/newsfirstlive-kannada/media/post_attachments/wp-content/uploads/2024/09/RAHUL-GANDHI-DK-SHIVAKUMAR.jpg)
ಈ ಜಾರಕಿಹೊಳಿ ಡೆಲ್ಲಿಗೆ 3 ಬಾರಿಯಾದ್ರೂ ಹೋಗಿ ಬಂದ್ರು. ಹೈಕಮಾಂಡ್​ಗೆ ಅದ್ಯಾಕೆ ಭೇಟಿ ಆದ್ರೋ ಏನೋ? ಆದ್ರೆ ರಾಜ್ಯದಲ್ಲಿ ಮಾತ್ರ ವದಂತಿ ಹಬ್ಬಿದ್ದೆ ಹಬ್ಬಿದ್ದು. ಇತ್ತ ಜುಲೈ 31ಕ್ಕೆ ಡೆಲ್ಲಿಗೆ ಹೋಗಿ ಮರಳಿದ್ದ ಡಿಕೆಶಿ ಅತ್ತ ತಲೆನೇ ಹಾಕ್ಲಿಲ್ಲ. ಕಾರಣ ಏನೋ ಇರಬಹುದು.. ಹೈಕಮಾಂಡ್​ ನಾರಾಜ್​​ ಆಯ್ತು ಅನ್ನೋ ಮಾತು ಹರಿದಾಡಿತ್ತು.. ಪಟ್ಟದ ಆಸೆ ಹೊತ್ತು ಕೂತಿದ್ದ ಡಿಕೆಶಿ ಅಮೆರಿಕಾಕ್ಕೆ ತೆರಳಿ ಅಲ್ಲಿ, ರಾಹುಲ್​ ಗಾಂಧಿ ಭೇಟಿ ಮಾಡಿದ್ದಾರೆ.
ಭೂಚಕ್ರಕ್ಕೆ ಸಿಎಂ ಕುರ್ಚಿ ಹಾರುವ ಸುದ್ದಿ ಬಹುದಿನಗಳಿಂದ ಪಟಪಟಿಸ್ತಿದೆ. ಡೆಲ್ಲಿ ಅಂಗಳದಲ್ಲೂ ಸಿದ್ದು ಉತ್ತರಾಧಿಕಾರಿ ಬಗ್ಗೆ ಜಿಜ್ಞಾಸೆಗಳು ತಲೆದೂರಿವೆ. ಬೆಂಗಳೂರಿನ ಹಾದಿ ಬೀದಿಗಳಲ್ಲಿ ಹೊಸ ಸೂಟ್​ಗೆ ಹಲವು ನಾಯಕ್ರು ಅಳತೆ ಕೊಡ್ತಿದ್ದಾರೆ. ನಾನ್​ ಸಿಎಂ, ನಾನ್​ ಸಿಎಂ ಅಂತ ಸೀನಿಯಾರಿಟಿ ಮಾನದಂಡ ಮಂಡಿಸ್ತಿದ್ರೆ, ಇನ್ನು ಕೆಲವರು ಪ್ರಾದೇಶಿಕ ಮತ್ತು ಜಾತಿ ದಾಳ ಉರುಳಿಸ್ತಿದ್ದಾರೆ. ಆದ್ರೆ, ನಿದ್ದೆಗೆಟ್ಟು ಕೈಗೆ ಅಧಿಕಾರ ತಂದಿಟ್ಟ ಡಿಕೆಶಿ ಬಗ್ಗೆ ಹೈಕಮಾಂಡ್​​ನಲ್ಲೇ ಸಂಶಯಗಳ ಜನ್ಮತಾಳಿವೆ ಅನ್ನೋ ಮಾತು ಹಬ್ಬಿದೆ.
ವಾಷಿಂಗ್ಟನ್ನಲ್ಲಿ ರಾಗಾ ಜೊತೆ ಕಾಣಿಸಿದ ಡಿಕೆಶಿ!
ಇದೊಂದೇ ಒಂದು ಫೋಟೋ. ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಮೊನ್ನೆ ಮೊನ್ನೆ ಕುಟುಂಬ ಸಮೇತ ಅಮೆರಿಕಾ ತೆರಳಿದ್ದ ಡಿಕೆಶಿ, ನಾರ್ಥ್ ಕ್ಯಾರೋಲಿನಾದ ಕಾರ್ಯಕ್ರಮ ಮುಗಿಸಿ ವಾಷಿಂಗ್ಟನ್​​​ಗೆ ತೆರಳಿ, ರಾಹುಲ್​​​ ಗಾಂಧಿ ಭೇಟಿ ಆಗಿದ್ದಾರೆ. ಅಷ್ಟಕ್ಕೂ ಈ ಭೇಟಿ ಹಿಂದೆ ಡಿಕೆಶಿ ಕೆಲ ರಾಜಕೀಯ ಲೆಕ್ಕಾಚಾರ ಹೊಂದಿದಂತೆ ಕಾಣಿಸ್ತಿದೆ.
