T20 ವಿಶ್ವಕಪ್ ಬಗ್ಗೆ ಆರ್ಸಿಬಿಯ ದಿನೇಶ್ ಕಾರ್ತಿಕ್ ಹೇಳುವುದು ಏನು?
ರೋಹಿತ್ರ ಆ ಎರಡು ಮಾತುಗಳು ಡಿಕೆ ಟಿ20 ವಿಶ್ವಕಪ್ ಕನಸಿಗೆ ಸ್ಫೂರ್ತಿ
ಅಜಿತ್ ಅಗರ್ಕರ್, ರೋಹಿತ್ ಹಾಗೂ ರಾಹುಲ್ ಒಳ್ಳೆಯ ತಂಡ ಕಟ್ತಾರಾ?
ಐಪಿಎಲ್ನಲ್ಲಿ ಡಿಕೆ ಬಾಸ್ ಆರ್ಭಟ ಜೋರಾಗಿದೆ. ಆನ್ಫೀಲ್ಡ್ ಘರ್ಜನೆ ನಡುವೆ ಆರ್ಸಿಬಿ ಫಿನಿಶರ್ ಒಂದು ಶಪಥ ಮಾಡಿದ್ದಾರೆ. ಏನಾದರೂ ಸೈ, ನಾನು ಅದನ್ನ ಮಾಡಿಯೇ ತೀರುತ್ತೆನೆ ಎಂದಿದ್ದಾರೆ. ಅಷ್ಟಕ್ಕೂ ಡಿಕೆ ಮಾಡಿರುವ ಆ ಶಪಥ ಏನು?.
100% ರೆಡಿ.. ರೋಹಿತ್- ದ್ರಾವಿಡ್ಗೆ ಸ್ಟ್ರಾಂಗ್ ಮೆಸೆಜ್
ಟಿ20 ವಿಶ್ವಕಪ್ ತಂಡ ಅನೌನ್ಸ್ಮೆಂಟ್ಗೆ ಕೌಂಟ್ಡೌನ್ ಶುರುವಾಗಿದೆ. ಇದೇ ವಾರದಲ್ಲಿ ಬಿಸಿಸಿಐ, ಟೀಮ್ ಇಂಡಿಯಾವನ್ನ ಪ್ರಕಟಿಸಲಿದೆ ಎಂದು ವರದಿಯಾಗಿದೆ. ಅಜಿತ್ ಅಗರ್ಕರ್ ಆ್ಯಂಡ್ ಟೀಮ್ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರ ಮೇಲೆ ಕಣ್ಣಿಟ್ಟಿದ್ದು, ಯಾರೆಲ್ಲ ಆಯ್ಕೆ ಆಗ್ತಾರೆ ಅನ್ನೋದು ಸಾಕಷ್ಟು ಕುತೂಹಲ ಮೂಡಿಸಿದೆ. ಇದೇ ಟೈಮ್ ಅಲ್ಲಿ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಧೂಳೆಬ್ಬಿಸಿರೋ ದಿನೇಶ್ ಕಾರ್ತಿಕ್ ಟಿ20 ವಿಶ್ವಕಪ್ ಆಡಲು ಶಪಥಗೈದಿದ್ದಾರೆ.
