/newsfirstlive-kannada/media/post_attachments/wp-content/uploads/2024/06/DARSHAN-JAIL-1.jpg)
​ದರ್ಶನ್​ 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್​ ಆಗಿರುವ ದರ್ಶನ್​ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಮೊದಲ ಕೆಲವು ದಿನಗಳು ಜೈಲಿನಲ್ಲಿ ಸಪ್ಪೆ ಮೋರೆ ಹಾಕಿ ಕುಳಿತ್ತಿದ್ದ ದರ್ಶನ್​ ಈಗ ಪುಲ್ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಎಲ್ಲರ ಜೊತೆಗೆ ಬೆರೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಮೊದಲ ದಿನಕ್ಕೆ ಹೋಲಿಕೆ ಮಾಡಿದ್ರೆ ದರ್ಶನ್ ಸದ್ಯ ತನ್ನ ಜೊತೆಗಿರುವ ನಾಲ್ವರು ಆರೋಪಿಗಳ ಜೊತೆಗೆ ಟೈಂ ಪಾಸ್​ ಮಾಡುತ್ತಿದ್ದಾರಂತೆ. ದರ್ಶನ್ ಕೊಠಡಿಯಲ್ಲಿ ಟಿವಿ ಹಾಗೂ ಕೇರಂ ಬೋರ್ಡ್ ಇದ್ದು, ತನ್ನ ನಾಲ್ವರು ಸಹ ಆರೋಪಿಗಳ ಜೊತೆ ಕಾಲ ಕಳೆಯುತ್ತಿದ್ದಾರೆ ಎನ್ನಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/06/DARSHAN-JAIL-4-1.jpg)
ಈ ಹಿಂದೆ ಪಿಎಸ್ಐ ಸ್ಕ್ಯಾಮ್ ಆರೋಪಿಗಳಿದ್ದ ರೂಂನಲ್ಲಿರುವ ದರ್ಶನ್ ಸೆರೆಮನೆ ವಾಸ ಅನುಭವಿಸುತ್ತಿದ್ದಾರೆ. ದರ್ಶನ್​ಗೆ ಹೊರಗಿನ ಆಹಾರ ಇನ್ನೂ ಸಹ ಸಿಕ್ಕಿಲ್ಲ. ಕೇವಲ ಪ್ರೂಟ್ಸ್ ಮಾತ್ರ ಸಿಗ್ತಾ ಇದೆಯಂತೆ.
ಸದ್ಯ ಆರಂಭದ ದಿನಗಳಿಗೂ ಮತ್ತು ಈಗಿನ ದಿನಗಳಿಗೆ ಹೋಲಿಸಿದಾಗ ದರ್ಶನ್​ ಕೊಂಚ ಬೆರೆಯಲು ಶುರು ಮಾಡಿದ್ದಾರೆ ಎನ್ನಲಾಗುತ್ತಿದೆ. ಇಲ್ಲದಿದ್ದರೆ ಯಾರೊಂದಿಗೂ ಮಾತನಾಡದೆ ಧ್ಯಾನದಲ್ಲಿ ಕುಳಿತಿರುತ್ತಿದ್ದರು ಎಂಬ ಮಾತುಗಳು ಕೇಳಿಬಂದಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us