ಇದನ್ನೂ ಓದಿ: 6, 0, 6, 6, 6, 6 ! ಬದೋನಿಯ ಒಂದೇ ಓವರ್​ನಲ್ಲಿ 5 ಸಿಕ್ಸರ್ ಬಾರಿಸಿದ ಮಯಾಂಕ್ -VIDEO
ರಾಹುಲ್​-ಡಿಕೆಶಿ ಸೀಕ್ರೆಟ್​​ ಮೀಟಿಂಗ್​!
- ಜುಲೈ 31.. ಸಿದ್ದು ಜೊತೆಗೆ ಡೆಲ್ಲಿ ಫ್ಲೈಟ್​ ಹತ್ತಿದ್ದ ಡಿಕೆಶಿ
- ಪಕ್ಷದ ಕೆಲಸ ಮುಗಿದ ಬಳಿಕ ಪ್ರಧಾನಿ ಮೋದಿ ಭೇಟಿ
- ಭೇಟಿ ಹಿಂದೆ ರಾಜಕೀಯ ಉದ್ದೇಶ ಇದ್ಯೋ ಇಲ್ವೋ?
- ಈ ಭೇಟಿ ಬಗ್ಗೆ ಡಿಕೆಶಿಯತ್ತ ಹೈಕಮಾಂಡ್​ ಸಂಶಯ
- ಆ ಬಳಿಕ ಸತೀಶ್​​​ ಜಾರಕಿಹೊಳಿ ಡೆಲ್ಲಿ ಓಡಾಟ ಹೆಚ್ಚಳ
- ಸಿಎಂ ಸೀಟ್​​​ಗೆ ಪರಮೇಶ್ವರ್​​​, ಎಂ.ಬಿ ಪಾಟೀಲ್​​​ ಟವಲ್
- ಸರ್ಕಾರದಲ್ಲಿ ನಂಬರ್​​​ 2 ಸ್ಥಾನದಲ್ಲಿದ್ದ ಡಿಕೆಶಿಗೆ ಅಭದ್ರತೆ
- ಡಿಕೆಶಿಗೂ ಮುನ್ನ ಅಮೆರಿಕಾ ಪ್ರವಾಸದಲ್ಲಿದ್ದ ರಾಹುಲ್​​​
- ರಾಹುಲ್​​ ಗಾಂಧಿಯನ್ನ ವಾಷಿಂಗ್ಟನ್ನಲ್ಲಿ ಡಿಕೆಶಿ ಭೇಟಿ
- ರಾಹುಲ್​​​ ಜೊತೆ ಡಿಕೆಶಿ ಕಾಣಿಸಿದ್ದು ಕುರ್ಚಿ ಕುತೂಹಲ
ಸಿಎಂ ಗಾದಿ ಬಗ್ಗೆ ಸಚಿವರ ಬಹಿರಂಗ ಹೇಳಿಕೆ ಕುರಿತು ಪರಿಷತ್​​ ಸದಸ್ಯರು ಅಸಮಾಧಾನ ಹೊರಹಾಕಿದ್ದಾರೆ. ಹೈಕಮಾಂಡ್​ಗೆ ಮತ್ತೊಂದು ಪತ್ರ ಬರೆದು ಬಹಿರಂಗ ಹೇಳಿಕೆಗಳಿಗೆ ಬ್ರೇಕ್ ಹಾಕಿಸಿ ಅಂತ ಒತ್ತಾಯಿಸಿದ್ದಾರೆ. ಈ ಬೆಳವಣಿಗೆ ಜನರಲ್ಲಿ ಪಕ್ಷ ಮತ್ತು ಸರ್ಕಾರದ ಮೇಲೆ ವಿಶ್ವಾಸ ಕುಂದಿಸ್ತಿದೆ ಅಂತ ಸುಮಾರು ಹನ್ನೆರಡು ಮಂದಿ ಸದಸ್ಯರ ಅಂಕಿತವುಳ್ಳ ಪತ್ರ ಡೆಲ್ಲಿಗೆ ತಲುಪಿದೆ. ಒಟ್ಟಾರೆ, ನಾಳೆ ಹೈಕೋರ್ಟ್​​ನಲ್ಲಿ ಮುಡಾ ಬಗ್ಗೆ ವಿಚಾರಣೆ ಆಗಲಿದೆ. ಪ್ರತಿವಾದಿಗಳ ವಾದಕ್ಕೆ ಸಿದ್ದು ಪರ ಸೀನಿಯರ್​​​ ಅಡ್ವಕೇಟ್​​​ ಅಭಿಷೇಕ್​​ ಮನು ಸಿಂಘ್ವಿ ಕೌಂಟರ್​​ ಮಾಡ್ಲಿದ್ದಾರೆ. ಈ ವಾದ ಸರಣಿ ಮೇಲೆ ಸಿದ್ದರಾಮಯ್ಯ ಕುರ್ಚಿ ಅಳಿವು-ಉಳಿವು ನಿರ್ಧಾರ ಆಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್