ಧರ್ಮಶಾಲಾದಲ್ಲಿ ಆರ್ಸಿಬಿ v/s ಪಂಜಾಬ್ ದಂಗಲ್
ಸತತ 4ನೇ ವಿಕ್ಟರಿ ಮೇಲೆ ರೆಡ್ ಆರ್ಮಿ ಹದ್ದಿನ ಕಣ್ಣು
ಧರ್ಮಶಾಲಾದಲ್ಲಿ RCB ಗಿದೆ ಪಂಚ ಚಾಲೆಂಜಸ್
ಆರ್ಸಿಬಿಗೆ ಹ್ಯಾಟ್ರಿಕ್ ಗೆಲುವಿನ ಸಿಂಚನ ಕಂಡಿದೆ. ಇದೇ ಹುಮ್ಮಸ್ಸಿನಲ್ಲಿ ಪಂಜಾಬ್ ಕಿಂಗ್ಸ್ ಬೇಟೆಯಾಡುವ ತವಕದಲ್ಲಿದೆ. ಅದಕ್ಕೆ ಪಂಚ ಧರ್ಮಶಾಲಾ ಸಂಕಟ ಎದುರಾಗಿದೆ. ಈ ಸಂಕಟವನ್ನು ಮೀರಿ ನಿಂತರಷ್ಟೇ ಆರ್ಸಿಬಿಗೆ ಸತತ 4ನೇ ಗೆಲುವು ಸಾಧ್ಯ.
ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್ಸಿಬಿ ಪಾಳಯದಲ್ಲಿ ಫುಲ್ ಜೋಶ್ ತುಂಬಿದೆ. ಹ್ಯಾಟ್ರಿಕ್ ವಿಕ್ಟರಿ ಆಟಗಾರರ ವಿಶ್ವಾಸವನ್ನ ಹೆಚ್ಚಿಸಿದೆ. ಎಲ್ಲಾ ವಿಭಾಗದಲ್ಲಿ ಸಾಂಘಿಕ ಹೋರಾಟ ನಡೆಸಿ ಎದುರಾಳಿಗೆ ನಡುಕ ಹುಟ್ಟಿಸಿದೆ. ಸದ್ಯಕ್ಕಂತೂ ರೆಡ್ ಆರ್ಮಿಯನ್ನ ಟಚ್ ಮಾಡೋದೆ ಕಷ್ಟ. ಬ್ಯಾಕ್ ಟು ಬ್ಯಾಕ್ ಗೆಲುವಿನ ಸರಮಾಲೆ ಕಟ್ತಿರೋ ಫಾಫ್ ಡುಪ್ಲೆಸಿ ಆ್ಯಂಡ್ ಗ್ಯಾಂಗ್, ಇಂದು ಪಂಜಾಬ್ ಕಿಂಗ್ಸ್ ಸಂಹಾರಕ್ಕೆ ಹವಣಿಸ್ತಿದೆ. ಆದರೆ ಧರ್ಮಶಾಲಾ ವಾರ್ ಗೆಲ್ಲೋದು ಅಂದುಕೊಂಡಷ್ಟು ಸುಲಭವಿಲ್ಲ. ಯಾಕಂದ್ರೆ ಐದು ಟಫ್ ಚಾಲೆಂಜಸ್ ಎದುರಾಗಿವೆ. ಇವುಗಳನ್ನ ಮೆಟ್ಟಿನಿಂತರಷ್ಟೇ ಧರ್ಮಶಾಲಾ ದಂಗಲ್ನಲ್ಲಿ ವಿಕ್ಟರಿ ಆರ್ಸಿಬಿಯದ್ದಾಗಲಿದೆ.
ಇದನ್ನೂ ಓದಿ:ಚಿಕ್ಕ ಮಗುವಿಗೆ ನಿಂದಿಸಿದಂತೆ ರಾಹುಲ್ರನ್ನ ಅವಮಾನಿಸಿದ ಮಾಲೀಕ.. ಭಾರೀ ಆಕ್ರೋಶ..!
