newsfirstkannada.com

​VIDEO: ಕುಂಬಳಕಾಯಿ ಕಳ್ಳ ಅಂದ್ರೆ.. ಪ್ರಯಾಗ್ ರಾಜ್‌ಗೆ​​ ಟಾಂಗ್​​ ಕೊಟ್ಟ ಡ್ರೋನ್​ ಪ್ರತಾಪ್​; ಹೇಳಿದ್ದೇನು?

Share :

Published January 30, 2024 at 4:52pm

Update January 30, 2024 at 4:45pm

    ನಾನು ಯಾರ ಹೆಸರನ್ನು ಬಳಸಿಲ್ಲ ಯಾಕೆ ನಾನೇ ನಾನೇ ಅಂತಾ ಹೇಳಬೇಕು?

    ಕ್ವಾರಂಟೈನ್​ನಲ್ಲಿ ನಡೆದ ಘಟನೆ ಬಗ್ಗೆ ಹೇಳಿಕೊಂಡಿದ್ದ ಡ್ರೋನ್​ ಪ್ರತಾಪ್

    ಪ್ರತಾಪ್ ಮಹಾನ್ ಸುಳ್ಳುಗಾರ, ಈತ ಹೇಳುವ ಮಾತಿಗೆ ಸಾಕ್ಷಿ ಒದಗಿಸಲಿ!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ರನ್ನರ್​ ಅಪ್​ ಪಟ್ಟವನ್ನು ಡ್ರೋನ್​​ ಪ್ರತಾಪ್ ​ಅವರು ತಮ್ಮದಾಗಿಸಿಕೊಂಡಿದ್ದಾರೆ. ಬಿಗ್​ಬಾಸ್ ಶೋಯಿಂದ ಸಾಕಷ್ಟು ಅಭಿಮಾನಿಗಳನ್ನು​ ಡ್ರೋನ್​ ಪ್ರತಾಪ್​  ಗಳಿಸಿಕೊಂಡಿದ್ದಾರೆ.

ಬಿಗ್​ಬಾಸ್​ನಿಂದ ಆಚೆ ಬಂದ ಬಳಿಕ ನ್ಯೂಸ್​​ಫಸ್ಟ್​ನೊಂದಿಗೆ ಮನಬಿಚ್ಚಿ ಮಾತಾಡಿದ್ದಾರೆ. ಬಿಬಿಎಂಪಿ ಅಧಿಕಾರಿ ಡಾ.ಪ್ರಯಾಗ್ ರಾಜ್ ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಕೇಸ್ ಹಾಕಿದ್ದಾರೆ. ಇದರ ಬಗ್ಗೆ ನೀವು ಏನ್​ ಹೇಳುತ್ತೀರಿ ಎಂಬ ಪ್ರಶ್ನೆಗೆ ಡ್ರೋನ್​​ ಪ್ರತಾಪ್​ ಉತ್ತರ ಕೊಟ್ಟಿದ್ದಾರೆ.

‘‘ಅವರು ಯಾರು ಅಂತಾ ನನಗೆ ಗೊತ್ತಿಲ್ಲ. ನಾನು ಅದರ ಬಗ್ಗೆ ತಿಳಿದುಕೊಂಡ ಪ್ರತಿಕ್ರಿಯೆ ನೀಡುತ್ತೇನೆ. ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಮೊದಲು ನಾನು ಆ ಹೇಳಿಕೆ ನೀಡುವಾಗ ಯಾರು ಅಂತಾ ಹೆಸರನ್ನು ಹೇಳಿಲ್ಲ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲುಮುಟ್ಟಿ ಏಕೆ ನೋಡಿಕೊಳಬೇಕು. ನಾನು ಯಾರ ಹೆಸರನ್ನು ಬಳಸಿಲ್ಲ. ಅವರು ಯಾಕೆ ನಾನೇ ನಾನೇ ಅಂತಾ ಹೇಳಬೇಕು. ನಾನು ಯಾವ ಹೇಳಿಕೆ ಕೊಟ್ಟಿದ್ದೇನೆ ಅದಕ್ಕೆ ಬದ್ದನಾಗಿ ಇರುತ್ತೇನೆ. ನನಗೆ ಯಾವುದೇ ನೋಟಿಸ್ ಕೂಡ ಬಂದಿಲ್ಲ’’ ಅಂತಾ ಉತ್ತರ ಕೊಟ್ಟಿದ್ದಾರೆ.

