ಸಿಎಸ್ಕೆ IPL ಪ್ರಚಾರ ಕಾರ್ಯದಲ್ಲಿ ಮೂವರು ಬ್ಯುಸಿ
ತ್ರಿಮೂರ್ತಿಗಳು ಬಿಸಿಸಿಐಗೆ ಡೋಂಟ್ಕೇರ್ ಅಂತಿರೋದ್ಯಾಕೆ..?
ಸೂಪರ್ ಸ್ಟಾರ್ ಅಹಂನಲ್ಲಿದ್ದಾರಾ ತ್ರಿಮೂರ್ತಿಗಳು.?
ಟೀಮ್ ಇಂಡಿಯಾ ಆಟಗಾರರ ಪಾಲಿಗೆ ಬಿಸಿಸಿಐ ಹೇಳಿದ್ದೆ ವೇದವಾಕ್ಯ. ಯಾರೇ ಆದ್ರೂ ಚಾಚು ತಪ್ಪದೇ ಪಾಲಿಸಬೇಕು. ಇಂಥ ಪವರ್ ಹೌಸ್ಗೆ ಈ ತ್ರಿಮೂರ್ತಿಗಳು ಸೆಡ್ಡು ಹೊಡೆದಿದ್ದಾರೆ. ಬಾಸ್ಗಳು ಖಡಕ್ ವಾರ್ನಿಂಗ್ ಕೊಟ್ರೂ ಕೂಡ ಕ್ಯಾರೇ ಅಂತಿಲ್ಲ. ಬಿಸಿಸಿಐ ಮಾತಿಗೆ ಡೋಂಟ್ಕೇರ್ ಅಂತಿರೋ ಆ ಆಟಗಾರರು ಯಾರು? ಕಾರಣ ಏನು?
ಬಿಸಿಸಿಐ.. ಮೋಸ್ಟ್ ಪವರ್ಫುಲ್ ಕ್ರಿಕೆಟ್ ಮಂಡಳಿ. ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ಗೂ ಬಿಸಿಸಿಐ ಹೇಳಿದ್ದೆ ವೇದವಾಕ್ಯ. ಇನ್ನು ಭಾರತೀಯ ಪ್ಲೇಯರ್ಸ್ ಗಳಂತೂ ಬಿಸಿಸಿಐ ಬಿಗ್ಬಾಸ್ಗಳು ಹಾಕಿದ ಗೆರೆಯನ್ನ ದಾಟಂಗಿಲ್ಲ. ಆಟಗಾರರನ್ನ ಮಾತಿನಲ್ಲೆ ಗಿರಗಿಟ್ಲೆ ಆಡಿಸೋ ಪವರ್ ಹೌಸ್ ಬಿಸಿಸಿಐ, ಇದೀಗ ಪವರ್ ಕಳೆದುಕೊಂಡಂತೆ ಕಾಣ್ತಿದೆ.
ರಣಜಿ ಕಡೆ ಮುಖ ಮಾಡದ ಕಿಶನ್, ಶ್ರೇಯಸ್, ಚಹರ್
ಯಂಗ್ಗನ್ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್ಗೆ ಸದ್ಯ ಟೀಮ್ ಇಂಡಿಯಾದಲ್ಲಿ ಸ್ಥಾನವಿಲ್ಲ. ತಂಡದಿಂದ ಹೊರಬಿದ್ದಿರುವ ಇವರಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ರಣಜಿ ಟ್ರೋಫಿ ಆಡುವಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಕರಾ ಮಾಡಿದ್ರೆ ನಡೆಯಲ್ಲ. ಹೇಳಿದ್ದನ್ನ ಫಾಲೋ ಮಾಡ್ಲೇಬೇಕು ಅಂತ ಕಡ್ಡಿಮುರಿದಂತೆ ಹೇಳಿದ್ರು. ಇಷ್ಟಾದ್ರು ಜಯ್ ಶಾ ಮಾತಿಗೆ ತ್ರಿಮೂರ್ತಿಗಳು ಕ್ಯಾರೇ ಅಂದಿಲ್ಲ.
ಕಿಶನ್ ರಣಜಿಗೆ ಚಕ್ಕರ್, DY ಪಾಟೀಲ್ ಟೂರ್ನಿಗೆ ಹಾಜರ್..?
