newsfirstkannada.com

×

ನನ್ನ ಬದುಕಿನಲ್ಲಿ ಎಲ್ಲವೂ ನೀನೆ.. ತಾಯಿ ಪವಿತ್ರಾ ಗೌಡಳಿಗೆ ಭಾವನಾತ್ಮಕ ಪೋಸ್ಟ್​ ಬರೆದ ಮಗಳು ಖುಷಿ

Share :

Published June 16, 2024 at 2:19pm

Update June 16, 2024 at 2:21pm

    ಇಂದು ವಿಶ್ವ ತಂದೆಯಂದಿರ ದಿನದ ವಿಶೇಷ

    ತಾಯಿ ಪವಿತ್ರಾ ಗೌಡಳನ್ನು ನೆನಪಿಸಿಕೊಂಡ ಮಗಳು ಖುಷಿ

    ಅಮ್ಮನ ಫೋಟೋ ಹಂಚಿಕೊಂಡ ಮಗಳು ಖುಷಿ

ಇಂದು ವಿಶ್ವ ತಂದೆಯಂದಿರ ದಿನ. ಈ ದಿನವನ್ನು ಬಹುತೇಕರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ನೆಚ್ಚಿನ ತಂದೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಳ್ಳುವ ಮೂಲಕ ಶುಭಾಶಯ ಕೋರುತ್ತಿದ್ದಾರೆ. ಅದರಂತೆಯೇ ಪವಿತ್ರಾ ಗೌಡ ಮಗಳು ಖುಷಿ ಕೂಡ ಪೋಸ್ಟ್​ ಹಂಚಿಕೊಳ್ಳುವ ಮೂಲಕ ತಾಯಿಗೆ ಭಾವನಾತ್ಮಕ ಸಂದೇಶ ಬರೆದಿದ್ದಾಳೆ.

ಇನ್​​ಸ್ಟಾಗ್ರಾಂನಲ್ಲಿ ಸ್ಟೇಟಸ್​ ಹಾಕಿಕೊಂಡ ಖುಷಿ ಗೌಡ, ನನ್ನ ಬದುಕಿನಲ್ಲಿ ಎಲ್ಲವೂ ನೀನೆ ಎಂದು ಬರೆದಿದ್ದಾಳೆ. ಜೊತೆಗೆ ತಾಯಿ ಪವಿತ್ರಾ ಗೌಡಗೆ ಟ್ಯಾಗ್​ ಮಾಡಿದ್ದಾಳೆ. ಮಗಳು ಖುಷಿಯ ಹಣೆಗೆ ಪವಿತ್ರಾ ಮುತ್ತಿಡುವ ಫೋಟೋ ಹಂಚಿಕೊಂಡಿದ್ದಾಳೆ.

ಇದನ್ನೂ ಓದಿ: ರೇಣುಕಾಸ್ವಾಮಿ ಒಳ್ಳೆಯವನಲ್ಲ, ದರ್ಶನ್​​ ಹಾಟ್​ ಟೆಂಪರ್​.. ಟಾಲಿವುಡ್​ ನಟಿಯ ಬಾಯಲ್ಲಿ ಇಂಥಾ ಮಾತೇ?

ವಿಪರ್ಯಾಸವೆಂದರೆ ಪವಿತ್ರಾ ಗೌಡ ಪೊಲೀಸರ ವಶದಲ್ಲಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿ ಅಶ್ಲೀಲ ಮೆಸೇಜ್​ ಕಳುಹಿಸಿದ ಸಂಬಂಧ ದರ್ಶನ್​ ಮತ್ತು ಪವಿತ್ರಾ ಗೌಡ ಟೀಂ ಆಕೆಯನ್ನು ಹಿಂಸಾತ್ಮಕವಾಗಿ ಕೊಲೆ ಮಾಡಿದ್ದಾರೆ. ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಪವಿತ್ರಾ ಪೊಲೀಸರ ವಶದಲ್ಲಿದ್ದಾರೆ.

ಇದನ್ನೂ ಓದಿ: 6 ವರ್ಷಳಿಂದ ದರ್ಶನ್ ಹಳೇ ಮ್ಯಾನೇಜರ್ ಮಿಸ್ಸಿಂಗ್​.. ‘ಡಿ’ ಗ್ಯಾಂಗ್​ ಮೇಲೆ ಮತ್ತೊಂದು ಅನುಮಾನ!

