/newsfirstlive-kannada/media/post_attachments/wp-content/uploads/2024/02/Shubman-Gill.jpg)
ಟೀಮ್ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ಇದೇ ತಿಂಗಳು ಸೆಪ್ಟೆಂಬರ್ 19ನೇ ತಾರೀಕಿನಿಂದ ಶುರುವಾಗಲಿದೆ. ಈ ಸರಣಿಗಾಗಿ ಬಿಸಿಸಿಐ ಸೆಲೆಕ್ಷನ್ ಕಮಿಟಿ ಸದ್ಯದಲ್ಲೇ ಬಲಿಷ್ಠ ಟೀಮ್ ಇಂಡಿಯಾ ಪ್ರಕಟಿಸಲಿದೆ. ಅದಕ್ಕೂ ಮುನ್ನ ಟೀಮ್ ಇಂಡಿಯಾದ ಕೆಲವು ಆಟಗಾರರು ದುಲೀಪ್ ಟ್ರೋಫಿಯ ಭಾಗವಾಗಿದ್ದಾರೆ.
ಟೀಮ್ ಇಂಡಿಯಾ ತಂಡದಲ್ಲಿ ಸ್ಥಾನ ಪಡೆಯಲು ಎಲ್ಲ ಆಟಗಾರರಿಗೂ ಈ ಟೂರ್ನಿ ಅತ್ಯಂತ ಮಹತ್ವದ್ದಾಗಿದೆ. ಆದರೆ, ಭಾರತ ತಂಡದ ಉಪನಾಯಕ ಶುಭ್ಮನ್ ಗಿಲ್ ಸೇರಿದಂತೆ ಟೀಮ್ ಇಂಡಿಯಾದ ಕೆಲವು ಯುವ ಸ್ಟಾರ್ ಆಟಗಾರರು ಮೊದಲ ದಿನವೇ ಪ್ಲಾಪ್ ಆಗಿದ್ದಾರೆ.
ಶುಭ್ಮನ್ ಗಿಲ್ ಕಳಪೆ ಆಟ
ಎಂ. ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ಇಂಡಿಯಾ ಎ ಮತ್ತು ಇಂಡಿಯಾ ಬಿ ನಡುವೆ ದುಲೀಪ್ ಟ್ರೋಫಿಯ ಮೊದಲ ಪಂದ್ಯ ನಡೆಯುತ್ತಿದೆ. ಇಂಡಿಯಾ ಬಿ ಇಂಡಿಯಾ ಎ ತಂಡಕ್ಕೆ ಮೊದಲ ಇನ್ನಿಂಗ್ಸ್ನಲ್ಲಿ 322 ರನ್ಗಳ ಟಾರ್ಗೆಟ್ ಕೊಟ್ಟಿದೆ. 322 ರನ್ಗಳ ಗುರಿ ಬೆನ್ನತ್ತಿದ ಇಂಡಿಯಾ ಎ ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಕ್ಯಾಪ್ಟನ್ ಶುಭ್ಮನ್ ಕೇವಲ 25 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ತಾನು ಆಡಿದ 43 ಬಾಲ್ನಲ್ಲಿ 3 ಫೋರ್ ಗಳಿಸಿದ್ದಾರೆ. ಇವರ ಸ್ಟ್ರೈಕ್ ರೇಟ್ 58.14 ಇತ್ತು.
ಗಿಲ್ ವಿರುದ್ಧ ಫ್ಯಾನ್ಸ್ ಆಕ್ರೋಶ
ಟೀಮ್ ಇಂಡಿಯಾದ ಉಪನಾಯಕ ಶುಭ್ಮನ್ ಗಿಲ್. ಇವರು ಭಾರತ ಕ್ರಿಕೆಟ್ ತಂಡದ ಮುಂದಿನ ಕ್ಯಾಪ್ಟನ್. ದುಲೀಪ್ ಟ್ರೋಫಿಯಲ್ಲಿ ಇಂಡಿಯಾ ಎ ತಂಡವನ್ನು ಮುನ್ನಡೆಸುತ್ತಿದ್ದಾರೆ. ಒಬ್ಬ ಕ್ಯಾಪ್ಟನ್ ಆದವನು ಕ್ರೀಸ್ನಲ್ಲೇ ನಿಂತು ಮ್ಯಾಚ್ ಗೆಲ್ಲಿಸಬೇಕು. ಅದು ಬೇಜವಾಬ್ದಾರಿಯಿಂದ ಬಾಲ್ ಬಿಟ್ಟು ವಿಕೆಟ್ ಒಪ್ಪಿಸುವುದು ಎಷ್ಟು ಸರಿ? ಶೇಮ್ ಆನ್ ಯೂ ಗಿಲ್ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:ಶ್ರೇಯಸ್ ಅಯ್ಯರ್ಗೆ ಬಿಗ್ ಶಾಕ್ ಕೊಟ್ಟ ಮುಖ್ಯ ಕೋಚ್ ಗಂಭೀರ್; ಸ್ಟಾರ್ ಬ್ಯಾಟರ್ ಕಥೆ ಮುಗೀತಾ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್