ಪವರ್ಪ್ಲೇನಲ್ಲಿ ಬೌನ್ಸ್, ಸ್ವಿಂಗ್ ಚಾಲೆಂಜ್..!
ಆರ್ಸಿಬಿ-ಪಂಜಾಬ್ ನಡುವಿನ ಪಂದ್ಯವನ್ನ ಹೈಬ್ರಿಡ್ ಪಿಚ್ನಲ್ಲಿ ಆಡಿಸಲಾಗುತ್ತೆ. ದೇಶದಲ್ಲಿ ಮೊದಲ ಬಾರಿ ಈ ಪ್ರಯೋಗ ಮಾಡಲಾಗಿದ್ದು, ಚೆಂಡು ಹೆಚ್ಚು ಬೌನ್ಸ್ ಆಗುತ್ತೆ. ಜತೆಗೆ ಸ್ವಿಂಗ್ ನೆರವು ಇದೆ. ಹೀಗಾಗಿ ಆರ್ಸಿಬಿ ಪವರ್ಪ್ಲೇನಲ್ಲಿ ಎಚ್ಚರಿಕೆಯಿಂದ ಆಡಬೇಕಿದೆ. ಎದುರಾಳಿ ತಂಡದಲ್ಲಿ ಕಗಿಸೋ ರಬಾಡ ಹಾಗೂ ಅರ್ಷ್ದೀಪ್ ಸಿಂಗ್ ರಂತ ಫೈರಿ ಫಾಸ್ಟ್ ಬೌಲರ್ಗಳಿದ್ದಾರೆ. ಇವರಿಗೆ ತಕ್ಕ ಜವಾಬು ನೀಡಬೇಕಿದೆ.
ಸ್ಪಿನ್ನರ್ಸ್ ವಿರುದ್ಧ ಎಚ್ಚರಿಕೆಯ ಆಟ ಅಗತ್ಯ..!
ಹಿಮತಪ್ಪಲಿನಲ್ಲಿರೋ ಧರ್ಮಶಾಲಾ ಮೈದಾನ ಸ್ಪಿನ್ನರ್ಸ್ ಸ್ವರ್ಗತಾಣ. ಸಿಎಸ್ಕೆ ಹಾಗೂ ಪಂಜಾಬ್ ನಡುವಿನ ಪಂದ್ಯದಲ್ಲೇ ಪ್ರೂವ್ ಆಗಿದೆ. ಕಳೆದ ಪಂದ್ಯದಲ್ಲಿ ಸ್ಪಿನ್ನರ್ಸ್ ಒಟ್ಟು 8 ವಿಕೆಟ್ ಬೇಟೆಯಾಡಿದ್ರು. ಇಂದು ಕೂಡ ಸ್ಪಿನ್ನರ್ಸ್ ಮೇನ್ ರೋಲ್ ಪ್ಲೇ ಮಾಡುವ ಸಾಧ್ಯತೆ ದಟ್ಟವಾಗಿದೆ. ಪಂಜಾಬ್ ತಂಡದಲ್ಲಿ ಹರ್ಪ್ರೀತ್ ಬ್ರಾರ್ ಹಾಗೂ ರಾಹುಲ್ ಚಹಲ್ರಂತ ಕ್ವಾಲಿಟಿ ಸ್ಪಿನ್ನರ್ಗಳಿದ್ದಾರೆ. ಇವರ ವಿರುದ್ಧ ಆರ್ಸಿಬಿ ಬ್ಯಾಟರ್ಸ್ ಎಚ್ಚರಿಕೆಯ ಆಟವಾಡಬೇಕಿದೆ. ಸ್ವಲ್ಪ ಯಾಮಾರಿದ್ರು ಸೋಲಿನ ಕೂಪಕ್ಕೆ ಬೀಳೋದು ಪಕ್ಕಾ.
