ನಿರಂತರ ಪ್ರಯೋಗದಿಂದ ತಂಡವನ್ನು ಹಾಳು ಮಾಡ್ತಿದ್ದಾರಾ ಮುಖ್ಯಕೋಚ್..?
ರಾಹುಲ್ ದ್ರಾವಿಡ್ ಕಟ್ಟಿದ ಅದ್ಭುತ ತಂಡವನ್ನು ಒಡೆಯುತ್ತಿದ್ದಾರೆಂಬ ಆರೋಪ
ಶ್ರೀಲಂಕಾ ವಿರುದ್ಧ ಸೋಲುತ್ತಿದ್ದಂತೆಯೇ ಗಂಭೀರ್ ಸಿಕ್ಕಾಪಟ್ಟೆ ಟ್ರೋಲ್
ಟೀಮ್ ಇಂಡಿಯಾದ ಶ್ರೀಲಂಕಾ ಪ್ರವಾಸ ಗೌತಮ್ ಗಂಭೀರ್ಗೆ ಬಹಳ ಮುಖ್ಯವಾಗಿತ್ತು. ಯಾಕೆಂದರೆ ಮುಖ್ಯ ಕೋಚ್ ಆಗಿ ಚಾರ್ಜ್ ತೆಗೆದುಕೊಂಡ ಮೇಲೆ ಮೊದಲ ಪ್ರವಾಸ ಆಗಿದೆ. ಟಿ-20 ಸರಣಿಯಲ್ಲಿ 2-1 ಅಂತರದಿಂದ ಗೆಲುವು ಸಾಧಿಸಿದ್ದರೂ, ಏಕದಿನ ಸರಣಿಯಲ್ಲಿ ಭಾರೀ ಮುಖಭಂಗ ಅನುಭವಿಸಿದೆ.
ನಿನ್ನೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ 32 ರನ್ಗಳಿಂದ ಭಾರತ ತಂಡವನ್ನು ಸೋಲಿಸಿದೆ. ಬ್ಯಾಟ್ಸ್ಮನ್ಗಳ ಕೆಟ್ಟ ಪ್ರದರ್ಶನದಿಂದಾಗಿ ಟೀಂ ಇಂಡಿಯಾ ಸೋಲನ್ನು ಕಂಡಿದೆ. ಆದರೆ ಟೀಕೆ ಮಾತ್ರ ಗೌತಮ್ ಗಂಭೀರ್ ಮೇಲೆ ಕೇಳಿಬಂದಿದೆ. ತಂಡ ಸೋಲುತ್ತಿದ್ದಂತೆಯೇ ಗೌತಮ್ ಗಂಭೀರ್ ಟ್ರೋಲ್ ಆಗುತ್ತಿದ್ದಾರೆ.
ಇದನ್ನೂ ಓದಿ:ಸೂರ್ಯ, ಬೂಮ್ರಾ ಗ್ಯಾರಂಟಿ.. ಈ ನಾಲ್ಕು ಆಟಗಾರರ ರಿಟೈನ್ ಮಾಡಿಕೊಳ್ಳಲು MI ನಿರ್ಧಾರ
ಅಂದ್ಹಾಗೆ ಗಂಭೀರ್ ಕೋಚ್ ಆದ್ಮೇಲೆ ತಂಡದಲ್ಲಿ ಅನೇಕ ಬದಲಾವಣೆಗಳು ಆಗಿವೆ. ಮೂರು ಮಾದರಿಯಲ್ಲಿ ಆಡುವ ಕೆಲವು ಆಟಗಾರರು ಮಾತ್ರ ಇದ್ದಾರೆ. ಏಕದಿನ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ನಿರಂತರ ಬದಲಾವಣೆಗಳು ಆಗುತ್ತಿವೆ. ಟಿ20 ಮಾದರಿಗೆ ಹೊಸ ತಂಡವನ್ನು ಸಿದ್ಧಪಡಿಸಲಾಗಿದೆ. ಈ ರೀತಿಯ ಬದಲಾವಣೆಯಿಂದಲೇ ತಂಡ ಸೋತಿದೆ. ರಾಹುಲ್ ದ್ರಾವಿಡ್ ಕಟ್ಟಿದ ತಂಡದಲ್ಲಿ ಗಂಭೀರ್ ಅನಗತ್ಯ ಪ್ರಯೋಗ ಮಾಡ್ತಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ.
ಬ್ಯಾಟ್ಸ್ಮನ್ಗಳು ತಮ್ಮ ಸ್ಲಾಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವಾಗ ಪ್ರಯೋಗ ಯಾಕೆ ಮಾಡಬೇಕು ಎಂದು ಇನ್ನು ಕೆಲವರು ಪ್ರಶ್ನೆ ಮಾಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್.ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಸ್ಥಾನವನ್ನು ಬದಲಾಯಿಸಬೇಕು ಎಂಬ ಸಲಹೆಗಳು ಕೂಡ ಕೇಳಿಬಂದಿದೆ.
