Advertisment

ಕಲೆಗಳು.. ರಕ್ತದ ಕಲೆಗಳು.. ಸೆಕ್ಯುರಿಟಿ ಗಾರ್ಡ್​ ಬಿಚ್ಚಿಟ್ರು ರೇಣುಕಾಸ್ವಾಮಿ ಹತ್ಯೆಯ ಬಗೆಗಿನ ಸ್ಫೋಟಕ ಮಾಹಿತಿ

author-image
AS Harshith
Updated On
BREAKING: ‘ನಾನು ಬಳ್ಳಾರಿ ಜೈಲಿಗೆ ಹೋಗಲ್ಲ’- ಪರಪ್ಪನ ಅಗ್ರಹಾರದಲ್ಲಿ ಹಠ ಹಿಡಿದು ಕೂತ ದರ್ಶನ್!
Advertisment
  • ಆರ್ ಆರ್ ನಗರ ಶೆಡ್ ನಲ್ಲಿ ರೇಣುಕಾಸ್ವಾಮಿ ಭೀಕರ ಹತ್ಯೆ
  • ಸೆಕ್ಯುರಿಟಿ ಗಾರ್ಡ್​ ಹೇಳಿಕೆ ದಾಖಲಿಸಿಕೊಂಡ ಪೊಲೀಸರು
  • ರಕ್ತದ ಕಲೆಗಳ ಹಿಂದಿನ ಸತ್ಯಾಸತ್ಯತೆಗಳ ಬಗ್ಗೆ ಏನಂದ್ರು ಗೊತ್ತಾ?

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ದರ್ಶನ್​ ಆ್ಯಂಡ್​ ಟೀಂ ಈಗ ಲಾಕಪ್​ನಲ್ಲಿದ್ದಾರೆ. ಹತ್ಯೆ ಕುರಿತಾಗಿ ತನಿಖೆ ಎದುರಿಸುತ್ತಿದ್ದಾರೆ. ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಹಂತಕರು ಆತನ ಮೃತದೇಹವನ್ನು ಸಮನಹಳ್ಳಿಯ ಮೋರಿಗೆ ಎಸೆದಿದ್ದರು. ಆದರೆ ಅದಕ್ಕೂ ಮೊದಲ ಆ ಮೃತದೇಹವನ್ನು ಎಲ್ಲಿ ಹಾಕಿದ್ದರು ಗೊತ್ತಾ?. ಇಲ್ಲಿದೆ ಮಾಹಿತಿ.

Advertisment

ನ್ಯೂಸ್ ಫಸ್ಟ್​ಗೆ ಸಿಕ್ಕ ಎಕ್ಸ್ ಕ್ಲೂಸಿವ್ ಮಾಹಿತಿ ಪ್ರಕಾರ, ಆರ್ ಆರ್ ನಗರ ಶೆಡ್ ನಲ್ಲಿ ರೇಣುಕಾಸ್ವಾಮಿ ಭೀಕರ ಹತ್ಯೆ ನಡೆದಿದೆ. ಹತ್ಯೆ ಬಳಿಕ ಶವವನ್ನ ಮೊದಲು  ಸೆಕ್ಯುರಿಟಿ ರೂಂನಲ್ಲಿ ಹಾಕಲಾಗಿದೆ. ಶೆಡ್ ಕಾವಲಿಗಿದ್ದ ಸೆಕ್ಯುರಿಟಿ ರೂಂನಲ್ಲಿ ಮೃತದೇಹವನ್ನು ಆರೋಪಿಗಳು ಎಸೆದಿದ್ದಾರೆ.

ಇದನ್ನೂ ಓದಿ: ಕೈಯೇ ದಿಂಬು, ಲಾಕಪ್​ನಲ್ಲಿ ವಿಚಾರಣೆ.. ದರ್ಶನ್​ಗೆ ಸಿಗೋ ಟ್ರೀಟ್​ಮೆಂಟ್​ ಮಾತ್ರ..

ಸೆಕ್ಯುರಿಟಿ ರೂಂ ನಲ್ಲಿ ರಕ್ತದ ಕಲೆಗಳು

ಮೃತದೇಹ ಸಾಗಿಸೋವರೆಗು ಆರೋಪಿಗಳು ಸೆಕ್ಯುರಿಟಿ ರೂಂನಲ್ಲಿ ಹಾಕಿದ್ದರು. ಪೊಲೀಸರ ತನಿಖೆ ವೇಳೆ ಸೆಕ್ಯುರಿಟಿ ರೂಂ ನಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ.

Advertisment

ಇದನ್ನೂ ಓದಿ: ಅಸ್ವಸ್ಥರಾಗಿದ್ದ ಪವಿತ್ರಾ ಗೌಡ.. ಈಗ ಹೇಗಿದ್ದಾರೆ? ಏನಾಗಿತ್ತು?

ಸೆಕ್ಯುರಿಟಿ ಗಾರ್ಡ್ ವಿಚಾರಣೆ

ಪೊಲೀಸರು ಸೆಕ್ಯುರಿಟಿ ರೂಂನಲ್ಲಿ ಕೂಡ ಮಹಜರು ಮಾಡಿದ್ದಾರೆ. ನಂತರ ಸೆಕ್ಯುರಿಟಿ ಗಾರ್ಡ್ ವಿಚಾರಣೆ ನಡೆಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಸಂಬಂಧ ಶೆಡ್ ಸೆಕ್ಯುರಿಟಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಸೆಕ್ಯುರಿಟಿ ಹಿಂದಿ ಭಾಷೆಯಲ್ಲಿ ಮಾತಾನಾಡುತ್ತಿದ್ದು,ಪೊಲೀಸರ ರಿಮ್ಯಾಂಡ್ ಅರ್ಜಿಯಲ್ಲಿ ಶವ ಎಸೆದ ಬಗ್ಗೆ ಉಲ್ಲೇಖಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment