newsfirstkannada.com

ಮತದಾನಕ್ಕೆ ಆಮೆಗಳ ಸಹಾಯ ಪಡೆದ ಚುನಾವಣಾ ಆಯೋಗ, ಏನಿದು ವಿಶೇಷ..?

Share :

Published April 13, 2024 at 2:15pm

    ಪಶ್ಚಿಮ ಬಂಗಾಳದ ಬಾಣೇಶ್ವರ ಕೊಳದಲ್ಲಿ ‘ಮೋಹನ’ ಆಮೆ

    softshell ಆಮೆಗಳ ವಿಶೇಷತೆ ಏನು ಗೊತ್ತಾ..?

    ಏಪ್ರಿಲ್ 19 ರಿಂದ ಲೋಕಸಭೆ ಚುನಾವಣೆಗೆ ಮತದಾನ

ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಕೂಚ್ ಬೆಹಾರ್ (Cooch Behar) ಜಿಲ್ಲೆಯಲ್ಲಿ ಮತದಾನದ ಸಂದೇಶ ಸಾರಲು ಆಮೆಗಳನ್ನು ಬಳಸಿಕೊಂಡಿದೆ. ಕಪ್ಪು ಬಣ್ಣದ softshell ಪ್ರಭೇದದ ಆಮೆಗಳನ್ನು ಬಳಸಿಕೊಂಡಿದ್ದು, ಇವು ವಿನಾಶದ ಅಂಚಿನಲ್ಲಿವೆ. ಪಶ್ಚಿಮ ಬಂಗಾಳದ ಬಾಣೇಶ್ವರ ದೇವಸ್ಥಾನದ ಕೊಳದಲ್ಲಿ ಮಾತ್ರ ಈ ಆಮೆಗಳಿವೆ.

ಇದನ್ನೂ ಓದಿ:ಆರ್​ಸಿಬಿ ಪಾಲಿನ ವಿಲನ್ ಇವರು, ತಂಡ ಹಳ್ಳ ಹಿಡಿಯಲು ಕಾರಣನೂ ಇವರೇ..!

ಆಮೆಗಳು ಮೊದಲ ಬಾರಿಗೆ ಚುನಾವಣೆಗೆ ಕೊಡುಗೆ ನೀಡುತ್ತಿವೆ. ಒಂದು ಕಾಲದಲ್ಲಿ ಈ ಆಮೆಗಳು ಅಳಿವಿನಂಚಿನಲ್ಲಿದೆ ಎಂದು ಪರಿಗಣಿಸಲಾಗಿತ್ತು. ಇವು ವಿಷ್ಣುವಿನ ಅವತಾರವೆಂದು ನಂಬಲಾಗಿದೆ. ಅವುಗಳನ್ನು ‘ಮೋಹನ ಬಾಬು’ (Mohan Babu) ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇಲ್ಲಿನ ಜಿಲ್ಲಾಡಳಿತ ಈ ಆಮೆಗಳನ್ನು ಮ್ಯಾಸ್ಕಾಟ್‌ಗಳಾಗಿ ಮಾಡುವಂತೆ ಆಯೋಗಕ್ಕೆ ಮನವಿ ಮಾಡಿತ್ತು. ಅದನ್ನು ಚುನಾವಣಾ ಆಯೋಗ ಸ್ವೀಕಾರ ಮಾಡಿದೆ.

ಇದನ್ನೂ ಓದಿ:ಆರ್​ಸಿಬಿ ಪಾಲಿನ ವಿಲನ್ ಇವರು, ತಂಡ ಹಳ್ಳ ಹಿಡಿಯಲು ಕಾರಣನೂ ಇವರೇ..!

