newsfirstkannada.com

ಕನ್ನಡಿಗರಿಗೆ ಗುಡ್​ನ್ಯೂಸ್​​; ಮತ್ತೆ ಸೀರಿಯಲ್​ನಲ್ಲಿ ಮಿಂಚಲು ಸಜ್ಜಾದ ಕಿನ್ನರಿ ಖ್ಯಾತಿಯ ದಿಯಾ!

Share :

Published March 21, 2024 at 8:00pm

Update March 21, 2024 at 8:50pm

    ಕಿನ್ನರಿ ಧಾರಾವಾಹಿಯಲ್ಲಿ ಬಾಲ ನಟಿಯಾಗಿ ಈಕೆ ಅಭಿನಯ

    ಹಳೇ ಟೈಟಲ್​ನಲ್ಲೇ ಶುರುವಾಗುತ್ತಿದೆ ಹೊಚ್ಚ ಹೊಸ ಕಥೆ

    ಅಕ್ಕನಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಲು ಸಿದ್ಧವಿರೋ ತಂಗಿ

ಹಳೇ ಟೈಟಲ್​ನಲ್ಲೇ ಹೊಸ ಕಥೆ ಶುರುವಾಗುತ್ತಿದೆ. ಈಗ ಅದರ ಹೊಸ ಪ್ರೋಮೋವೊಂದು ರಿಲೀಸ್​ ಆಗಿದೆ. ಕಲಾವಿದರ ಬಗ್ಗೆನೂ ಮಾಹಿತಿ ಸಿಕ್ಕಾಗಿದೆ. ಅದೇ ಬ್ರಹ್ಮಗಂಟು. ಹೌದು, ಪ್ರೋಮೋದಲ್ಲಿ ಹೇಳಿರುವಂತೆ ಇದೊಂದು ಅಕ್ಕ-ತಂಗಿಯ ಸ್ಟೋರಿ. ಅಕ್ಕನಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಲು ಸಿದ್ಧವಿರೋ ತಂಗಿ, ತಂಗಿಯ ತ್ಯಾಗ, ಪ್ರೀತಿಗೆ ಬೆಲೆ ಕೊಡದ ಅಕ್ಕ. ಅಕ್ಕನಿ ಅಂದವಾಗಿದಿನಿ ಅನ್ನೋ ಮದ ಆದ್ರೇ ತಂಗಿಗೆ ಅಕ್ಕನಿಗೆ ನೇರಳಾಗಿರೋ ಆಸೆ.

ಇದನ್ನು ಓದಿ: PHOTO: ಬರ್ತ್​ ಡೇ ಸಂಭ್ರಮದಲ್ಲಿ ಬಿಗ್​ಬಾಸ್​ ಬೆಡಗಿ; ಅನುಪಮಾ ಗೌಡಗೆ ಭರ್ಜರಿ ಗಿಫ್ಟ್​ ಕೊಟ್ಟ ಫ್ಯಾನ್ಸ್..​!

ಇನ್ನು, ಈ ಅಕ್ಕನ ಪಾತ್ರಕ್ಕೆ ನಟಿ ಕಾವ್ಯಾ ರಮೇಶ್​ ಬಣ್ಣ ಹಚ್ಚಿದ್ದಾರೆ. ಕಾವ್ಯ ಸ್ಟಾರ್​ ಸುವರ್ಣದಲ್ಲಿ ಪ್ರಸಾರವಾಗ್ತಿರೋ ಗೌರಿಶಂಕರ ಧಾರಾವಾಹಿಲ್ಲಿ ಕೂಡ ಹೀರೋಯಿನ್​ ಗೌರಿಯ ತಂಗಿ ಪಾತ್ರವನ್ನ ಮಾಡಿದ್ದರು. ಹಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಈ ಧಾರಾವಾಹಿಯ ನಾಯಕಿ ಪಾತ್ರಕ್ಕೆ ದಿಯಾ ಪಾಲಕ್ಕಲ್ ಬಣ್ಣ ಹಚ್ಚಿದ್ದಾರೆ. ದಿಯಾ ಹೊಸ ಮುಖವಲ್ಲ. ಚಿಕ್ಕವಯಸ್ಸಿನಿಂದಲೂ ಸೀರಿಯಲ್​ಗಳಲ್ಲಿ ಅಭಿನಯಿಸುತ್ತಿರೋ ಮುದ್ದು ಮುಖದ ಚಲುವೆ. ಕಿನ್ನರಿ ಧಾರಾವಾಹಿಯಲ್ಲಿ ಐಶ್ವರ್ಯ ಆಗಿ ಕಾಣಿಸಿಕೊಂಡಿದ್ದ ಪುಟಾಣಿ ಈಗ ನಾಯಕಿ ಆಗಿ ಹೊಸ ಇನ್ನಿಂಗ್ಸ್​ ಶುರು ಮಾಡುತ್ತಿದ್ದಾರೆ.