ಇದನ್ನೂ ಓದಿ: ಭಾರೀ ಸದ್ದು ಮಾಡ್ತಿದೆ ಚೊಂಬು ಪಾಲಿಟಿಕ್ಸ್.. HD ದೇವೇಗೌಡ-ಸಿಎಂ ಸಿದ್ದರಾಮಯ್ಯ ನಡುವೆ ವಾಕ್ಸಮರ
T20 ವಿಶ್ವಕಪ್ ಆಡಲು ಸಿದ್ಧನಿದ್ದೇನೆ
ಈ ವಯಸ್ಸಿನಲ್ಲಿ ಭಾರತ ತಂಡವನ್ನ ಪ್ರತಿನಿಧಿಸಲು ನಿಜಕ್ಕೂ ಹೆಮ್ಮೆ ಅನ್ನಿಸುತ್ತೆ. ಟಿ20 ವಿಶ್ವಕಪ್ ಆಡುವುದಕ್ಕಿಂತ ದೊಡ್ಡದು ಯಾವುದು ಇಲ್ಲ. ಉತ್ತಮ ತಂಡವನ್ನ ಕಟ್ಟಲು ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್ ಹಾಗೂ ಅಜಿತ್ ಅಗರ್ಕರ್ ಸಮರ್ಥರಿದ್ದಾರೆ. ಏನೇ ನಿರ್ಧಾರ ತೆಗೆದುಕೊಂಡರೂ ನಾನು ಅವರ ಜೊತೆಗಿದ್ದೇನೆ. ಆದರೆ ನಾನು ಒಂದು ಮಾತನ್ನ ಹೇಳುತ್ತೇನೆ, ಅದೇನಂದ್ರೆ ನಾನು 100% ಸಿದ್ಧ. ವಿಶ್ವಕಪ್ ಫ್ಲೈಟ್ ಏರಲು ಏನು ಬೇಕಾದರೂ ಮಾಡಬಲ್ಲೆ.
ದಿನೇಶ್ ಕಾರ್ತಿಕ್, ಟೀಮ್ ಇಂಡಿಯಾ ಆಟಗಾರ
ಡಿಕೆಗೆ T20 ವಿಶ್ವಕಪ್ ಆಸೆ ಚಿಗುರಿಸಿದ ಕ್ಯಾಪ್ಟನ್ ರೋಹಿತ್..!
ಸದ್ಯ ಐಪಿಎಲ್ನಲ್ಲಿ ಧೂಳೆಬ್ಬಿಸಿರೋ ಡಿಕೆಗೆ ಟಿ20 ವಿಶ್ವಕಪ್ನಲ್ಲಿ ದೇಶ ಪರ ಆಡುವ ಕನಸು ಚಿಗುರಿದೆ. ನಿವೃತ್ತಿ ಸಂಧ್ಯಾಕಾಲದಲ್ಲಿರೋ ಫಿನಿಶರ್ ಡಿಕೆಗೆ ವಿಶ್ವಕಪ್ ಕನಸು ಹುಟ್ಟಲು ಕಾರಣನೇ ಕ್ಯಾಪ್ಟನ್ ರೋಹಿತ್ ಶರ್ಮಾ. ಹಿಟ್ಮ್ಯಾನ್ರ ಆ 2 ಮಾತು ಡಿಕೆ ಮನದಲ್ಲಿ ವಿಶ್ವಕಪ್ ಆಡೋ ಆಸೆಯನ್ನ ಚಿಗುರೊಡೆಯುವಂತೆ ಮಾಡಿದೆ.
ಅದ್ಭುತ ಡಿಕೆ. ಟಿ20 ವಿಶ್ವಕಪ್ ಆಯ್ಕೆಗಾಗಿ ಒತ್ತಾಯಿಸುತ್ತಿದ್ದೀಯಾ, ನಿನ್ನ ಮನಸ್ಸಿನಲ್ಲಿ ಟಿ20 ವಿಶ್ವಕಪ್ ಇದೆ. ನೀವು ವಿಶ್ವಕಪ್ ಆಡಬೇಕು.
ರೋಹಿತ್ ಶರ್ಮಾ, ಭಾರತ ತಂಡದ ಕ್ಯಾಪ್ಟನ್
ರೋಹಿತ್ ಒಮ್ಮೆ ಹೀಗೆ ಹೇಳಿ ಸುಮ್ಮನಾಗಿದ್ರೆ ಡಿಕೆ ವಿಶ್ವಕಪ್ ಆಯ್ಕೆ ಬಗ್ಗೆ ಹೆಚ್ಚೇನು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಒಂದು ವಾರದಲ್ಲಿ ಗ್ಯಾಪ್ಅಲ್ಲಿ ಮತ್ತೊಮ್ಮೆ ಹಿಟ್ಮ್ಯಾನ್, ಡಿಕೆ ಪರ ಬ್ಯಾಟ್ ಬೀಸಿದ್ರು. ನಾನು ಮನವೊಲಿಸಿದ್ರೆ ದಿನೇಶ್ ಕಾರ್ತಿಕ್ ವಿಶ್ವಕಪ್ ಆಡಬಹುದು ಹೇಳಿದ್ರು.
ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ಸ್ಯಾಂಡಲ್ವುಡ್ ಸ್ಟಾರ್ ಶ್ರೀಮುರುಳಿ.. ಬಘೀರನಿಗೆ ಆಗಿದ್ದೇನು?
ಇದನ್ನೂ ಓದಿ: ರಾತ್ರಿ ಸುವರ್ಣಸೌಧದ ಬಳಿ ಭಾರೀ ಗಲಾಟೆ, ಹೈಡ್ರಾಮಾ.. ಇಬ್ಬರು ಆಸ್ಪತ್ರೆಗೆ ದಾಖಲು
ಕ್ಯಾಪ್ಟನ್ ರೋಹಿತ್ ಶರ್ಮಾ ಎರಡೆರಡು ಬಾರಿ ಹೀಗೆ ಹೇಳಿದ್ದೇ ತಡ, ಡಿಕೆ ಟಿ20 ವಿಶ್ವಕಪ್ ಆಡಲೇಕೆಂದು ಮೆಂಟಲಿ ಫಿಕ್ಸ್ ಆಗಿದ್ದಾರೆ. ಐಪಿಎಲ್ನಲ್ಲಿ ಅಬ್ಬರವೂ ಜೋರಾಗಿದೆ. ಮುಂಬರೋ ಚುಟುಕು ದಂಗಲ್ನಲ್ಲಿ ಆಡಬೇಕೆಂದು ಪಣತೊಟ್ಟಿದ್ದು, ಟಿ20 ವಿಶ್ವಕಪ್ಗಾಗಿ ಏನು ಬೇಕಾದರೂ ಮಾಡಲು ರೆಡಿ ಎನ್ನುವ ಮೂಲಕ ಟೀಮ್ ಮ್ಯಾನೇಜ್ಮೆಂಟ್ ಹಾಗೂ ಆಯ್ಕೆಗಾರರಿಗೆ ಸಂದೇಶ ರವಾನಿಸಿದ್ದಾರೆ.
17ನೇ ಐಪಿಎಲ್ನಲ್ಲಿ ಡಿಕೆ ನೆಕ್ಸ್ಟ್ ಲೆವೆಲ್ನಲ್ಲಿ ಬ್ಯಾಟ್ ಬೀಸ್ತಿದ್ದಾರೆ. 7 ಪಂದ್ಯದಿಂದ 226 ರನ್.. ಇಂಪ್ರೆಸ್ಸಿವ್ 205.45ರ ಸ್ಟ್ರೈಕ್ರೇಟ್. ಈ ಆಟಕ್ಕೆ ಕ್ರಿಕೆಟ್ ಎಕ್ಸ್ಪರ್ಟ್ಸ್ ಹಾಗೂ ಮಾಜಿ ಕ್ರಿಕೆಟಿಗರು ಫಿದಾ ಆಗಿದ್ದಾರೆ. ಆದರೆ ಬಿಸಿಸಿಐ ಆಯ್ಕೆಗಾರರು ಡಿಕೆಗೆ ಆಯ್ಕೆಗೆ ಒಕೆ ಅನ್ತಾರಾ.? ಕ್ಯಾಪ್ಟನ್ ರೋಹಿತ್ ಶರ್ಮಾ ಆರ್ಸಿಬಿ ಫಿನಿಶರ್ಗೆ ಮಣೆ ಹಾಕ್ತಾರಾ ಎನ್ನುವುದನ್ನ ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
T20 ವಿಶ್ವಕಪ್ ಬಗ್ಗೆ ಆರ್ಸಿಬಿಯ ದಿನೇಶ್ ಕಾರ್ತಿಕ್ ಹೇಳುವುದು ಏನು?
