8 ವರ್ಷಗಳಿಂದ ಮ್ಯಾನೇಜರ್ ಮಲ್ಲಿಕಾರ್ಜುನ್ ಮಿಸ್ಸಿಂಗ್
ಮತ್ತೋರ್ವ ಮ್ಯಾನೇಜರ್ ಮೃತದೇಹ ಕಲ್ಲುಬಂಡೆಯ ಮೇಲೆ ಬಿದ್ದಿತ್ತು
ದರ್ಶನ್ಗೆ ಸೇರಿದ್ದ ಫಾರ್ಮ್ಹೌಸ್ನಲ್ಲಿ ಕೆಲಸ ಮಾಡಿತ್ತಿದ್ದವನಿಗೆ ಏನಾಯ್ತು?
ಆನೇಕಲ್: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ದರ್ಶನ್ ಕುರಿತು ನಾನಾ ಪ್ರಕರಣಗಳು ಬಯಲಿಗೆ ಬರುತ್ತಿದೆ. 8 ವರ್ಷಗಳಿಂದ ನಾಪತ್ತೆಯಾದ ಮ್ಯಾನೇಜರ್ ಮಲ್ಲಿಕಾರ್ಜುನ್ ಮಿಸ್ಸಿಂಗ್ ಪ್ರಕರಣ ಜೊತೆ ಜೊತೆಗೆ ಇದೀಗ ಮತ್ತೋರ್ವ ಮ್ಯಾನೇಜರ್ ದರ್ಶನ್ ಗೆ ಸೇರಿದ ಫಾರ್ಮ್ ಹೌಸ್ ನಲ್ಲಿ ಸೂಸೈಡ್ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ.
ಆನೇಕಲ್ ತಾಲ್ಲೂಕಿನ ಬಗ್ಗನದೊಡ್ಡಿಯಲ್ಲಿ ನಡೆದಿದ್ದ ಘಟನೆ ಇದಾಗಿದೆ. ಶ್ರೀಧರ್ ಎಂಬಾತ ದರ್ಶನ್ ಗೆ ಸೇರಿದ ಫಾರ್ಮ್ ಹೌಸ್ ನಲ್ಲಿ ಸೂಸೈಡ್ ಮಾಡಿಕೊಂಡಿದ್ದನು. ಮಾನಸಿಕ ಖಿನ್ನತೆಗೆ ಒಳಗಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದನು.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಆರೋಪಿ ರಘು ಪತ್ನಿ ಹಿಸ್ಟರಿನೇ ಡಿಫರೆಂಟ್! ತನಿಖೆ ವೇಳೆ ಪೊಲೀಸರಿಗೆ ಶಾಕ್
ದುರ್ಗ ಫಾರ್ಮ್ ಹೌಸ್ನಲ್ಲಿ ಆತ್ಮಹತ್ಯೆ
ಕಳೆದ ಏಪ್ರಿಲ್ ತಿಂಗಳಿನಲ್ಲಿ ಆತ್ಮಹತ್ಯೆಗೆ ಶರಣಾಗುವ ಮೂಲಕ ಶ್ರೀಧರ್ ಬದುಕು ಮುಗಿಸಿದ್ದನು. ದರ್ಶನ್ಗೆ ಸೇರಿದ ದುರ್ಗ ಫಾರ್ಮ್ ಹೌಸ್ನಲ್ಲಿ ಸಾವನ್ನಪ್ಪಿದ್ದನು. ಶ್ರೀಧರ್ ಮೃತ ದೇಹ ಕಂಡು ಆತನ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದನು.
