಳಿಕ ಆತನಿಂದ ಒಂದು ಹೆಣ್ಣು ಮಗುವನ್ನು ಪಡೆದರು.
ಇದನ್ನೂ ಓದಿ:ಮೈಸೂರಲ್ಲಿ ಕೊಲೆ? ಬೆಂಗಳೂರಲ್ಲಿ ಡೆಡ್ಬಾಡಿ? ಚಿತ್ರಹಿಂಸೆ ನೀಡಿ ರೇಣುಕಾಸ್ವಾಮಿ ಕೊಲೆ
ಪವಿತ್ರಾ ಪತಿ ಸಂಜಯ್ ಸಿಂಗ್ ದಿನಸಿ ಅಂಗಡಿ ವ್ಯಾಪಾರ ಮಾಡುತ್ತಿದ್ದು, ಸದ್ಯ ಪವಿತ್ರ ಗೌಡ ಆತನಿಂದ ದೂರವಾಗಿದ್ದಾರೆ.
ದರ್ಶನ್ ಪರಿಚಯ ಹೇಗಾಯ್ತು?
ಪವಿತ್ರಾ ಗೌಡಗೆ ‘ಜಗ್ಗುದಾದ’ ಸಿನಿಮಾ ಆಡಿಷನ್ ಕೊಡಲು ಹೋಗಿದ್ದ ವೇಳೆ ದರ್ಶನ್ ಪರಿಚಯವಾಗುತ್ತದೆ. ಅಂದಿನಿಂದ ಪವಿತ್ರಾ ಗೌಡ ದರ್ಶನ್ ಜೊತೆ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ದರ್ಶನ್ ಪರಿಚಯವಾದ ನಂತರ ಪತಿ ಸಂಜಯ್ನಿಂದ ಪವಿತ್ರ ದೂರವಾಗಿದ್ದಾಳೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ದರ್ಶನ್ ಏಟಿಗೆ ಕೊಲೆಯಾದ ರೇಣುಕಾಸ್ವಾಮಿ ಯಾರು? ಇಲ್ಲಿದೆ ಇಂಚಿಂಚು ಮಾಹಿತಿ
ಇನ್ನು ಪವಿತ್ರಾ ಗೌಡ ‘ಛತ್ರಿಗಳು ಸಾರ್ ಛತ್ರಿಗಳು’ ಸಿನಿಮಾ ಮೂಲಕ ಬಣ್ಣ ಲೋಕಕ್ಕೆ ಎಂಟ್ರಿ ಕೊಟ್ಟರು. ಆ ಬಳಿಕ ಬೆರಳೆಣಿಕೆಯ ಸಿನಿಮಾ ಮಾಡಿದ್ದರು. ಆದರೆ ಆ ಸಿನಿಮಾಗಳಿಂದ ಆಷ್ಟೊಂದು ಹೆಸರು ಮಾಡಲಿಲ್ಲ.
View this post on Instagram
ನಮ್ಮಿಬ್ಬರ ಸಂಬಂಧಕ್ಕೆ 10 ವರ್ಷ
ಕಳೆದ ಜನವರಿ ತಿಂಗಳಿನಲ್ಲಿ ನಟಿ ಪವಿತ್ರಾ ಗೌಡ ಅವರು ಡಿ ಬಾಸ್ ದರ್ಶನ್ ಜೊತೆಗಿನ ಆತ್ಮೀಯ ಫೋಟೋಗಳನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ‘ನಮ್ಮ ರಿಲೇಶನ್ ಷಿಪ್ ಗೆ 10 ವರ್ಷ’ ಎಂದು ಬರೆಯುವ ಮೂಲಕ ಪೋಸ್ಟ್ ಹಾಕಿಕೊಂಡಿದ್ದರು. ಫೋಟೋದಲ್ಲಿ ಪವಿತ್ರಾ ಗೌಡ ಮತ್ತು ಆಕೆಯ ಮಗಳ ಜೊತೆ ದರ್ಶನ್ ಕಾಣಿಸಿಕೊಂಡಿದ್ದರು. ಇದೇ ವಿಚಾರವಾಗಿ ದರ್ಶನ್ ಪತ್ನಿ ವಿಜಯ ಲಕ್ಷ್ಮೀ ಸಾಮಾಜಿಕ ಜಾಲತಾಣದಲ್ಲಿ ವಾರ್ ನಡೆದಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮೊದಲೊಂದು ಮದುವೆಯಾಗಿದ್ದ ನಟಿ ಪವಿತ್ರಾ ಗೌಡ
ಆ ಸಿನಿಮಾ ಆಡಿಷನ್ ವೇಳೆ ದರ್ಶನ್ ಪರಿಚಯವಾದ್ರಾ?
ಈ ಕೊಲೆಯಲ್ಲಿ ಪವಿತ್ರಾ ಗೌಡ ಕೈವಾಡ ಇದೆಯಾ? ಇಲ್ಲಿದೆ ಮಾಹಿತಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್ ಆಗಿದ್ದಾರೆ. ನಟಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿರುವ ಆರೋಪದ ಮೇರೆಗೆ ರೇಣುಕಾ ಸ್ವಾಮಿ ಎಂಬಾತನನ್ನು ಕೊಲೆ ಮಾಡಲಾಗಿದೆ. ಬಳಿಕ ಆತನನ್ನು ಕಾಪಾಕ್ಷಿ ಪಾಳಯದ ಬಳಿ ಮೋರಿಯಲ್ಲಿ ಎಸೆದಿದ್ದಾರೆ. ಆದರೀಗ ಪೊಲೀಸರು ನಟ ದರ್ಶನ್ ಜೊತೆಗೆ ನಟಿ ಪವಿತ್ರಾ ಗೌಡರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸುತ್ತಿದ್ದಾರೆ.
