newsfirstkannada.com

ಮತ್ತೆ ವೀಕ್ಷಕರ ಮನಸ್ಸು ಗೆದ್ದ ‘ಅಮೃತಧಾರೆ’; ನಿರ್ದೇಶಕರೇ ನಿಮಗೊಂದು ಹ್ಯಾಟ್ಸಫ್ ಅಂತಿದ್ದಾರೆ ಫ್ಯಾನ್ಸ್!

Share :

Published February 25, 2024 at 6:56pm

Update February 26, 2024 at 2:50pm

    ಮಸ್ತ್​​ ಡೈಲಾಗ್​, ಅದ್ಭುತ ಅಭಿನಯದ ಮೂಲಕ ವೀಕ್ಷಕರ ಮನಗೆದ್ದ ನಟಿ

    ಬಹಳ ವರ್ಷಗಳ ನಂತರ ಕಿರುತೆರೆಗೆ ಮರಳಿದ ಛಾಯಾ ಸಿಂಗ್ ಮ್ಯಾಜಿಕ್

    ಗೌತಮ್ ಸರ್ ಒಳ್ಳೆ ನಿರ್ಧಾರ ಹ್ಯಾಟ್ಸಫ್ ಡೈರೆಕ್ಟರ್ ಎಂದ ವೀಕ್ಷಕರು

ಕನ್ನಡ ಕಿರುತೆರೆಯಲ್ಲಿ ಸದ್ಯ ಬ್ಲಾಕ್ ಬಾಸ್ಟರ್​ ಹಿಟ್ ಪಡೆದುಕೊಂಡಿರೋ ಧಾರಾವಾಹಿ ಅಂದರೆ ಅದು ಅಮೃತಧಾರೆ. ಕನ್ನಡ ಕಿರುತೆರೆಯಲ್ಲಿ ಸದ್ಯ ಬ್ಲಾಕ್ ಬಾಸ್ಟರ್​ ಹಿಟ್ ಪಡೆದುಕೊಂಡಿರೋ ಧಾರಾವಾಹಿ ಅಂದರೆ ಅದು ಅಮೃತಧಾರೆ. ಅಮೃತಧಾರೆ ಧಾರಾವಾಹಿಯನ್ನು ಯಾರು ತಾನೇ ನೋಡುತ್ತಿಲ್ಲ ಹೇಳಿ.

ಈಗಂತೂ ಎಲ್ಲಿ ನೋಡಿದರೂ, ಯಾರ ಬಾಯಲ್ಲೂ ಅಮೃತಧಾರೆ ಬಗ್ಗೆ ಮಾತುಕತೆ. ಅಷ್ಟರ ಮಟ್ಟಿಗೆ ಈ ಅದ್ಭುತ ಕತೆಗೆ ಫುಲ್ ಫಿದಾ ಆಗಿದ್ದಾರೆ. ಗೌತಮ್ ಭೂಮಿಕ ಜೋಡಿಯನ್ನು ಎರಡು ಕೈಯಿಂದ ಕರುನಾಡ ವೀಕ್ಷಕರು ಅಪ್ಪಿಕೊಂಡಿದ್ದಾರೆ. ಕತೆಯಲ್ಲಿ ಎಲ್ಲಾ ಅಂಶಗಳು ತುಂಬಿದ್ದು ಫುಲ್ ಪವರ್ ಪ್ಯಾಕ್ ಎಂಟರ್​ಟೈನ್ಮೆಂಟ್ ಈ ಧಾರಾವಾಹಿಯಿಂದ ಎಲ್ಲರಿಗೂ ಸಿಗುತ್ತಿದೆ.

ಇದನ್ನು ಓದಿ: ಅಶ್ವಿನ್​, ಕುಲದೀಪ್​ ಸ್ಪಿನ್​ ಮೋಡಿ.. ಇಂಗ್ಲೆಂಡ್​ ದಾಂಡಿಗರ ಬೆವರಿಲಿಸಿದ ಸ್ಪಿನ್ನರ್ಸ್​!

ಸದ್ಯ ಧಾರಾವಾಹಿಯಲ್ಲಿ ಒಂದು ದೊಡ್ಡ ಟ್ವಿಸ್ಟ್ ಒಂದು ಅಪ್ಪಿಳಿಸಿದೆ. ಅದುವೇ ಜೈದೇವ್ ಮನೆಯ ಕೆಲಸದ ಹುಡುಗಿ ಮಲ್ಲಿ ಜೊತೆ ಇಟ್ಟುಕೊಂಡಿದ್ದ ಅಕ್ರಮ ಸಂಬಂಧ ಮದುವೆ ಮನೆಯಲ್ಲಿ ಎಲ್ಲರೆದುರು ಬಯಲಾಗಿರೋದು. ಯೆಸ್, ಸ್ವತಃ ಮಲ್ಲಿಯ ಬಾಯಯಿಂದಲೇ ನಿಜ ಹೇಳಿಸಿದ್ದಾಳೆ ಭೂಮಿಕಾ. ಇನ್ನೂ ಭೂಮಿಕಾ ಮಾತಿಗೆ ಗೌತಮ್ ಕೂಡ ಗೌರವ ನೀಡಿದ್ದಾರೆ.