ರೋಹಿತ್ರ ಆ ಎರಡು ಮಾತುಗಳು ಡಿಕೆ ಟಿ20 ವಿಶ್ವಕಪ್ ಕನಸಿಗೆ ಸ್ಫೂರ್ತಿ
ಅಜಿತ್ ಅಗರ್ಕರ್, ರೋಹಿತ್ ಹಾಗೂ ರಾಹುಲ್ ಒಳ್ಳೆಯ ತಂಡ ಕಟ್ತಾರಾ?
ಐಪಿಎಲ್ನಲ್ಲಿ ಡಿಕೆ ಬಾಸ್ ಆರ್ಭಟ ಜೋರಾಗಿದೆ. ಆನ್ಫೀಲ್ಡ್ ಘರ್ಜನೆ ನಡುವೆ ಆರ್ಸಿಬಿ ಫಿನಿಶರ್ ಒಂದು ಶಪಥ ಮಾಡಿದ್ದಾರೆ. ಏನಾದರೂ ಸೈ, ನಾನು ಅದನ್ನ ಮಾಡಿಯೇ ತೀರುತ್ತೆನೆ ಎಂದಿದ್ದಾರೆ. ಅಷ್ಟಕ್ಕೂ ಡಿಕೆ ಮಾಡಿರುವ ಆ ಶಪಥ ಏನು?.
100% ರೆಡಿ.. ರೋಹಿತ್- ದ್ರಾವಿಡ್ಗೆ ಸ್ಟ್ರಾಂಗ್ ಮೆಸೆಜ್
ಟಿ20 ವಿಶ್ವಕಪ್ ತಂಡ ಅನೌನ್ಸ್ಮೆಂಟ್ಗೆ ಕೌಂಟ್ಡೌನ್ ಶುರುವಾಗಿದೆ. ಇದೇ ವಾರದಲ್ಲಿ ಬಿಸಿಸಿಐ, ಟೀಮ್ ಇಂಡಿಯಾವನ್ನ ಪ್ರಕಟಿಸಲಿದೆ ಎಂದು ವರದಿಯಾಗಿದೆ. ಅಜಿತ್ ಅಗರ್ಕರ್ ಆ್ಯಂಡ್ ಟೀಮ್ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರ ಮೇಲೆ ಕಣ್ಣಿಟ್ಟಿದ್ದು, ಯಾರೆಲ್ಲ ಆಯ್ಕೆ ಆಗ್ತಾರೆ ಅನ್ನೋದು ಸಾಕಷ್ಟು ಕುತೂಹಲ ಮೂಡಿಸಿದೆ. ಇದೇ ಟೈಮ್ ಅಲ್ಲಿ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಧೂಳೆಬ್ಬಿಸಿರೋ ದಿನೇಶ್ ಕಾರ್ತಿಕ್ ಟಿ20 ವಿಶ್ವಕಪ್ ಆಡಲು ಶಪಥಗೈದಿದ್ದಾರೆ.