ಇದನ್ನೂ ಓದಿ: 25 ವರ್ಷದ ಯುವಕನ ಜೊತೆ ಓಡಿ ಹೋದ 40 ವರ್ಷದ ತಾಯಿ! ಬೀದಿಗೆ ಬಂದ 3 ಮಕ್ಕಳು
ರಕ್ತಕಾರಿ ಸತ್ತಿದ್ದ ಮ್ಯಾನೇಜರ್
ಫಾರ್ಮ್ ಹೌಸ್ ಪಕ್ಕದಲ್ಲಿ ರೈಟರ್ ಶ್ರೀಧರ್ ರಕ್ತಕಾರಿ ಸತ್ತಿದ್ದನು. ಒಂದು ವರ್ಷಗಳ ಕಾಲ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ಆತನ ಮೃತದೇಹ ಕಲ್ಲು ಬಂಡೆ ಮೇಲೆ ಅನಾಥವಾಗಿ ಪತ್ತೆಯಾಗಿತ್ತು. ಆನೇಕಲ್ ಪೊಲೀಸ್ ಠಾಣೆಯಲ್ಲಿ UDR ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿ: ಹೆಂಡತಿಯನ್ನು ಗುಂಡಿಕ್ಕಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ.. ಹಾಸನದಲ್ಲೊಂದು ಬೆಚ್ಚಿ ಬೀಳಿಸುವ ಘಟನೆ
10 ಎಕರೆಯ ಫಾರ್ಮ್ ಹೌಸ್
ಅಂದಹಾಗೆಯೇ ಸುಮಾರು 10 ಎಕರೆ ಪ್ರದೇಶದಲ್ಲಿ ದರ್ಶನ್ಗೆ ಸೇರಿದ ಫಾರ್ಮ್ ಹೌಸ್ ನಿರ್ಮಾಣವಾಗುತ್ತಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬೆನ್ನಲ್ಲೇ ಒಬ್ಬ ಮ್ಯಾನೇಜರ್ ಮಿಸ್ಸಿಂಗ್ ಮತ್ತು ಮತ್ತೊಬ್ಬ ಮ್ಯಾಜೇಸರ್ ಸಾವು ಅನುಮಾನಕ್ಕೆ ಎಡೆಮಾಡಿಕೊಟ್ಟಂತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
8 ವರ್ಷಗಳಿಂದ ಮ್ಯಾನೇಜರ್ ಮಲ್ಲಿಕಾರ್ಜುನ್ ಮಿಸ್ಸಿಂಗ್
ಮತ್ತೋರ್ವ ಮ್ಯಾನೇಜರ್ ಮೃತದೇಹ ಕಲ್ಲುಬಂಡೆಯ ಮೇಲೆ ಬಿದ್ದಿತ್ತು
ದರ್ಶನ್ಗೆ ಸೇರಿದ್ದ ಫಾರ್ಮ್ಹೌಸ್ನಲ್ಲಿ ಕೆಲಸ ಮಾಡಿತ್ತಿದ್ದವನಿಗೆ ಏನಾಯ್ತು?
ಆನೇಕಲ್: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ದರ್ಶನ್ ಕುರಿತು ನಾನಾ ಪ್ರಕರಣಗಳು ಬಯಲಿಗೆ ಬರುತ್ತಿದೆ. 8 ವರ್ಷಗಳಿಂದ ನಾಪತ್ತೆಯಾದ ಮ್ಯಾನೇಜರ್ ಮಲ್ಲಿಕಾರ್ಜುನ್ ಮಿಸ್ಸಿಂಗ್ ಪ್ರಕರಣ ಜೊತೆ ಜೊತೆಗೆ ಇದೀಗ ಮತ್ತೋರ್ವ ಮ್ಯಾನೇಜರ್ ದರ್ಶನ್ ಗೆ ಸೇರಿದ ಫಾರ್ಮ್ ಹೌಸ್ ನಲ್ಲಿ ಸೂಸೈಡ್ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ.