ಇದನ್ನೂ ಓದಿ:ಚಿಕನ್ ಪ್ರಿಯರೇ ಹುಷಾರ್.. ಶವರ್ಮಾ ತಿಂದು ಪ್ರಾಣಬಿಟ್ಟ 19 ವರ್ಷದ ಯುವಕ
ಸಣ್ಣ ಮೈದಾನ.. ಹಿಟ್ಟರ್ಸ್ಗೆ ಕಡಿವಾಣ ಹಾಕೋದ್ಯಾರು?
ಧರ್ಮಶಾಲಾ ಹೇಳಿ ಕೇಳಿ ಸಣ್ಣ ಮೈದಾನ. ಸ್ಟ್ರೇಟ್ ಬೌಂಡರಿ 60 ಮೀಟರ್ ಇದ್ರೆ ಸ್ಕ್ವೇರ್ ಲೆಗ್ ಬೌಂಡರಿ 56 ಮೀಟರ್ ಇದೆ. ಹೀಗಾಗಿ ಇಲ್ಲಿ ರನ್ ಹೊಳೆ ಹರಿಯಲಿದೆ. ಜಾನಿ ಬೇಸ್ಟೋವ್, ರಿಲೀ ರೋಸೌವ್ ಹಾಗೂ ಲೀವಿಂಗ್ಸ್ಟೋನ್ರಂತ ಬಿಗ್ ಹಿಟ್ಟರ್ಗಳಿದ್ದಾರೆ. ಇವರು ನೆಲಕಚ್ಚಿ ನಿಂತರೆ ರನ್ ಭರಾಟೆ ನಡೆಯಲಿದೆ. ಸೋ ಇವರು ಬಾಲಬಿಚ್ಚದಂತೆ ಕ್ಯಾಪ್ಟನ್ ಡುಪ್ಲೆಸಿ ತಕ್ಕ ಸ್ಟ್ರಾಟಜಿ ರೂಪಿಸಬೇಕಿದೆ.
ಶಶಾಂಕ್-ಅಶುತೋಷ್-ಆರ್ಭಟಕ್ಕೆ ಹಾಕಬೇಕು ಬ್ರೇಕ್..!
ಪಂಜಾಬ್ ತಂಡದಲ್ಲಿ ಬೆಂಕಿ-ಬಿರುಗಾಳಿ ಶಶಾಂಕ್ ಸಿಂಗ್ ಹಾಗೂ ಅಶುತೋಷ್ ಶರ್ಮಾ ಇದ್ದಾರೆ. ಇಬ್ಬರೂ ಸಾಲಿಡ್ ಟಚ್ನಲ್ಲಿದ್ದಾರೆ. ಇಬ್ಬರು ಹೆಗಲಿಗೆ ಹೆಗಲುಕೊಟ್ಟು ತಂಡವನ್ನ ಗೆಲುವಿನ ದಡ ಸೇರಿಸ್ತಿದ್ದಾರೆ. ಈ ಜೋಡೆತ್ತು ಯಾವುದೇ ಕ್ಷಣದಲ್ಲಿ ಪಂದ್ಯದ ಚಿತ್ರಣ ಬದಲಿಸಬಲ್ಲರು. ಹೀಗಾಗಿ ಗೇಮ್ ಚೇಂಜರ್ ಶಶಾಂಕ್ ಹಾಗೂ ಅಶುತೋಷ್ ಆರ್ಭಟಕ್ಕೆ ಇಂದು ಬೇಗನೇ ಬ್ರೇಕ್ ಹಾಕಬೇಕಿದೆ.
ಮ್ಯಾಕ್ಸ್ವೆಲ್-ಗ್ರೀನ್ ಬ್ಯಾಡ್ಫಾರ್ಮ್ ಆತಂಕ..?
