ಮಿಸ್ಟರ್ ಕುಮಾರಸ್ವಾಮಿ ನೀನು ಯಾಕೆ ಈಗ ಜಾರಿಕೊಳ್ತಿಯಾ?
ಈಗ ನಮ್ಮ ಕುಟುಂಬ ಬೇರೆ, ರೇವಣ್ಣ ಕುಟುಂಬ ಬೇರೆ ಅಂತಿರಲ್ಲ
ಬ್ರದರ್... ಬ್ರದರ್ ಎಂದು ಕುಮಾರಸ್ವಾಮಿ ಅವರ ಶೈಲಿಯಲ್ಲೇ ಡಿಕೆ ವ್ಯಂಗ್ಯ
ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಮಹಾನಾಯಕರ ಮಧ್ಯೆ ಬಿಗ್ ಫೈಟ್ ಶುರುವಾಗಿದೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ್ರೆ ಡಿಕೆಶಿ ಕೂಡ ಖಡಕ್ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅವರನ್ನು ಅಮಾನತು ಮಾಡಿರೋದು ಕಣ್ಣೋರೆಸುವ ತಂತ್ರ. ಮಿಸ್ಟರ್ ಕುಮಾರಸ್ವಾಮಿ ನೀನು ಯಾಕೆ ಜಾರಿಕೊಳ್ತಿಯಾ? HD ಅಂದರೆ ಏನು? ಹರದನಹಳ್ಳಿ ದೇವೇಗೌಡರು ಅಂತ ಅರ್ಥ. ಈಗ ನಮ್ಮ ಕುಟುಂಬ ಬೇರೆ, ರೇವಣ್ಣ ಕುಟುಂಬ ಬೇರೆ ಅಂತಿರಲ್ಲ.
ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ಕೊಡಬೇಡಿ ಎಂದು ಬಿಜೆಪಿ ಹೈಕಮಾಂಡ್ ಹೇಳಿದ್ದರು. ನಮ್ಮ ತಂದೆಯವರು ತೀರ್ಮಾನ ತೆಗೆದುಕೊಂಡಿದ್ದು ಎಂದು ಸಮರ್ಥಿಸಿಕೊಂಡಿದ್ದಾರೆ. ಟಿಕೆಟ್ ವಿಚಾರದಲ್ಲಿ ಬ್ರದರ್… ಬ್ರದರ್ ಎಂದು ಕುಮಾರಸ್ವಾಮಿ ಅವರ ಶೈಲಿಯಲ್ಲೇ ಡಿ.ಕೆ ಶಿವಕುಮಾರ್ ಅಣಕಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನನ್ನ ನೆನಪಿಸಿಕೊಳ್ಳದಿದ್ರೆ ನಿದ್ರೆ, ಊಟ ಸೇರಲ್ಲ. ನಾನು ಅವರಿಗೆ ಸ್ಫೂರ್ತಿ. ನಾನು ಆ ರೀತಿಯ ಚಿಲ್ಲರೆ ಕೆಲಸ ಮಾಡಲ್ಲ. ಬೆಂಗಳೂರು, ಕೆಂಪೇಗೌಡರ ಬ್ಲಡ್ ನಮ್ಮದು. ಪೆನ್ ಡ್ರೈವ್ ಇದೆ ಎಂದು ಹೇಳಲ್ಲ. 200-300 ಮಹಿಳೆಯರ, ಕಾರ್ಯಕರ್ತರ ಗೌರವ ಮುಖ್ಯ. ಹೆಚ್.ಡಿ ರೇವಣ್ಣ ಅವರು ಹಾಸನದ ವಿಡಿಯೋ 4-5 ವರ್ಷಗಳ ಹಿಂದಿನದ್ದು ಎಂದು ಒಪ್ಪಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣರನ್ನು ವಿದೇಶಕ್ಕೆ ಯಾರು ಕಳಿಸಿದ್ರು? ಯಾರು ಕಾಲ್ ಮಾಡಿದ್ರು ಎಂಬ ಬಗ್ಗೆ ಕಾಲ್ ರೆಕಾರ್ಡ್ ತೆಗಿಸಬೇಕು. ಹಾಸನದ ದೇವರಾಜೇಗೌಡರು ಬಿಜೆಪಿ ನಾಯಕರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಹಾಸನದಲ್ಲಿ ಪೆನ್ಡ್ರೈವ್ ಹಂಚಿದ್ಯಾರು? ಸ್ಫೋಟಕ ಟ್ವಿಸ್ಟ್ ಕೊಟ್ಟ ಚಾಲಕ ಕಾರ್ತಿಕ್; ಬಿಜೆಪಿ ನಾಯಕ ಹೇಳಿದ್ದೇನು?