ಆನೇಕಲ್ ತಾಲ್ಲೂಕಿನ ಬಗ್ಗನದೊಡ್ಡಿಯಲ್ಲಿ ನಡೆದಿದ್ದ ಘಟನೆ ಇದಾಗಿದೆ. ಶ್ರೀಧರ್ ಎಂಬಾತ ದರ್ಶನ್ ಗೆ ಸೇರಿದ ಫಾರ್ಮ್ ಹೌಸ್ ನಲ್ಲಿ ಸೂಸೈಡ್ ಮಾಡಿಕೊಂಡಿದ್ದನು. ಮಾನಸಿಕ ಖಿನ್ನತೆಗೆ ಒಳಗಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದನು.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಆರೋಪಿ ರಘು ಪತ್ನಿ ಹಿಸ್ಟರಿನೇ ಡಿಫರೆಂಟ್! ತನಿಖೆ ವೇಳೆ ಪೊಲೀಸರಿಗೆ ಶಾಕ್
ದುರ್ಗ ಫಾರ್ಮ್ ಹೌಸ್ನಲ್ಲಿ ಆತ್ಮಹತ್ಯೆ
ಕಳೆದ ಏಪ್ರಿಲ್ ತಿಂಗಳಿನಲ್ಲಿ ಆತ್ಮಹತ್ಯೆಗೆ ಶರಣಾಗುವ ಮೂಲಕ ಶ್ರೀಧರ್ ಬದುಕು ಮುಗಿಸಿದ್ದನು. ದರ್ಶನ್ಗೆ ಸೇರಿದ ದುರ್ಗ ಫಾರ್ಮ್ ಹೌಸ್ನಲ್ಲಿ ಸಾವನ್ನಪ್ಪಿದ್ದನು. ಶ್ರೀಧರ್ ಮೃತ ದೇಹ ಕಂಡು ಆತನ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದನು.
ಇದನ್ನೂ ಓದಿ: 25 ವರ್ಷದ ಯುವಕನ ಜೊತೆ ಓಡಿ ಹೋದ 40 ವರ್ಷದ ತಾಯಿ! ಬೀದಿಗೆ ಬಂದ 3 ಮಕ್ಕಳು
ರಕ್ತಕಾರಿ ಸತ್ತಿದ್ದ ಮ್ಯಾನೇಜರ್
ಫಾರ್ಮ್ ಹೌಸ್ ಪಕ್ಕದಲ್ಲಿ ರೈಟರ್ ಶ್ರೀಧರ್ ರಕ್ತಕಾರಿ ಸತ್ತಿದ್ದನು. ಒಂದು ವರ್ಷಗಳ ಕಾಲ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ಆತನ ಮೃತದೇಹ ಕಲ್ಲು ಬಂಡೆ ಮೇಲೆ ಅನಾಥವಾಗಿ ಪತ್ತೆಯಾಗಿತ್ತು. ಆನೇಕಲ್ ಪೊಲೀಸ್ ಠಾಣೆಯಲ್ಲಿ UDR ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿ: ಹೆಂಡತಿಯನ್ನು ಗುಂಡಿಕ್ಕಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ.. ಹಾಸನದಲ್ಲೊಂದು ಬೆಚ್ಚಿ ಬೀಳಿಸುವ ಘಟನೆ
10 ಎಕರೆಯ ಫಾರ್ಮ್ ಹೌಸ್
ಅಂದಹಾಗೆಯೇ ಸುಮಾರು 10 ಎಕರೆ ಪ್ರದೇಶದಲ್ಲಿ ದರ್ಶನ್ಗೆ ಸೇರಿದ ಫಾರ್ಮ್ ಹೌಸ್ ನಿರ್ಮಾಣವಾಗುತ್ತಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬೆನ್ನಲ್ಲೇ ಒಬ್ಬ ಮ್ಯಾನೇಜರ್ ಮಿಸ್ಸಿಂಗ್ ಮತ್ತು ಮತ್ತೊಬ್ಬ ಮ್ಯಾಜೇಸರ್ ಸಾವು ಅನುಮಾನಕ್ಕೆ ಎಡೆಮಾಡಿಕೊಟ್ಟಂತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