ಮಯಾಂಗಿನಿಗೆ ಮನಸೋತ ಯುವಕ ಆದ ಬಕ್ರಾ!
ಪರಿಚಯ, ಪ್ರೇಮ, ಮದುವೆ.. ಆಮೇಲೆ ಆಗಿದ್ದೇನು?
ಖತರ್ನಾಕ್ ಫ್ಯಾಮಿಲಿ ದೋಚಿದ್ದು ಅಷ್ಟಿಷ್ಟಲ್ಲ..!
ಬೆಂಗಳೂರು: ಮದುವೆಯ ಈ ಬಂಧ.. ಅನುರಾಗದ ಅನುಬಂಧ ಅಂತ ಮನ ಮೆಚ್ಚಿದ ಹುಡುಗಿಯನ್ನ ಮದುವೆಯಾಗಿದ್ದ ಆತ. ಆದ್ರೆ ಗಟ್ಟಿ ಮೇಳ ಮೊಳಗಿ ಮೂರು ತಿಂಗಳಿಗೇ ಸಾಕಷ್ಟು ಆಸೆಗಳನ್ನ ಇಟ್ಕೊಂಡಿದ್ದವ, ಈಗ ಪೊಲೀಸ್ ಠಾಣೆ ಮೆಟ್ಟಿಲೇರಿ ನ್ಯಾಯ ಬೇಕು ಅಂತಿದ್ದಾನೆ.
ಹೀಗೆ ಬಯಕೆ ಒಂದೇ.. ಗುರಿ ಒಂದೇ.. ನಾನು ನೀನು ಎಲ್ಲವೂ ಒಂದೇ ಅಂತ ಮೂರು ತಿಂಗಳ ಹಿಂದೆ ಈಕೆಗೆ ತಾಳಿ ಕಟ್ಟಿದ್ದ ಈ ಯುವಕ ಸಂತೋಷ್. ಆದ್ರೆ ಅವಳನ್ನ ಮದುವೆಯಾಗಿ ಇಷ್ಟು ದಿನ ಕಳೆಯೋವರೆಗೂ ಆತನಿಗೆ ತಾನೊಂದು ಬಲೀ ಕಾ ಬಕ್ರಾ ಅನ್ನೋ ವಿಚಾರ ಗೊತ್ತೇ ಇರ್ಲಿಲ್ಲ.. ಈ ಕಥೆಯ ಕಂಪ್ಲೀಟ್ ಡೀಟೇಲ್ಸ್ ನೋಡ್ಬೇಕು ಅಂದ್ರೆ 2018ಕ್ಕೆ ರಿವೈಂಡ್ ಹಾಕೊಂಡು ಹೋಗ್ಬೇಕು.
ಮಿಕ ಸಿಗ್ತಿದ್ದಂತೆ ಶುರು ವಸೂಲಿ
ಸಂತೋಷ್ ಫೇಸ್ಬುಕ್ನಲ್ಲಿ ಮಹಿಳೆ ಪರಿಚಯ ಮಾಡಿಕೊಂಡಿದ್ದ. 2018ರಲ್ಲಿ ತಾನು ಕೆಲಸ ಮಾಡುವ ಕಂಪನಿಯಲ್ಲಿ ಕೆಲಸ ಕೊಡಿಸಿದ್ದ. ಪರಿಚಯ ಮುಂದುವರೆದು ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಬಳಿಕ ಸಂತೋಷ್ ಮತ್ತು ಮಹಿಳೆ ಮದುವೆಯಾಗಲೂ ನಿರ್ಧರಿಸಿದ್ದರು. ಅದ್ರೆ ಈ ಮೊದಲೇ ಮಹಿಳೆಗೆ ಮದುವೆಯಾಗಿರುವುದು ಬೆಳಕಿಗೆ ಬಂದಿತ್ತು. ಅದನ್ನ ಆತನಿಗೆ ಗೊತ್ತಾಗದಂತೆ ವಿಷಯ ಮುಚ್ಚಿಟ್ಟು ಸಂತೋಷ್ ಜೊತೆ ಮದುವೆ ಮಾಡಲು ಮಹಿಳೆಯ ಅಕ್ಕ ಭಾವ ಪ್ಲಾನ್ ಮಾಡ್ತಾರೆ. ಜೊತೆಗೆ ಮದುವೆಗೂ ಮುನ್ನವೇ ಹಣ ವಸೂಲಿ ಕೆಲಸ ಶುರುವಾಗಿತ್ತು.