ಸತತ ಗೆಲುವಿನ ನಡುವೆಯೂ ಡೇಂಜರಸ್ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಕ್ಯಾಮರೂನ್ ಬ್ಯಾಡ್ಫಾರ್ಮ್ ತಂಡಕ್ಕೆ ಆತಂಕ ಹೆಚ್ಚಿಸಿದೆ. ಗ್ರೀನ್ ಅಬ್ಬರ ಬೌಲಿಂಗ್ ಮಾತ್ರ ಸೀಮಿತವಾಗಿದೆ. ಬ್ಯಾಟ್ ಸದ್ದೇ ಮಾಡ್ತಿಲ್ಲ. ಮ್ಯಾಕ್ಸ್ವೆಲ್ ಅಂತೂ ಟೂರ್ನಿಯುದ್ದಕ್ಕೂ ಕಳಪೆ ಆಟವಾಡ್ತಿದ್ದಾರೆ. ಇಬ್ಬರು ಇಂದು ಕಮ್ಬ್ಯಾಕ್ ಮಾಡಲೇಬೇಕಿದೆ.
ಇದನ್ನೂ ಓದಿ:KL ರಾಹುಲ್ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್ಎಸ್ಜಿ ಮಾಲೀಕ..! ವಿಡಿಯೋ
ಇದಿಷ್ಟೇ ಅಲ್ಲದೇ, 2ನೇ ಇನ್ನಿಂಗ್ಸ್ ವೇಳೆ ಹೆಚ್ಚು ಇಬ್ಬನಿ ಕೂಡ ಇರಲಿದೆ. ಹೀಗಾಗಿ ಆರ್ಸಿಬಿ ಟಾಸ್ ಗೆದ್ರೆ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವುದು ಉತ್ತಮ. ಈ ಎಲ್ಲಾ ಚಾಲೆಂಜಸ್ ಅನ್ನ ಆರ್ಸಿಬಿ ಮೆಟ್ಟಿ ನಿಂತಿದ್ದೆ ಆದ್ರೆ ಆರ್ಸಿಬಿಗೆ ಗೆಲುವು ಫಿಕ್ಸ್. ಹಾಗಾಗಲಿ ಅನ್ನೋದೆ ಎಲ್ಲ ಅಭಿಮಾನಿಗಳ ಆಶಯವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಧರ್ಮಶಾಲಾದಲ್ಲಿ ಆರ್ಸಿಬಿ v/s ಪಂಜಾಬ್ ದಂಗಲ್
ಸತತ 4ನೇ ವಿಕ್ಟರಿ ಮೇಲೆ ರೆಡ್ ಆರ್ಮಿ ಹದ್ದಿನ ಕಣ್ಣು
ಧರ್ಮಶಾಲಾದಲ್ಲಿ RCB ಗಿದೆ ಪಂಚ ಚಾಲೆಂಜಸ್
ಆರ್ಸಿಬಿಗೆ ಹ್ಯಾಟ್ರಿಕ್ ಗೆಲುವಿನ ಸಿಂಚನ ಕಂಡಿದೆ. ಇದೇ ಹುಮ್ಮಸ್ಸಿನಲ್ಲಿ ಪಂಜಾಬ್ ಕಿಂಗ್ಸ್ ಬೇಟೆಯಾಡುವ ತವಕದಲ್ಲಿದೆ. ಅದಕ್ಕೆ ಪಂಚ ಧರ್ಮಶಾಲಾ ಸಂಕಟ ಎದುರಾಗಿದೆ. ಈ ಸಂಕಟವನ್ನು ಮೀರಿ ನಿಂತರಷ್ಟೇ ಆರ್ಸಿಬಿಗೆ ಸತತ 4ನೇ ಗೆಲುವು ಸಾಧ್ಯ.
ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್ಸಿಬಿ ಪಾಳಯದಲ್ಲಿ ಫುಲ್ ಜೋಶ್ ತುಂಬಿದೆ. ಹ್ಯಾಟ್ರಿಕ್ ವಿಕ್ಟರಿ ಆಟಗಾರರ ವಿಶ್ವಾಸವನ್ನ ಹೆಚ್ಚಿಸಿದೆ. ಎಲ್ಲಾ ವಿಭಾಗದಲ್ಲಿ ಸಾಂಘಿಕ ಹೋರಾಟ ನಡೆಸಿ ಎದುರಾಳಿಗೆ ನಡುಕ ಹುಟ್ಟಿಸಿದೆ. ಸದ್ಯಕ್ಕಂತೂ ರೆಡ್ ಆರ್ಮಿಯನ್ನ ಟಚ್ ಮಾಡೋದೆ ಕಷ್ಟ. ಬ್ಯಾಕ್ ಟು ಬ್ಯಾಕ್ ಗೆಲುವಿನ ಸರಮಾಲೆ ಕಟ್ತಿರೋ ಫಾಫ್ ಡುಪ್ಲೆಸಿ ಆ್ಯಂಡ್ ಗ್ಯಾಂಗ್, ಇಂದು ಪಂಜಾಬ್ ಕಿಂಗ್ಸ್ ಸಂಹಾರಕ್ಕೆ ಹವಣಿಸ್ತಿದೆ. ಆದರೆ ಧರ್ಮಶಾಲಾ ವಾರ್ ಗೆಲ್ಲೋದು ಅಂದುಕೊಂಡಷ್ಟು ಸುಲಭವಿಲ್ಲ. ಯಾಕಂದ್ರೆ ಐದು ಟಫ್ ಚಾಲೆಂಜಸ್ ಎದುರಾಗಿವೆ. ಇವುಗಳನ್ನ ಮೆಟ್ಟಿನಿಂತರಷ್ಟೇ ಧರ್ಮಶಾಲಾ ದಂಗಲ್ನಲ್ಲಿ ವಿಕ್ಟರಿ ಆರ್ಸಿಬಿಯದ್ದಾಗಲಿದೆ.
ಇದನ್ನೂ ಓದಿ:ಚಿಕ್ಕ ಮಗುವಿಗೆ ನಿಂದಿಸಿದಂತೆ ರಾಹುಲ್ರನ್ನ ಅವಮಾನಿಸಿದ ಮಾಲೀಕ.. ಭಾರೀ ಆಕ್ರೋಶ..!
ಪವರ್ಪ್ಲೇನಲ್ಲಿ ಬೌನ್ಸ್, ಸ್ವಿಂಗ್ ಚಾಲೆಂಜ್..!
ಆರ್ಸಿಬಿ-ಪಂಜಾಬ್ ನಡುವಿನ ಪಂದ್ಯವನ್ನ ಹೈಬ್ರಿಡ್ ಪಿಚ್ನಲ್ಲಿ ಆಡಿಸಲಾಗುತ್ತೆ. ದೇಶದಲ್ಲಿ ಮೊದಲ ಬಾರಿ ಈ ಪ್ರಯೋಗ ಮಾಡಲಾಗಿದ್ದು, ಚೆಂಡು ಹೆಚ್ಚು ಬೌನ್ಸ್ ಆಗುತ್ತೆ. ಜತೆಗೆ ಸ್ವಿಂಗ್ ನೆರವು ಇದೆ. ಹೀಗಾಗಿ ಆರ್ಸಿಬಿ ಪವರ್ಪ್ಲೇನಲ್ಲಿ ಎಚ್ಚರಿಕೆಯಿಂದ ಆಡಬೇಕಿದೆ. ಎದುರಾಳಿ ತಂಡದಲ್ಲಿ ಕಗಿಸೋ ರಬಾಡ ಹಾಗೂ ಅರ್ಷ್ದೀಪ್ ಸಿಂಗ್ ರಂತ ಫೈರಿ ಫಾಸ್ಟ್ ಬೌಲರ್ಗಳಿದ್ದಾರೆ. ಇವರಿಗೆ ತಕ್ಕ ಜವಾಬು ನೀಡಬೇಕಿದೆ.
ಸ್ಪಿನ್ನರ್ಸ್ ವಿರುದ್ಧ ಎಚ್ಚರಿಕೆಯ ಆಟ ಅಗತ್ಯ..!
