ಹಾರ್ದಿಕ್ ಪಾಂಡ್ಯ ವಿಚಾರವಾಗಿ ಬ್ಯಾಟ್ ಬೀಸಿದ KKR ಮೆಂಟರ್
ಮುಂಬೈ ತಂಡದ ನಾಯಕನ ವಿಫಲತೆ ಬಗ್ಗೆ ಗಂಭೀರ್ ಗಂಭೀರ ಮಾತು
ಕಿತ್ತಳೆಯನ್ನು ಆರೆಂಜ್ಗೆ ಹೋಲಿಸಬಾರದು ಎಂದ ಗೌತಮ್ ಗಂಭೀರ್
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರ ಪ್ರದರ್ಶನದ ಬಗ್ಗೆ ನಾನಾ ಟೀಕೆಗಳು ಕೇಳಿಬರುತ್ತಿವೆ. ಅದರಲ್ಲೂ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೈಬಿಟ್ಟ ಮುಂಬೈ ತಂಡ ಪಾಂಡ್ಯನನ್ನು ನಾಯಕನನ್ನಾಗಿ ನೇಮಿಸಿದ ವಿಚಾರವಾಗಿ ಅನೇಕರು ಮಾತನಾಡುತ್ತಿದ್ದಾರೆ. ಅದರ ಜೊತೆಗೆ ಮುಂಬೈ ತಂಡ ಈ ಬಾರಿ 13 ಪಂದ್ಯಗಳಲ್ಲಿ 4 ಪಂದ್ಯವನ್ನು ಮಾತ್ರ ಗೆದ್ದಿರೋದು ಅಭಿಮಾನಿಗಳ ನೋವಿಗೆ ಕಾರಣವಾಗಿದೆ. ಇದೀಗ ಇದೇ ಟೀಕೆ-ಟಿಪ್ಪಣಿ ವಿಚಾರವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಮಾತನಾಡಿದ್ದಾರೆ.
ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಮತ್ತು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಆಟಗಾರ ಎಬಿಡಿ ವಿಲಿಯರ್ಸ್ ಅವರನ್ನು ಈ ವಿಚಾರವಾಗಿ ಗಂಭೀರ್ ಹೋಲಿಕೆ ಮಾಡಿದ್ದು, ಪಾಂಡ್ಯ ಪರವಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ವಿಪರೀತ ಶೋಕಿ.. ಸಾಲ ತೀರಿಸಲು ಮನೆ ಮಾಲಕಿಯನ್ನು ಕೊಂದಾಕೆ ಕೊನೆಗೂ ಅರೆಸ್ಟ್
ಆರ್ಸಿಬಿ ಆಟಗಾರ ಎಬಿ ಡಿ ವಿಲಿಯರ್ಸ್ ಸ್ವಂತ ಸ್ಕೋರ್ ಹೊರತುಪಡಿಸಿ, ಅವರು ಐಪಿಎಲ್ನಲ್ಲಿ ಏನೂ ಸಾಧಿಸಿಲ್ಲ ಎಂದು ಗೌತಮ್ ಗಂಭಿರ್ ಹೇಳಿದ್ದಾರೆ. ಜೊತೆಗೆ ಅವರು ನಾಯಕರಾಗಿದ್ದಾಗ ಸ್ವಂತ ಪ್ರದರ್ಶನ ಹೇಗಿತ್ತು?. ನಾವು ಅದನ್ನು ಯೋಚಿಸುವುದಿಲ್ಲ. ಅವರು ನಾಯಕತ್ವದಲ್ಲಿರುವಾಗ ವೃತ್ತಿ ಜೀವನದಲ್ಲಿ ಯಾವ ಪ್ರದರ್ಶನ ನೀಡಿದ್ದಾರೆ. ಏನೂ ಇಲ್ಲ. ಹಾಗಾಗಿ ಹಾರ್ದಿಕ್ ವಿಜೇತ ನಾಯಕ. ನೀವು ಕಿತ್ತಳೆಯನ್ನು ಆರೆಂಜ್ಗೆ ಹೋಲಿಸಬಾರದು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಹಾರ್ದಿಕ್ ಪಾಂಡ್ಯ ವಿಚಾರವಾಗಿ ಬ್ಯಾಟ್ ಬೀಸಿದ KKR ಮೆಂಟರ್