ಆಮೆಗಳ ಮೇಲೆ ನಂಬಿಕೆ..!
ಕೂಚ್ ಬೆಹಾರ್‌ ಜಿಲ್ಲೆಯ ಜನರು, ಈ ಆಮೆಗಳ ಮೇಲೆ ಆಳವಾದ ನಂಬಿಕೆ ಹೊಂದಿದ್ದಾರೆ. ಇವುಗಳಿಂದಾಗಿಯೇ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಹೆಚ್ಚುತ್ತಿದೆ. ಹೀಗಾಗಿ ಇಲ್ಲಿನ ಜನ ಆಮೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಬಾಣೇಶ್ವರದ ಆಮೆ ​​ಕೊಳದ ಬಳಿಯ ರಸ್ತೆಗಳಲ್ಲಿ ವಾಹನಗಳು ಬಹಳ ನಿಧಾನವಾಗಿ ಚಲಿಸುತ್ತವೆ. ನಿಯಮದ ಪ್ರಕಾರ ಗಂಟೆಗೆ 20 ಕಿಲೋ ಮೀಟರ್‌ಗಿಂತ ಹೆಚ್ಚಿನ ವೇಗದಲ್ಲಿ ವಾಹನ ಚಾಲನೆ ಮಾಡುವಂತಿಲ್ಲ. ರಸ್ತೆ ಅಪಘಾತದಲ್ಲಿ ಹಲವು ಆಮೆಗಳು ಸಾವನ್ನಪ್ಪಿವೆ. ಈ ಕಾರಣಕ್ಕೆ ಜಿಲ್ಲಾಡಳಿತ ಕಠಿಣ ನಿಯಮ ಜಾರಿಗೆ ತಂದಿದೆ. 2002ರಲ್ಲಿ ಬಾಣೇಶ್ವರ ಕೊಳ ಸ್ವಚ್ಛಗೊಳಿಸುವ ವೇಳೆ ‘ಮೋಹನ’ ಆಮೆಗಳು ಇರುವುದನ್ನು ಜನ ಗುರುತಿಸಿದರು. ಅಂದಿನಿಂದ ಅವುಗಳ ಉಳಿಸುವ ಪ್ರಯತ್ನ ಮುಂದುವರಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತದಾನಕ್ಕೆ ಆಮೆಗಳ ಸಹಾಯ ಪಡೆದ ಚುನಾವಣಾ ಆಯೋಗ, ಏನಿದು ವಿಶೇಷ..?

https://newsfirstlive.com/wp-content/uploads/2024/04/turtle.jpg

    ಪಶ್ಚಿಮ ಬಂಗಾಳದ ಬಾಣೇಶ್ವರ ಕೊಳದಲ್ಲಿ ‘ಮೋಹನ’ ಆಮೆ

    softshell ಆಮೆಗಳ ವಿಶೇಷತೆ ಏನು ಗೊತ್ತಾ..?

    ಏಪ್ರಿಲ್ 19 ರಿಂದ ಲೋಕಸಭೆ ಚುನಾವಣೆಗೆ ಮತದಾನ

ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಕೂಚ್ ಬೆಹಾರ್ (Cooch Behar) ಜಿಲ್ಲೆಯಲ್ಲಿ ಮತದಾನದ ಸಂದೇಶ ಸಾರಲು ಆಮೆಗಳನ್ನು ಬಳಸಿಕೊಂಡಿದೆ. ಕಪ್ಪು ಬಣ್ಣದ softshell ಪ್ರಭೇದದ ಆಮೆಗಳನ್ನು ಬಳಸಿಕೊಂಡಿದ್ದು, ಇವು ವಿನಾಶದ ಅಂಚಿನಲ್ಲಿವೆ. ಪಶ್ಚಿಮ ಬಂಗಾಳದ ಬಾಣೇಶ್ವರ ದೇವಸ್ಥಾನದ ಕೊಳದಲ್ಲಿ ಮಾತ್ರ ಈ ಆಮೆಗಳಿವೆ.

ಇದನ್ನೂ ಓದಿ:ಆರ್​ಸಿಬಿ ಪಾಲಿನ ವಿಲನ್ ಇವರು, ತಂಡ ಹಳ್ಳ ಹಿಡಿಯಲು ಕಾರಣನೂ ಇವರೇ..!

