ಇಂಡಿಯಾ ಕೂಟದಿಂದಲೂ ನಾಯ್ಡು, ನಿತೀಶ್ ಸಂಪರ್ಕಕ್ಕೆ ಯತ್ನ!
ಕೇಂದ್ರದಲ್ಲಿ ಮತ್ತೊಮ್ಮೆ ಕಿಚಡಿ ಸರ್ಕಾರ ರಚನೆ ಆಗೋದು ಪಕ್ಕಾ!
ದಶಕದ ಬಳಿಕ ಹಿಂದಿ ನಾಡಿನ ಮತದಾರನ ಹೃದಯ ಕದ್ದ ಕಾಂಗ್ರೆಸ್
ದೆಹಲಿ ಗದ್ದುಗೆ ಬದಲಾವಣೆಗಾಗಿ ಮಗ್ಗಲು ಬದಲಿಸ್ತಿದ್ಯಾ? ದಶಕದ ಬಳಿಕ ಕಾಂಗ್ರೆಸ್ಗೆ ಶುಕ್ರದೆಸೆ. ಸತತ ಸೋಲುಗಳನ್ನೇ ಹೊದ್ದು ಮಂಕಾಗಿದ್ದ ಕಾಂಗ್ರೆಸ್ಗೆ ಈಗ ಮಂಜಿನ ಹೊಳಪು. ಇತ್ತ ಮೋದಿ ಕನಸು ನುಚ್ಚುನೂರಾಗಿದ್ದು, ಕೇಂದ್ರದಲ್ಲಿ ಮತ್ತೊಮ್ಮೆ ಮೈತ್ರಿಯುಗ ಆರಂಭವಾಗಿದೆ. ಆ ಇಬ್ಬರು ನಾಯಕರಿಗೆ ಸದ್ಯ ಎಲ್ಲಿಲ್ಲದ ಬೇಡಿಕೆ. ಆ ಇಬ್ಬರೇ ದೆಹಲಿಯಲ್ಲಿ ಯಾರ ಆಡಳಿತ ಅನ್ನೋದನ್ನ ನಿರ್ಧರಿಸಲಿದ್ದಾರೆ.
ಇದನ್ನೂ ಓದಿ: 5, 10 ಲಕ್ಷ ಅಲ್ಲ.. ದೇಶದಲ್ಲೇ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳು; ಹೊಸ ದಾಖಲೆ!
ಹಾದಿ ಬದಲಾಗ್ತಿದೆ. ದಿಕ್ಕುಗಳು ಪಲ್ಲಟಗೊಳ್ತಿವೆ. ಬದಲಾಗ್ತಿರುವ ಗಾಳಿಯನ್ನ ಗಮನಿಸದ ಮೋದಿ, ಸದ್ಯ ಅರ್ಧದಾರಿಯಲ್ಲಿ ಎಡವಿದ್ದಾರೆ. ಮತದಾರ ಕೊಟ್ಟ ಚಂಚಲ ತೀರ್ಪು ಬಿಜೆಪಿಯನ್ನೇ ಚಿಂತೆಗೆ ದಬ್ಬಿದೆ. ಬಿಜೆಪಿಯನ್ನ 250ರ ಆಸುಪಾಸಿನಲ್ಲಿ ಕಟ್ಟಿ ಹಾಕಿದ ಇಂಡಿಯಾ ಕೂಟ, ಚದುರಂಗದ ಚೆಕ್ಮೇಟ್ ಇಟ್ಟಿದೆ. ಎನ್ಡಿಎ ಮಿತ್ರ ಪಡೆ 300 ಗಡಿ ದಾಟದೇ ನಿತ್ರಾಣವಾಗಿದೆ. ಬಿಜೆಪಿ ನಾಗಾಲೋಟಕ್ಕೆ ಬ್ರೇಕ್ ಬೀಳ್ತಿದ್ದಂತೆ ಪ್ರಾದೇಶಿಕ ಪಕ್ಷಗಳ ಸಂಕ್ರಮಣ ಕಾಲ ಉದಯವಾಗಿದೆ. ದಶಕದ ಬಳಿಕ ಹಿಂದಿ ನಾಡಿನ ಮತದಾರನ ಹೃದಯ ಕದ್ದ ಕಾಂಗ್ರೆಸ್ ಚೋರ, ಬಿಜೆಪಿಯ ಬೆನ್ನು ಮೂಳೆ ಮುರಿದಿದೆ.