ಬಿಜೆಪಿ ನಾಯಕರು ಈಗ ತಪ್ಪಿಸಿಕೊಳ್ಳುತ್ತಿದ್ದಾರೆ. ತಮ್ಮ ಪಾರ್ಟನರ್ ಪಕ್ಷದ ಬಗ್ಗೆ ಆರ್. ಅಶೋಕ್ ಅವರು ಮಾತನಾಡಲಿ. ಶೋಭಾಕ್ಕ, ಸಿ.ಟಿ ರವಿ, ಸಿ.ಎಸ್ ಅಶ್ವತ್ಥ್ ನಾರಾಯಣ್, ಯತ್ನಾಳ್, ಸುನೀಲ್ ಕುಮಾರ್, ಪ್ರಹ್ಲಾದ್ ಜೋಷಿ ಮಾತಾಡಲಿ. ತಮ್ಮ ಸ್ಟ್ಯಾಂಡ್ ಬಗ್ಗೆ ಬಿಜೆಪಿ ನಾಯಕರು ಹೇಳಲಿ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
ಡಿಕೆಶಿ ಮನೆ ಮುಂದೆ ಪ್ರತಿಭಟನೆಗೆ ಕುಮಾರಸ್ವಾಮಿ ಕರೆ ನೀಡುವ ವಿಚಾರಕ್ಕೆ ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ. ಕುಮಾರಸ್ವಾಮಿ ತಡ ಮಾಡೋದು ಬೇಡ ಯಾಕೆ ಲೇಟ್ ಮಾಡ್ತಿದಿಯಾ ಕರೆ ಕೊಡು, ನೀ ಕರೆ ಕೊಡಬೇಕು ಎಂದು ಡಿ.ಕೆ ಶಿವಕುಮಾರ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಿಸ್ಟರ್ ಕುಮಾರಸ್ವಾಮಿ ನೀನು ಯಾಕೆ ಈಗ ಜಾರಿಕೊಳ್ತಿಯಾ?
ಈಗ ನಮ್ಮ ಕುಟುಂಬ ಬೇರೆ, ರೇವಣ್ಣ ಕುಟುಂಬ ಬೇರೆ ಅಂತಿರಲ್ಲ
ಬ್ರದರ್... ಬ್ರದರ್ ಎಂದು ಕುಮಾರಸ್ವಾಮಿ ಅವರ ಶೈಲಿಯಲ್ಲೇ ಡಿಕೆ ವ್ಯಂಗ್ಯ
ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಮಹಾನಾಯಕರ ಮಧ್ಯೆ ಬಿಗ್ ಫೈಟ್ ಶುರುವಾಗಿದೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ್ರೆ ಡಿಕೆಶಿ ಕೂಡ ಖಡಕ್ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅವರನ್ನು ಅಮಾನತು ಮಾಡಿರೋದು ಕಣ್ಣೋರೆಸುವ ತಂತ್ರ. ಮಿಸ್ಟರ್ ಕುಮಾರಸ್ವಾಮಿ ನೀನು ಯಾಕೆ ಜಾರಿಕೊಳ್ತಿಯಾ? HD ಅಂದರೆ ಏನು? ಹರದನಹಳ್ಳಿ ದೇವೇಗೌಡರು ಅಂತ ಅರ್ಥ. ಈಗ ನಮ್ಮ ಕುಟುಂಬ ಬೇರೆ, ರೇವಣ್ಣ ಕುಟುಂಬ ಬೇರೆ ಅಂತಿರಲ್ಲ.
ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ಕೊಡಬೇಡಿ ಎಂದು ಬಿಜೆಪಿ ಹೈಕಮಾಂಡ್ ಹೇಳಿದ್ದರು. ನಮ್ಮ ತಂದೆಯವರು ತೀರ್ಮಾನ ತೆಗೆದುಕೊಂಡಿದ್ದು ಎಂದು ಸಮರ್ಥಿಸಿಕೊಂಡಿದ್ದಾರೆ. ಟಿಕೆಟ್ ವಿಚಾರದಲ್ಲಿ ಬ್ರದರ್… ಬ್ರದರ್ ಎಂದು ಕುಮಾರಸ್ವಾಮಿ ಅವರ ಶೈಲಿಯಲ್ಲೇ ಡಿ.ಕೆ ಶಿವಕುಮಾರ್ ಅಣಕಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನನ್ನ ನೆನಪಿಸಿಕೊಳ್ಳದಿದ್ರೆ ನಿದ್ರೆ, ಊಟ ಸೇರಲ್ಲ. ನಾನು ಅವರಿಗೆ ಸ್ಫೂರ್ತಿ. ನಾನು ಆ ರೀತಿಯ ಚಿಲ್ಲರೆ ಕೆಲಸ ಮಾಡಲ್ಲ. ಬೆಂಗಳೂರು, ಕೆಂಪೇಗೌಡರ ಬ್ಲಡ್ ನಮ್ಮದು. ಪೆನ್ ಡ್ರೈವ್ ಇದೆ ಎಂದು ಹೇಳಲ್ಲ. 200-300 ಮಹಿಳೆಯರ, ಕಾರ್ಯಕರ್ತರ ಗೌರವ ಮುಖ್ಯ. ಹೆಚ್.ಡಿ ರೇವಣ್ಣ ಅವರು ಹಾಸನದ ವಿಡಿಯೋ 4-5 ವರ್ಷಗಳ ಹಿಂದಿನದ್ದು ಎಂದು ಒಪ್ಪಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣರನ್ನು ವಿದೇಶಕ್ಕೆ ಯಾರು ಕಳಿಸಿದ್ರು? ಯಾರು ಕಾಲ್ ಮಾಡಿದ್ರು ಎಂಬ ಬಗ್ಗೆ ಕಾಲ್ ರೆಕಾರ್ಡ್ ತೆಗಿಸಬೇಕು. ಹಾಸನದ ದೇವರಾಜೇಗೌಡರು ಬಿಜೆಪಿ ನಾಯಕರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಹಾಸನದಲ್ಲಿ ಪೆನ್ಡ್ರೈವ್ ಹಂಚಿದ್ಯಾರು? ಸ್ಫೋಟಕ ಟ್ವಿಸ್ಟ್ ಕೊಟ್ಟ ಚಾಲಕ ಕಾರ್ತಿಕ್; ಬಿಜೆಪಿ ನಾಯಕ ಹೇಳಿದ್ದೇನು?
ಬಿಜೆಪಿ ನಾಯಕರು ಈಗ ತಪ್ಪಿಸಿಕೊಳ್ಳುತ್ತಿದ್ದಾರೆ. ತಮ್ಮ ಪಾರ್ಟನರ್ ಪಕ್ಷದ ಬಗ್ಗೆ ಆರ್. ಅಶೋಕ್ ಅವರು ಮಾತನಾಡಲಿ. ಶೋಭಾಕ್ಕ, ಸಿ.ಟಿ ರವಿ, ಸಿ.ಎಸ್ ಅಶ್ವತ್ಥ್ ನಾರಾಯಣ್, ಯತ್ನಾಳ್, ಸುನೀಲ್ ಕುಮಾರ್, ಪ್ರಹ್ಲಾದ್ ಜೋಷಿ ಮಾತಾಡಲಿ. ತಮ್ಮ ಸ್ಟ್ಯಾಂಡ್ ಬಗ್ಗೆ ಬಿಜೆಪಿ ನಾಯಕರು ಹೇಳಲಿ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
ಡಿಕೆಶಿ ಮನೆ ಮುಂದೆ ಪ್ರತಿಭಟನೆಗೆ ಕುಮಾರಸ್ವಾಮಿ ಕರೆ ನೀಡುವ ವಿಚಾರಕ್ಕೆ ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ. ಕುಮಾರಸ್ವಾಮಿ ತಡ ಮಾಡೋದು ಬೇಡ ಯಾಕೆ ಲೇಟ್ ಮಾಡ್ತಿದಿಯಾ ಕರೆ ಕೊಡು, ನೀ ಕರೆ ಕೊಡಬೇಕು ಎಂದು ಡಿ.ಕೆ ಶಿವಕುಮಾರ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