ಹಿಮತಪ್ಪಲಿನಲ್ಲಿರೋ ಧರ್ಮಶಾಲಾ ಮೈದಾನ ಸ್ಪಿನ್ನರ್ಸ್ ಸ್ವರ್ಗತಾಣ. ಸಿಎಸ್ಕೆ ಹಾಗೂ ಪಂಜಾಬ್ ನಡುವಿನ ಪಂದ್ಯದಲ್ಲೇ ಪ್ರೂವ್ ಆಗಿದೆ. ಕಳೆದ ಪಂದ್ಯದಲ್ಲಿ ಸ್ಪಿನ್ನರ್ಸ್ ಒಟ್ಟು 8 ವಿಕೆಟ್ ಬೇಟೆಯಾಡಿದ್ರು. ಇಂದು ಕೂಡ ಸ್ಪಿನ್ನರ್ಸ್ ಮೇನ್ ರೋಲ್ ಪ್ಲೇ ಮಾಡುವ ಸಾಧ್ಯತೆ ದಟ್ಟವಾಗಿದೆ. ಪಂಜಾಬ್ ತಂಡದಲ್ಲಿ ಹರ್ಪ್ರೀತ್ ಬ್ರಾರ್ ಹಾಗೂ ರಾಹುಲ್ ಚಹಲ್ರಂತ ಕ್ವಾಲಿಟಿ ಸ್ಪಿನ್ನರ್ಗಳಿದ್ದಾರೆ. ಇವರ ವಿರುದ್ಧ ಆರ್ಸಿಬಿ ಬ್ಯಾಟರ್ಸ್ ಎಚ್ಚರಿಕೆಯ ಆಟವಾಡಬೇಕಿದೆ. ಸ್ವಲ್ಪ ಯಾಮಾರಿದ್ರು ಸೋಲಿನ ಕೂಪಕ್ಕೆ ಬೀಳೋದು ಪಕ್ಕಾ.
ಇದನ್ನೂ ಓದಿ:ಚಿಕನ್ ಪ್ರಿಯರೇ ಹುಷಾರ್.. ಶವರ್ಮಾ ತಿಂದು ಪ್ರಾಣಬಿಟ್ಟ 19 ವರ್ಷದ ಯುವಕ
ಸಣ್ಣ ಮೈದಾನ.. ಹಿಟ್ಟರ್ಸ್ಗೆ ಕಡಿವಾಣ ಹಾಕೋದ್ಯಾರು?
ಧರ್ಮಶಾಲಾ ಹೇಳಿ ಕೇಳಿ ಸಣ್ಣ ಮೈದಾನ. ಸ್ಟ್ರೇಟ್ ಬೌಂಡರಿ 60 ಮೀಟರ್ ಇದ್ರೆ ಸ್ಕ್ವೇರ್ ಲೆಗ್ ಬೌಂಡರಿ 56 ಮೀಟರ್ ಇದೆ. ಹೀಗಾಗಿ ಇಲ್ಲಿ ರನ್ ಹೊಳೆ ಹರಿಯಲಿದೆ. ಜಾನಿ ಬೇಸ್ಟೋವ್, ರಿಲೀ ರೋಸೌವ್ ಹಾಗೂ ಲೀವಿಂಗ್ಸ್ಟೋನ್ರಂತ ಬಿಗ್ ಹಿಟ್ಟರ್ಗಳಿದ್ದಾರೆ. ಇವರು ನೆಲಕಚ್ಚಿ ನಿಂತರೆ ರನ್ ಭರಾಟೆ ನಡೆಯಲಿದೆ. ಸೋ ಇವರು ಬಾಲಬಿಚ್ಚದಂತೆ ಕ್ಯಾಪ್ಟನ್ ಡುಪ್ಲೆಸಿ ತಕ್ಕ ಸ್ಟ್ರಾಟಜಿ ರೂಪಿಸಬೇಕಿದೆ.
ಶಶಾಂಕ್-ಅಶುತೋಷ್-ಆರ್ಭಟಕ್ಕೆ ಹಾಕಬೇಕು ಬ್ರೇಕ್..!