ಕಾಂಗ್ರೆಸ್ ಮತಕ್ಕೆ ಹಾಕಿದ ಈ ಕನ್ನವೇ ಬಿಜೆಪಿಯ ಚಾರ್ ಸೌ ಪಾರ್ ಕನ್ನಡಿಯನ್ನ ಚೂರು ಮಾಡಿದೆ. ಕಳೆದ ಬಾರಿ 303 ಸ್ಥಾನ ಗೆದ್ದು ಡೆಲ್ಲಿ ಗದ್ದುಗೆಯಲ್ಲಿ ವಿರಾಜಮಾನನಾಗಿದ್ದ ನಮೋ ಟೀಂ, ಈ ಸಲ 65 ರಿಂದ 70 ಸ್ಥಾನಗಳನ್ನ ಕಳೆದುಕೊಂಡು ಮುಗ್ಗರಿಸಿದೆ. ಶತಕದ ಹೊಸ್ತಿಲಲ್ಲಿ ನಿಂತ ಕಾಂಗ್ರೆಸ್, ಭರ್ಜರಿ ಗೃಹಪ್ರವೇಶ ಮಾಡಿದೆ. ಕಳೆದ ಸಲಕ್ಕಿಂತ 46-48 ಹೆಚ್ಚುವರಿ ಕ್ಷೇತ್ರಗಳನ್ನ ತನ್ನ ದಕ್ಕಿಸಿಕೊಂಡಿದೆ. ಬಿಜೆಪಿಯ ಶಕ್ತಿಕೇಂದ್ರಗಳಾದ ಪ್ರಭು ಶ್ರೀರಾಮ ಮತ್ತು ಶ್ರೀಕೃಷ್ಣನ ಜನ್ಮಭೂಮಿ ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನ ಅಖಿಲೇಶ್ ಸೈಕಲ್ ಹಿಂದಿಕ್ಕಿದೆ. ಈ ಫಲಿತಾಂಶವೇ ದಿಕ್ಕು ಬದಲಿಸಿದ ಡೆಲ್ಲಿ ಗದ್ದುಗೆಯತ್ತ ಎಲ್ಲರೂ ದೃಷ್ಟಿನೆಡುವಂತೆ ಮಾಡಿದೆ.
ಈ ಆಟ. ಮಹತ್ವಾಕಾಂಕ್ಷಿ ಆಟ. ಬಿಜೆಪಿ ಏಕಾಂಗಿ ಅಧಿಕಾರಕ್ಕೇರೋದು ಇನ್ನೇನು ಕನಸಷ್ಟೇ. ಗದ್ದುಗೆ ಬೇಕಿದ್ರೆ ಆ ಇಬ್ಬರನ್ನ ಒಲಿಸಿಕೊಳ್ಳಲೇಬೇಕು. ಆಂಧ್ರಬಾಬುಗೆ ಈಗ ಡಬಲ್ ಶುಕ್ರದೆಸೆ. ಆಂಧ್ರ ಗೆದ್ದ ನಾಯ್ಡುಗೆ ಎಲ್ಲಿಲ್ಲ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಸದ್ಯ ಈ ನಾಯ್ಡುಗಾರು ಇಲ್ಲದೇ ಕೇಂದ್ರದಲ್ಲಿ ಅಧಿಕಾರ ನಡೆಸೋದು ಇಂಪಾಸಿಬಲ್. ಇಂದು 16 ಕ್ಷೇತ್ರಗಳನ್ನ ಗೆದ್ದ ಟಿಡಿಪಿ, 1999ರ ಬಳಿಕ ಮತ್ತೊಮ್ಮೆ ದೇಶದಲ್ಲಿ ಕಿಂಗ್ಮೇಕರ್ ರೂಲ್ ಪ್ಲೇ ಮಾಡಲಿದೆ. ಇತ್ತ, ದಶಕದಿಂದ ತನ್ನ ಸರದಿಗಾಗಿ ಕಾದು ಕಾದು ಸುಸ್ತಾದ ನಿತೀಶ್ ಕುಮಾರ್ಗೂ ಅದೃಷ್ಟ ಅರಸಿ ಬಂದಂತೆ ಕಾಣಿಸ್ತಿದೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬಾಣ, 12 ಕ್ಷೇತ್ರಗಳನ್ನ ಶಿಕಾರಿ ಆಡಿದೆ. ಹೀಗಾಗಿ ದೇಶದ ಎರಡು ಕೂಟಗಳು ಈ ಇಬ್ಬರು ನಾಯಕರ ಹಿಂದೆ ಬಿದ್ದಿವೆ. ನಾಯ್ಡುಗೆ ನಿರಂತರ ಕರೆಗಳ ಸುರಿಮಳೆ ಆಗ್ತಿದೆ. ಬಿಜೆಪಿ ಜೊತೆಗೆ ಹೆಜ್ಜೆ ಹಾಕಿ ಎಲೆಕ್ಷನ್ ಎದುರಿಸಿದ ಇಬ್ಬರೂ ನಾಯಕರು ಎತ್ತ ಹೋಗ್ತಾರೆ, ಅತ್ತ ಸರ್ಕಾರ ಅನ್ನೋದು ಕನ್ಫರ್ಮ್ ಆಗಿದೆ.