ಆಮೆಗಳು ಮೊದಲ ಬಾರಿಗೆ ಚುನಾವಣೆಗೆ ಕೊಡುಗೆ ನೀಡುತ್ತಿವೆ. ಒಂದು ಕಾಲದಲ್ಲಿ ಈ ಆಮೆಗಳು ಅಳಿವಿನಂಚಿನಲ್ಲಿದೆ ಎಂದು ಪರಿಗಣಿಸಲಾಗಿತ್ತು. ಇವು ವಿಷ್ಣುವಿನ ಅವತಾರವೆಂದು ನಂಬಲಾಗಿದೆ. ಅವುಗಳನ್ನು ‘ಮೋಹನ ಬಾಬು’ (Mohan Babu) ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇಲ್ಲಿನ ಜಿಲ್ಲಾಡಳಿತ ಈ ಆಮೆಗಳನ್ನು ಮ್ಯಾಸ್ಕಾಟ್‌ಗಳಾಗಿ ಮಾಡುವಂತೆ ಆಯೋಗಕ್ಕೆ ಮನವಿ ಮಾಡಿತ್ತು. ಅದನ್ನು ಚುನಾವಣಾ ಆಯೋಗ ಸ್ವೀಕಾರ ಮಾಡಿದೆ.

ಇದನ್ನೂ ಓದಿ:ಆರ್​ಸಿಬಿ ಪಾಲಿನ ವಿಲನ್ ಇವರು, ತಂಡ ಹಳ್ಳ ಹಿಡಿಯಲು ಕಾರಣನೂ ಇವರೇ..!

ಆಮೆಗಳ ಮೇಲೆ ನಂಬಿಕೆ..!
ಕೂಚ್ ಬೆಹಾರ್‌ ಜಿಲ್ಲೆಯ ಜನರು, ಈ ಆಮೆಗಳ ಮೇಲೆ ಆಳವಾದ ನಂಬಿಕೆ ಹೊಂದಿದ್ದಾರೆ. ಇವುಗಳಿಂದಾಗಿಯೇ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಹೆಚ್ಚುತ್ತಿದೆ. ಹೀಗಾಗಿ ಇಲ್ಲಿನ ಜನ ಆಮೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಬಾಣೇಶ್ವರದ ಆಮೆ ​​ಕೊಳದ ಬಳಿಯ ರಸ್ತೆಗಳಲ್ಲಿ ವಾಹನಗಳು ಬಹಳ ನಿಧಾನವಾಗಿ ಚಲಿಸುತ್ತವೆ. ನಿಯಮದ ಪ್ರಕಾರ ಗಂಟೆಗೆ 20 ಕಿಲೋ ಮೀಟರ್‌ಗಿಂತ ಹೆಚ್ಚಿನ ವೇಗದಲ್ಲಿ ವಾಹನ ಚಾಲನೆ ಮಾಡುವಂತಿಲ್ಲ. ರಸ್ತೆ ಅಪಘಾತದಲ್ಲಿ ಹಲವು ಆಮೆಗಳು ಸಾವನ್ನಪ್ಪಿವೆ. ಈ ಕಾರಣಕ್ಕೆ ಜಿಲ್ಲಾಡಳಿತ ಕಠಿಣ ನಿಯಮ ಜಾರಿಗೆ ತಂದಿದೆ. 2002ರಲ್ಲಿ ಬಾಣೇಶ್ವರ ಕೊಳ ಸ್ವಚ್ಛಗೊಳಿಸುವ ವೇಳೆ ‘ಮೋಹನ’ ಆಮೆಗಳು ಇರುವುದನ್ನು ಜನ ಗುರುತಿಸಿದರು. ಅಂದಿನಿಂದ ಅವುಗಳ ಉಳಿಸುವ ಪ್ರಯತ್ನ ಮುಂದುವರಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More