'ಮೈನಾ' ಸಿನಿಮಾದಂತಿದೆ ಪ್ರಿಯಕರನ ವಂಚನೆ ಸ್ಟೋರಿ
ವಿಶೇಷ ಚೇತನಳನ್ನ ಮದುವೆ ಆಗೋದಾಗಿ ನಂಬಿಸಿ ಮೋಸ
ಹಣ ಪಡೆದು, ಲೈಂಗಿಕವಾಗಿಯೂ ಬಳಸಿಕೊಂಡು ವಂಚಿಸಿರುವ ಲವ್ವರ್
ಬೆಂಗಳೂರು: ‘ಮೈನಾ’ ಸಿನಿಮಾದಂತಾ ಕತೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ಹೀರೋ ಹಣ ಪಡೆದು ವಂಚಿಸಿದಲ್ಲದೆ ವಿಲನ್ ಆಗಿ ಕಾಣಿಸಿಕೊಂಡಿದ್ದಾನೆ. ಏನಿದು ಘಟನೆ? ಈ ಸ್ಟೋರಿ ಓದಿ.
ವಿಶೇಷ ಚೇತನಳನ್ನ ಮದುವೆ ಆಗುವುದಾಗಿ ಹಣ ಪಡೆದು ವಂಚಿಸಿದ ಘಟನೆಯೊಂದು ನಗರದಲ್ಲಿ ಬೆಳಕಿಗೆ ಬಂದಿದೆ. ಸುರೇಂದ್ರ ಮೂರ್ತಿ ಎಂಬಾತ ವಂಚನೆ ಮಾಡಿದ ವ್ಯಕ್ತಿ.
ಮೊದಲು ಪರಿಚಯವಾಗಿ ಬಳಿಕ ಅವರಿಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಇದಾದ ಬಳಿಕ ಸುರೇಂದ್ರ ಮೂರ್ತಿ ಬ್ಯುಸಿನೆಸ್ ಮಾಡಲು ಹಣ ಬೇಕೆಂದು ಕೇಳಿದ್ದನು. ಅದಕ್ಕೆ ಯುವತಿ ಸಾಲಮಾಡಿ, ತನ್ನ ಬಳಿಯಿದ್ದ ಚಿನ್ನ ಅಡವಿಟ್ಟು ಹಣ ನೀಡಿದ್ದಳು.
ಇದನ್ನೂ ಓದಿ: ‘ಲೋಕ’ ಚುನಾವಣಾ ಪ್ರಚಾರಕ್ಕೆ AI ಆ್ಯಂಕರ್ ಪರಿಚಯಿಸಿದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ.. ಏನ್ ಪ್ಲಾನ್ ಗುರೂ!
ಆದರೆ ಹಣವೆಲ್ಲ ಪಡೆದ ಬಳಿಕ ಸುರೇಂದ್ರ ಮೂರ್ತಿ ಮದುವೆಯಾಗದೆ ವಂಚಸಿದ್ದಾನೆ. ಈ ವೇಳೆ ಲೈಂಗಿಕವಾಗಿಯೂ ಬಳಸಿಕೊಂಡಿರುವ ಆರೋಪ ಆತನ ಮೇಲೆ ಕೇಳಿಬಂದಿದೆ. ಸದ್ಯ ವಿಶೇಷ ಚೇತನ ಯುವತಿ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಎಫ್ ಐ ಆರ್ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
'ಮೈನಾ' ಸಿನಿಮಾದಂತಿದೆ ಪ್ರಿಯಕರನ ವಂಚನೆ ಸ್ಟೋರಿ
ವಿಶೇಷ ಚೇತನಳನ್ನ ಮದುವೆ ಆಗೋದಾಗಿ ನಂಬಿಸಿ ಮೋಸ
ಹಣ ಪಡೆದು, ಲೈಂಗಿಕವಾಗಿಯೂ ಬಳಸಿಕೊಂಡು ವಂಚಿಸಿರುವ ಲವ್ವರ್
ಬೆಂಗಳೂರು: ‘ಮೈನಾ’ ಸಿನಿಮಾದಂತಾ ಕತೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ಹೀರೋ ಹಣ ಪಡೆದು ವಂಚಿಸಿದಲ್ಲದೆ ವಿಲನ್ ಆಗಿ ಕಾಣಿಸಿಕೊಂಡಿದ್ದಾನೆ. ಏನಿದು ಘಟನೆ? ಈ ಸ್ಟೋರಿ ಓದಿ.
ವಿಶೇಷ ಚೇತನಳನ್ನ ಮದುವೆ ಆಗುವುದಾಗಿ ಹಣ ಪಡೆದು ವಂಚಿಸಿದ ಘಟನೆಯೊಂದು ನಗರದಲ್ಲಿ ಬೆಳಕಿಗೆ ಬಂದಿದೆ. ಸುರೇಂದ್ರ ಮೂರ್ತಿ ಎಂಬಾತ ವಂಚನೆ ಮಾಡಿದ ವ್ಯಕ್ತಿ.
ಮೊದಲು ಪರಿಚಯವಾಗಿ ಬಳಿಕ ಅವರಿಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಇದಾದ ಬಳಿಕ ಸುರೇಂದ್ರ ಮೂರ್ತಿ ಬ್ಯುಸಿನೆಸ್ ಮಾಡಲು ಹಣ ಬೇಕೆಂದು ಕೇಳಿದ್ದನು. ಅದಕ್ಕೆ ಯುವತಿ ಸಾಲಮಾಡಿ, ತನ್ನ ಬಳಿಯಿದ್ದ ಚಿನ್ನ ಅಡವಿಟ್ಟು ಹಣ ನೀಡಿದ್ದಳು.
ಇದನ್ನೂ ಓದಿ: ‘ಲೋಕ’ ಚುನಾವಣಾ ಪ್ರಚಾರಕ್ಕೆ AI ಆ್ಯಂಕರ್ ಪರಿಚಯಿಸಿದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ.. ಏನ್ ಪ್ಲಾನ್ ಗುರೂ!
ಆದರೆ ಹಣವೆಲ್ಲ ಪಡೆದ ಬಳಿಕ ಸುರೇಂದ್ರ ಮೂರ್ತಿ ಮದುವೆಯಾಗದೆ ವಂಚಸಿದ್ದಾನೆ. ಈ ವೇಳೆ ಲೈಂಗಿಕವಾಗಿಯೂ ಬಳಸಿಕೊಂಡಿರುವ ಆರೋಪ ಆತನ ಮೇಲೆ ಕೇಳಿಬಂದಿದೆ. ಸದ್ಯ ವಿಶೇಷ ಚೇತನ ಯುವತಿ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಎಫ್ ಐ ಆರ್ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