ರವಿಚಂದ್ರನ್ ಅವರ ದೃಶ್ಯಂ ಸಿನಿಮಾ ಉದಾಹರಣೆ ಕೊಟ್ಟ ಹೆಚ್ಡಿಕೆ
ಶಿವಕುಮಾರ್ ನನ್ನ ಕಥಾನಾಯಕ ಮಾಡಿಕೊಂಡವ್ರೆ ಬಹಳ ಸಂತೋಷ
ಕಿಡ್ನಾಪ್ ಆದ ಮಹಿಳೆಯನ್ನು ಕರೆದುಕೊಂಡು ಬಂದು ಎಷ್ಟು ದಿನ ಆಯ್ತು?
ಬೆಂಗಳೂರು: ಮಹಿಳೆಯ ಕಿಡ್ನಾಪ್ ಕೇಸ್ನಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಜೈಲು ಸೇರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಸವಾಲು ಹಾಕಿದ್ದಾರೆ. ಇದಕ್ಕೆ ಕಥಾನಾಯಕ ಕುಮಾರಸ್ವಾಮಿ ಅವರಾಗಿದ್ದಾರೆ. ಡೈರೆಕ್ಟರ್, ಪ್ರೊಡ್ಯೂಸರ್ ಎಲ್ಲಾ ಇವರೇ ಎಂದಿದ್ದ ಡಿ.ಕೆ ಶಿವಕುಮಾರ್ ಅವರಿಗೆ ಹೆಚ್ಡಿಕೆ ತಿರುಗೇಟು ಕೊಟ್ಟಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಅವರು ನೀವೇ ನಿರ್ಮಾಪಕ, ನಿರ್ದೇಶಕ ಅನ್ನೋ ಹೇಳಿಕೆಗೆ ಪ್ರತಿಕ್ರಿಯಿಸಿರುವ ಹೆಚ್ಡಿಕೆ, ಹೌದು ನಾನೇ ಪ್ರೊಡ್ಯೂಸರ್.. ನಾನೇ ಡೈರೆಕ್ಟರ್.. ನಾನೇ ಕಥಾನಾಯಕ ಎಂದಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರದ್ದು ಮಲಯಾಳಂ ಸಿನಿಮಾ ಕನ್ನಡದಲ್ಲಿ ಬಂತು ಅಲ್ವಾ ದೃಶ್ಯಂ ಈ ತರ ಸ್ಟೋರಿಗಳು ಸಿನಿಮಾದಲ್ಲಿ ಈಗಾಗಲೇ ಬಂದು ಬಿಟ್ಟಿವೆ. ಸ್ಟೋರಿಗಳಿಗೆ ಕಥಾನಾಯಕ ಬೇಕು ಅಲ್ವಾ. ನನ್ನನ್ನೇ ಕಥಾನಾಯಕ ಮಾಡಿಕೊಂಡವ್ರೆ ಅಲ್ವಾ ಡಿಕೆಶಿವಕುಮಾರ್ ಅವರು ಸಂತೋಷ ನನಗೆ ಎಂದಿದ್ದಾರೆ.
ಹೆಚ್.ಡಿ ರೇವಣ್ಣ ಅವರ ಬಂಧನ ಪ್ರಕರಣದಲ್ಲಿ ಕಿಡ್ನಾಪ್ ಆಗಿದ್ದಾರೆ ಎನ್ನಲಾದ ಮಹಿಳೆ ಕುಟುಂಬ ಸದಸ್ಯರನ್ನ ಕೆ.ಕೆ ಗೆಸ್ಟ್ನಲ್ಲಿ ಇಟ್ಟುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಕಿಡ್ನಾಪ್ ಆದ ಮಹಿಳೆಯನ್ನು ಕರೆದುಕೊಂಡು ಬಂದು ಎಷ್ಟು ದಿನ ಆಯ್ತು. 164 ಹೇಳಿಕೆ ತೆಗೆದುಕೊಂಡಿದ್ದಾರಾ? ಆ ಮಹಿಳೆಯನ್ನು ಯಾಕೆ ಜಡ್ಜ್ ಮುಂದೆ ಹಾಜರುಪಡಿಸಿಲ್ಲ. ಆ ಮಹಿಳೆಯನ್ನು ತೋಟದ ಮನೆಯಿಂದ ಕರೆದುಕೊಂಡು ಬಂದ್ರಾ? ಇಲ್ಲಿಯವರೆಗೂ ಎಲ್ಲಿಂದ ಕರೆದುಕೊಂಡು ಬಂದ್ರು ಅನ್ನೋದು ಯಾಕೆ ಹೇಳಿಲ್ಲ.