ಇದನ್ನೂ ಓದಿ: ತ್ರಿವಿಕ್ರಮನಿಗೆ ಮಣ್ಣು ಮುಕ್ಕಿಸಿದ ಕಂಗನಾ ರಣಾವತ್; ಬಾಲಿವುಡ್ ಸೆಲೆಬ್ರಿಟಿಗಳ ಲಕ್ ಬದಲಾಯ್ತು!
ಚಂದ್ರಬಾಬು ನಾಯ್ಡುಗೆ ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಪ್ರಮುಖ ನಾಯಕರು ಕರೆ ಮಾಡಿ ದೆಹಲಿಗೆ ಬರುವಂತೆ ಮನವಿ ಮಾಡಿದ್ದಾರೆ. ಎನ್ಡಿಎ ಕೂಟದ ಸಂಚಾಲಕನ ಆಫರ್ ಸಹ ನೀಡಲಾಗಿದೆ. ಮತ್ತೊಂದೆಡೆ ಇಂಡಿಯಾ ಕೂಟದಿಂದಲೂ ನಾಯ್ಡು ಹಾಗೂ ನಿತೀಶ್ ಸಂಪರ್ಕಕ್ಕೆ ಯತ್ನ ನಡೆದಿದೆ. ಶರದ್ ಪವಾರ್ ಕಡೆಯಿಂದ ಒಂದು ಪ್ರಯತ್ನ ನಡೀತಿದ್ರೆ, ಕೆ.ಸಿ. ವೇಣುಗೋಪಾಲ್ ಸಹ ಸಂಪರ್ಕ ಕ್ರಾಂತಿಗಾಗಿ ಯತ್ನಿಸಿದ್ದಾರೆ. ನಿತೀಶ್ಗೆ ಇಂಡಿಯಾ ಕೂಟ, ಉಪ ಪ್ರಧಾನಿ ಹುದ್ದೆ ಆಫರ್ನ್ನೇ ನೀಡಿಬಿಟ್ಟಿದೆ. ಇಲ್ಲಿ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆಯನ್ನ ನಾಯ್ಡುಗೆ ಕೊಡ್ಲಾಗಿದೆ. ಆದ್ರೆ ಉಭಯ ಪಕ್ಷಗಳೂ ಎನ್ಡಿಎ ಜೊತೆಗಿರೋದಾಗಿ ಹೇಳ್ಕೊಂಡಿವೆ. ಒಟ್ಟಾರೆ ಡೆಲ್ಲಿ ದರ್ಬಾರ್ಗಳಲ್ಲಿ ಪವರ್ ಪ್ಲೇ ಆಟ ರೋಚಕವಾಗಿ ಶುರುವಾಗಿದೆ. ಬಿಜೆಪಿಯ ಕ್ಷೇತ್ರಗಳ ಕುಸಿತ ಪ್ರಾದೇಶಿಕ ಪಕ್ಷಗಳಿಗೆ ಭಾರೀ ಬಾಡೂಟವನ್ನೇ ಕಲ್ಪಿಸಿದೆ. ದಶಕದ ಬಳಿಕ ಕೇಂದ್ರದಲ್ಲಿ ಮತ್ತೊಮ್ಮೆ ಕಿಚಡಿ ಸರ್ಕಾರ ರಚನೆ ಆಗೋದು ಪಕ್ಕಾ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಂಡಿಯಾ ಕೂಟದಿಂದಲೂ ನಾಯ್ಡು, ನಿತೀಶ್ ಸಂಪರ್ಕಕ್ಕೆ ಯತ್ನ!
