ಇಂದಿರಾ ಕ್ಯಾಂಟೀನ್ ಗುಣಮಟ್ಟ ಅರಿಯೋಕೆ ಮುಂದಾದ ಡಿಕೆಶಿ
ಡಿಸಿಎಂ ಡಿಕೆ ಶಿವಕುಮಾರ್ ರೌಂಡ್ಸ್ ಬೆನ್ನಲ್ಲೇ ಎಚ್ಚೆತ್ತುಕೊಂಡ ಪಾಲಿಕೆ
ಆಗಸ್ಟ್ ಮೊದಲ ವಾರದಿಂದಲೇ ಹೊಸ ರೂಪದ ಕ್ಯಾಂಟೀನ್ ಓಪನ್
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ರಾಜ್ಯ ರಾಜಧಾನಿಯಲ್ಲಿ ರೌಂಡ್ ಹಾಕಿದ್ದರು. ಅದರಲ್ಲೂ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ಗುಣಮಟ್ಟ ಅರಿಯೋಕೆ ಮುಂದಾಗಿದ್ದರು. ಜೊತೆಗೆ ಇಂದಿರಾ ಕ್ಯಾಂಟೀನ್ ಹೆಲ್ಪ್ಲೈನ್ ನಂಬರ್ಗೆ ಕರೆ ಮಾಡಿದ್ದರು. ಆಗ ಸಂಖ್ಯೆ ಇನ್ವ್ಯಾಲೀಡ್ ಅಂತ ಬಂದಿತ್ತು. ಆಗ ಡಿಕೆ ಶಿವಕುಮಾರ್ ಅವರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದು.
ಇನ್ನು, ಇದರ ಬೆನ್ನಲ್ಲೇ ಇವತ್ತು ಬಿಬಿಎಂಪಿ ಹೊಸ ಟೋಲ್ ಫ್ರೀ ನಂಬರ್ ರಿಲೀಸ್ ಮಾಡಿದೆ. ಅದುವೇ 1533. ಈ ನಂಬರ್ಗೆ ಕರೆ ಮಾಡಿ ಇಂದಿರಾಕ್ಯಾಂಟೀನ್ ಕುರಿತು ಬೇಕಾದ ಮಾಹಿತಿಯನ್ನ ಪಡೆಯಬಹುದು ಎಂದು ಬಿಬಿಎಂಪಿ ಆಯುಕ್ತರು ಹೇಳಿದ್ದಾರೆ. ಇದರ ಜೊತೆಗೆ ಇಂದಿರಾ ಕ್ಯಾಂಟೀನ್ಗೆ ಹೊಸ ರೂಪ ಕೊಡಲು ಶೀಘ್ರದಲ್ಲೇ ಟೆಂಡರ್ ಕರೆಯಲಿದ್ದು, ಆಗಸ್ಟ್ ಒಂದರಿಂದ ಹೊಸ ರೂಪದ ಕ್ಯಾಂಟೀನ್ಗಳು ಕಾಣಲಿದೆ. ಅದೇನೇ ಇರಲಿ ಡಿಸಿಎಂ ರೌಂಡ್ಸ್ ಬೆನ್ನಲ್ಲೇ ಎಚ್ಚೆತ್ತುಕೊಂಡಿರೋ ಪಾಲಿಕೆ ಆಗಿರೋ ತಪ್ಪುಗಳನ್ನ ತಿದ್ದಿಕೊಳ್ಳೋಕೆ ಮುಂದಾಗಿದೆ.