ಇದನ್ನೂ ಓದಿ:ಮ್ಯಾಕ್ಸ್ವೆಲ್, ಆಕಾಶ್ ದೀಪ್ಗೆ ಗೇಟ್ಪಾಸ್; RCB ಮತ್ತೆ ಖರೀದಿಸುವ 5 ಆಟಗಾರರ ಲಿಸ್ಟ್..!
ಇನ್ನು ಕೆಲವರು ತಕ್ಷಣವೇ ಕೋಚ್ ಸ್ಥಾನದಿಂದ ವಜಾಗೊಳಿಸಬೇಕು ಎಂಬ ಆಗ್ರಹವನ್ನು ಬಿಸಿಸಿಐಗೆ ಮಾಡಿದ್ದಾರೆ. ಗಂಭೀರ್ಗೆ 50 ಓವರ್ಗಳ ಮಾದರಿಯಲ್ಲಿ ತರಬೇತಿ ನೀಡಿದ ಅನುಭವ ಇಲ್ಲ. ಐಪಿಎಲ್ ತಂತ್ರವನ್ನು ಏಕದಿನ ಪಂದ್ಯದಲ್ಲೂ ಮಾಡಿ ತಪ್ಪು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಇನ್ನು ಸೋಲಿನ ನಂತರ ಗೌತಮ್ ಗಂಭೀರ್ ಮುಖವು ಸೊರಗಿತ್ತು.
#GautamGambhir Era 🔥 #SLvsIND #CricketTwitter pic.twitter.com/YtRk1lmyZF
— COVER DRIVE (@RINKUSINGH42465) August 4, 2024
Gambhir doesn't have experience in coaching any team in 50 over format.
Clearly, he was using T20 tactics by shuffling the batting order which proved costly on this type of wicket.#INDvSL
— Classic Mojito (@classic_mojito) August 4, 2024
India ko gambhir ko sirf T20 coaching ke liye Lana chahiye tha gambhir ke pass odi aur test ke coaching ka koi experience nhi hai aur India team koi sikhne ki jgh nhi hai backfire krne wla hai ye ict ka decision gambir ko as a coach lane ka.
— Its_salm (@Itssalm07) August 4, 2024
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ನಿರಂತರ ಪ್ರಯೋಗದಿಂದ ತಂಡವನ್ನು ಹಾಳು ಮಾಡ್ತಿದ್ದಾರಾ ಮುಖ್ಯಕೋಚ್..?
ರಾಹುಲ್ ದ್ರಾವಿಡ್ ಕಟ್ಟಿದ ಅದ್ಭುತ ತಂಡವನ್ನು ಒಡೆಯುತ್ತಿದ್ದಾರೆಂಬ ಆರೋಪ
ಶ್ರೀಲಂಕಾ ವಿರುದ್ಧ ಸೋಲುತ್ತಿದ್ದಂತೆಯೇ ಗಂಭೀರ್ ಸಿಕ್ಕಾಪಟ್ಟೆ ಟ್ರೋಲ್
ಟೀಮ್ ಇಂಡಿಯಾದ ಶ್ರೀಲಂಕಾ ಪ್ರವಾಸ ಗೌತಮ್ ಗಂಭೀರ್ಗೆ ಬಹಳ ಮುಖ್ಯವಾಗಿತ್ತು. ಯಾಕೆಂದರೆ ಮುಖ್ಯ ಕೋಚ್ ಆಗಿ ಚಾರ್ಜ್ ತೆಗೆದುಕೊಂಡ ಮೇಲೆ ಮೊದಲ ಪ್ರವಾಸ ಆಗಿದೆ. ಟಿ-20 ಸರಣಿಯಲ್ಲಿ 2-1 ಅಂತರದಿಂದ ಗೆಲುವು ಸಾಧಿಸಿದ್ದರೂ, ಏಕದಿನ ಸರಣಿಯಲ್ಲಿ ಭಾರೀ ಮುಖಭಂಗ ಅನುಭವಿಸಿದೆ.
ನಿನ್ನೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ 32 ರನ್ಗಳಿಂದ ಭಾರತ ತಂಡವನ್ನು ಸೋಲಿಸಿದೆ. ಬ್ಯಾಟ್ಸ್ಮನ್ಗಳ ಕೆಟ್ಟ ಪ್ರದರ್ಶನದಿಂದಾಗಿ ಟೀಂ ಇಂಡಿಯಾ ಸೋಲನ್ನು ಕಂಡಿದೆ. ಆದರೆ ಟೀಕೆ ಮಾತ್ರ ಗೌತಮ್ ಗಂಭೀರ್ ಮೇಲೆ ಕೇಳಿಬಂದಿದೆ. ತಂಡ ಸೋಲುತ್ತಿದ್ದಂತೆಯೇ ಗೌತಮ್ ಗಂಭೀರ್ ಟ್ರೋಲ್ ಆಗುತ್ತಿದ್ದಾರೆ.