ಕೇಂದ್ರದಲ್ಲಿ ಮತ್ತೊಮ್ಮೆ ಕಿಚಡಿ ಸರ್ಕಾರ ರಚನೆ ಆಗೋದು ಪಕ್ಕಾ!
ದಶಕದ ಬಳಿಕ ಹಿಂದಿ ನಾಡಿನ ಮತದಾರನ ಹೃದಯ ಕದ್ದ ಕಾಂಗ್ರೆಸ್
ದೆಹಲಿ ಗದ್ದುಗೆ ಬದಲಾವಣೆಗಾಗಿ ಮಗ್ಗಲು ಬದಲಿಸ್ತಿದ್ಯಾ? ದಶಕದ ಬಳಿಕ ಕಾಂಗ್ರೆಸ್ಗೆ ಶುಕ್ರದೆಸೆ. ಸತತ ಸೋಲುಗಳನ್ನೇ ಹೊದ್ದು ಮಂಕಾಗಿದ್ದ ಕಾಂಗ್ರೆಸ್ಗೆ ಈಗ ಮಂಜಿನ ಹೊಳಪು. ಇತ್ತ ಮೋದಿ ಕನಸು ನುಚ್ಚುನೂರಾಗಿದ್ದು, ಕೇಂದ್ರದಲ್ಲಿ ಮತ್ತೊಮ್ಮೆ ಮೈತ್ರಿಯುಗ ಆರಂಭವಾಗಿದೆ. ಆ ಇಬ್ಬರು ನಾಯಕರಿಗೆ ಸದ್ಯ ಎಲ್ಲಿಲ್ಲದ ಬೇಡಿಕೆ. ಆ ಇಬ್ಬರೇ ದೆಹಲಿಯಲ್ಲಿ ಯಾರ ಆಡಳಿತ ಅನ್ನೋದನ್ನ ನಿರ್ಧರಿಸಲಿದ್ದಾರೆ.
ಇದನ್ನೂ ಓದಿ: 5, 10 ಲಕ್ಷ ಅಲ್ಲ.. ದೇಶದಲ್ಲೇ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳು; ಹೊಸ ದಾಖಲೆ!
ಹಾದಿ ಬದಲಾಗ್ತಿದೆ. ದಿಕ್ಕುಗಳು ಪಲ್ಲಟಗೊಳ್ತಿವೆ. ಬದಲಾಗ್ತಿರುವ ಗಾಳಿಯನ್ನ ಗಮನಿಸದ ಮೋದಿ, ಸದ್ಯ ಅರ್ಧದಾರಿಯಲ್ಲಿ ಎಡವಿದ್ದಾರೆ. ಮತದಾರ ಕೊಟ್ಟ ಚಂಚಲ ತೀರ್ಪು ಬಿಜೆಪಿಯನ್ನೇ ಚಿಂತೆಗೆ ದಬ್ಬಿದೆ. ಬಿಜೆಪಿಯನ್ನ 250ರ ಆಸುಪಾಸಿನಲ್ಲಿ ಕಟ್ಟಿ ಹಾಕಿದ ಇಂಡಿಯಾ ಕೂಟ, ಚದುರಂಗದ ಚೆಕ್ಮೇಟ್ ಇಟ್ಟಿದೆ. ಎನ್ಡಿಎ ಮಿತ್ರ ಪಡೆ 300 ಗಡಿ ದಾಟದೇ ನಿತ್ರಾಣವಾಗಿದೆ. ಬಿಜೆಪಿ ನಾಗಾಲೋಟಕ್ಕೆ ಬ್ರೇಕ್ ಬೀಳ್ತಿದ್ದಂತೆ ಪ್ರಾದೇಶಿಕ ಪಕ್ಷಗಳ ಸಂಕ್ರಮಣ ಕಾಲ ಉದಯವಾಗಿದೆ. ದಶಕದ ಬಳಿಕ ಹಿಂದಿ ನಾಡಿನ ಮತದಾರನ ಹೃದಯ ಕದ್ದ ಕಾಂಗ್ರೆಸ್ ಚೋರ, ಬಿಜೆಪಿಯ ಬೆನ್ನು ಮೂಳೆ ಮುರಿದಿದೆ.