ಬೆಂಗಳೂರನ್ನು 'ಬ್ರ್ಯಾಂಡ್ ಬೆಂಗಳೂರು' ಮಾಡುವ ಸಂಕಲ್ಪದೊಂದಿಗೆ ಬೆಂಗಳೂರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಬೆಂಗಳೂರು ನಗರದ ಘನತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಕ್ಷಣಗಳು. pic.twitter.com/nd10z1D0gC
— DK Shivakumar (@DKShivakumar) July 10, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಂದಿರಾ ಕ್ಯಾಂಟೀನ್ ಗುಣಮಟ್ಟ ಅರಿಯೋಕೆ ಮುಂದಾದ ಡಿಕೆಶಿ
ಡಿಸಿಎಂ ಡಿಕೆ ಶಿವಕುಮಾರ್ ರೌಂಡ್ಸ್ ಬೆನ್ನಲ್ಲೇ ಎಚ್ಚೆತ್ತುಕೊಂಡ ಪಾಲಿಕೆ
ಆಗಸ್ಟ್ ಮೊದಲ ವಾರದಿಂದಲೇ ಹೊಸ ರೂಪದ ಕ್ಯಾಂಟೀನ್ ಓಪನ್
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ರಾಜ್ಯ ರಾಜಧಾನಿಯಲ್ಲಿ ರೌಂಡ್ ಹಾಕಿದ್ದರು. ಅದರಲ್ಲೂ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ಗುಣಮಟ್ಟ ಅರಿಯೋಕೆ ಮುಂದಾಗಿದ್ದರು. ಜೊತೆಗೆ ಇಂದಿರಾ ಕ್ಯಾಂಟೀನ್ ಹೆಲ್ಪ್ಲೈನ್ ನಂಬರ್ಗೆ ಕರೆ ಮಾಡಿದ್ದರು. ಆಗ ಸಂಖ್ಯೆ ಇನ್ವ್ಯಾಲೀಡ್ ಅಂತ ಬಂದಿತ್ತು. ಆಗ ಡಿಕೆ ಶಿವಕುಮಾರ್ ಅವರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದು.
ಇನ್ನು, ಇದರ ಬೆನ್ನಲ್ಲೇ ಇವತ್ತು ಬಿಬಿಎಂಪಿ ಹೊಸ ಟೋಲ್ ಫ್ರೀ ನಂಬರ್ ರಿಲೀಸ್ ಮಾಡಿದೆ. ಅದುವೇ 1533. ಈ ನಂಬರ್ಗೆ ಕರೆ ಮಾಡಿ ಇಂದಿರಾಕ್ಯಾಂಟೀನ್ ಕುರಿತು ಬೇಕಾದ ಮಾಹಿತಿಯನ್ನ ಪಡೆಯಬಹುದು ಎಂದು ಬಿಬಿಎಂಪಿ ಆಯುಕ್ತರು ಹೇಳಿದ್ದಾರೆ. ಇದರ ಜೊತೆಗೆ ಇಂದಿರಾ ಕ್ಯಾಂಟೀನ್ಗೆ ಹೊಸ ರೂಪ ಕೊಡಲು ಶೀಘ್ರದಲ್ಲೇ ಟೆಂಡರ್ ಕರೆಯಲಿದ್ದು, ಆಗಸ್ಟ್ ಒಂದರಿಂದ ಹೊಸ ರೂಪದ ಕ್ಯಾಂಟೀನ್ಗಳು ಕಾಣಲಿದೆ. ಅದೇನೇ ಇರಲಿ ಡಿಸಿಎಂ ರೌಂಡ್ಸ್ ಬೆನ್ನಲ್ಲೇ ಎಚ್ಚೆತ್ತುಕೊಂಡಿರೋ ಪಾಲಿಕೆ ಆಗಿರೋ ತಪ್ಪುಗಳನ್ನ ತಿದ್ದಿಕೊಳ್ಳೋಕೆ ಮುಂದಾಗಿದೆ.
ಬೆಂಗಳೂರನ್ನು 'ಬ್ರ್ಯಾಂಡ್ ಬೆಂಗಳೂರು' ಮಾಡುವ ಸಂಕಲ್ಪದೊಂದಿಗೆ ಬೆಂಗಳೂರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಬೆಂಗಳೂರು ನಗರದ ಘನತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಕ್ಷಣಗಳು. pic.twitter.com/nd10z1D0gC
— DK Shivakumar (@DKShivakumar) July 10, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