ಅಧಿಕಾರಿಗಳಿಂದ ಜಿಂಕೆ ಬೇಟೆಗೆ ಬಳಸಿದ್ದ ಗನ್, ಮಚ್ಚು ಸೀಜ್
ಸಿನಿಮಾ ಸ್ಟೈಲ್ನಲ್ಲಿ ಬೇಟೆಗಾರರನ್ನ ಬಗ್ಗುಬಡಿದ ಅರಣ್ಯಾಧಿಕಾರಿ
ಅರಣ್ಯಾಧಿಕಾರಿಗಳನ್ನ ನೋಡಿ ಎದ್ದು ಬಿದ್ದು ಓಡಿದ ಕಿಲಾಡಿಗಳು
ಬೆಂಗಳೂರು: ಕಥೆ ಪುರಾಣಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಜಿಂಕೆ ಬೇಟೆ ಬಗ್ಗೆ ನಾವು ನೋಡಿರುತ್ತೇವೆ. ಕೆಲ ಕಾಡು ಪ್ರದೇಶಗಳಲ್ಲಿ ಕದ್ದು ಮುಚ್ಚಿ ಬೇಟೆಯಾಡೋ ಪ್ರಕರಣ ನಡೀತಿರುತ್ತೆ. ಆದ್ರೀಗ ರಾಜಧಾನಿಯಲ್ಲಿ ಹೈಟೆಕ್ ಜಿಂಕೆ ಬೇಟೆಯಾಡಲಾಗುತ್ತಿದೆ. ರುಚಿಯಾದ ಮಾಂಸ ತಿನ್ನೋ ಆಸೆಯಲ್ಲಿದ್ದವರು ಅರಣ್ಯಾಧಿಕಾರಿಗಳ ಎಂಟ್ರಿಗೆ ಎದ್ದು ಬಿದ್ದು ಓಡಿ ಹೋಗಿದ್ದಾರೆ.
ಇನ್ನು, ರಿಯಲ್ ಆಗಿ ಜಿಂಕೆ ಭೇಟೆಯಾಡಿದವರನ್ನು ಬೆಂಗಳೂರು ಹೊರ ವಲಯ ಆನೇಕಲ್ನಲ್ಲಿ ಬೇಟೆಗಾರರನ್ನ ಪೊಲೀಸರು ಸಿನಿಮೀಯ ಸ್ಟೈಲ್ನಲ್ಲಿ ಅರೆಸ್ಟ್ ಮಾಡಿದ್ದಾರೆ. ಆನೇಕಲ್ ವಲಯ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಖದೀಮರು ಸಿಕ್ಕಿಬಿದ್ದಿದ್ದಾರೆ. ಪ್ರವಾಸಿ ತಾಣ ಮುತ್ಯಾಲಮಡು ಬಳಿ ಜಿಂಕೆ ಬೇಟೆ ಆಡಿದ ಮೂವರನ್ನ ಅರೆಸ್ಟ್ ಮಾಡಿದ್ದಾರೆ. ಬೆಳಗಿನ ಜಾವ ಜಿಂಕೆ ಬೇಟೆ ಆಡಿದ್ದ ಆರು ಜನರ ತಂಡ, ಖಾಸಗಿ ಜಮೀನಿನಲ್ಲಿ ಮಾಂಸ ಹಂಚಿಕೊಂಡಿದ್ರು. ಮಾಂಸ ಹಂಚಿಕೊಂಡು ಬೈಕಿನಲ್ಲಿ ಹೊರಟಿದ್ದಾಗ ಜಿಂಕೆ ಹಂತಕರು ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: ನ್ಯೂಟ್ರಲಲ್ಲಿ ಇಟ್ಟು ಚಹಾ ಕುಡಿಯಲು ಹೋದ ಚಾಲಕ.. ತನ್ನಷ್ಟಕ್ಕೇ ಚಲಿಸಿ ಪಲ್ಟಿ ಹೊಡೆದ ಗ್ಯಾಸ್ ಟ್ಯಾಂಕರ್
ಮಾಂಸದ ಸಮೇತ ಖದೀಮರನ್ನ ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಬಳಿಕ ಬೇಟೆ ಆಡಿದ ಸ್ಥಳಕ್ಕೆ ಕರೆದೊಯ್ದಿದ್ದು ಅಲ್ಲಿ ಪರಿಶೀಲನೆ ನಡೆಸಿದ್ರು. ಈ ವೇಳೆ ಬೇಟೆ ಆಡಿದ ಸ್ಥಳದಲ್ಲಿ ಪೋರ್ಡ್ ಕಾರು ಹಾಗೂ ಮೂವರು ಬೇಟೆಗಾರರು ಅಲ್ಲೇ ಇದ್ರು. ಅಧಿಕಾರಿಗಳನ್ನ ನೋಡುತ್ತಿದ್ದಂತೆ ಕಾರು ಬಿಟ್ಟು ಮೂವರು ಪರಾರಿಯಾಗಿದ್ದು, ಸದ್ಯ ಬೈಕಿನಲ್ಲಿ ಸಿಕ್ಕಿಹಾಕಿಕೊಂಡ ಮೂವರನ್ನ ಅರೆಸ್ಟ್ ಮಾಡಲಾಗಿದೆ.