ಇದನ್ನೂ ಓದಿ: ಭಾರೀ ಸದ್ದು ಮಾಡ್ತಿದೆ ಚೊಂಬು ಪಾಲಿಟಿಕ್ಸ್.. HD ದೇವೇಗೌಡ-ಸಿಎಂ ಸಿದ್ದರಾಮಯ್ಯ ನಡುವೆ ವಾಕ್ಸಮರ
T20 ವಿಶ್ವಕಪ್ ಆಡಲು ಸಿದ್ಧನಿದ್ದೇನೆ
ಈ ವಯಸ್ಸಿನಲ್ಲಿ ಭಾರತ ತಂಡವನ್ನ ಪ್ರತಿನಿಧಿಸಲು ನಿಜಕ್ಕೂ ಹೆಮ್ಮೆ ಅನ್ನಿಸುತ್ತೆ. ಟಿ20 ವಿಶ್ವಕಪ್ ಆಡುವುದಕ್ಕಿಂತ ದೊಡ್ಡದು ಯಾವುದು ಇಲ್ಲ. ಉತ್ತಮ ತಂಡವನ್ನ ಕಟ್ಟಲು ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್ ಹಾಗೂ ಅಜಿತ್ ಅಗರ್ಕರ್ ಸಮರ್ಥರಿದ್ದಾರೆ. ಏನೇ ನಿರ್ಧಾರ ತೆಗೆದುಕೊಂಡರೂ ನಾನು ಅವರ ಜೊತೆಗಿದ್ದೇನೆ. ಆದರೆ ನಾನು ಒಂದು ಮಾತನ್ನ ಹೇಳುತ್ತೇನೆ, ಅದೇನಂದ್ರೆ ನಾನು 100% ಸಿದ್ಧ. ವಿಶ್ವಕಪ್ ಫ್ಲೈಟ್ ಏರಲು ಏನು ಬೇಕಾದರೂ ಮಾಡಬಲ್ಲೆ.
ದಿನೇಶ್ ಕಾರ್ತಿಕ್, ಟೀಮ್ ಇಂಡಿಯಾ ಆಟಗಾರ
ಡಿಕೆಗೆ T20 ವಿಶ್ವಕಪ್ ಆಸೆ ಚಿಗುರಿಸಿದ ಕ್ಯಾಪ್ಟನ್ ರೋಹಿತ್..!
ಸದ್ಯ ಐಪಿಎಲ್ನಲ್ಲಿ ಧೂಳೆಬ್ಬಿಸಿರೋ ಡಿಕೆಗೆ ಟಿ20 ವಿಶ್ವಕಪ್ನಲ್ಲಿ ದೇಶ ಪರ ಆಡುವ ಕನಸು ಚಿಗುರಿದೆ. ನಿವೃತ್ತಿ ಸಂಧ್ಯಾಕಾಲದಲ್ಲಿರೋ ಫಿನಿಶರ್ ಡಿಕೆಗೆ ವಿಶ್ವಕಪ್ ಕನಸು ಹುಟ್ಟಲು ಕಾರಣನೇ ಕ್ಯಾಪ್ಟನ್ ರೋಹಿತ್ ಶರ್ಮಾ. ಹಿಟ್ಮ್ಯಾನ್ರ ಆ 2 ಮಾತು ಡಿಕೆ ಮನದಲ್ಲಿ ವಿಶ್ವಕಪ್ ಆಡೋ ಆಸೆಯನ್ನ ಚಿಗುರೊಡೆಯುವಂತೆ ಮಾಡಿದೆ.
ಅದ್ಭುತ ಡಿಕೆ. ಟಿ20 ವಿಶ್ವಕಪ್ ಆಯ್ಕೆಗಾಗಿ ಒತ್ತಾಯಿಸುತ್ತಿದ್ದೀಯಾ, ನಿನ್ನ ಮನಸ್ಸಿನಲ್ಲಿ ಟಿ20 ವಿಶ್ವಕಪ್ ಇದೆ. ನೀವು ವಿಶ್ವಕಪ್ ಆಡಬೇಕು.
ರೋಹಿತ್ ಶರ್ಮಾ, ಭಾರತ ತಂಡದ ಕ್ಯಾಪ್ಟನ್
ರೋಹಿತ್ ಒಮ್ಮೆ ಹೀಗೆ ಹೇಳಿ ಸುಮ್ಮನಾಗಿದ್ರೆ ಡಿಕೆ ವಿಶ್ವಕಪ್ ಆಯ್ಕೆ ಬಗ್ಗೆ ಹೆಚ್ಚೇನು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಒಂದು ವಾರದಲ್ಲಿ ಗ್ಯಾಪ್ಅಲ್ಲಿ ಮತ್ತೊಮ್ಮೆ ಹಿಟ್ಮ್ಯಾನ್, ಡಿಕೆ ಪರ ಬ್ಯಾಟ್ ಬೀಸಿದ್ರು. ನಾನು ಮನವೊಲಿಸಿದ್ರೆ ದಿನೇಶ್ ಕಾರ್ತಿಕ್ ವಿಶ್ವಕಪ್ ಆಡಬಹುದು ಹೇಳಿದ್ರು.
ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ಸ್ಯಾಂಡಲ್ವುಡ್ ಸ್ಟಾರ್ ಶ್ರೀಮುರುಳಿ.. ಬಘೀರನಿಗೆ ಆಗಿದ್ದೇನು?
ಇದನ್ನೂ ಓದಿ: ರಾತ್ರಿ ಸುವರ್ಣಸೌಧದ ಬಳಿ ಭಾರೀ ಗಲಾಟೆ, ಹೈಡ್ರಾಮಾ.. ಇಬ್ಬರು ಆಸ್ಪತ್ರೆಗೆ ದಾಖಲು
ಕ್ಯಾಪ್ಟನ್ ರೋಹಿತ್ ಶರ್ಮಾ ಎರಡೆರಡು ಬಾರಿ ಹೀಗೆ ಹೇಳಿದ್ದೇ ತಡ, ಡಿಕೆ ಟಿ20 ವಿಶ್ವಕಪ್ ಆಡಲೇಕೆಂದು ಮೆಂಟಲಿ ಫಿಕ್ಸ್ ಆಗಿದ್ದಾರೆ. ಐಪಿಎಲ್ನಲ್ಲಿ ಅಬ್ಬರವೂ ಜೋರಾಗಿದೆ. ಮುಂಬರೋ ಚುಟುಕು ದಂಗಲ್ನಲ್ಲಿ ಆಡಬೇಕೆಂದು ಪಣತೊಟ್ಟಿದ್ದು, ಟಿ20 ವಿಶ್ವಕಪ್ಗಾಗಿ ಏನು ಬೇಕಾದರೂ ಮಾಡಲು ರೆಡಿ ಎನ್ನುವ ಮೂಲಕ ಟೀಮ್ ಮ್ಯಾನೇಜ್ಮೆಂಟ್ ಹಾಗೂ ಆಯ್ಕೆಗಾರರಿಗೆ ಸಂದೇಶ ರವಾನಿಸಿದ್ದಾರೆ.
17ನೇ ಐಪಿಎಲ್ನಲ್ಲಿ ಡಿಕೆ ನೆಕ್ಸ್ಟ್ ಲೆವೆಲ್ನಲ್ಲಿ ಬ್ಯಾಟ್ ಬೀಸ್ತಿದ್ದಾರೆ. 7 ಪಂದ್ಯದಿಂದ 226 ರನ್.. ಇಂಪ್ರೆಸ್ಸಿವ್ 205.45ರ ಸ್ಟ್ರೈಕ್ರೇಟ್. ಈ ಆಟಕ್ಕೆ ಕ್ರಿಕೆಟ್ ಎಕ್ಸ್ಪರ್ಟ್ಸ್ ಹಾಗೂ ಮಾಜಿ ಕ್ರಿಕೆಟಿಗರು ಫಿದಾ ಆಗಿದ್ದಾರೆ. ಆದರೆ ಬಿಸಿಸಿಐ ಆಯ್ಕೆಗಾರರು ಡಿಕೆಗೆ ಆಯ್ಕೆಗೆ ಒಕೆ ಅನ್ತಾರಾ.? ಕ್ಯಾಪ್ಟನ್ ರೋಹಿತ್ ಶರ್ಮಾ ಆರ್ಸಿಬಿ ಫಿನಿಶರ್ಗೆ ಮಣೆ ಹಾಕ್ತಾರಾ ಎನ್ನುವುದನ್ನ ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