/newsfirstlive-kannada/media/post_attachments/wp-content/uploads/2024/06/GAMBHIR-3.jpg)
ಟೀಮ್ ಇಂಡಿಯಾದ ಹೊಸ ಮುಖ್ಯ ಕೋಚ್ ಯಾರು? ಈ ಪ್ರಶ್ನೆಗೆ ಉತ್ತರ ಅತಿ ಶೀಘ್ರದಲ್ಲಿ ಬಹಿರಂಗಗೊಳ್ಳಲಿದೆ. ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆ ಖಚಿತವಾಗಿದ್ದು, ಅಧಿಕೃತ ಮುದ್ರೆ ಮಾತ್ರ ಬಾಕಿ ಇದೆ. ಕೋಚ್​ ಹುದ್ದೆಯ ಆಫರ್​ ಅನ್ನ ಗಂಭೀರ್​ ಸುಮ್ಮನೆ ಒಪ್ಪಿಕೊಂಡಿಲ್ಲ. ಬಿಗ್ ಬಾಸ್​ಗಳ ಮುಂದೆ ಕೆಲ ಡಿಮ್ಯಾಂಡ್​ಗಳಿಟ್ಟಿದ್ದಾರೆ.
ಹೆಡ್​ ಮಾಸ್ಟರ್​ ರಾಹುಲ್ ದ್ರಾವಿಡ್ ಅಧಿಕಾರಾವಧಿ ಈ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಬಳಿಕ ನಾನು ಮುಂದುವರೆಯಲ್ಲ ಅಂತಾ ದ್ರಾವಿಡ್​ ಖಡಾಖಂಡಿತವಾಗಿ ಹೇಳಿದ್ದಾರೆ. ಟೀಮ್ ಇಂಡಿಯಾದ ಟಿ20 ವಿಶ್ವಕಪ್​ ಪಯಣ ಮುಗಿದ ಬೆನ್ನಲ್ಲೇ ದಿ ವಾಲ್​​ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಈ ಬಳಿಕ ನೂತನ ಹೆಡ್​ ಕೋಚ್ ಆಗಿ ಗೌತಮ್​ ಗಂಭೀರ್ ಪದಗ್ರಹಣ ಫಿಕ್ಸ್​ ಆಗಿದೆ.
ಇದನ್ನೂ ಓದಿ:ಚಿಕ್ಕಣ್ಣ, ಯಶಸ್ ಸೂರ್ಯ ಮಾತ್ರವಲ್ಲ.. ದರ್ಶನ್ ಪಾರ್ಟಿಯಲ್ಲಿ ಸ್ಟಾರ್ ನಿರ್ಮಾಪಕ..?
ಕೋಚ್ ಆಗೋಕೆ ಗಂಭೀರ್ ಇಟ್ರು ಡಿಮ್ಯಾಂಡ್..!
ಕೋಚ್​ ಹುಡುಕಾಟದಲ್ಲಿದ್ದ ಬಿಸಿಸಿಐ, ಈಗ ಗಂಭೀರ್​​ನ ಪಟ್ಟಾಭೀಷೇಕ ಕಟ್ಟಲು ಮುಂದಾಗಿದೆ. ಇದಕ್ಕೂ ಮುನ್ನ ಗಂಭೀರ್ ಜೊತೆ ಬಿಸಿಸಿಐ ಮಾತುಕತೆಯನ್ನು ನಡೆಸಿದೆ. ಈ ವೇಳೆ ಗೌತಮ್ ಗಂಭೀರ್, ಬಿಸಿಸಿಐ ಬಿಗ್​ಬಾಸ್​ಗಳ ಮುಂದೆ ಕೆಲ ಡಿಮ್ಯಾಂಡ್​ ಇಟ್ಟಿದ್ದಾರೆ ಎನ್ನಲಾಗಿದೆ. ತಮ್ಮ ಷರತ್ತುಗಳಿಗೆ ಒಪ್ಪಿದ್ರೆ ಮಾತ್ರ, ಅಧಿಕಾರ ವಹಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಇದಕ್ಕೆ ಬಿಸಿಸಿಐ ಬಿಗ್​ಬಾಸ್​ಗಳೂ ಕೂಡ ಗ್ರೀನ್​​​ ಸಿಗ್ನಲ್ ನೀಡಿದ್ದು, ಈ ಬಳಿಕವೇ ಗಂಭೀರ್, ಟೀಮ್ ಇಂಡಿಯಾದ ಹೆಡ್ ಕೋಚ್ ಆಗಲು ಒಪ್ಪಿಗೆ ಸೂಚಿಸಿದ್ದಾರೆ.