ಕಾಂಗ್ರೆಸ್ ಮತಕ್ಕೆ ಹಾಕಿದ ಈ ಕನ್ನವೇ ಬಿಜೆಪಿಯ ಚಾರ್ ಸೌ ಪಾರ್ ಕನ್ನಡಿಯನ್ನ ಚೂರು ಮಾಡಿದೆ. ಕಳೆದ ಬಾರಿ 303 ಸ್ಥಾನ ಗೆದ್ದು ಡೆಲ್ಲಿ ಗದ್ದುಗೆಯಲ್ಲಿ ವಿರಾಜಮಾನನಾಗಿದ್ದ ನಮೋ ಟೀಂ, ಈ ಸಲ 65 ರಿಂದ 70 ಸ್ಥಾನಗಳನ್ನ ಕಳೆದುಕೊಂಡು ಮುಗ್ಗರಿಸಿದೆ. ಶತಕದ ಹೊಸ್ತಿಲಲ್ಲಿ ನಿಂತ ಕಾಂಗ್ರೆಸ್, ಭರ್ಜರಿ ಗೃಹಪ್ರವೇಶ ಮಾಡಿದೆ. ಕಳೆದ ಸಲಕ್ಕಿಂತ 46-48 ಹೆಚ್ಚುವರಿ ಕ್ಷೇತ್ರಗಳನ್ನ ತನ್ನ ದಕ್ಕಿಸಿಕೊಂಡಿದೆ. ಬಿಜೆಪಿಯ ಶಕ್ತಿಕೇಂದ್ರಗಳಾದ ಪ್ರಭು ಶ್ರೀರಾಮ ಮತ್ತು ಶ್ರೀಕೃಷ್ಣನ ಜನ್ಮಭೂಮಿ ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನ ಅಖಿಲೇಶ್ ಸೈಕಲ್ ಹಿಂದಿಕ್ಕಿದೆ. ಈ ಫಲಿತಾಂಶವೇ ದಿಕ್ಕು ಬದಲಿಸಿದ ಡೆಲ್ಲಿ ಗದ್ದುಗೆಯತ್ತ ಎಲ್ಲರೂ ದೃಷ್ಟಿನೆಡುವಂತೆ ಮಾಡಿದೆ.
ಈ ಆಟ. ಮಹತ್ವಾಕಾಂಕ್ಷಿ ಆಟ. ಬಿಜೆಪಿ ಏಕಾಂಗಿ ಅಧಿಕಾರಕ್ಕೇರೋದು ಇನ್ನೇನು ಕನಸಷ್ಟೇ. ಗದ್ದುಗೆ ಬೇಕಿದ್ರೆ ಆ ಇಬ್ಬರನ್ನ ಒಲಿಸಿಕೊಳ್ಳಲೇಬೇಕು. ಆಂಧ್ರಬಾಬುಗೆ ಈಗ ಡಬಲ್ ಶುಕ್ರದೆಸೆ. ಆಂಧ್ರ ಗೆದ್ದ ನಾಯ್ಡುಗೆ ಎಲ್ಲಿಲ್ಲ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಸದ್ಯ ಈ ನಾಯ್ಡುಗಾರು ಇಲ್ಲದೇ ಕೇಂದ್ರದಲ್ಲಿ ಅಧಿಕಾರ ನಡೆಸೋದು ಇಂಪಾಸಿಬಲ್. ಇಂದು 16 ಕ್ಷೇತ್ರಗಳನ್ನ ಗೆದ್ದ ಟಿಡಿಪಿ, 1999ರ ಬಳಿಕ ಮತ್ತೊಮ್ಮೆ ದೇಶದಲ್ಲಿ ಕಿಂಗ್ಮೇಕರ್ ರೂಲ್ ಪ್ಲೇ ಮಾಡಲಿದೆ. ಇತ್ತ, ದಶಕದಿಂದ ತನ್ನ ಸರದಿಗಾಗಿ ಕಾದು ಕಾದು ಸುಸ್ತಾದ ನಿತೀಶ್ ಕುಮಾರ್ಗೂ ಅದೃಷ್ಟ ಅರಸಿ ಬಂದಂತೆ ಕಾಣಿಸ್ತಿದೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬಾಣ, 12 ಕ್ಷೇತ್ರಗಳನ್ನ ಶಿಕಾರಿ ಆಡಿದೆ. ಹೀಗಾಗಿ ದೇಶದ ಎರಡು ಕೂಟಗಳು ಈ ಇಬ್ಬರು ನಾಯಕರ ಹಿಂದೆ ಬಿದ್ದಿವೆ. ನಾಯ್ಡುಗೆ ನಿರಂತರ ಕರೆಗಳ ಸುರಿಮಳೆ ಆಗ್ತಿದೆ. ಬಿಜೆಪಿ ಜೊತೆಗೆ ಹೆಜ್ಜೆ ಹಾಕಿ ಎಲೆಕ್ಷನ್ ಎದುರಿಸಿದ ಇಬ್ಬರೂ ನಾಯಕರು ಎತ್ತ ಹೋಗ್ತಾರೆ, ಅತ್ತ ಸರ್ಕಾರ ಅನ್ನೋದು ಕನ್ಫರ್ಮ್ ಆಗಿದೆ.