ಇದನ್ನು ಓದಿ: ಡ್ರೋನ್ ಪ್ರತಾಪ್ ಮಹಾನ್ ಸುಳ್ಳುಗಾರ.. ಬಿಗ್‍ಬಾಸ್ ಸ್ಪರ್ಧಿ ಮೇಲೆ BBMP ನೋಡಲ್ ಅಧಿಕಾರಿ ಫುಲ್​ ಗರಂ; ಯಾಕೆ?

 

ಕ್ವಾರಂಟೈನ್​ನಲ್ಲಿ ಆದ ಘಟನೆ ಬಗ್ಗೆ ಡ್ರೋನ್​ ಪ್ರತಾಪ್​ ಹೇಳಿದ್ದೇನು?

ಬಿಗ್‍ಬಾಸ್ ಸ್ಪರ್ಧಿಯಾದ ಡ್ರೋನ್​​ ಪ್ರತಾಪ್‍ ಅವರು ಕ್ವಾರಂಟೈನ್​ನಲ್ಲಿ ಆದ ಘಟನೆ ಬಗ್ಗೆ ಬಿಬಿಎಂಪಿ ನೋಡಲ್ ಅಧಿಕಾರಿ ಮೇಲೆ ಗಂಭೀರ ಆರೋಪವೊಂದನ್ನು ಮಾಡಿದ್ದರು. ಕ್ವಾರಂಟೈನ್ ಸಮಯದಲ್ಲಿ ಅಧಿಕಾರಿಯೊಬ್ಬರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರು. ಮೆಂಟಲಿ ಅನ್‍ಸ್ಟೇಬಲ್ ಅಂತಾ ಸಹಿ ಮಾಡುವಂತೆ ನನ್ನ ತಲೆತಲೆಗೆ ಹೊಡೆದು ಕಿರುಕುಳ ಕೊಟ್ಟರು. ಈತ ಹೇಗಿದ್ರೂ ಸುಳ್ಳು ಹೇಳ್ತಾನೆ. ಇವನು ಹೇಳೋದೇ ಬರೀ ಸುಳ್ಳು. ನಂಬಬೇಡಿ ಎಂದು ಮಾಧ್ಯಮಗಳಿಗೆ ಹೇಳಿ ಕಳುಹಿಸಿದರು. ಕ್ವಾರಂಟೈನ್‍ನಲ್ಲಿ ಮಾನಸಿಕ ಹಿಂಸೆ ಕೊಟ್ಟರು. ಹುಚ್ಚ ಅಂತಾ ಪೇಪರ್​ಗೆ ಸಹಿಹಾಕು ಅಂತಾ ಹೇಳಿದ್ದರು ಎಂದು ಡ್ರೋನ್​​ ಪ್ರತಾಪ್ ಆರೋಪ ಮಾಡಿದ್ದರು.

ಬಿಬಿಎಂಪಿ ಅಧಿಕಾರಿ ಡಾ.ಪ್ರಯಾಗ್ ರಾಜ್ ಗರಂ ಆಗಿದ್ದೇಕೆ?