ಗಂಭೀರ್ ಡಿಮ್ಯಾಂಡ್..!
- ಸಪೋರ್ಟಿಂಗ್ ಸ್ಟಾಫ್ ಬದಲಾವಣೆ
- ತನಗೆ ಬೇಕಾದ ಸಪೋರ್ಟಿಂಗ್ ಸ್ಟಾಫ್ ಆಯ್ಕೆ
- ತಂಡದಲ್ಲಿ ಕೆಲ ಬದಲಾವಣೆ ಮಾಡಲು ಚಿಂತನೆ
- ನಾಯಕತ್ವ ಬದಲಾವಣೆಗೂ ಇಟ್ಟಿದ್ದಾರೆ ಷರತ್ತು
- 3.5 ವರ್ಷ ಬಿಸಿಸಿಐ ತನ್ನ ನಿರ್ಣಯ ತಿರಸ್ಕರಿಸಬಾರದು
- ಐಸಿಸಿ ಟೂರ್ನಿಗಳನ್ನ ಗೆಲ್ಲಲು ಪ್ಲಾನ್ ಅಂಡ್ ನೆರವು ಕಲ್ಪಿಸಬೇಕು
ಗೌತಮ್​ ಗಂಭೀರ್​​ ಈ ರೀತಿಯ ಷರತ್ತುಗಳೆ ಬದಲಾವಣೆಯ ಮನ್ಸೂಚನೆಯನ್ನ ನೀಡಿವೆ. ಗೌತಿ ಹೆಡ್​ ಕೋಚ್​ ಆದ ಬಳಿಕ ಕೆಲ ಆಟಗಾರರು ಹಾಗೂ ಸಂಪೋರ್ಟಿಂಗ್ ಸ್ಟಾಫ್​​ಗೆ​​​ ಗೇಟ್​​​ಪಾಸ್ ಗ್ಯಾರಂಟಿಯಾಗಿದೆ.
ಇದನ್ನೂ ಓದಿ:ದರ್ಶನ್ ತನಿಖೆಯಲ್ಲಿ ಪೊಲೀಸರಿಂದ ಮಹತ್ವದ ನಿರ್ಧಾರ.. ಇವತ್ತು ಮೈಸೂರಿಗೆ ಕರ್ಕೊಂಡು ಬರ್ತಾರೆ..!
- ವಿಕ್ರಮ್ ರಾಥೋರ್​​, ಬ್ಯಾಟಿಂಗ್ ಕೋಚ್​​ಗೆ ಕೊಕ್
- ಪರಾಸ್ ಮಾಂಬ್ರೆ, ಬೌಲಿಂಗ್ ಕೋಚ್​ಗೆ ಕೊಕ್
- ಟಿ.ದಿಲೀಪ್, ಫೀಲ್ಡಿಂಗ್ ಕೋಚ್​ಗೆ ಕೊಕ್
- ಗೌತಮ್​​ ಗಂಭೀರ್ ಪಡೆಯಲ್ಲಿ ಯಾರಿಗೆ ಚಾನ್ಸ್..?
ಹಾಲಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ಹುದ್ದೆ ತ್ಯಜಿಸುವ ನಿರ್ಧಾರವನ್ನ ಈಗಾಗಲೇ ತಿಳಿಸಿದ್ದಾರೆ. ಆ ಬಳಿಕ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್​, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ, ಫೀಲ್ಡಿಂಗ್ ಕೋಚ್ ಟಿ ದಿಲೀಪ್​ ಬದಲಾಗೋದು ಪಕ್ಕಾ ಆಗಿದೆ. ಗಂಭೀರ್ ಕೋಚ್ ಅದ್ಮೇಲೆ ಯಾರನ್ನ ಸಂಪೋರ್ಟಿಂಗ್ ಸ್ಟಾಫ್​ ಆಗಿ ಕರೆತರ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ. ಕೆಕೆಆರ್​ ಸಂಪೋರ್ಟಿಂಗ್ ಸ್ಟಾಫ್​ ಅನ್ನೇ ಹೈಜಾಕ್ ಮಾಡ್ತಾರಾ? ಡೆಲ್ಲಿ ಮಾಜಿ ಕ್ರಿಕೆಟಿಗರ ಮೇಲೆ ಕೃಪೆ ತೋರ್ತಾರಾ..? ಇಲ್ಲ ತನ್ನ ಜೊತೆ ಆಡಿದ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗರ ಮೊರೆ ಹೋಗ್ತಾರಾ ಅನ್ನೋದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆ ಆಗಿದೆ.
ಇದನ್ನೂ ಓದಿ:ಮಿಷನ್ ಅನ್​ಸ್ಟಾಪಬಲ್.. ಟೀಂ ಇಂಡಿಯಾ ಟಾರ್ಗೆಟ್ 5.. ಇನ್ಮೇಲೆ ಬೇರೆಯದ್ದೇ ಲೆಕ್ಕ..!
ಬದಲಾಗುತ್ತಾ ಟೀಮ್ ಇಂಡಿಯಾ ಆಯ್ಕೆಯ ಮಾನದಂಡ..?
ನೂತನ ಕೋಚ್​ ಆಗಮನದ ವೇಳೆ ತಂಡದಲ್ಲಿ ಕೋಚಿಂಗ್ ಸ್ಟಾಫ್​ನಲ್ಲಿ ಬದಲಾವಣೆ ಸಹಜ. ಆದ್ರೆ, ಟೀಮ್ ಇಂಡಿಯಾ ಆಯ್ಕೆಗೆ ಮಾನದಂಡವಾಗಿರುವ ಯೋ ಯೋ ಟೆಸ್ಟ್​ ಬಗ್ಗೆಯೇ ಗಂಭೀರ್​ ಅಪಸ್ವರ ಎತ್ತಿದ್ದಾರೆ. ಆಟಗಾರರ ಪ್ರತಿಭೆ, ಹೋರಾಟದ ಕೌಶಲ್ಯದ ಆಧಾರದ ಮೇಲೆ ಆಯ್ಕೆ ಮಾಡಬೇಕು ಎಂದಿದ್ದಾರೆ. ಹೀಗಾಗಿ ಗಂಭೀರ್, ಕೋಚ್ ಹುದ್ದೆಗೇರಿದ ಬಳಿಕ ಟೀಮ್ ಇಂಡಿಯಾದ ಆಯ್ಕೆಯ ಮಾನದಂಡವೇ ಬದಲಾಗುತ್ತಾ ಎಂಬ ಪ್ರಶ್ನೆಯೂ ಹಲವರಲ್ಲಿ ಕಾಡತೊಡಗಿದೆ.
ಇದನ್ನೂ ಓದಿ:ಚಿಕ್ಕಣ್ಣರನ್ನೂ ಫಜೀತಿಗೆ ಸಿಲುಕಿಸಿದ ದರ್ಶನ್.. ಪೊಲೀಸರು ಹಾಸ್ಯ ನಟನಿಗೆ ಕೇಳಿದ ಖಡಕ್ ಪ್ರಶ್ನೆಗಳೇನು?
ಒಟ್ನಲ್ಲಿ.. ಗಂಭೀರ್ ಭಾರತ ತಂಡದ ಕೋಚ್ ಹುದ್ದೆಗೇರುತ್ತಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದೆ. ಟೀಮ್ ಇಂಡಿಯಾದಲ್ಲಿ ಯಾವೆಲ್ಲಾ ಬದಲಾವಣೆಗಳಾಗ್ತವೆ.? ಅನ್ನೋ ಪ್ರಶ್ನೆ ಫ್ಯಾನ್ಸ್​ ತಲೆಯಲ್ಲಿ ಗಿರಕಿ ಹೊಡೀತಿರೋದಂತೂ ಸುಳ್ಳಲ್ಲ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್