ಹಾವೇರಿ ಜಿಲ್ಲೆ ಕಳ್ಳಿಹಾಳ ಗ್ರಾಮದ ಶಬರಿ ಎನ್ನುವ ಟಗರು ಇನ್ನೂ ನೆನೆಪು ಮಾತ್ರ
ಕಳೆದ 9 ವರ್ಷಗಳಿಂದ ರಾಜ್ಯಾದ್ಯಂತ ಟಗರಿನ ಕಾಳಗದಲ್ಲಿ ಫೇಮಸ್ ಆಗಿದ್ದ ಶಬರಿ
ಮಾಲೀಕರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಭಾರೀ ಆಕ್ರೋಶ
ಬಾಗಲಕೋಟೆ: ಲಕ್ಷಾಂತರ ಬಹುಮಾನ ಗೆದ್ದುಕೊಟ್ಟ ಟಗರನ್ನೇ ಮಾಲೀಕ ಬಲಿಕೊಟ್ಟ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಹಾವೇರಿ ಜಿಲ್ಲೆ ಕಳ್ಳಿಹಾಳ ಗ್ರಾಮದ ಶಬರಿ ಎನ್ನುವ ಟಗರನ್ನು ಮಾಲೀಕ ನಿನ್ನೆ ಕೊಲ್ಹಾಪುರ ಮಹಾಲಕ್ಷ್ಮೀಗೆ ಬಲಿ ಕೊಟ್ಟಿದ್ದಾನೆ. ಟಗರು ಶಬರಿಯೂ ಲಕ್ಷಾಂತರ ರೂಪಾಯಿ ನಗದು, ಬೈಕ್ಗಳು ಸೇರಿ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ಕಳೆದ 9 ವರ್ಷಗಳಿಂದ ರಾಜ್ಯಾದ್ಯಂತ ಟಗರಿನ ಕಾಳಗದಲ್ಲಿ ತನ್ನದೇ ಆದ ಹವಾ ಕ್ರಿಯೇಟ್ ಮಾಡಿತ್ತು.
ಇದನ್ನೂ ಓದಿ: ಬಾಯಲ್ಲಿ ನೀರೂರಿಸೋ ನಿಂಬೆ.. ಆರೋಗ್ಯಕ್ಕೆ ಹೇಗೆಲ್ಲ ಉಪಯೋಗ ಆಗುತ್ತೆ ಲೆಮೆನ್ ಜ್ಯೂಸ್?
ಆದರೆ ಅಖಾಡದಲ್ಲಿ ವೈರಿಗಳಿಗೆ ಸಿಂಹಸ್ವಪ್ನನಾಗಿದ್ದ ಟಗರು ಶಬರಿಯನ್ನು ಬಲಿಕೊಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಸಾವಿರಾರು ಅಭಿಮಾನಿಗಳು ಮಾಲೀಕರ ನಡೆಗೆ ಭಾರೀ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅದರಲ್ಲೂ ಬಾಗಲಕೋಟೆಯ ಮಳಿಯಪ್ಪ ಹೊನ್ನಳ್ಳಿ ಎಂಬುವವರು ದಯವಿಟ್ಟು ಇಂತಹ ಕೆಲಸ ಯಾರೂ ಮಾಡಬೇಡಿ. ದೇವರ ಹೆಸರಿನಲ್ಲಿ ಶಬರಿ ಬಲಿ ಕೊಟ್ಟಿದ್ದು ಸರಿ ಅಲ್ಲ. ಮುಂದೆ ಯಾರೂ ಈ ರೀತಿಯ ಕೆಲಸ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಹಾವೇರಿ ಜಿಲ್ಲೆ ಕಳ್ಳಿಹಾಳ ಗ್ರಾಮದ ಶಬರಿ ಎನ್ನುವ ಟಗರು ಇನ್ನೂ ನೆನೆಪು ಮಾತ್ರ
ಕಳೆದ 9 ವರ್ಷಗಳಿಂದ ರಾಜ್ಯಾದ್ಯಂತ ಟಗರಿನ ಕಾಳಗದಲ್ಲಿ ಫೇಮಸ್ ಆಗಿದ್ದ ಶಬರಿ
ಮಾಲೀಕರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಭಾರೀ ಆಕ್ರೋಶ
ಬಾಗಲಕೋಟೆ: ಲಕ್ಷಾಂತರ ಬಹುಮಾನ ಗೆದ್ದುಕೊಟ್ಟ ಟಗರನ್ನೇ ಮಾಲೀಕ ಬಲಿಕೊಟ್ಟ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಹಾವೇರಿ ಜಿಲ್ಲೆ ಕಳ್ಳಿಹಾಳ ಗ್ರಾಮದ ಶಬರಿ ಎನ್ನುವ ಟಗರನ್ನು ಮಾಲೀಕ ನಿನ್ನೆ ಕೊಲ್ಹಾಪುರ ಮಹಾಲಕ್ಷ್ಮೀಗೆ ಬಲಿ ಕೊಟ್ಟಿದ್ದಾನೆ. ಟಗರು ಶಬರಿಯೂ ಲಕ್ಷಾಂತರ ರೂಪಾಯಿ ನಗದು, ಬೈಕ್ಗಳು ಸೇರಿ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ಕಳೆದ 9 ವರ್ಷಗಳಿಂದ ರಾಜ್ಯಾದ್ಯಂತ ಟಗರಿನ ಕಾಳಗದಲ್ಲಿ ತನ್ನದೇ ಆದ ಹವಾ ಕ್ರಿಯೇಟ್ ಮಾಡಿತ್ತು.
ಇದನ್ನೂ ಓದಿ: ಬಾಯಲ್ಲಿ ನೀರೂರಿಸೋ ನಿಂಬೆ.. ಆರೋಗ್ಯಕ್ಕೆ ಹೇಗೆಲ್ಲ ಉಪಯೋಗ ಆಗುತ್ತೆ ಲೆಮೆನ್ ಜ್ಯೂಸ್?
ಆದರೆ ಅಖಾಡದಲ್ಲಿ ವೈರಿಗಳಿಗೆ ಸಿಂಹಸ್ವಪ್ನನಾಗಿದ್ದ ಟಗರು ಶಬರಿಯನ್ನು ಬಲಿಕೊಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಸಾವಿರಾರು ಅಭಿಮಾನಿಗಳು ಮಾಲೀಕರ ನಡೆಗೆ ಭಾರೀ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅದರಲ್ಲೂ ಬಾಗಲಕೋಟೆಯ ಮಳಿಯಪ್ಪ ಹೊನ್ನಳ್ಳಿ ಎಂಬುವವರು ದಯವಿಟ್ಟು ಇಂತಹ ಕೆಲಸ ಯಾರೂ ಮಾಡಬೇಡಿ. ದೇವರ ಹೆಸರಿನಲ್ಲಿ ಶಬರಿ ಬಲಿ ಕೊಟ್ಟಿದ್ದು ಸರಿ ಅಲ್ಲ. ಮುಂದೆ ಯಾರೂ ಈ ರೀತಿಯ ಕೆಲಸ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