ಕಿನ್ನರಿ ಧಾರಾವಾಹಿಯಲ್ಲಿ ಬಾಲ ನಟಿಯಾಗಿ ಈಕೆ ಅಭಿನಯ
ಹಳೇ ಟೈಟಲ್ನಲ್ಲೇ ಶುರುವಾಗುತ್ತಿದೆ ಹೊಚ್ಚ ಹೊಸ ಕಥೆ
ಅಕ್ಕನಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಲು ಸಿದ್ಧವಿರೋ ತಂಗಿ
ಹಳೇ ಟೈಟಲ್ನಲ್ಲೇ ಹೊಸ ಕಥೆ ಶುರುವಾಗುತ್ತಿದೆ. ಈಗ ಅದರ ಹೊಸ ಪ್ರೋಮೋವೊಂದು ರಿಲೀಸ್ ಆಗಿದೆ. ಕಲಾವಿದರ ಬಗ್ಗೆನೂ ಮಾಹಿತಿ ಸಿಕ್ಕಾಗಿದೆ. ಅದೇ ಬ್ರಹ್ಮಗಂಟು. ಹೌದು, ಪ್ರೋಮೋದಲ್ಲಿ ಹೇಳಿರುವಂತೆ ಇದೊಂದು ಅಕ್ಕ-ತಂಗಿಯ ಸ್ಟೋರಿ. ಅಕ್ಕನಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಲು ಸಿದ್ಧವಿರೋ ತಂಗಿ, ತಂಗಿಯ ತ್ಯಾಗ, ಪ್ರೀತಿಗೆ ಬೆಲೆ ಕೊಡದ ಅಕ್ಕ. ಅಕ್ಕನಿ ಅಂದವಾಗಿದಿನಿ ಅನ್ನೋ ಮದ ಆದ್ರೇ ತಂಗಿಗೆ ಅಕ್ಕನಿಗೆ ನೇರಳಾಗಿರೋ ಆಸೆ.
ಇದನ್ನು ಓದಿ: PHOTO: ಬರ್ತ್ ಡೇ ಸಂಭ್ರಮದಲ್ಲಿ ಬಿಗ್ಬಾಸ್ ಬೆಡಗಿ; ಅನುಪಮಾ ಗೌಡಗೆ ಭರ್ಜರಿ ಗಿಫ್ಟ್ ಕೊಟ್ಟ ಫ್ಯಾನ್ಸ್..!
ಇನ್ನು, ಈ ಅಕ್ಕನ ಪಾತ್ರಕ್ಕೆ ನಟಿ ಕಾವ್ಯಾ ರಮೇಶ್ ಬಣ್ಣ ಹಚ್ಚಿದ್ದಾರೆ. ಕಾವ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗ್ತಿರೋ ಗೌರಿಶಂಕರ ಧಾರಾವಾಹಿಲ್ಲಿ ಕೂಡ ಹೀರೋಯಿನ್ ಗೌರಿಯ ತಂಗಿ ಪಾತ್ರವನ್ನ ಮಾಡಿದ್ದರು. ಹಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಈ ಧಾರಾವಾಹಿಯ ನಾಯಕಿ ಪಾತ್ರಕ್ಕೆ ದಿಯಾ ಪಾಲಕ್ಕಲ್ ಬಣ್ಣ ಹಚ್ಚಿದ್ದಾರೆ. ದಿಯಾ ಹೊಸ ಮುಖವಲ್ಲ. ಚಿಕ್ಕವಯಸ್ಸಿನಿಂದಲೂ ಸೀರಿಯಲ್ಗಳಲ್ಲಿ ಅಭಿನಯಿಸುತ್ತಿರೋ ಮುದ್ದು ಮುಖದ ಚಲುವೆ. ಕಿನ್ನರಿ ಧಾರಾವಾಹಿಯಲ್ಲಿ ಐಶ್ವರ್ಯ ಆಗಿ ಕಾಣಿಸಿಕೊಂಡಿದ್ದ ಪುಟಾಣಿ ಈಗ ನಾಯಕಿ ಆಗಿ ಹೊಸ ಇನ್ನಿಂಗ್ಸ್ ಶುರು ಮಾಡುತ್ತಿದ್ದಾರೆ.