ಈ ಕೇಸ್ ಸಂಬಂಧ ಹಾರೋಹಳ್ಳಿ ತಾಲೂಕಿನ ಮರಳವಾಡಿ ಗ್ರಾಮದ ದೇವರಾಜು, ಆನೇಕಲ್ ತಾಲೂಕಿನ ಆದೂರು ಮೂಲದ ರಾಮಕೃಷ್ಣ, ಆನೇಕಲ್ ತಾಲೂಕಿನ ಇಂಡ್ಲವಾಡಿ ಮೂಲದ ಕಿಶೋರ್ ವಿರುದ್ಧ ದೂರು ದಾಖಲಾಗಿದೆ.1 ಒಂದು ಕಾರು 3 ಬೈಕ್, ಗನ್, ಮಚ್ಚು ಹಾಗೂ ಜಿಂಕೆ ಮಾಂಸವನ್ನೂ ವಶಕ್ಕೆ ಪಡೆಯಲಾಗಿದೆ. ಸದ್ಯ ಪರಾರಿಯಾದವರಿಗಾಗಿ ಅಧಿಕಾರಿಗಳು ಬಲೆ ಬೀಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅಧಿಕಾರಿಗಳಿಂದ ಜಿಂಕೆ ಬೇಟೆಗೆ ಬಳಸಿದ್ದ ಗನ್, ಮಚ್ಚು ಸೀಜ್
ಸಿನಿಮಾ ಸ್ಟೈಲ್ನಲ್ಲಿ ಬೇಟೆಗಾರರನ್ನ ಬಗ್ಗುಬಡಿದ ಅರಣ್ಯಾಧಿಕಾರಿ
ಅರಣ್ಯಾಧಿಕಾರಿಗಳನ್ನ ನೋಡಿ ಎದ್ದು ಬಿದ್ದು ಓಡಿದ ಕಿಲಾಡಿಗಳು
ಬೆಂಗಳೂರು: ಕಥೆ ಪುರಾಣಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಜಿಂಕೆ ಬೇಟೆ ಬಗ್ಗೆ ನಾವು ನೋಡಿರುತ್ತೇವೆ. ಕೆಲ ಕಾಡು ಪ್ರದೇಶಗಳಲ್ಲಿ ಕದ್ದು ಮುಚ್ಚಿ ಬೇಟೆಯಾಡೋ ಪ್ರಕರಣ ನಡೀತಿರುತ್ತೆ. ಆದ್ರೀಗ ರಾಜಧಾನಿಯಲ್ಲಿ ಹೈಟೆಕ್ ಜಿಂಕೆ ಬೇಟೆಯಾಡಲಾಗುತ್ತಿದೆ. ರುಚಿಯಾದ ಮಾಂಸ ತಿನ್ನೋ ಆಸೆಯಲ್ಲಿದ್ದವರು ಅರಣ್ಯಾಧಿಕಾರಿಗಳ ಎಂಟ್ರಿಗೆ ಎದ್ದು ಬಿದ್ದು ಓಡಿ ಹೋಗಿದ್ದಾರೆ.