ಈ ಹಿಂದೆ ಬಿಗ್​ಬಾಸ್​​ ಮನೆಯಲ್ಲಿ ಡ್ರೋನ್​ ಪ್ರತಾಪ್​ ಅಧಿಕಾರಿಯೊಬ್ಬರು ನನಗೆ ಕೋವಿಡ್ ಸಂದರ್ಭದಲ್ಲಿ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು. ಬಳಿಕ ಬಿಗ್​​​ಬಾಸ್ ಮನೆಯಲ್ಲಿ ಈ ರೀತಿ ಗಂಭೀರ ಆರೋಪ ಮಾಡಿದ್ದಕ್ಕೆ ಡ್ರೋನ್​​ ಪ್ರತಾಪ್ ಮೇಲೆ ​​ಬಿಬಿಎಂಪಿ ನೋಡಲ್ ಅಧಿಕಾರಿ ​​ಕೆಂಡಾಮಂಡಲರಾಗಿದ್ದರು. ಈ ಬಗ್ಗೆ ಕೂಡ ಬಿಬಿಎಂಪಿ ಸ್ಪಷ್ಟನೆ ಕೊಟ್ಟಿದ್ದರು. ಪ್ರತಾಪ್ ಕ್ವಾರಂಟೈನ್ ರೂಲ್ಸ್ ಉಲ್ಲಂಘನೆ ವಿರುದ್ಧ ನಾನೇ ಕೇಸ್ ದಾಖಲಿಸಿದ್ದೆ. ಕಾನೂನು ಪ್ರಕಾರವೇ ನಾನು ಕಾರ್ಯನಿರ್ವಹಿಸಿದ್ದೆ. ಇಡೀ ಆತನ ಕ್ವಾರಂಟೈನ್ ಪ್ರಕ್ರಿಯೆಯಲ್ಲಿ ನಾನೇ ನೋಡಲ್ ಅಧಿಕಾರಿಯಾಗಿ ನಿಗಾ ವಹಿಸಿದ್ದೆ. ಆದರೆ ಈತ ಹೇಳುತ್ತಿರುವ ಮಾತುಗಳಲ್ಲಿ ಯಾವುದೇ ಸತ್ಯವಿಲ್ಲ ಎಂದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

​VIDEO: ಕುಂಬಳಕಾಯಿ ಕಳ್ಳ ಅಂದ್ರೆ.. ಪ್ರಯಾಗ್ ರಾಜ್‌ಗೆ​​ ಟಾಂಗ್​​ ಕೊಟ್ಟ ಡ್ರೋನ್​ ಪ್ರತಾಪ್​; ಹೇಳಿದ್ದೇನು?

https://newsfirstlive.com/wp-content/uploads/2024/01/drone-prathu-1.jpg

    ನಾನು ಯಾರ ಹೆಸರನ್ನು ಬಳಸಿಲ್ಲ ಯಾಕೆ ನಾನೇ ನಾನೇ ಅಂತಾ ಹೇಳಬೇಕು?

    ಕ್ವಾರಂಟೈನ್​ನಲ್ಲಿ ನಡೆದ ಘಟನೆ ಬಗ್ಗೆ ಹೇಳಿಕೊಂಡಿದ್ದ ಡ್ರೋನ್​ ಪ್ರತಾಪ್

    ಪ್ರತಾಪ್ ಮಹಾನ್ ಸುಳ್ಳುಗಾರ, ಈತ ಹೇಳುವ ಮಾತಿಗೆ ಸಾಕ್ಷಿ ಒದಗಿಸಲಿ!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ರನ್ನರ್​ ಅಪ್​ ಪಟ್ಟವನ್ನು ಡ್ರೋನ್​​ ಪ್ರತಾಪ್ ​ಅವರು ತಮ್ಮದಾಗಿಸಿಕೊಂಡಿದ್ದಾರೆ. ಬಿಗ್​ಬಾಸ್ ಶೋಯಿಂದ ಸಾಕಷ್ಟು ಅಭಿಮಾನಿಗಳನ್ನು​ ಡ್ರೋನ್​ ಪ್ರತಾಪ್​  ಗಳಿಸಿಕೊಂಡಿದ್ದಾರೆ.