ಇದನ್ನೂ ಓದಿ: ಹಲೋ.. ದೇವರಾಜೇಗೌಡ ಅಂತ ಯಾಕಪ್ಪಾ ಮಾತಾಡಿದೆ; ಡಿಕೆ ಮೇಲೆ ಮತ್ತೆ HDK ಅಟ್ಯಾಕ್; ಏನಂದ್ರು?
ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸೋಕೆ ಸೋಮವಾರದವರೆಗೆ ಸಮಯ ಬೇಕಂತೆ. ಇದರ ಅರ್ಥ ರೇವಣ್ಣ ಅವರನ್ನು ಮುಂದಿನ ಸೋಮವಾರದವರೆಗೆ ಜೈಲಿನಲ್ಲಿ ಇಡಬೇಕು ಅನ್ನೋದಾಗಿದೆ. ಇದರಲ್ಲಿ ಯಾರು ತಪ್ಪಿತಸ್ಥ ಅವರಿಗೆ ಶಿಕ್ಷೆ ಆಗಬೇಕಿಲ್ಲ ಇವರಿಗೆ ಇವರ ಹಠ ಸಾಧನೆ ಆಗಬೇಕು ಅಷ್ಟೇ. ಲೋಕಸಭಾ ಚುನಾವಣೆಯ ಫಲಿತಾಂಶ ಜೂನ್ 4ರ ನಂತರ ಈ ವಿಚಾರ ಚರ್ಚೆಯಲ್ಲಿ ಇರುತ್ತೋ? ಇಲ್ಲವೋ? ನೋಡೋಣ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರವಿಚಂದ್ರನ್ ಅವರ ದೃಶ್ಯಂ ಸಿನಿಮಾ ಉದಾಹರಣೆ ಕೊಟ್ಟ ಹೆಚ್ಡಿಕೆ
ಶಿವಕುಮಾರ್ ನನ್ನ ಕಥಾನಾಯಕ ಮಾಡಿಕೊಂಡವ್ರೆ ಬಹಳ ಸಂತೋಷ
ಕಿಡ್ನಾಪ್ ಆದ ಮಹಿಳೆಯನ್ನು ಕರೆದುಕೊಂಡು ಬಂದು ಎಷ್ಟು ದಿನ ಆಯ್ತು?
ಬೆಂಗಳೂರು: ಮಹಿಳೆಯ ಕಿಡ್ನಾಪ್ ಕೇಸ್ನಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಜೈಲು ಸೇರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಸವಾಲು ಹಾಕಿದ್ದಾರೆ. ಇದಕ್ಕೆ ಕಥಾನಾಯಕ ಕುಮಾರಸ್ವಾಮಿ ಅವರಾಗಿದ್ದಾರೆ. ಡೈರೆಕ್ಟರ್, ಪ್ರೊಡ್ಯೂಸರ್ ಎಲ್ಲಾ ಇವರೇ ಎಂದಿದ್ದ ಡಿ.ಕೆ ಶಿವಕುಮಾರ್ ಅವರಿಗೆ ಹೆಚ್ಡಿಕೆ ತಿರುಗೇಟು ಕೊಟ್ಟಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಅವರು ನೀವೇ ನಿರ್ಮಾಪಕ, ನಿರ್ದೇಶಕ ಅನ್ನೋ ಹೇಳಿಕೆಗೆ ಪ್ರತಿಕ್ರಿಯಿಸಿರುವ ಹೆಚ್ಡಿಕೆ, ಹೌದು ನಾನೇ ಪ್ರೊಡ್ಯೂಸರ್.. ನಾನೇ ಡೈರೆಕ್ಟರ್.. ನಾನೇ ಕಥಾನಾಯಕ ಎಂದಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರದ್ದು ಮಲಯಾಳಂ ಸಿನಿಮಾ ಕನ್ನಡದಲ್ಲಿ ಬಂತು ಅಲ್ವಾ ದೃಶ್ಯಂ ಈ ತರ ಸ್ಟೋರಿಗಳು ಸಿನಿಮಾದಲ್ಲಿ ಈಗಾಗಲೇ ಬಂದು ಬಿಟ್ಟಿವೆ. ಸ್ಟೋರಿಗಳಿಗೆ ಕಥಾನಾಯಕ ಬೇಕು ಅಲ್ವಾ. ನನ್ನನ್ನೇ ಕಥಾನಾಯಕ ಮಾಡಿಕೊಂಡವ್ರೆ ಅಲ್ವಾ ಡಿಕೆಶಿವಕುಮಾರ್ ಅವರು ಸಂತೋಷ ನನಗೆ ಎಂದಿದ್ದಾರೆ.