ಪವಿತ್ರಾ ಗೌಡ ಯಾರು? ದರ್ಶನ್ಗೂ ಆಕೆಗೆ ಏನು ಸಂಬಂಧ?
ಪವಿತ್ರಾ ಗೌಡ 18 ನೇ ವಯಸ್ಸಿಗೆ ಸಂಜಯ್ ಸಿಂಗ್ ಎಂಬವರ ಜೊತೆ ಸಪ್ತಪದಿ ತುಳಿದಿದ್ದರು. ಪ್ರೀತಿಸಿ ಮದುವೆಯಾಗಿದ್ದ ಜೋಡಿ ಚಾಮರಾಜಪೇಟೆಯಲ್ಲಿ ವಾಸವಿದ್ದರು. ಬಳಿಕ ಆತನಿಂದ ಒಂದು ಹೆಣ್ಣು ಮಗುವನ್ನು ಪಡೆದರು.
ಇದನ್ನೂ ಓದಿ:ಮೈಸೂರಲ್ಲಿ ಕೊಲೆ? ಬೆಂಗಳೂರಲ್ಲಿ ಡೆಡ್ಬಾಡಿ? ಚಿತ್ರಹಿಂಸೆ ನೀಡಿ ರೇಣುಕಾಸ್ವಾಮಿ ಕೊಲೆ
ಪವಿತ್ರಾ ಪತಿ ಸಂಜಯ್ ಸಿಂಗ್ ದಿನಸಿ ಅಂಗಡಿ ವ್ಯಾಪಾರ ಮಾಡುತ್ತಿದ್ದು, ಸದ್ಯ ಪವಿತ್ರ ಗೌಡ ಆತನಿಂದ ದೂರವಾಗಿದ್ದಾರೆ.
ದರ್ಶನ್ ಪರಿಚಯ ಹೇಗಾಯ್ತು?
ಪವಿತ್ರಾ ಗೌಡಗೆ ‘ಜಗ್ಗುದಾದ’ ಸಿನಿಮಾ ಆಡಿಷನ್ ಕೊಡಲು ಹೋಗಿದ್ದ ವೇಳೆ ದರ್ಶನ್ ಪರಿಚಯವಾಗುತ್ತದೆ. ಅಂದಿನಿಂದ ಪವಿತ್ರಾ ಗೌಡ ದರ್ಶನ್ ಜೊತೆ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ದರ್ಶನ್ ಪರಿಚಯವಾದ ನಂತರ ಪತಿ ಸಂಜಯ್ನಿಂದ ಪವಿತ್ರ ದೂರವಾಗಿದ್ದಾಳೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ದರ್ಶನ್ ಏಟಿಗೆ ಕೊಲೆಯಾದ ರೇಣುಕಾಸ್ವಾಮಿ ಯಾರು? ಇಲ್ಲಿದೆ ಇಂಚಿಂಚು ಮಾಹಿತಿ
ಇನ್ನು ಪವಿತ್ರಾ ಗೌಡ ‘ಛತ್ರಿಗಳು ಸಾರ್ ಛತ್ರಿಗಳು’ ಸಿನಿಮಾ ಮೂಲಕ ಬಣ್ಣ ಲೋಕಕ್ಕೆ ಎಂಟ್ರಿ ಕೊಟ್ಟರು. ಆ ಬಳಿಕ ಬೆರಳೆಣಿಕೆಯ ಸಿನಿಮಾ ಮಾಡಿದ್ದರು. ಆದರೆ ಆ ಸಿನಿಮಾಗಳಿಂದ ಆಷ್ಟೊಂದು ಹೆಸರು ಮಾಡಲಿಲ್ಲ.
View this post on Instagram
ನಮ್ಮಿಬ್ಬರ ಸಂಬಂಧಕ್ಕೆ 10 ವರ್ಷ
ಕಳೆದ ಜನವರಿ ತಿಂಗಳಿನಲ್ಲಿ ನಟಿ ಪವಿತ್ರಾ ಗೌಡ ಅವರು ಡಿ ಬಾಸ್ ದರ್ಶನ್ ಜೊತೆಗಿನ ಆತ್ಮೀಯ ಫೋಟೋಗಳನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ‘ನಮ್ಮ ರಿಲೇಶನ್ ಷಿಪ್ ಗೆ 10 ವರ್ಷ’ ಎಂದು ಬರೆಯುವ ಮೂಲಕ ಪೋಸ್ಟ್ ಹಾಕಿಕೊಂಡಿದ್ದರು. ಫೋಟೋದಲ್ಲಿ ಪವಿತ್ರಾ ಗೌಡ ಮತ್ತು ಆಕೆಯ ಮಗಳ ಜೊತೆ ದರ್ಶನ್ ಕಾಣಿಸಿಕೊಂಡಿದ್ದರು. ಇದೇ ವಿಚಾರವಾಗಿ ದರ್ಶನ್ ಪತ್ನಿ ವಿಜಯ ಲಕ್ಷ್ಮೀ ಸಾಮಾಜಿಕ ಜಾಲತಾಣದಲ್ಲಿ ವಾರ್ ನಡೆದಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