ಮುಂಬೈ ತಂಡದ ನಾಯಕನ ವಿಫಲತೆ ಬಗ್ಗೆ ಗಂಭೀರ್ ಗಂಭೀರ ಮಾತು
ಕಿತ್ತಳೆಯನ್ನು ಆರೆಂಜ್ಗೆ ಹೋಲಿಸಬಾರದು ಎಂದ ಗೌತಮ್ ಗಂಭೀರ್
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರ ಪ್ರದರ್ಶನದ ಬಗ್ಗೆ ನಾನಾ ಟೀಕೆಗಳು ಕೇಳಿಬರುತ್ತಿವೆ. ಅದರಲ್ಲೂ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೈಬಿಟ್ಟ ಮುಂಬೈ ತಂಡ ಪಾಂಡ್ಯನನ್ನು ನಾಯಕನನ್ನಾಗಿ ನೇಮಿಸಿದ ವಿಚಾರವಾಗಿ ಅನೇಕರು ಮಾತನಾಡುತ್ತಿದ್ದಾರೆ. ಅದರ ಜೊತೆಗೆ ಮುಂಬೈ ತಂಡ ಈ ಬಾರಿ 13 ಪಂದ್ಯಗಳಲ್ಲಿ 4 ಪಂದ್ಯವನ್ನು ಮಾತ್ರ ಗೆದ್ದಿರೋದು ಅಭಿಮಾನಿಗಳ ನೋವಿಗೆ ಕಾರಣವಾಗಿದೆ. ಇದೀಗ ಇದೇ ಟೀಕೆ-ಟಿಪ್ಪಣಿ ವಿಚಾರವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಮಾತನಾಡಿದ್ದಾರೆ.
ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಮತ್ತು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಆಟಗಾರ ಎಬಿಡಿ ವಿಲಿಯರ್ಸ್ ಅವರನ್ನು ಈ ವಿಚಾರವಾಗಿ ಗಂಭೀರ್ ಹೋಲಿಕೆ ಮಾಡಿದ್ದು, ಪಾಂಡ್ಯ ಪರವಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ವಿಪರೀತ ಶೋಕಿ.. ಸಾಲ ತೀರಿಸಲು ಮನೆ ಮಾಲಕಿಯನ್ನು ಕೊಂದಾಕೆ ಕೊನೆಗೂ ಅರೆಸ್ಟ್
ಆರ್ಸಿಬಿ ಆಟಗಾರ ಎಬಿ ಡಿ ವಿಲಿಯರ್ಸ್ ಸ್ವಂತ ಸ್ಕೋರ್ ಹೊರತುಪಡಿಸಿ, ಅವರು ಐಪಿಎಲ್ನಲ್ಲಿ ಏನೂ ಸಾಧಿಸಿಲ್ಲ ಎಂದು ಗೌತಮ್ ಗಂಭಿರ್ ಹೇಳಿದ್ದಾರೆ. ಜೊತೆಗೆ ಅವರು ನಾಯಕರಾಗಿದ್ದಾಗ ಸ್ವಂತ ಪ್ರದರ್ಶನ ಹೇಗಿತ್ತು?. ನಾವು ಅದನ್ನು ಯೋಚಿಸುವುದಿಲ್ಲ. ಅವರು ನಾಯಕತ್ವದಲ್ಲಿರುವಾಗ ವೃತ್ತಿ ಜೀವನದಲ್ಲಿ ಯಾವ ಪ್ರದರ್ಶನ ನೀಡಿದ್ದಾರೆ. ಏನೂ ಇಲ್ಲ. ಹಾಗಾಗಿ ಹಾರ್ದಿಕ್ ವಿಜೇತ ನಾಯಕ. ನೀವು ಕಿತ್ತಳೆಯನ್ನು ಆರೆಂಜ್ಗೆ ಹೋಲಿಸಬಾರದು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