ದಕ್ಷಿಣ ಆಫ್ರಿಕಾ ಪ್ರವಾಸದಿಂದ ಅರ್ಧಕ್ಕೆ ವಾಪಾಸಾದ ಡೇರಿಂಗ್ ಬ್ಯಾಟರ್ ಇಶಾನ್ ಕಿಶನ್ಗೆ ಬಿಸಿಸಿಐ ರಣಜಿ ಟ್ರೋಫಿ ಆಡುವಂತೆ ಸೂಚಿಸಿತ್ತು. ಆದರೆ ಕಿಶನ್ ಬಿಗ್ಬಾಸ್ಗಳ ಮಾತಿಗೆ ಸೊಪ್ಪು ಹಾಕಿಲ್ಲ. ರಣಜಿಗೆ ಚಕ್ಕರ್ ಹಾಕಿ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ನಡೆಸೋ ಡಿವೈ ಪಾಟೀಲ್ ಟಿ20 ಟೂರ್ನಿ ಆಡಲು ಸಿದ್ಧತೆ ನಡೆಸಿದ್ದಾರೆ. ಆ ಮೂಲಕ ಬಿಗ್ಬಾಸ್ಗಳ ಕಣ್ಣು ಮತ್ತಷ್ಟು ಕೆಂಪಾಗುವಂತೆ ಮಾಡಿದ್ದಾರೆ.
ಮುಂಬೈ ಪರ ಆಡದೇ ಶ್ರೇಯಸ್ ಮೊಂಡುತನ
ಶ್ರೇಯಸ್ ಅಯ್ಯರ್ ಕಥೆ ಕೂಡ ಭಿನ್ನವಾಗಿಲ್ಲ. ಇಂಗ್ಲೆಂಡ್ ಸರಣಿಯ ಕೊನೆ ಮೂರು ಪಂದ್ಯಗಳಿಂದ ಹೊರಬಿದ್ದ ಶ್ರೇಯಸ್ ರಣಜಿ ಆಡಲು ಹಿಂದೇಟು ಹಾಕಿದ್ದಾರೆ. ಹೆಡ್ಕೋಚ್ ರಾಹುಲ್ ದ್ರಾವಿಡ್ ಮಾತಿಗೂ ಬೆಲೆ ಕೊಟ್ಟಿಲ್ಲ. ಮುಂಬೈ ಪರ ಶಾರ್ದುಲ್ ಠಾಕೂರ್ ಹಾಗೂ ಅಜಿಂಕ್ಯಾ ರಹಾನೆ ರಣಜಿ ಆಡ್ತಿದ್ರೂ ಶ್ರೇಯಸ್ ದಿಕ್ಕರಿಸಿದ್ದಾರೆ.
ಸಿಎಸ್ಕೆ ಪರ IPL ಪ್ರಚಾರದಲ್ಲಿ ಚಹರ್ ಬ್ಯುಸಿ
ಫ್ಯಾಮಿಲಿ ಸಮಸ್ಯೆ ಅಂತಾ ಸೌತ್ ಆಫ್ರಿಕಾ-ಅಫ್ಘಾನಿಸ್ತಾನ ಸರಣಿಯಿಂದ ಹಿಂದೆ ಸರಿದ ವೇಗಿ ದೀಪಕ್ ಚಹರ್ ಕೂಡ ಬಾಸ್ಗಳ ಮಾತಿಗೆ ಸೊಪ್ಪು ಹಾಕಿಲ್ಲ. ತಂಡಕ್ಕೆ ಮರಳಲು ರೆಡ್ಬಾಲ್ ಕ್ರಿಕೆಟ್ ಆಡುವಂತೆ ಬಿಸಿಸಿಐ ಸೂಚಿಸಿದೆ. ಚಹರ್, ರಣಜಿ ಟ್ರೋಫಿ ಆಡೋದನ್ನು ಬಿಟ್ಟು ಚೆನ್ನೈ ಸೂಪರ್ ಕಿಂಗ್ಸ್ನ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
ತ್ರಿಮೂರ್ತಿಗಳು ಬಿಸಿಸಿಐಗೆ ಡೋಂಟ್ಕೇರ್ ಅಂತಿರೋದ್ಯಾಕೆ?
ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್ ಬಿಸಿಸಿಐ ಮಾತನ್ನ ಗಾಳಿಗೆ ತೂರಿದಿದ್ದಾರೆ. ಸ್ವಲ್ವನೂ ಭಯದ ಇಲ್ಲ ರೀತಿಯಲ್ಲಿ ವರ್ತಿಸ್ತಿದ್ದಾರೆ. ಬಿಸಿಸಿಐ ಒಂದು ಮಾತು ಹೇಳಿದ್ರೆ ಅದನ್ನ ಕಟ್ಟುನಿಟ್ಟಾಗಿ ಪಾಲಿಸೋ ಆಟಗಾರರಿದ್ದಾರೆ. ಆದ್ರೆ ಈ ಮೂವರು ಅದಕ್ಕೆ ತದ್ಧಿರುದ್ಧ. ತಾವು ಸೂಪರ್ ಸ್ಟಾರ್ ಅನ್ನೋ ಅಹಂ ಈ ರೀತಿ ಮಾಡಿಸ್ತಿದೆಯಾ ? ಅಥವಾ ಅತಿಯಾದ ಆತ್ಮವಿಶ್ವಾಸ ಇದಕ್ಕೆಲ್ಲಾ ಕಾರಣನಾ? ಉತ್ತರ ನಿಗೂಢ.
ರಣಜಿ ಟ್ರೋಫಿ ತಿರಸ್ಕಾರಕ್ಕೆ ಕಾರಣ ಏನೇ ಇದ್ರೂ, ಇವರ ಭವಿಷ್ಯಕ್ಕೆ ಈ ನಿರ್ಧಾರ ಕುತ್ತು ತರೋದ್ರಲ್ಲಿ ಅನುಮಾನವಿಲ್ಲ. ಇವರ ನಡೆಯಿಂದ ಈಗಾಗ್ಲೆ ಬಿಗ್ಬಾಸ್ಗಳು ಕೆರಳಿ ಕೆಂಡವಾಗಿದ್ದಾರೆ. ಮುಂದಾದ್ರೂ ಇವರು ಬಿಸಿಸಿಐ ಮಾತನ್ನು ಪಾಲಿಸ್ತಾರಾ? ಅಥವಾ ಇದೇ ರೀತಿ ಮೊಂಡುತನವನ್ನ ಮುಂದುವರೆಸ್ತಾರಾ? ಅನ್ನೋದು ಸದ್ಯ ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಸಿಎಸ್ಕೆ IPL ಪ್ರಚಾರ ಕಾರ್ಯದಲ್ಲಿ ಮೂವರು ಬ್ಯುಸಿ
ತ್ರಿಮೂರ್ತಿಗಳು ಬಿಸಿಸಿಐಗೆ ಡೋಂಟ್ಕೇರ್ ಅಂತಿರೋದ್ಯಾಕೆ..?
ಸೂಪರ್ ಸ್ಟಾರ್ ಅಹಂನಲ್ಲಿದ್ದಾರಾ ತ್ರಿಮೂರ್ತಿಗಳು.?
ಟೀಮ್ ಇಂಡಿಯಾ ಆಟಗಾರರ ಪಾಲಿಗೆ ಬಿಸಿಸಿಐ ಹೇಳಿದ್ದೆ ವೇದವಾಕ್ಯ. ಯಾರೇ ಆದ್ರೂ ಚಾಚು ತಪ್ಪದೇ ಪಾಲಿಸಬೇಕು. ಇಂಥ ಪವರ್ ಹೌಸ್ಗೆ ಈ ತ್ರಿಮೂರ್ತಿಗಳು ಸೆಡ್ಡು ಹೊಡೆದಿದ್ದಾರೆ. ಬಾಸ್ಗಳು ಖಡಕ್ ವಾರ್ನಿಂಗ್ ಕೊಟ್ರೂ ಕೂಡ ಕ್ಯಾರೇ ಅಂತಿಲ್ಲ. ಬಿಸಿಸಿಐ ಮಾತಿಗೆ ಡೋಂಟ್ಕೇರ್ ಅಂತಿರೋ ಆ ಆಟಗಾರರು ಯಾರು? ಕಾರಣ ಏನು?
ಬಿಸಿಸಿಐ.. ಮೋಸ್ಟ್ ಪವರ್ಫುಲ್ ಕ್ರಿಕೆಟ್ ಮಂಡಳಿ. ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ಗೂ ಬಿಸಿಸಿಐ ಹೇಳಿದ್ದೆ ವೇದವಾಕ್ಯ. ಇನ್ನು ಭಾರತೀಯ ಪ್ಲೇಯರ್ಸ್ ಗಳಂತೂ ಬಿಸಿಸಿಐ ಬಿಗ್ಬಾಸ್ಗಳು ಹಾಕಿದ ಗೆರೆಯನ್ನ ದಾಟಂಗಿಲ್ಲ. ಆಟಗಾರರನ್ನ ಮಾತಿನಲ್ಲೆ ಗಿರಗಿಟ್ಲೆ ಆಡಿಸೋ ಪವರ್ ಹೌಸ್ ಬಿಸಿಸಿಐ, ಇದೀಗ ಪವರ್ ಕಳೆದುಕೊಂಡಂತೆ ಕಾಣ್ತಿದೆ.
ರಣಜಿ ಕಡೆ ಮುಖ ಮಾಡದ ಕಿಶನ್, ಶ್ರೇಯಸ್, ಚಹರ್
ಯಂಗ್ಗನ್ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್ಗೆ ಸದ್ಯ ಟೀಮ್ ಇಂಡಿಯಾದಲ್ಲಿ ಸ್ಥಾನವಿಲ್ಲ. ತಂಡದಿಂದ ಹೊರಬಿದ್ದಿರುವ ಇವರಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ರಣಜಿ ಟ್ರೋಫಿ ಆಡುವಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಕರಾ ಮಾಡಿದ್ರೆ ನಡೆಯಲ್ಲ. ಹೇಳಿದ್ದನ್ನ ಫಾಲೋ ಮಾಡ್ಲೇಬೇಕು ಅಂತ ಕಡ್ಡಿಮುರಿದಂತೆ ಹೇಳಿದ್ರು. ಇಷ್ಟಾದ್ರು ಜಯ್ ಶಾ ಮಾತಿಗೆ ತ್ರಿಮೂರ್ತಿಗಳು ಕ್ಯಾರೇ ಅಂದಿಲ್ಲ.
ಕಿಶನ್ ರಣಜಿಗೆ ಚಕ್ಕರ್, DY ಪಾಟೀಲ್ ಟೂರ್ನಿಗೆ ಹಾಜರ್..?
ದಕ್ಷಿಣ ಆಫ್ರಿಕಾ ಪ್ರವಾಸದಿಂದ ಅರ್ಧಕ್ಕೆ ವಾಪಾಸಾದ ಡೇರಿಂಗ್ ಬ್ಯಾಟರ್ ಇಶಾನ್ ಕಿಶನ್ಗೆ ಬಿಸಿಸಿಐ ರಣಜಿ ಟ್ರೋಫಿ ಆಡುವಂತೆ ಸೂಚಿಸಿತ್ತು. ಆದರೆ ಕಿಶನ್ ಬಿಗ್ಬಾಸ್ಗಳ ಮಾತಿಗೆ ಸೊಪ್ಪು ಹಾಕಿಲ್ಲ. ರಣಜಿಗೆ ಚಕ್ಕರ್ ಹಾಕಿ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ನಡೆಸೋ ಡಿವೈ ಪಾಟೀಲ್ ಟಿ20 ಟೂರ್ನಿ ಆಡಲು ಸಿದ್ಧತೆ ನಡೆಸಿದ್ದಾರೆ. ಆ ಮೂಲಕ ಬಿಗ್ಬಾಸ್ಗಳ ಕಣ್ಣು ಮತ್ತಷ್ಟು ಕೆಂಪಾಗುವಂತೆ ಮಾಡಿದ್ದಾರೆ.
ಮುಂಬೈ ಪರ ಆಡದೇ ಶ್ರೇಯಸ್ ಮೊಂಡುತನ
ಶ್ರೇಯಸ್ ಅಯ್ಯರ್ ಕಥೆ ಕೂಡ ಭಿನ್ನವಾಗಿಲ್ಲ. ಇಂಗ್ಲೆಂಡ್ ಸರಣಿಯ ಕೊನೆ ಮೂರು ಪಂದ್ಯಗಳಿಂದ ಹೊರಬಿದ್ದ ಶ್ರೇಯಸ್ ರಣಜಿ ಆಡಲು ಹಿಂದೇಟು ಹಾಕಿದ್ದಾರೆ. ಹೆಡ್ಕೋಚ್ ರಾಹುಲ್ ದ್ರಾವಿಡ್ ಮಾತಿಗೂ ಬೆಲೆ ಕೊಟ್ಟಿಲ್ಲ. ಮುಂಬೈ ಪರ ಶಾರ್ದುಲ್ ಠಾಕೂರ್ ಹಾಗೂ ಅಜಿಂಕ್ಯಾ ರಹಾನೆ ರಣಜಿ ಆಡ್ತಿದ್ರೂ ಶ್ರೇಯಸ್ ದಿಕ್ಕರಿಸಿದ್ದಾರೆ.