ಹೆಚ್.ಡಿ ರೇವಣ್ಣ ಅವರ ಬಂಧನ ಪ್ರಕರಣದಲ್ಲಿ ಕಿಡ್ನಾಪ್ ಆಗಿದ್ದಾರೆ ಎನ್ನಲಾದ ಮಹಿಳೆ ಕುಟುಂಬ ಸದಸ್ಯರನ್ನ ಕೆ.ಕೆ ಗೆಸ್ಟ್ನಲ್ಲಿ ಇಟ್ಟುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಕಿಡ್ನಾಪ್ ಆದ ಮಹಿಳೆಯನ್ನು ಕರೆದುಕೊಂಡು ಬಂದು ಎಷ್ಟು ದಿನ ಆಯ್ತು. 164 ಹೇಳಿಕೆ ತೆಗೆದುಕೊಂಡಿದ್ದಾರಾ? ಆ ಮಹಿಳೆಯನ್ನು ಯಾಕೆ ಜಡ್ಜ್ ಮುಂದೆ ಹಾಜರುಪಡಿಸಿಲ್ಲ. ಆ ಮಹಿಳೆಯನ್ನು ತೋಟದ ಮನೆಯಿಂದ ಕರೆದುಕೊಂಡು ಬಂದ್ರಾ? ಇಲ್ಲಿಯವರೆಗೂ ಎಲ್ಲಿಂದ ಕರೆದುಕೊಂಡು ಬಂದ್ರು ಅನ್ನೋದು ಯಾಕೆ ಹೇಳಿಲ್ಲ.
ಇದನ್ನೂ ಓದಿ: ಹಲೋ.. ದೇವರಾಜೇಗೌಡ ಅಂತ ಯಾಕಪ್ಪಾ ಮಾತಾಡಿದೆ; ಡಿಕೆ ಮೇಲೆ ಮತ್ತೆ HDK ಅಟ್ಯಾಕ್; ಏನಂದ್ರು?
ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸೋಕೆ ಸೋಮವಾರದವರೆಗೆ ಸಮಯ ಬೇಕಂತೆ. ಇದರ ಅರ್ಥ ರೇವಣ್ಣ ಅವರನ್ನು ಮುಂದಿನ ಸೋಮವಾರದವರೆಗೆ ಜೈಲಿನಲ್ಲಿ ಇಡಬೇಕು ಅನ್ನೋದಾಗಿದೆ. ಇದರಲ್ಲಿ ಯಾರು ತಪ್ಪಿತಸ್ಥ ಅವರಿಗೆ ಶಿಕ್ಷೆ ಆಗಬೇಕಿಲ್ಲ ಇವರಿಗೆ ಇವರ ಹಠ ಸಾಧನೆ ಆಗಬೇಕು ಅಷ್ಟೇ. ಲೋಕಸಭಾ ಚುನಾವಣೆಯ ಫಲಿತಾಂಶ ಜೂನ್ 4ರ ನಂತರ ಈ ವಿಚಾರ ಚರ್ಚೆಯಲ್ಲಿ ಇರುತ್ತೋ? ಇಲ್ಲವೋ? ನೋಡೋಣ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