/newsfirstlive-kannada/media/post_attachments/wp-content/uploads/2024/08/darshan7.jpg)
ಬೆಂಗಳೂರು: ಕೇಸ್ವೊಂದರಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ಗೆ ಮತ್ತೆ 3 ದಿನಗಳ ಕಾಲ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶ ನೀಡಿದೆ. ಕೇಸ್ ಕುರಿತು ನಟ ದರ್ಶನ್ ಪೊಲೀಸ್ರ ಮುಂದೆ ಬಾಯ್ಬಿಟ್ಟ ಅಸಲಿ ಸತ್ಯವನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಲಾಗಿದೆ.
ಇನ್ನು, ರೇಣುಕಾಸ್ವಾಮಿ ಜೀವ ತೆಗೆದ ಬಳಿಕ ನಟ ದರ್ಶನ್ ಮತ್ತು ಗ್ಯಾಂಗ್ ಖತರ್ನಾಕ್ ಪ್ಲಾನ್ ಮಾಡಿದ್ದಾರೆ. ಈ ಬಗ್ಗೆ ಖುದ್ದು ನಟ ದರ್ಶನ್ ಅವರೇ ಎಲ್ಲಾ ಮಾಹಿತಿಯನ್ನು ಪೊಲೀಸ್ರ ಮುಂದೆ ಬಿಚ್ಚಿಟ್ಟಿದ್ದಾರೆ. ಮೃತದೇಹ ಸಾಗಿಸಲು ಇವರು ಏನು ಪ್ಲಾನ್ ಮಾಡಿದ್ರು? ಬಳಿಕ ಏನೆಲ್ಲಾ ಎಡವಟ್ಟು ಅನ್ನೋ ಬಗ್ಗೆ ಡೀಟೈಲ್ಸ್ ಚಾರ್ಜ್ಶೀಟ್ನಲ್ಲಿ ಬರೆಯಲಾಗಿದೆ.
ರೇಣುಕಾಸ್ವಾಮಿ ಜೀವ ತೆಗೆದ ನಂತರ ಏನಾಯ್ತು? ದರ್ಶನ್ ಹೇಳಿದ್ದೇನು?
- ರಾ.9ಕ್ಕೆ ಪ್ರದೂಷ್, ವಿನಯ್, ನಾಗರಾಜ್, ಲಕ್ಷ್ಮಣ್ ಮತ್ತೆ ಮನೆಗೆ ಬಂದ್ರು
- ರೇಣುಕಾಸ್ವಾಮಿ ಸತ್ತಿದ್ದಾನೆ, ನಾನು ಹ್ಯಾಂಡಲ್ ಮಾಡುತ್ತೇನೆಂದಿದ್ದ ಪ್ರದೂಷ್
- 30 ಲಕ್ಷ ಹಣ ಕೇಳಿದ್ದಕ್ಕೆ, ಮನೆಯಲ್ಲಿಟ್ಟಿದ್ದ ಹಣವನ್ನ ನಾನು ಕೊಟ್ಟು ಕಳಿಸಿದ್ದೆ
- ಮತ್ತೆ ಕೆಲ ಹೊತ್ತಲ್ಲಿ ವಿನಯ್ ಮನೆ ಬಳಿ ಬಂದು, 10 ಲಕ್ಷ ಕೇಳಿ ಪಡೆದಿದ್ದರು
- ಮೈಸೂರಿಗೆ ಹೋಗೋ ಮುನ್ನ ನಾಗರಾಜ್, ಪ್ರದೂಷ್ಗೆ ಕರೆ ಮಾಡಿದ್ದೆ
- 10ನೇ ತಾರೀಕು, ರಾ.9ಕ್ಕೆ ಪ್ರದೂಷ್, ನಾಗರಾಜ್, ವಿನಯ್ ಹೋಟೆಲ್ಗೆ ಬಂದ್ರು
- ಧನರಾಜ್ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಿದ್ದನ್ನ ನನಗೆ ಹೇಳಿದ್ರು
- ಪವನ್ ಹಲ್ಲೆ, ನಂದೀಶ್ ಎತ್ತಿ ಕುಕ್ಕಿದ್ದನ್ನ ಕೂಡ ಅವರುಗಳು ನನಗೆ ಹೇಳಿದ್ರು
- ಯಾರಿಗಾದ್ರೂ ಹಣ ನೀಡಿ ನಾವು ಫಿಕ್ಸ್ ಮಾಡ್ತೀವಿ ಅಂತಲೂ ಹೇಳಿದ್ದರು
- ಇನ್ನೂ ಹೆಚ್ಚಿನ ಹಣವೂ ಬೇಕಾಗುತ್ತದೆ ಅಂತಲೂ ಅವ್ರು ನನಗೆ ಹೇಳಿದ್ದರು!
ಇದನ್ನೂ ಓದಿ: ರೇಣುಕಾಸ್ವಾಮಿ ಕೇಸಲ್ಲಿ ನಟ ಚಿಕ್ಕಣ್ಣ ಪಾತ್ರವೇನು? ಈ ಬಗ್ಗೆ ದರ್ಶನ್ ಬಿಚ್ಚಿಟ್ಟ ಅಸಲಿ ಸತ್ಯವೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