ನಾಯಕನ ಪಾತ್ರದಲ್ಲಿ ಪುಣ್ಯವತಿ ಖ್ಯಾತಿಯ ನಟ ಭುವನ್ ಬಣ್ಣ ಹಚ್ಚಿದ್ದು, ಬ್ರಹ್ಮಗಂಟು ಸೀರಿಯಲ್ ಮೂಲಕ ಹೊಸ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಅಕ್ಕ-ತಂಗಿ ಬಾಂಧವ್ಯ, ದ್ವೇಷ ಪ್ರೀತಿಯ ಕಥೆಗಳು ಸಾಕಷ್ಟಿವೆ. ಇವೆಲ್ಲದರ ನಡುವೆ ಬ್ರಹ್ಮಗಂಟು ಎಷ್ಟು ಸ್ಪೆಷಲ್ ಆಗಿ ನಿಲ್ಲುತ್ತೆ? ವೀಕ್ಷಕರನ್ನ ಹೇಗೆ ಸೇಳುಯುತ್ತೆ? ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕಿನ್ನರಿ ಧಾರಾವಾಹಿಯಲ್ಲಿ ಬಾಲ ನಟಿಯಾಗಿ ಈಕೆ ಅಭಿನಯ
ಹಳೇ ಟೈಟಲ್ನಲ್ಲೇ ಶುರುವಾಗುತ್ತಿದೆ ಹೊಚ್ಚ ಹೊಸ ಕಥೆ
ಅಕ್ಕನಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಲು ಸಿದ್ಧವಿರೋ ತಂಗಿ
ಹಳೇ ಟೈಟಲ್ನಲ್ಲೇ ಹೊಸ ಕಥೆ ಶುರುವಾಗುತ್ತಿದೆ. ಈಗ ಅದರ ಹೊಸ ಪ್ರೋಮೋವೊಂದು ರಿಲೀಸ್ ಆಗಿದೆ. ಕಲಾವಿದರ ಬಗ್ಗೆನೂ ಮಾಹಿತಿ ಸಿಕ್ಕಾಗಿದೆ. ಅದೇ ಬ್ರಹ್ಮಗಂಟು. ಹೌದು, ಪ್ರೋಮೋದಲ್ಲಿ ಹೇಳಿರುವಂತೆ ಇದೊಂದು ಅಕ್ಕ-ತಂಗಿಯ ಸ್ಟೋರಿ. ಅಕ್ಕನಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಲು ಸಿದ್ಧವಿರೋ ತಂಗಿ, ತಂಗಿಯ ತ್ಯಾಗ, ಪ್ರೀತಿಗೆ ಬೆಲೆ ಕೊಡದ ಅಕ್ಕ. ಅಕ್ಕನಿ ಅಂದವಾಗಿದಿನಿ ಅನ್ನೋ ಮದ ಆದ್ರೇ ತಂಗಿಗೆ ಅಕ್ಕನಿಗೆ ನೇರಳಾಗಿರೋ ಆಸೆ.
ಇದನ್ನು ಓದಿ: PHOTO: ಬರ್ತ್ ಡೇ ಸಂಭ್ರಮದಲ್ಲಿ ಬಿಗ್ಬಾಸ್ ಬೆಡಗಿ; ಅನುಪಮಾ ಗೌಡಗೆ ಭರ್ಜರಿ ಗಿಫ್ಟ್ ಕೊಟ್ಟ ಫ್ಯಾನ್ಸ್..!
ಇನ್ನು, ಈ ಅಕ್ಕನ ಪಾತ್ರಕ್ಕೆ ನಟಿ ಕಾವ್ಯಾ ರಮೇಶ್ ಬಣ್ಣ ಹಚ್ಚಿದ್ದಾರೆ. ಕಾವ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗ್ತಿರೋ ಗೌರಿಶಂಕರ ಧಾರಾವಾಹಿಲ್ಲಿ ಕೂಡ ಹೀರೋಯಿನ್ ಗೌರಿಯ ತಂಗಿ ಪಾತ್ರವನ್ನ ಮಾಡಿದ್ದರು. ಹಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಈ ಧಾರಾವಾಹಿಯ ನಾಯಕಿ ಪಾತ್ರಕ್ಕೆ ದಿಯಾ ಪಾಲಕ್ಕಲ್ ಬಣ್ಣ ಹಚ್ಚಿದ್ದಾರೆ. ದಿಯಾ ಹೊಸ ಮುಖವಲ್ಲ. ಚಿಕ್ಕವಯಸ್ಸಿನಿಂದಲೂ ಸೀರಿಯಲ್ಗಳಲ್ಲಿ ಅಭಿನಯಿಸುತ್ತಿರೋ ಮುದ್ದು ಮುಖದ ಚಲುವೆ. ಕಿನ್ನರಿ ಧಾರಾವಾಹಿಯಲ್ಲಿ ಐಶ್ವರ್ಯ ಆಗಿ ಕಾಣಿಸಿಕೊಂಡಿದ್ದ ಪುಟಾಣಿ ಈಗ ನಾಯಕಿ ಆಗಿ ಹೊಸ ಇನ್ನಿಂಗ್ಸ್ ಶುರು ಮಾಡುತ್ತಿದ್ದಾರೆ.
ನಾಯಕನ ಪಾತ್ರದಲ್ಲಿ ಪುಣ್ಯವತಿ ಖ್ಯಾತಿಯ ನಟ ಭುವನ್ ಬಣ್ಣ ಹಚ್ಚಿದ್ದು, ಬ್ರಹ್ಮಗಂಟು ಸೀರಿಯಲ್ ಮೂಲಕ ಹೊಸ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಅಕ್ಕ-ತಂಗಿ ಬಾಂಧವ್ಯ, ದ್ವೇಷ ಪ್ರೀತಿಯ ಕಥೆಗಳು ಸಾಕಷ್ಟಿವೆ. ಇವೆಲ್ಲದರ ನಡುವೆ ಬ್ರಹ್ಮಗಂಟು ಎಷ್ಟು ಸ್ಪೆಷಲ್ ಆಗಿ ನಿಲ್ಲುತ್ತೆ? ವೀಕ್ಷಕರನ್ನ ಹೇಗೆ ಸೇಳುಯುತ್ತೆ? ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