ಇದನ್ನೂ ಓದಿ:ಸೂರ್ಯ, ಬೂಮ್ರಾ ಗ್ಯಾರಂಟಿ.. ಈ ನಾಲ್ಕು ಆಟಗಾರರ ರಿಟೈನ್ ಮಾಡಿಕೊಳ್ಳಲು MI ನಿರ್ಧಾರ
ಅಂದ್ಹಾಗೆ ಗಂಭೀರ್ ಕೋಚ್ ಆದ್ಮೇಲೆ ತಂಡದಲ್ಲಿ ಅನೇಕ ಬದಲಾವಣೆಗಳು ಆಗಿವೆ. ಮೂರು ಮಾದರಿಯಲ್ಲಿ ಆಡುವ ಕೆಲವು ಆಟಗಾರರು ಮಾತ್ರ ಇದ್ದಾರೆ. ಏಕದಿನ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ನಿರಂತರ ಬದಲಾವಣೆಗಳು ಆಗುತ್ತಿವೆ. ಟಿ20 ಮಾದರಿಗೆ ಹೊಸ ತಂಡವನ್ನು ಸಿದ್ಧಪಡಿಸಲಾಗಿದೆ. ಈ ರೀತಿಯ ಬದಲಾವಣೆಯಿಂದಲೇ ತಂಡ ಸೋತಿದೆ. ರಾಹುಲ್ ದ್ರಾವಿಡ್ ಕಟ್ಟಿದ ತಂಡದಲ್ಲಿ ಗಂಭೀರ್ ಅನಗತ್ಯ ಪ್ರಯೋಗ ಮಾಡ್ತಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ.
ಬ್ಯಾಟ್ಸ್ಮನ್ಗಳು ತಮ್ಮ ಸ್ಲಾಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವಾಗ ಪ್ರಯೋಗ ಯಾಕೆ ಮಾಡಬೇಕು ಎಂದು ಇನ್ನು ಕೆಲವರು ಪ್ರಶ್ನೆ ಮಾಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್.ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಸ್ಥಾನವನ್ನು ಬದಲಾಯಿಸಬೇಕು ಎಂಬ ಸಲಹೆಗಳು ಕೂಡ ಕೇಳಿಬಂದಿದೆ.
ಇದನ್ನೂ ಓದಿ:ಮ್ಯಾಕ್ಸ್ವೆಲ್, ಆಕಾಶ್ ದೀಪ್ಗೆ ಗೇಟ್ಪಾಸ್; RCB ಮತ್ತೆ ಖರೀದಿಸುವ 5 ಆಟಗಾರರ ಲಿಸ್ಟ್..!
ಇನ್ನು ಕೆಲವರು ತಕ್ಷಣವೇ ಕೋಚ್ ಸ್ಥಾನದಿಂದ ವಜಾಗೊಳಿಸಬೇಕು ಎಂಬ ಆಗ್ರಹವನ್ನು ಬಿಸಿಸಿಐಗೆ ಮಾಡಿದ್ದಾರೆ. ಗಂಭೀರ್ಗೆ 50 ಓವರ್ಗಳ ಮಾದರಿಯಲ್ಲಿ ತರಬೇತಿ ನೀಡಿದ ಅನುಭವ ಇಲ್ಲ. ಐಪಿಎಲ್ ತಂತ್ರವನ್ನು ಏಕದಿನ ಪಂದ್ಯದಲ್ಲೂ ಮಾಡಿ ತಪ್ಪು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಇನ್ನು ಸೋಲಿನ ನಂತರ ಗೌತಮ್ ಗಂಭೀರ್ ಮುಖವು ಸೊರಗಿತ್ತು.
#GautamGambhir Era 🔥 #SLvsIND #CricketTwitter pic.twitter.com/YtRk1lmyZF
— COVER DRIVE (@RINKUSINGH42465) August 4, 2024
Gambhir doesn't have experience in coaching any team in 50 over format.
Clearly, he was using T20 tactics by shuffling the batting order which proved costly on this type of wicket.#INDvSL
— Classic Mojito (@classic_mojito) August 4, 2024
India ko gambhir ko sirf T20 coaching ke liye Lana chahiye tha gambhir ke pass odi aur test ke coaching ka koi experience nhi hai aur India team koi sikhne ki jgh nhi hai backfire krne wla hai ye ict ka decision gambir ko as a coach lane ka.
— Its_salm (@Itssalm07) August 4, 2024
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್