ಇದನ್ನೂ ಓದಿ: ತ್ರಿವಿಕ್ರಮನಿಗೆ ಮಣ್ಣು ಮುಕ್ಕಿಸಿದ ಕಂಗನಾ ರಣಾವತ್; ಬಾಲಿವುಡ್ ಸೆಲೆಬ್ರಿಟಿಗಳ ಲಕ್ ಬದಲಾಯ್ತು!
ಚಂದ್ರಬಾಬು ನಾಯ್ಡುಗೆ ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಪ್ರಮುಖ ನಾಯಕರು ಕರೆ ಮಾಡಿ ದೆಹಲಿಗೆ ಬರುವಂತೆ ಮನವಿ ಮಾಡಿದ್ದಾರೆ. ಎನ್ಡಿಎ ಕೂಟದ ಸಂಚಾಲಕನ ಆಫರ್ ಸಹ ನೀಡಲಾಗಿದೆ. ಮತ್ತೊಂದೆಡೆ ಇಂಡಿಯಾ ಕೂಟದಿಂದಲೂ ನಾಯ್ಡು ಹಾಗೂ ನಿತೀಶ್ ಸಂಪರ್ಕಕ್ಕೆ ಯತ್ನ ನಡೆದಿದೆ. ಶರದ್ ಪವಾರ್ ಕಡೆಯಿಂದ ಒಂದು ಪ್ರಯತ್ನ ನಡೀತಿದ್ರೆ, ಕೆ.ಸಿ. ವೇಣುಗೋಪಾಲ್ ಸಹ ಸಂಪರ್ಕ ಕ್ರಾಂತಿಗಾಗಿ ಯತ್ನಿಸಿದ್ದಾರೆ. ನಿತೀಶ್ಗೆ ಇಂಡಿಯಾ ಕೂಟ, ಉಪ ಪ್ರಧಾನಿ ಹುದ್ದೆ ಆಫರ್ನ್ನೇ ನೀಡಿಬಿಟ್ಟಿದೆ. ಇಲ್ಲಿ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆಯನ್ನ ನಾಯ್ಡುಗೆ ಕೊಡ್ಲಾಗಿದೆ. ಆದ್ರೆ ಉಭಯ ಪಕ್ಷಗಳೂ ಎನ್ಡಿಎ ಜೊತೆಗಿರೋದಾಗಿ ಹೇಳ್ಕೊಂಡಿವೆ. ಒಟ್ಟಾರೆ ಡೆಲ್ಲಿ ದರ್ಬಾರ್ಗಳಲ್ಲಿ ಪವರ್ ಪ್ಲೇ ಆಟ ರೋಚಕವಾಗಿ ಶುರುವಾಗಿದೆ. ಬಿಜೆಪಿಯ ಕ್ಷೇತ್ರಗಳ ಕುಸಿತ ಪ್ರಾದೇಶಿಕ ಪಕ್ಷಗಳಿಗೆ ಭಾರೀ ಬಾಡೂಟವನ್ನೇ ಕಲ್ಪಿಸಿದೆ. ದಶಕದ ಬಳಿಕ ಕೇಂದ್ರದಲ್ಲಿ ಮತ್ತೊಮ್ಮೆ ಕಿಚಡಿ ಸರ್ಕಾರ ರಚನೆ ಆಗೋದು ಪಕ್ಕಾ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