ಬಿಗ್​ಬಾಸ್​ನಿಂದ ಆಚೆ ಬಂದ ಬಳಿಕ ನ್ಯೂಸ್​​ಫಸ್ಟ್​ನೊಂದಿಗೆ ಮನಬಿಚ್ಚಿ ಮಾತಾಡಿದ್ದಾರೆ. ಬಿಬಿಎಂಪಿ ಅಧಿಕಾರಿ ಡಾ.ಪ್ರಯಾಗ್ ರಾಜ್ ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಕೇಸ್ ಹಾಕಿದ್ದಾರೆ. ಇದರ ಬಗ್ಗೆ ನೀವು ಏನ್​ ಹೇಳುತ್ತೀರಿ ಎಂಬ ಪ್ರಶ್ನೆಗೆ ಡ್ರೋನ್​​ ಪ್ರತಾಪ್​ ಉತ್ತರ ಕೊಟ್ಟಿದ್ದಾರೆ.

‘‘ಅವರು ಯಾರು ಅಂತಾ ನನಗೆ ಗೊತ್ತಿಲ್ಲ. ನಾನು ಅದರ ಬಗ್ಗೆ ತಿಳಿದುಕೊಂಡ ಪ್ರತಿಕ್ರಿಯೆ ನೀಡುತ್ತೇನೆ. ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಮೊದಲು ನಾನು ಆ ಹೇಳಿಕೆ ನೀಡುವಾಗ ಯಾರು ಅಂತಾ ಹೆಸರನ್ನು ಹೇಳಿಲ್ಲ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲುಮುಟ್ಟಿ ಏಕೆ ನೋಡಿಕೊಳಬೇಕು. ನಾನು ಯಾರ ಹೆಸರನ್ನು ಬಳಸಿಲ್ಲ. ಅವರು ಯಾಕೆ ನಾನೇ ನಾನೇ ಅಂತಾ ಹೇಳಬೇಕು. ನಾನು ಯಾವ ಹೇಳಿಕೆ ಕೊಟ್ಟಿದ್ದೇನೆ ಅದಕ್ಕೆ ಬದ್ದನಾಗಿ ಇರುತ್ತೇನೆ. ನನಗೆ ಯಾವುದೇ ನೋಟಿಸ್ ಕೂಡ ಬಂದಿಲ್ಲ’’ ಅಂತಾ ಉತ್ತರ ಕೊಟ್ಟಿದ್ದಾರೆ.

ಇದನ್ನು ಓದಿ: ಡ್ರೋನ್ ಪ್ರತಾಪ್ ಮಹಾನ್ ಸುಳ್ಳುಗಾರ.. ಬಿಗ್‍ಬಾಸ್ ಸ್ಪರ್ಧಿ ಮೇಲೆ BBMP ನೋಡಲ್ ಅಧಿಕಾರಿ ಫುಲ್​ ಗರಂ; ಯಾಕೆ?

 

ಕ್ವಾರಂಟೈನ್​ನಲ್ಲಿ ಆದ ಘಟನೆ ಬಗ್ಗೆ ಡ್ರೋನ್​ ಪ್ರತಾಪ್​ ಹೇಳಿದ್ದೇನು?