ಭೂಮಿಕಾ ತಂಗಿ ಅಪ್ಪಿಗೆ ಈ ಮದುವೆ ಇಷ್ಟ ಇಲ್ಲದೆ ಹೋದರು ಕೂಡ ಮನೆಯವರ ಖುಷಿಗೆ ಈ ಮದುವೆಯನ್ನ ಒಪ್ಪಿದ್ದಳು. ಇನ್ನೂ ಜೈದೇವ್​ನ ನಿಜ ಬಣ್ಣ ಬಯಲು ಮಾಡಿ ಭೂಮಿಕ ಗೌತಮ್ ಇಬ್ಬರು ಸೇರಿ ಅದೇ ಮದುವೆ ಮಂಟಪದಲ್ಲಿ ಮಲ್ಲಿಗೆ ನ್ಯಾಯ ಕೊಡಸಿಲಿದ್ದಾರೆ.

ಇದು ಧಾರಾವಾಹಿಯ ಕತೆಯಾದ್ರೂ ಕೂಡ ಸಮಾಜದಲ್ಲಿ ಮಲ್ಲಿಯಂತಹ ಮುಗ್ಧ ಹೆಣ್ಣುಮಕ್ಕಳು ಇಂತಹ ಘಟನೆಗಳಿಗೆ ಸಿಲುಕಿರುತ್ತಾರೆ. ಈ ಮಲ್ಲಿಯ ಕತೆ ಸಮಾಜದಲ್ಲಿ ಎಲ್ಲಾ ಹೆಣ್ಣು ಮಕ್ಕಳಿಗೆ ಪಾಠವಾಗಲಿ ಅನ್ನೋದು ಈ ಧಾರಾವಾಹಿ ಪ್ರಮುಖ ಉದ್ದೇಶ. ಇನ್ನೂ ಭೂಮಿಕಾ ತಾನು ಒಂದು ಹೆಣ್ಣಾಗಿ ಮತ್ತೊಂದು ಹೆಣ್ಣಿಗೆ ಮೋಸ ಆಗದಂತೆ ಮಾಡಿರೋದು ಎಲ್ಲರಿಗೂ ಖುಷಿ ತಂದಿದೆ. ಮಲ್ಲಿಯ ಜೀವನಕ್ಕೆ ಭೂಮಿಕಾ ಯಾವ ರೀತಿಯ ಆಸರೆ ಮಾಡಿಕೊಡ್ತಾಳೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ವೀಕ್ಷಕರ ಮನಸ್ಸು ಗೆದ್ದ ‘ಅಮೃತಧಾರೆ’; ನಿರ್ದೇಶಕರೇ ನಿಮಗೊಂದು ಹ್ಯಾಟ್ಸಫ್ ಅಂತಿದ್ದಾರೆ ಫ್ಯಾನ್ಸ್!

https://newsfirstlive.com/wp-content/uploads/2024/02/amrutha-dare-1.jpg

    ಮಸ್ತ್​​ ಡೈಲಾಗ್​, ಅದ್ಭುತ ಅಭಿನಯದ ಮೂಲಕ ವೀಕ್ಷಕರ ಮನಗೆದ್ದ ನಟಿ

    ಬಹಳ ವರ್ಷಗಳ ನಂತರ ಕಿರುತೆರೆಗೆ ಮರಳಿದ ಛಾಯಾ ಸಿಂಗ್ ಮ್ಯಾಜಿಕ್

    ಗೌತಮ್ ಸರ್ ಒಳ್ಳೆ ನಿರ್ಧಾರ ಹ್ಯಾಟ್ಸಫ್ ಡೈರೆಕ್ಟರ್ ಎಂದ ವೀಕ್ಷಕರು

ಕನ್ನಡ ಕಿರುತೆರೆಯಲ್ಲಿ ಸದ್ಯ ಬ್ಲಾಕ್ ಬಾಸ್ಟರ್​ ಹಿಟ್ ಪಡೆದುಕೊಂಡಿರೋ ಧಾರಾವಾಹಿ ಅಂದರೆ ಅದು ಅಮೃತಧಾರೆ. ಕನ್ನಡ ಕಿರುತೆರೆಯಲ್ಲಿ ಸದ್ಯ ಬ್ಲಾಕ್ ಬಾಸ್ಟರ್​ ಹಿಟ್ ಪಡೆದುಕೊಂಡಿರೋ ಧಾರಾವಾಹಿ ಅಂದರೆ ಅದು ಅಮೃತಧಾರೆ. ಅಮೃತಧಾರೆ ಧಾರಾವಾಹಿಯನ್ನು ಯಾರು ತಾನೇ ನೋಡುತ್ತಿಲ್ಲ ಹೇಳಿ.

