/newsfirstlive-kannada/media/post_attachments/wp-content/uploads/2024/06/dboss11.jpg)
ಮೈಸೂರು: ರೇಣುಕಾಸ್ವಾಮಿ ಕೊಲೆ ಕೇಸ್ಗೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ ನಟ ದರ್ಶನ್ ಅರೆಸ್ಟ್ ಆಗಿ ಇಂದಿಗೆ ಮೂರನೇ ದಿನ. ಇತ್ತ ಹೀರೋನೇ ಇಲ್ಲದ ಡೆವಿಲ್ ಸಿನಿಮಾ ಶೂಟಿಂಗ್ ಬಿಕೋ ಎನ್ನುತ್ತಿದ್ದು, ಕೊನೆಗೆ ಪ್ಯಾಕಪ್ ಮಾಡಿದೆ.
‘ಡೆವಿಲ್’ ಪ್ಯಾಕಪ್
ಮೈಸೂರಿನ ಲಲಿತ ಮಹಲ್ ಹೋಟೆಲ್ ನಲ್ಲಿ ದರ್ಶನ್ ಬಹುನಿರೀಕ್ಷಿತ ಡೆವಿಲ್ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಅರೆಸ್ಟ್ ಆಗಿದ್ದು, ನಟನನ್ನು ನಂಬಿದ್ದ ಚಿತ್ರತಂಡಕ್ಕೆ ದೊಡ್ಡಮಟ್ಟದ ನಷ್ಟವಾಗಿದೆ.
ಇದನ್ನೂ ಓದಿ: ಶೂಟಿಂಗ್ ಸ್ಥಳದಲ್ಲಿ ಮೌನವಿದ್ದ ನಟ ದರ್ಶನ್! ಕೊಲೆ ಮಾಡಿದ ಪಶ್ಚಾತ್ತಾಪ ಕಾಡುತ್ತಿತ್ತೇ?
ಲಕ್ಷಾಂತರ ರೂಪಾಯಿ ನಷ್ಟ
ಇತ್ತ ದರ್ಶನ್ ಬಂಧನ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರತಂಡ ಪ್ಯಾಕಪ್ ಮಾಡಿದೆ. ಜೊತೆಗೆ ದಿನವೊಂದಕ್ಕೆ ಲಕ್ಷಾಂತರ ರೂಪಾಯಿ ಬಾಡಿಗೆಯೂ ವ್ಯರ್ಥವಾಗಿದೆ. ಸಹಕಲಾವಿದರು, ಟೆಕ್ನಿಷಿಯನ್ ಸೇರಿ ಎಲ್ಲರಿಗೂ ಸಂಭಾವನೆ ನೀಡಲು ಕಷ್ಟವಾಗಿದೆ.
ಇದನ್ನೂ ಓದಿ: ಕಟ್ಟಿಗೆ, ಹಗ್ಗ, ಸಿಸಿಟಿವಿ, ಬಟ್ಟೆ, ಎಣ್ಣೆ ಬಾಟಲಿ.. ಒಂದಾ, ಎರಡಾ.. ರೇಣುಕಾಸ್ವಾಮಿ ಪ್ರಕರಣದಲ್ಲಿ ಸಿಕ್ಕ ಸಾಕ್ಷ್ಯಗಳು!
ಹೀರೋನೇ ಇಲ್ಲದ ಸಿನಿಮಾ
ಜೂನ್ 11 ರಂದೇ ಡೆವಿಲ್ ಚಿತ್ರತಂಡ ಚಿತ್ರೀಕರಣವನ್ನು ಸ್ಥಗಿತ ಮಾಡಿದೆ. ಕೋಟ್ಯಾಂತರ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣವಾಗ್ತಿದ್ದ ಚಿತ್ರ ಇದೀಗ ಹೀರೋ ಇಲ್ಲದೆ ಸಪ್ಪಗಾಗಿದೆ.
ಇದನ್ನೂ ಓದಿ: ದರ್ಶನ್ ಮತ್ತು ಗ್ಯಾಂಗ್ ವಿರುದ್ದ ಸದ್ಯ ಸಿಕ್ಕಿರುವ ಎವಿಡೆನ್ಸ್ಗಳಿಷ್ಟು! ಇದರಿಂದ ತಪ್ಪಿಸಿಕೊಳ್ಳೋಕೆ ಸಾಧ್ಯನೇ ಇಲ್ಲ
ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಂಡಿದ್ದ ಚಿತ್ರತಂಡ
ಜೂನ್ ಅಂತ್ಯದವರೆಗೆ ಡೆವಿಲ್ ಚಿತ್ರತಂಡ ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಂಡಿತ್ತು. ಆದರೀಗ ದರ್ಶನ್ನಿಂದಾಗಿ ಚಿತ್ರತಂಡಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