ನಾದಿನಿ ಜೊತೆ ಮದುವೆ ಮಾಡಿಸಲು ಮಹಿಳೆಯ ಭಾವ ಐದು ಲಕ್ಷ ಪೀಕಿದ್ರೆ, ಅಕ್ಕ 15 ಲಕ್ಷ ಮೌಲ್ಯದ ಆಭರಣಗಳಿಗೆ ಸ್ಕೆಚ್ ಹಾಕಿದಳು. ಇದು ಮುಗೀತಿದ್ದಂತೆ ಮಹಿಳೆಯ ಆಟ ಶುರು ತನಗೆ ಐಫೋನ್ ಬೇಕು ಅಂತ ಮದುವೆಗೆ ಮುನ್ನವೇ ಕೇಳಿದಳು. ಮನ ಮೆಚ್ಚಿದ ಹುಡುಗಿ ಕೇಳಿದಳು ಎಂದು 2 ಲಕ್ಷ 60 ಸಾವಿರ ಕೊಟ್ಟು ಐಫೋನ್ಗಳನ್ನ ಕೊಡಿಸಿದ್ದ. ಬಳಿಕ ಮದುವೆಯೂ ಆಯ್ತು. ಆದ್ರೆ ಮದುವೆಯಾಗಿ ಮೂರು ತಿಂಗಳಾದ್ರೂ ಯುವತಿ ತನ್ನ ಜೊತೆ ದೈಹಿಕ ಸಂಪರ್ಕ ಸಾಧಿಸಿಲ್ಲ. ಹಣ ಒಡವೆ ಫೋನ್ ತಗೊಂಡು ಈಗ ಕೈಗೆ ಸಿಗದಂತೆ ನನ್ ಹೆಂಡ್ತಿ ಓಡಾಡ್ತಿದ್ದಾಳೆ ಅಂತ ಸಂತೋಷ್ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಅಷ್ಟೇ ಅಲ್ಲ.. ಹೆಂಡ್ತಿ ಕೈಗೆ ಸಿಗ್ತಿಲ್ಲ.. ನನ್ನ ಬಿಟ್ಟು ಎಲ್ಲೋ ಹೋಗಿದ್ದಾಳೆ ಅಂತಾ ಹೇಳ್ತಿರೋ ಸಂತೋಷ್ ಬಳಿ ಮಹಿಳೆಯ ಭಾವ ಆಕೆ ಎಸ್ಕೇಪ್ ಆದ್ಮೇಲೂ ಹಣ ಪೀಕಿದ್ದಾನೆ ಅನ್ನೋ ಆರೋಪ ಮಾಡ್ತಿದ್ದಾರೆ ಸಂತೋಷ್. ಅದೇನೇ ಇರ್ಲಿ ಮದುವೆ ಅನ್ನೋ ಬಂಧದಲ್ಲಿ ಬದುಕು ಕಟ್ಟಿಕೊಳ್ಳಲು ಸಿದ್ದವಾದವನಿಗೆ ಮನಮೆಚ್ಚಿದವಳು ಕೈಕೊಟ್ಟು ಹೋಗಿದ್ದು ವಿಪರ್ಯಾಸ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಯಾಂಗಿನಿಗೆ ಮನಸೋತ ಯುವಕ ಆದ ಬಕ್ರಾ!
ಪರಿಚಯ, ಪ್ರೇಮ, ಮದುವೆ.. ಆಮೇಲೆ ಆಗಿದ್ದೇನು?
ಖತರ್ನಾಕ್ ಫ್ಯಾಮಿಲಿ ದೋಚಿದ್ದು ಅಷ್ಟಿಷ್ಟಲ್ಲ..!
ಬೆಂಗಳೂರು: ಮದುವೆಯ ಈ ಬಂಧ.. ಅನುರಾಗದ ಅನುಬಂಧ ಅಂತ ಮನ ಮೆಚ್ಚಿದ ಹುಡುಗಿಯನ್ನ ಮದುವೆಯಾಗಿದ್ದ ಆತ. ಆದ್ರೆ ಗಟ್ಟಿ ಮೇಳ ಮೊಳಗಿ ಮೂರು ತಿಂಗಳಿಗೇ ಸಾಕಷ್ಟು ಆಸೆಗಳನ್ನ ಇಟ್ಕೊಂಡಿದ್ದವ, ಈಗ ಪೊಲೀಸ್ ಠಾಣೆ ಮೆಟ್ಟಿಲೇರಿ ನ್ಯಾಯ ಬೇಕು ಅಂತಿದ್ದಾನೆ.
ಹೀಗೆ ಬಯಕೆ ಒಂದೇ.. ಗುರಿ ಒಂದೇ.. ನಾನು ನೀನು ಎಲ್ಲವೂ ಒಂದೇ ಅಂತ ಮೂರು ತಿಂಗಳ ಹಿಂದೆ ಈಕೆಗೆ ತಾಳಿ ಕಟ್ಟಿದ್ದ ಈ ಯುವಕ ಸಂತೋಷ್. ಆದ್ರೆ ಅವಳನ್ನ ಮದುವೆಯಾಗಿ ಇಷ್ಟು ದಿನ ಕಳೆಯೋವರೆಗೂ ಆತನಿಗೆ ತಾನೊಂದು ಬಲೀ ಕಾ ಬಕ್ರಾ ಅನ್ನೋ ವಿಚಾರ ಗೊತ್ತೇ ಇರ್ಲಿಲ್ಲ.. ಈ ಕಥೆಯ ಕಂಪ್ಲೀಟ್ ಡೀಟೇಲ್ಸ್ ನೋಡ್ಬೇಕು ಅಂದ್ರೆ 2018ಕ್ಕೆ ರಿವೈಂಡ್ ಹಾಕೊಂಡು ಹೋಗ್ಬೇಕು.