ಈಗಂತೂ ಎಲ್ಲಿ ನೋಡಿದರೂ, ಯಾರ ಬಾಯಲ್ಲೂ ಅಮೃತಧಾರೆ ಬಗ್ಗೆ ಮಾತುಕತೆ. ಅಷ್ಟರ ಮಟ್ಟಿಗೆ ಈ ಅದ್ಭುತ ಕತೆಗೆ ಫುಲ್ ಫಿದಾ ಆಗಿದ್ದಾರೆ. ಗೌತಮ್ ಭೂಮಿಕ ಜೋಡಿಯನ್ನು ಎರಡು ಕೈಯಿಂದ ಕರುನಾಡ ವೀಕ್ಷಕರು ಅಪ್ಪಿಕೊಂಡಿದ್ದಾರೆ. ಕತೆಯಲ್ಲಿ ಎಲ್ಲಾ ಅಂಶಗಳು ತುಂಬಿದ್ದು ಫುಲ್ ಪವರ್ ಪ್ಯಾಕ್ ಎಂಟರ್​ಟೈನ್ಮೆಂಟ್ ಈ ಧಾರಾವಾಹಿಯಿಂದ ಎಲ್ಲರಿಗೂ ಸಿಗುತ್ತಿದೆ.

ಇದನ್ನು ಓದಿ: ಅಶ್ವಿನ್​, ಕುಲದೀಪ್​ ಸ್ಪಿನ್​ ಮೋಡಿ.. ಇಂಗ್ಲೆಂಡ್​ ದಾಂಡಿಗರ ಬೆವರಿಲಿಸಿದ ಸ್ಪಿನ್ನರ್ಸ್​!

ಸದ್ಯ ಧಾರಾವಾಹಿಯಲ್ಲಿ ಒಂದು ದೊಡ್ಡ ಟ್ವಿಸ್ಟ್ ಒಂದು ಅಪ್ಪಿಳಿಸಿದೆ. ಅದುವೇ ಜೈದೇವ್ ಮನೆಯ ಕೆಲಸದ ಹುಡುಗಿ ಮಲ್ಲಿ ಜೊತೆ ಇಟ್ಟುಕೊಂಡಿದ್ದ ಅಕ್ರಮ ಸಂಬಂಧ ಮದುವೆ ಮನೆಯಲ್ಲಿ ಎಲ್ಲರೆದುರು ಬಯಲಾಗಿರೋದು. ಯೆಸ್, ಸ್ವತಃ ಮಲ್ಲಿಯ ಬಾಯಯಿಂದಲೇ ನಿಜ ಹೇಳಿಸಿದ್ದಾಳೆ ಭೂಮಿಕಾ. ಇನ್ನೂ ಭೂಮಿಕಾ ಮಾತಿಗೆ ಗೌತಮ್ ಕೂಡ ಗೌರವ ನೀಡಿದ್ದಾರೆ.

ಭೂಮಿಕಾ ತಂಗಿ ಅಪ್ಪಿಗೆ ಈ ಮದುವೆ ಇಷ್ಟ ಇಲ್ಲದೆ ಹೋದರು ಕೂಡ ಮನೆಯವರ ಖುಷಿಗೆ ಈ ಮದುವೆಯನ್ನ ಒಪ್ಪಿದ್ದಳು. ಇನ್ನೂ ಜೈದೇವ್​ನ ನಿಜ ಬಣ್ಣ ಬಯಲು ಮಾಡಿ ಭೂಮಿಕ ಗೌತಮ್ ಇಬ್ಬರು ಸೇರಿ ಅದೇ ಮದುವೆ ಮಂಟಪದಲ್ಲಿ ಮಲ್ಲಿಗೆ ನ್ಯಾಯ ಕೊಡಸಿಲಿದ್ದಾರೆ.

ಇದು ಧಾರಾವಾಹಿಯ ಕತೆಯಾದ್ರೂ ಕೂಡ ಸಮಾಜದಲ್ಲಿ ಮಲ್ಲಿಯಂತಹ ಮುಗ್ಧ ಹೆಣ್ಣುಮಕ್ಕಳು ಇಂತಹ ಘಟನೆಗಳಿಗೆ ಸಿಲುಕಿರುತ್ತಾರೆ. ಈ ಮಲ್ಲಿಯ ಕತೆ ಸಮಾಜದಲ್ಲಿ ಎಲ್ಲಾ ಹೆಣ್ಣು ಮಕ್ಕಳಿಗೆ ಪಾಠವಾಗಲಿ ಅನ್ನೋದು ಈ ಧಾರಾವಾಹಿ ಪ್ರಮುಖ ಉದ್ದೇಶ. ಇನ್ನೂ ಭೂಮಿಕಾ ತಾನು ಒಂದು ಹೆಣ್ಣಾಗಿ ಮತ್ತೊಂದು ಹೆಣ್ಣಿಗೆ ಮೋಸ ಆಗದಂತೆ ಮಾಡಿರೋದು ಎಲ್ಲರಿಗೂ ಖುಷಿ ತಂದಿದೆ. ಮಲ್ಲಿಯ ಜೀವನಕ್ಕೆ ಭೂಮಿಕಾ ಯಾವ ರೀತಿಯ ಆಸರೆ ಮಾಡಿಕೊಡ್ತಾಳೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More