ನಾಯಕನ ಪಾತ್ರದಲ್ಲಿ ಪುಣ್ಯವತಿ ಖ್ಯಾತಿಯ ನಟ ಭುವನ್​ ಬಣ್ಣ ಹಚ್ಚಿದ್ದು, ಬ್ರಹ್ಮಗಂಟು ಸೀರಿಯಲ್​ ಮೂಲಕ ಹೊಸ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಅಕ್ಕ-ತಂಗಿ ಬಾಂಧವ್ಯ, ದ್ವೇಷ ಪ್ರೀತಿಯ ಕಥೆಗಳು ಸಾಕಷ್ಟಿವೆ. ಇವೆಲ್ಲದರ ನಡುವೆ ಬ್ರಹ್ಮಗಂಟು ಎಷ್ಟು ಸ್ಪೆಷಲ್​ ಆಗಿ ನಿಲ್ಲುತ್ತೆ? ವೀಕ್ಷಕರನ್ನ ಹೇಗೆ ಸೇಳುಯುತ್ತೆ? ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ನಡಿಗರಿಗೆ ಗುಡ್​ನ್ಯೂಸ್​​; ಮತ್ತೆ ಸೀರಿಯಲ್​ನಲ್ಲಿ ಮಿಂಚಲು ಸಜ್ಜಾದ ಕಿನ್ನರಿ ಖ್ಯಾತಿಯ ದಿಯಾ!

https://newsfirstlive.com/wp-content/uploads/2024/03/Diya-Palakkal.jpg

    ಕಿನ್ನರಿ ಧಾರಾವಾಹಿಯಲ್ಲಿ ಬಾಲ ನಟಿಯಾಗಿ ಈಕೆ ಅಭಿನಯ

    ಹಳೇ ಟೈಟಲ್​ನಲ್ಲೇ ಶುರುವಾಗುತ್ತಿದೆ ಹೊಚ್ಚ ಹೊಸ ಕಥೆ

    ಅಕ್ಕನಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಲು ಸಿದ್ಧವಿರೋ ತಂಗಿ

ಹಳೇ ಟೈಟಲ್​ನಲ್ಲೇ ಹೊಸ ಕಥೆ ಶುರುವಾಗುತ್ತಿದೆ. ಈಗ ಅದರ ಹೊಸ ಪ್ರೋಮೋವೊಂದು ರಿಲೀಸ್​ ಆಗಿದೆ. ಕಲಾವಿದರ ಬಗ್ಗೆನೂ ಮಾಹಿತಿ ಸಿಕ್ಕಾಗಿದೆ. ಅದೇ ಬ್ರಹ್ಮಗಂಟು. ಹೌದು, ಪ್ರೋಮೋದಲ್ಲಿ ಹೇಳಿರುವಂತೆ ಇದೊಂದು ಅಕ್ಕ-ತಂಗಿಯ ಸ್ಟೋರಿ. ಅಕ್ಕನಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಲು ಸಿದ್ಧವಿರೋ ತಂಗಿ, ತಂಗಿಯ ತ್ಯಾಗ, ಪ್ರೀತಿಗೆ ಬೆಲೆ ಕೊಡದ ಅಕ್ಕ. ಅಕ್ಕನಿ ಅಂದವಾಗಿದಿನಿ ಅನ್ನೋ ಮದ ಆದ್ರೇ ತಂಗಿಗೆ ಅಕ್ಕನಿಗೆ ನೇರಳಾಗಿರೋ ಆಸೆ.

ಇದನ್ನು ಓದಿ: PHOTO: ಬರ್ತ್​ ಡೇ ಸಂಭ್ರಮದಲ್ಲಿ ಬಿಗ್​ಬಾಸ್​ ಬೆಡಗಿ; ಅನುಪಮಾ ಗೌಡಗೆ ಭರ್ಜರಿ ಗಿಫ್ಟ್​ ಕೊಟ್ಟ ಫ್ಯಾನ್ಸ್..​!

ಇನ್ನು, ಈ ಅಕ್ಕನ ಪಾತ್ರಕ್ಕೆ ನಟಿ ಕಾವ್ಯಾ ರಮೇಶ್​ ಬಣ್ಣ ಹಚ್ಚಿದ್ದಾರೆ. ಕಾವ್ಯ ಸ್ಟಾರ್​ ಸುವರ್ಣದಲ್ಲಿ ಪ್ರಸಾರವಾಗ್ತಿರೋ ಗೌರಿಶಂಕರ ಧಾರಾವಾಹಿಲ್ಲಿ ಕೂಡ ಹೀರೋಯಿನ್​ ಗೌರಿಯ ತಂಗಿ ಪಾತ್ರವನ್ನ ಮಾಡಿದ್ದರು. ಹಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಈ ಧಾರಾವಾಹಿಯ ನಾಯಕಿ ಪಾತ್ರಕ್ಕೆ ದಿಯಾ ಪಾಲಕ್ಕಲ್ ಬಣ್ಣ ಹಚ್ಚಿದ್ದಾರೆ. ದಿಯಾ ಹೊಸ ಮುಖವಲ್ಲ. ಚಿಕ್ಕವಯಸ್ಸಿನಿಂದಲೂ ಸೀರಿಯಲ್​ಗಳಲ್ಲಿ ಅಭಿನಯಿಸುತ್ತಿರೋ ಮುದ್ದು ಮುಖದ ಚಲುವೆ. ಕಿನ್ನರಿ ಧಾರಾವಾಹಿಯಲ್ಲಿ ಐಶ್ವರ್ಯ ಆಗಿ ಕಾಣಿಸಿಕೊಂಡಿದ್ದ ಪುಟಾಣಿ ಈಗ ನಾಯಕಿ ಆಗಿ ಹೊಸ ಇನ್ನಿಂಗ್ಸ್​ ಶುರು ಮಾಡುತ್ತಿದ್ದಾರೆ.

ನಾಯಕನ ಪಾತ್ರದಲ್ಲಿ ಪುಣ್ಯವತಿ ಖ್ಯಾತಿಯ ನಟ ಭುವನ್​ ಬಣ್ಣ ಹಚ್ಚಿದ್ದು, ಬ್ರಹ್ಮಗಂಟು ಸೀರಿಯಲ್​ ಮೂಲಕ ಹೊಸ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಅಕ್ಕ-ತಂಗಿ ಬಾಂಧವ್ಯ, ದ್ವೇಷ ಪ್ರೀತಿಯ ಕಥೆಗಳು ಸಾಕಷ್ಟಿವೆ. ಇವೆಲ್ಲದರ ನಡುವೆ ಬ್ರಹ್ಮಗಂಟು ಎಷ್ಟು ಸ್ಪೆಷಲ್​ ಆಗಿ ನಿಲ್ಲುತ್ತೆ? ವೀಕ್ಷಕರನ್ನ ಹೇಗೆ ಸೇಳುಯುತ್ತೆ? ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More