ಇನ್ನು, ರಿಯಲ್ ಆಗಿ ಜಿಂಕೆ ಭೇಟೆಯಾಡಿದವರನ್ನು ಬೆಂಗಳೂರು ಹೊರ ವಲಯ ಆನೇಕಲ್ನಲ್ಲಿ ಬೇಟೆಗಾರರನ್ನ ಪೊಲೀಸರು ಸಿನಿಮೀಯ ಸ್ಟೈಲ್ನಲ್ಲಿ ಅರೆಸ್ಟ್ ಮಾಡಿದ್ದಾರೆ. ಆನೇಕಲ್ ವಲಯ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಖದೀಮರು ಸಿಕ್ಕಿಬಿದ್ದಿದ್ದಾರೆ. ಪ್ರವಾಸಿ ತಾಣ ಮುತ್ಯಾಲಮಡು ಬಳಿ ಜಿಂಕೆ ಬೇಟೆ ಆಡಿದ ಮೂವರನ್ನ ಅರೆಸ್ಟ್ ಮಾಡಿದ್ದಾರೆ. ಬೆಳಗಿನ ಜಾವ ಜಿಂಕೆ ಬೇಟೆ ಆಡಿದ್ದ ಆರು ಜನರ ತಂಡ, ಖಾಸಗಿ ಜಮೀನಿನಲ್ಲಿ ಮಾಂಸ ಹಂಚಿಕೊಂಡಿದ್ರು. ಮಾಂಸ ಹಂಚಿಕೊಂಡು ಬೈಕಿನಲ್ಲಿ ಹೊರಟಿದ್ದಾಗ ಜಿಂಕೆ ಹಂತಕರು ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: ನ್ಯೂಟ್ರಲಲ್ಲಿ ಇಟ್ಟು ಚಹಾ ಕುಡಿಯಲು ಹೋದ ಚಾಲಕ.. ತನ್ನಷ್ಟಕ್ಕೇ ಚಲಿಸಿ ಪಲ್ಟಿ ಹೊಡೆದ ಗ್ಯಾಸ್ ಟ್ಯಾಂಕರ್
ಮಾಂಸದ ಸಮೇತ ಖದೀಮರನ್ನ ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಬಳಿಕ ಬೇಟೆ ಆಡಿದ ಸ್ಥಳಕ್ಕೆ ಕರೆದೊಯ್ದಿದ್ದು ಅಲ್ಲಿ ಪರಿಶೀಲನೆ ನಡೆಸಿದ್ರು. ಈ ವೇಳೆ ಬೇಟೆ ಆಡಿದ ಸ್ಥಳದಲ್ಲಿ ಪೋರ್ಡ್ ಕಾರು ಹಾಗೂ ಮೂವರು ಬೇಟೆಗಾರರು ಅಲ್ಲೇ ಇದ್ರು. ಅಧಿಕಾರಿಗಳನ್ನ ನೋಡುತ್ತಿದ್ದಂತೆ ಕಾರು ಬಿಟ್ಟು ಮೂವರು ಪರಾರಿಯಾಗಿದ್ದು, ಸದ್ಯ ಬೈಕಿನಲ್ಲಿ ಸಿಕ್ಕಿಹಾಕಿಕೊಂಡ ಮೂವರನ್ನ ಅರೆಸ್ಟ್ ಮಾಡಲಾಗಿದೆ.
ಈ ಕೇಸ್ ಸಂಬಂಧ ಹಾರೋಹಳ್ಳಿ ತಾಲೂಕಿನ ಮರಳವಾಡಿ ಗ್ರಾಮದ ದೇವರಾಜು, ಆನೇಕಲ್ ತಾಲೂಕಿನ ಆದೂರು ಮೂಲದ ರಾಮಕೃಷ್ಣ, ಆನೇಕಲ್ ತಾಲೂಕಿನ ಇಂಡ್ಲವಾಡಿ ಮೂಲದ ಕಿಶೋರ್ ವಿರುದ್ಧ ದೂರು ದಾಖಲಾಗಿದೆ.1 ಒಂದು ಕಾರು 3 ಬೈಕ್, ಗನ್, ಮಚ್ಚು ಹಾಗೂ ಜಿಂಕೆ ಮಾಂಸವನ್ನೂ ವಶಕ್ಕೆ ಪಡೆಯಲಾಗಿದೆ. ಸದ್ಯ ಪರಾರಿಯಾದವರಿಗಾಗಿ ಅಧಿಕಾರಿಗಳು ಬಲೆ ಬೀಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