newsfirstkannada.com

ನಟ ನಾಗಶೇಖರ್ ಕಾರ್​ ಅಪಘಾತ; ಮರಕ್ಕೆ ಡಿಕ್ಕಿ ಹೊಡೆದು ಆ್ಯಕ್ಸಿಡೆಂಟ್​; ಆಮೇಲೇನಾಯ್ತು?

Share :

Published September 6, 2024 at 5:35pm

Update September 6, 2024 at 5:42pm

    ರಸ್ತೆಯಲ್ಲಿ ಹೋಗುವಾಗ ಮರಕ್ಕೆ ಡಿಕ್ಕಿಯಾಗಿರುವ ಕಾರು

    ಸ್ಥಳಕ್ಕೆ ಆಗಮಿಸಿದ ಪೊಲೀಸರಿಂದ ಪರಿಶೀಲನೆ, ಕಾರು ವಶಕ್ಕೆ

    ಈ ಡೈರೆಕ್ಟರ್ ನಿರ್ದೇಶನ ಮಾಡಿದ ಸಿನಿಮಾಗಳು ಯಾವ್ಯಾವು?

ಬೆಂಗಳೂರು: ಸ್ಯಾಂಡಲ್​ವುಡ್ ನಟ ಕಮ್​ ಡೈರೆಕ್ಟರ್​ ನಾಗಶೇಖರ್ ಅವರ ಕಾರು ಮರಕ್ಕೆ ಡಿಕ್ಕಿಯಾಗಿದ್ದು ಓರ್ವ ಮಹಿಳೆ ಗಾಯಗೊಂಡಿದ್ದಾರೆ. ಈ ಘಟನೆಯು ಸಿಲಿಕಾನ್ ಸಿಟಿಯ ಜ್ಞಾನಭಾರತಿ ಕ್ಯಾಂಪಸ್​ನಲ್ಲಿ ನಡೆದಿದೆ.

ಇದನ್ನೂ ಓದಿ: ಮಕ್ಕಳಿಗೆ ಐಸ್​ ಕ್ರೀಂ ಕೊಡಿಸುವ ಮುನ್ನ ಹುಷಾರ್​.. ಪೋಷಕರು ಓದಲೇಬೇಕಾದ ಸ್ಟೋರಿ

ನಿರ್ದೇಶಕ ನಾಗಶೇಖರ್ ಅವರು ಬೆಂಜ್ ಕಾರಿನಲ್ಲಿ ಹೋಗುವಾಗ ಮರಕ್ಕೆ ರಭಸವಾಗಿ ಡಿಕ್ಕಿಯಾಗಿದೆ. ಇದರ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಜ್ಞಾನ ಭಾರತಿ ಕ್ಯಾಂಪಸ್​​ ಪೊಲೀಸರು ಭೇಟಿ ನೀಡಿದ್ದು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಲಾರಿಗೆ ಡಿಕ್ಕಿ ಆಗುವುದನ್ನ ತಪ್ಪಿಸಲು ಹೋಗಿ ಬೈಕ್​ ಆಕ್ಸಿಡೆಂಟ್​.. ಇಬ್ಬರು ಯುವಕರು ಸಾವು

ಸದ್ಯ ನಾಗಶೇಖರ್ ಅವರು ಹಲವು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಇದರ ಜೊತೆ ಡೈರೆಕ್ಟರ್ ಆಗಿಯು ಕೆಲಸ ಮಾಡಿದ್ದಾರೆ. ಸದ್ಯ ಸಂಜು ವೆಡ್ಸ್ ಗೀತಾ-2 ಶೂಟಿಂಗ್ ಮುಗಿಸಿದ್ದಾರೆ. ಕೆಲಸ ನಿಮಿತ್ತ ಹೋಗುವಾಗ ಈ ಅಪಘಾತ ಸಂಭವಿಸಿದೆ. ಅಂದಹಾಗೆ ನಾಗಶೇಖರ್ ಅವರು ಮಾಸ್ತಿಗುಡಿ, ಸಂಜು ವೆಡ್ಸ್ ಗೀತಾ, ಅಮರ್, ಮೈನಾ, ಶ್ರೀಕೃಷ್ಣ ಎಟ್ ಜೀಮೇಲ್ ಡಾಟ್ ಕಾಮ್ ಸಿನಿಮಾ​ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ನಾಗಶೇಖರ್ ಕಾರ್​ ಅಪಘಾತ; ಮರಕ್ಕೆ ಡಿಕ್ಕಿ ಹೊಡೆದು ಆ್ಯಕ್ಸಿಡೆಂಟ್​; ಆಮೇಲೇನಾಯ್ತು?