ಸಿಎಸ್ಕೆ ಪರ IPL ಪ್ರಚಾರದಲ್ಲಿ ಚಹರ್ ಬ್ಯುಸಿ
ಫ್ಯಾಮಿಲಿ ಸಮಸ್ಯೆ ಅಂತಾ ಸೌತ್ ಆಫ್ರಿಕಾ-ಅಫ್ಘಾನಿಸ್ತಾನ ಸರಣಿಯಿಂದ ಹಿಂದೆ ಸರಿದ ವೇಗಿ ದೀಪಕ್ ಚಹರ್ ಕೂಡ ಬಾಸ್ಗಳ ಮಾತಿಗೆ ಸೊಪ್ಪು ಹಾಕಿಲ್ಲ. ತಂಡಕ್ಕೆ ಮರಳಲು ರೆಡ್ಬಾಲ್ ಕ್ರಿಕೆಟ್ ಆಡುವಂತೆ ಬಿಸಿಸಿಐ ಸೂಚಿಸಿದೆ. ಚಹರ್, ರಣಜಿ ಟ್ರೋಫಿ ಆಡೋದನ್ನು ಬಿಟ್ಟು ಚೆನ್ನೈ ಸೂಪರ್ ಕಿಂಗ್ಸ್ನ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
ತ್ರಿಮೂರ್ತಿಗಳು ಬಿಸಿಸಿಐಗೆ ಡೋಂಟ್ಕೇರ್ ಅಂತಿರೋದ್ಯಾಕೆ?
ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್ ಬಿಸಿಸಿಐ ಮಾತನ್ನ ಗಾಳಿಗೆ ತೂರಿದಿದ್ದಾರೆ. ಸ್ವಲ್ವನೂ ಭಯದ ಇಲ್ಲ ರೀತಿಯಲ್ಲಿ ವರ್ತಿಸ್ತಿದ್ದಾರೆ. ಬಿಸಿಸಿಐ ಒಂದು ಮಾತು ಹೇಳಿದ್ರೆ ಅದನ್ನ ಕಟ್ಟುನಿಟ್ಟಾಗಿ ಪಾಲಿಸೋ ಆಟಗಾರರಿದ್ದಾರೆ. ಆದ್ರೆ ಈ ಮೂವರು ಅದಕ್ಕೆ ತದ್ಧಿರುದ್ಧ. ತಾವು ಸೂಪರ್ ಸ್ಟಾರ್ ಅನ್ನೋ ಅಹಂ ಈ ರೀತಿ ಮಾಡಿಸ್ತಿದೆಯಾ ? ಅಥವಾ ಅತಿಯಾದ ಆತ್ಮವಿಶ್ವಾಸ ಇದಕ್ಕೆಲ್ಲಾ ಕಾರಣನಾ? ಉತ್ತರ ನಿಗೂಢ.
ರಣಜಿ ಟ್ರೋಫಿ ತಿರಸ್ಕಾರಕ್ಕೆ ಕಾರಣ ಏನೇ ಇದ್ರೂ, ಇವರ ಭವಿಷ್ಯಕ್ಕೆ ಈ ನಿರ್ಧಾರ ಕುತ್ತು ತರೋದ್ರಲ್ಲಿ ಅನುಮಾನವಿಲ್ಲ. ಇವರ ನಡೆಯಿಂದ ಈಗಾಗ್ಲೆ ಬಿಗ್ಬಾಸ್ಗಳು ಕೆರಳಿ ಕೆಂಡವಾಗಿದ್ದಾರೆ. ಮುಂದಾದ್ರೂ ಇವರು ಬಿಸಿಸಿಐ ಮಾತನ್ನು ಪಾಲಿಸ್ತಾರಾ? ಅಥವಾ ಇದೇ ರೀತಿ ಮೊಂಡುತನವನ್ನ ಮುಂದುವರೆಸ್ತಾರಾ? ಅನ್ನೋದು ಸದ್ಯ ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್