/newsfirstlive-kannada/media/post_attachments/wp-content/uploads/2024/07/darshan-28.jpg)
ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ದರ್ಶನ್ರನ್ನು ನೋಡಲು ತಾಯಿ, ತಮ್ಮ ಜೈಲಿಗೆ ಆಗಮಿಸಿದ್ದಾರೆ. ಈ ವೇಳೆ ಅಮ್ಮನನ್ನ ಕಂಡ ನಟ ದರ್ಶನ್ ಕಣ್ಣೀರು ಹಾಕಿದ್ದಾರೆ.
ಮೇರು ನಟ ತೂಗುದೀಪ ಶ್ರೀನಿವಾಸ್ರವರ ಪತ್ನಿ ಮೀನಾ ತೂಗುದೀಪರವರು ಜೈಲಿನಲ್ಲಿರುವ ಮಗನನ್ನು ಕಂಡು ಭಾವುಕರಾಗಿದ್ದಾರೆ. ಭೇಟಿ ವೇಳೆ ಪರಸ್ಪರ ಅಮ್ಮ ಮತ್ತು ಮಗ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ಜೈಲು ಸೇರಿದ ಬಳಿಕ ಚೇಂಜ್ ಆದ ದರ್ಶನ್.. ಟಿವಿ ನೋಡ್ತಾರೆ, ಕೇರಂ ಆಡ್ತಾರೆ, ಟೈಂ ಪಾಸ್ ಮಾಡ್ತಾರೆ!
ಘಟನೆ ಬಗ್ಗೆ ನೆನೆದು ಮಗ ದರ್ಶನ್ ಅಮ್ಮನ ಬಳಿ ಅಳಲುತೋಡಿಕೊಂಡಿದ್ದಾರೆ. ರೇಣುಕಾಸ್ವಾಮಿ ಹತ್ಯೆಯ ಕೃತ್ಯದಲ್ಲಿ ತನ್ನ ಪಾತ್ರದ ಬಗ್ಗೆ ಅಮ್ಮನಿಗೆ ಸ್ಪಷ್ಟನೆ ನೀಡಿದ್ದಾರೆ. ಮಗನ ಮಾತನ್ನು ಆಲಿಸಿದ ತಾಯಿ ಮೀನಾ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ಪವಿತ್ರಾ ಗೌಡರನ್ನು ಭೇಟಿ ಮಾಡಿದ ದರ್ಶನ್! ಆಕೆಗೆ ಎಲ್ಲಾ ಸರಿ ಹೋಗುತ್ತೆ ಎಂದ್ರಂತೆ ದಾಸ?
ಚಾಮುಂಡೇಶ್ವರಿ ನಮ್ಮ ಜೊತೆಗಿದ್ದಾಳೆ ಎಂದು ಧೈರ್ಯ ತುಂಬಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಮಗನೊಂದಿಗೆ ಮಾತಾಡಿದ ಮೀನಾ ಮಾತನಾಡಿದ್ದಾರೆ.
ಇದನ್ನೂ ಓದಿ: SP ಕಚೇರಿ ಮುಂದೆಯೇ ಹೆಂಡತಿಗೆ ಚೂರಿ ಇರಿದ ಕಾನ್ಸ್ಟೇಬಲ್.. ಪತ್ನಿ ಸಾವು
ಪ್ರತ್ಯೇಕ ಕೊಠಡಿಯಲ್ಲಿ ಅಮ್ಮ-ಮಗನ ಭೇಟಿ ಮಾಡಿದ್ದಾರೆ. ಅಮ್ಮನ ಜೊತೆಗೆ ತಮ್ಮ ದಿನಕರ್ ತೂಗುದೀಪ ಕೂಡ ಬಂದಿದ್ದು, ಅಣ್ಣ ದರ್ಶನ್ಗೆ ಸಾಂತ್ವನ ಹೇಳಿದ್ದಾರೆ. ಕಾನೂನು ಹೋರಾಟದ ಬಗ್ಗೆಯೂ ದರ್ಶನ್ ಜೊತೆಗೆ ಪತ್ನಿ ವಿಜಯಲಕ್ಷ್ಮೀ, ದಿನಕರ್ ತೂಗುದೀಪ ಮತ್ತು ಅಮ್ಮ ಮೀನಾ ತೂಗುದೀಪ ಮಾಹಿತಿ ಹಂಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