https://newsfirstlive.com/wp-content/uploads/2024/09/NAGASHEKHAR_NEW.jpg

    ರಸ್ತೆಯಲ್ಲಿ ಹೋಗುವಾಗ ಮರಕ್ಕೆ ಡಿಕ್ಕಿಯಾಗಿರುವ ಕಾರು

    ಸ್ಥಳಕ್ಕೆ ಆಗಮಿಸಿದ ಪೊಲೀಸರಿಂದ ಪರಿಶೀಲನೆ, ಕಾರು ವಶಕ್ಕೆ

    ಈ ಡೈರೆಕ್ಟರ್ ನಿರ್ದೇಶನ ಮಾಡಿದ ಸಿನಿಮಾಗಳು ಯಾವ್ಯಾವು?

ಬೆಂಗಳೂರು: ಸ್ಯಾಂಡಲ್​ವುಡ್ ನಟ ಕಮ್​ ಡೈರೆಕ್ಟರ್​ ನಾಗಶೇಖರ್ ಅವರ ಕಾರು ಮರಕ್ಕೆ ಡಿಕ್ಕಿಯಾಗಿದ್ದು ಓರ್ವ ಮಹಿಳೆ ಗಾಯಗೊಂಡಿದ್ದಾರೆ. ಈ ಘಟನೆಯು ಸಿಲಿಕಾನ್ ಸಿಟಿಯ ಜ್ಞಾನಭಾರತಿ ಕ್ಯಾಂಪಸ್​ನಲ್ಲಿ ನಡೆದಿದೆ.

ಇದನ್ನೂ ಓದಿ: ಮಕ್ಕಳಿಗೆ ಐಸ್​ ಕ್ರೀಂ ಕೊಡಿಸುವ ಮುನ್ನ ಹುಷಾರ್​.. ಪೋಷಕರು ಓದಲೇಬೇಕಾದ ಸ್ಟೋರಿ

ನಿರ್ದೇಶಕ ನಾಗಶೇಖರ್ ಅವರು ಬೆಂಜ್ ಕಾರಿನಲ್ಲಿ ಹೋಗುವಾಗ ಮರಕ್ಕೆ ರಭಸವಾಗಿ ಡಿಕ್ಕಿಯಾಗಿದೆ. ಇದರ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಜ್ಞಾನ ಭಾರತಿ ಕ್ಯಾಂಪಸ್​​ ಪೊಲೀಸರು ಭೇಟಿ ನೀಡಿದ್ದು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಲಾರಿಗೆ ಡಿಕ್ಕಿ ಆಗುವುದನ್ನ ತಪ್ಪಿಸಲು ಹೋಗಿ ಬೈಕ್​ ಆಕ್ಸಿಡೆಂಟ್​.. ಇಬ್ಬರು ಯುವಕರು ಸಾವು

ಸದ್ಯ ನಾಗಶೇಖರ್ ಅವರು ಹಲವು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಇದರ ಜೊತೆ ಡೈರೆಕ್ಟರ್ ಆಗಿಯು ಕೆಲಸ ಮಾಡಿದ್ದಾರೆ. ಸದ್ಯ ಸಂಜು ವೆಡ್ಸ್ ಗೀತಾ-2 ಶೂಟಿಂಗ್ ಮುಗಿಸಿದ್ದಾರೆ. ಕೆಲಸ ನಿಮಿತ್ತ ಹೋಗುವಾಗ ಈ ಅಪಘಾತ ಸಂಭವಿಸಿದೆ. ಅಂದಹಾಗೆ ನಾಗಶೇಖರ್ ಅವರು ಮಾಸ್ತಿಗುಡಿ, ಸಂಜು ವೆಡ್ಸ್ ಗೀತಾ, ಅಮರ್, ಮೈನಾ, ಶ್ರೀಕೃಷ್ಣ ಎಟ್ ಜೀಮೇಲ್ ಡಾಟ್ ಕಾಮ್ ಸಿನಿಮಾ​ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More