ಮಿಕ ಸಿಗ್ತಿದ್ದಂತೆ ಶುರು ವಸೂಲಿ
ಸಂತೋಷ್ ಫೇಸ್ಬುಕ್ನಲ್ಲಿ ಮಹಿಳೆ ಪರಿಚಯ ಮಾಡಿಕೊಂಡಿದ್ದ. 2018ರಲ್ಲಿ ತಾನು ಕೆಲಸ ಮಾಡುವ ಕಂಪನಿಯಲ್ಲಿ ಕೆಲಸ ಕೊಡಿಸಿದ್ದ. ಪರಿಚಯ ಮುಂದುವರೆದು ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಬಳಿಕ ಸಂತೋಷ್ ಮತ್ತು ಮಹಿಳೆ ಮದುವೆಯಾಗಲೂ ನಿರ್ಧರಿಸಿದ್ದರು. ಅದ್ರೆ ಈ ಮೊದಲೇ ಮಹಿಳೆಗೆ ಮದುವೆಯಾಗಿರುವುದು ಬೆಳಕಿಗೆ ಬಂದಿತ್ತು. ಅದನ್ನ ಆತನಿಗೆ ಗೊತ್ತಾಗದಂತೆ ವಿಷಯ ಮುಚ್ಚಿಟ್ಟು ಸಂತೋಷ್ ಜೊತೆ ಮದುವೆ ಮಾಡಲು ಮಹಿಳೆಯ ಅಕ್ಕ ಭಾವ ಪ್ಲಾನ್ ಮಾಡ್ತಾರೆ. ಜೊತೆಗೆ ಮದುವೆಗೂ ಮುನ್ನವೇ ಹಣ ವಸೂಲಿ ಕೆಲಸ ಶುರುವಾಗಿತ್ತು.
ನಾದಿನಿ ಜೊತೆ ಮದುವೆ ಮಾಡಿಸಲು ಮಹಿಳೆಯ ಭಾವ ಐದು ಲಕ್ಷ ಪೀಕಿದ್ರೆ, ಅಕ್ಕ 15 ಲಕ್ಷ ಮೌಲ್ಯದ ಆಭರಣಗಳಿಗೆ ಸ್ಕೆಚ್ ಹಾಕಿದಳು. ಇದು ಮುಗೀತಿದ್ದಂತೆ ಮಹಿಳೆಯ ಆಟ ಶುರು ತನಗೆ ಐಫೋನ್ ಬೇಕು ಅಂತ ಮದುವೆಗೆ ಮುನ್ನವೇ ಕೇಳಿದಳು. ಮನ ಮೆಚ್ಚಿದ ಹುಡುಗಿ ಕೇಳಿದಳು ಎಂದು 2 ಲಕ್ಷ 60 ಸಾವಿರ ಕೊಟ್ಟು ಐಫೋನ್ಗಳನ್ನ ಕೊಡಿಸಿದ್ದ. ಬಳಿಕ ಮದುವೆಯೂ ಆಯ್ತು. ಆದ್ರೆ ಮದುವೆಯಾಗಿ ಮೂರು ತಿಂಗಳಾದ್ರೂ ಯುವತಿ ತನ್ನ ಜೊತೆ ದೈಹಿಕ ಸಂಪರ್ಕ ಸಾಧಿಸಿಲ್ಲ. ಹಣ ಒಡವೆ ಫೋನ್ ತಗೊಂಡು ಈಗ ಕೈಗೆ ಸಿಗದಂತೆ ನನ್ ಹೆಂಡ್ತಿ ಓಡಾಡ್ತಿದ್ದಾಳೆ ಅಂತ ಸಂತೋಷ್ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಅಷ್ಟೇ ಅಲ್ಲ.. ಹೆಂಡ್ತಿ ಕೈಗೆ ಸಿಗ್ತಿಲ್ಲ.. ನನ್ನ ಬಿಟ್ಟು ಎಲ್ಲೋ ಹೋಗಿದ್ದಾಳೆ ಅಂತಾ ಹೇಳ್ತಿರೋ ಸಂತೋಷ್ ಬಳಿ ಮಹಿಳೆಯ ಭಾವ ಆಕೆ ಎಸ್ಕೇಪ್ ಆದ್ಮೇಲೂ ಹಣ ಪೀಕಿದ್ದಾನೆ ಅನ್ನೋ ಆರೋಪ ಮಾಡ್ತಿದ್ದಾರೆ ಸಂತೋಷ್. ಅದೇನೇ ಇರ್ಲಿ ಮದುವೆ ಅನ್ನೋ ಬಂಧದಲ್ಲಿ ಬದುಕು ಕಟ್ಟಿಕೊಳ್ಳಲು ಸಿದ್ದವಾದವನಿಗೆ ಮನಮೆಚ್ಚಿದವಳು ಕೈಕೊಟ್ಟು ಹೋಗಿದ್ದು ವಿಪರ್ಯಾಸ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