ಪಂಜಾಬ್ ತಂಡದಲ್ಲಿ ಬೆಂಕಿ-ಬಿರುಗಾಳಿ ಶಶಾಂಕ್ ಸಿಂಗ್ ಹಾಗೂ ಅಶುತೋಷ್ ಶರ್ಮಾ ಇದ್ದಾರೆ. ಇಬ್ಬರೂ ಸಾಲಿಡ್ ಟಚ್ನಲ್ಲಿದ್ದಾರೆ. ಇಬ್ಬರು ಹೆಗಲಿಗೆ ಹೆಗಲುಕೊಟ್ಟು ತಂಡವನ್ನ ಗೆಲುವಿನ ದಡ ಸೇರಿಸ್ತಿದ್ದಾರೆ. ಈ ಜೋಡೆತ್ತು ಯಾವುದೇ ಕ್ಷಣದಲ್ಲಿ ಪಂದ್ಯದ ಚಿತ್ರಣ ಬದಲಿಸಬಲ್ಲರು. ಹೀಗಾಗಿ ಗೇಮ್ ಚೇಂಜರ್ ಶಶಾಂಕ್ ಹಾಗೂ ಅಶುತೋಷ್ ಆರ್ಭಟಕ್ಕೆ ಇಂದು ಬೇಗನೇ ಬ್ರೇಕ್ ಹಾಕಬೇಕಿದೆ.
ಮ್ಯಾಕ್ಸ್ವೆಲ್-ಗ್ರೀನ್ ಬ್ಯಾಡ್ಫಾರ್ಮ್ ಆತಂಕ..?
ಸತತ ಗೆಲುವಿನ ನಡುವೆಯೂ ಡೇಂಜರಸ್ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಕ್ಯಾಮರೂನ್ ಬ್ಯಾಡ್ಫಾರ್ಮ್ ತಂಡಕ್ಕೆ ಆತಂಕ ಹೆಚ್ಚಿಸಿದೆ. ಗ್ರೀನ್ ಅಬ್ಬರ ಬೌಲಿಂಗ್ ಮಾತ್ರ ಸೀಮಿತವಾಗಿದೆ. ಬ್ಯಾಟ್ ಸದ್ದೇ ಮಾಡ್ತಿಲ್ಲ. ಮ್ಯಾಕ್ಸ್ವೆಲ್ ಅಂತೂ ಟೂರ್ನಿಯುದ್ದಕ್ಕೂ ಕಳಪೆ ಆಟವಾಡ್ತಿದ್ದಾರೆ. ಇಬ್ಬರು ಇಂದು ಕಮ್ಬ್ಯಾಕ್ ಮಾಡಲೇಬೇಕಿದೆ.
ಇದನ್ನೂ ಓದಿ:KL ರಾಹುಲ್ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್ಎಸ್ಜಿ ಮಾಲೀಕ..! ವಿಡಿಯೋ
ಇದಿಷ್ಟೇ ಅಲ್ಲದೇ, 2ನೇ ಇನ್ನಿಂಗ್ಸ್ ವೇಳೆ ಹೆಚ್ಚು ಇಬ್ಬನಿ ಕೂಡ ಇರಲಿದೆ. ಹೀಗಾಗಿ ಆರ್ಸಿಬಿ ಟಾಸ್ ಗೆದ್ರೆ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವುದು ಉತ್ತಮ. ಈ ಎಲ್ಲಾ ಚಾಲೆಂಜಸ್ ಅನ್ನ ಆರ್ಸಿಬಿ ಮೆಟ್ಟಿ ನಿಂತಿದ್ದೆ ಆದ್ರೆ ಆರ್ಸಿಬಿಗೆ ಗೆಲುವು ಫಿಕ್ಸ್. ಹಾಗಾಗಲಿ ಅನ್ನೋದೆ ಎಲ್ಲ ಅಭಿಮಾನಿಗಳ ಆಶಯವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್