ಸದ್ಯ ಮಗಳು ತನ್ನ ತಾಯಿಗಾಗಿ ಕಾಯುತ್ತಿದ್ದಾಳೆ. ಇಂದು ‘ಫಾದರ್ಸ್​ ಡೇ’ ದಿನದಂದು ಖುಷಿ ತಾಯಿಗಾಗಿ ಸ್ಟೇಟಸ್​ ಹಾಕಿಕೊಂಡು ನೆನಪಿಸಿಕೊಂಡಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನನ್ನ ಬದುಕಿನಲ್ಲಿ ಎಲ್ಲವೂ ನೀನೆ.. ತಾಯಿ ಪವಿತ್ರಾ ಗೌಡಳಿಗೆ ಭಾವನಾತ್ಮಕ ಪೋಸ್ಟ್​ ಬರೆದ ಮಗಳು ಖುಷಿ

https://newsfirstlive.com/wp-content/uploads/2024/06/Kushi-2.jpg

    ಇಂದು ವಿಶ್ವ ತಂದೆಯಂದಿರ ದಿನದ ವಿಶೇಷ

    ತಾಯಿ ಪವಿತ್ರಾ ಗೌಡಳನ್ನು ನೆನಪಿಸಿಕೊಂಡ ಮಗಳು ಖುಷಿ

    ಅಮ್ಮನ ಫೋಟೋ ಹಂಚಿಕೊಂಡ ಮಗಳು ಖುಷಿ

ಇಂದು ವಿಶ್ವ ತಂದೆಯಂದಿರ ದಿನ. ಈ ದಿನವನ್ನು ಬಹುತೇಕರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ನೆಚ್ಚಿನ ತಂದೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಳ್ಳುವ ಮೂಲಕ ಶುಭಾಶಯ ಕೋರುತ್ತಿದ್ದಾರೆ. ಅದರಂತೆಯೇ ಪವಿತ್ರಾ ಗೌಡ ಮಗಳು ಖುಷಿ ಕೂಡ ಪೋಸ್ಟ್​ ಹಂಚಿಕೊಳ್ಳುವ ಮೂಲಕ ತಾಯಿಗೆ ಭಾವನಾತ್ಮಕ ಸಂದೇಶ ಬರೆದಿದ್ದಾಳೆ.

ಇನ್​​ಸ್ಟಾಗ್ರಾಂನಲ್ಲಿ ಸ್ಟೇಟಸ್​ ಹಾಕಿಕೊಂಡ ಖುಷಿ ಗೌಡ, ನನ್ನ ಬದುಕಿನಲ್ಲಿ ಎಲ್ಲವೂ ನೀನೆ ಎಂದು ಬರೆದಿದ್ದಾಳೆ. ಜೊತೆಗೆ ತಾಯಿ ಪವಿತ್ರಾ ಗೌಡಗೆ ಟ್ಯಾಗ್​ ಮಾಡಿದ್ದಾಳೆ. ಮಗಳು ಖುಷಿಯ ಹಣೆಗೆ ಪವಿತ್ರಾ ಮುತ್ತಿಡುವ ಫೋಟೋ ಹಂಚಿಕೊಂಡಿದ್ದಾಳೆ.

ಇದನ್ನೂ ಓದಿ: ರೇಣುಕಾಸ್ವಾಮಿ ಒಳ್ಳೆಯವನಲ್ಲ, ದರ್ಶನ್​​ ಹಾಟ್​ ಟೆಂಪರ್​.. ಟಾಲಿವುಡ್​ ನಟಿಯ ಬಾಯಲ್ಲಿ ಇಂಥಾ ಮಾತೇ?

ವಿಪರ್ಯಾಸವೆಂದರೆ ಪವಿತ್ರಾ ಗೌಡ ಪೊಲೀಸರ ವಶದಲ್ಲಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿ ಅಶ್ಲೀಲ ಮೆಸೇಜ್​ ಕಳುಹಿಸಿದ ಸಂಬಂಧ ದರ್ಶನ್​ ಮತ್ತು ಪವಿತ್ರಾ ಗೌಡ ಟೀಂ ಆಕೆಯನ್ನು ಹಿಂಸಾತ್ಮಕವಾಗಿ ಕೊಲೆ ಮಾಡಿದ್ದಾರೆ. ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಪವಿತ್ರಾ ಪೊಲೀಸರ ವಶದಲ್ಲಿದ್ದಾರೆ.

ಇದನ್ನೂ ಓದಿ: 6 ವರ್ಷಳಿಂದ ದರ್ಶನ್ ಹಳೇ ಮ್ಯಾನೇಜರ್ ಮಿಸ್ಸಿಂಗ್​.. ‘ಡಿ’ ಗ್ಯಾಂಗ್​ ಮೇಲೆ ಮತ್ತೊಂದು ಅನುಮಾನ!

ಸದ್ಯ ಮಗಳು ತನ್ನ ತಾಯಿಗಾಗಿ ಕಾಯುತ್ತಿದ್ದಾಳೆ. ಇಂದು ‘ಫಾದರ್ಸ್​ ಡೇ’ ದಿನದಂದು ಖುಷಿ ತಾಯಿಗಾಗಿ ಸ್ಟೇಟಸ್​ ಹಾಕಿಕೊಂಡು ನೆನಪಿಸಿಕೊಂಡಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More