ಬಿಗ್‍ಬಾಸ್ ಸ್ಪರ್ಧಿಯಾದ ಡ್ರೋನ್​​ ಪ್ರತಾಪ್‍ ಅವರು ಕ್ವಾರಂಟೈನ್​ನಲ್ಲಿ ಆದ ಘಟನೆ ಬಗ್ಗೆ ಬಿಬಿಎಂಪಿ ನೋಡಲ್ ಅಧಿಕಾರಿ ಮೇಲೆ ಗಂಭೀರ ಆರೋಪವೊಂದನ್ನು ಮಾಡಿದ್ದರು. ಕ್ವಾರಂಟೈನ್ ಸಮಯದಲ್ಲಿ ಅಧಿಕಾರಿಯೊಬ್ಬರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರು. ಮೆಂಟಲಿ ಅನ್‍ಸ್ಟೇಬಲ್ ಅಂತಾ ಸಹಿ ಮಾಡುವಂತೆ ನನ್ನ ತಲೆತಲೆಗೆ ಹೊಡೆದು ಕಿರುಕುಳ ಕೊಟ್ಟರು. ಈತ ಹೇಗಿದ್ರೂ ಸುಳ್ಳು ಹೇಳ್ತಾನೆ. ಇವನು ಹೇಳೋದೇ ಬರೀ ಸುಳ್ಳು. ನಂಬಬೇಡಿ ಎಂದು ಮಾಧ್ಯಮಗಳಿಗೆ ಹೇಳಿ ಕಳುಹಿಸಿದರು. ಕ್ವಾರಂಟೈನ್‍ನಲ್ಲಿ ಮಾನಸಿಕ ಹಿಂಸೆ ಕೊಟ್ಟರು. ಹುಚ್ಚ ಅಂತಾ ಪೇಪರ್​ಗೆ ಸಹಿಹಾಕು ಅಂತಾ ಹೇಳಿದ್ದರು ಎಂದು ಡ್ರೋನ್​​ ಪ್ರತಾಪ್ ಆರೋಪ ಮಾಡಿದ್ದರು.

ಬಿಬಿಎಂಪಿ ಅಧಿಕಾರಿ ಡಾ.ಪ್ರಯಾಗ್ ರಾಜ್ ಗರಂ ಆಗಿದ್ದೇಕೆ?

ಈ ಹಿಂದೆ ಬಿಗ್​ಬಾಸ್​​ ಮನೆಯಲ್ಲಿ ಡ್ರೋನ್​ ಪ್ರತಾಪ್​ ಅಧಿಕಾರಿಯೊಬ್ಬರು ನನಗೆ ಕೋವಿಡ್ ಸಂದರ್ಭದಲ್ಲಿ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು. ಬಳಿಕ ಬಿಗ್​​​ಬಾಸ್ ಮನೆಯಲ್ಲಿ ಈ ರೀತಿ ಗಂಭೀರ ಆರೋಪ ಮಾಡಿದ್ದಕ್ಕೆ ಡ್ರೋನ್​​ ಪ್ರತಾಪ್ ಮೇಲೆ ​​ಬಿಬಿಎಂಪಿ ನೋಡಲ್ ಅಧಿಕಾರಿ ​​ಕೆಂಡಾಮಂಡಲರಾಗಿದ್ದರು. ಈ ಬಗ್ಗೆ ಕೂಡ ಬಿಬಿಎಂಪಿ ಸ್ಪಷ್ಟನೆ ಕೊಟ್ಟಿದ್ದರು. ಪ್ರತಾಪ್ ಕ್ವಾರಂಟೈನ್ ರೂಲ್ಸ್ ಉಲ್ಲಂಘನೆ ವಿರುದ್ಧ ನಾನೇ ಕೇಸ್ ದಾಖಲಿಸಿದ್ದೆ. ಕಾನೂನು ಪ್ರಕಾರವೇ ನಾನು ಕಾರ್ಯನಿರ್ವಹಿಸಿದ್ದೆ. ಇಡೀ ಆತನ ಕ್ವಾರಂಟೈನ್ ಪ್ರಕ್ರಿಯೆಯಲ್ಲಿ ನಾನೇ ನೋಡಲ್ ಅಧಿಕಾರಿಯಾಗಿ ನಿಗಾ ವಹಿಸಿದ್ದೆ. ಆದರೆ ಈತ ಹೇಳುತ್ತಿರುವ ಮಾತುಗಳಲ್ಲಿ ಯಾವುದೇ ಸತ್ಯವಿಲ್ಲ ಎಂದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More