newsfirstkannada.com

ಮಹಿಳೆ ಜತೆ ಅಸಭ್ಯ ವರ್ತನೆ ಮಾಡಿದ್ದ ಪಿಡಿಓ ಮತ್ತು ಕರವಸೂಲಿಗಾರನಿಗೆ ಧರ್ಮದೇಟು; ಆಮೇಲೇನಾಯ್ತು?

Share :

Published May 27, 2024 at 11:06pm

    ಮಹಿಳಾ ಸಹೋದ್ಯೋಗಿ ಜತೆ ಅಸಭ್ಯ ವರ್ತನೆ ಮಾಡಿದ ಪಿಡಿಓ

    ಗ್ರಾಮಸ್ಥರಿಂದ ಪಿಡಿಓ ಮತ್ತು ಕರವಸೂಲಿಗಾರನಿಗೆ ಧರ್ಮದೇಟು

    ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದಲ್ಲಿ ನಡೆದ ಘಟನೆ

ಬೀದರ್​​: ಮಹಿಳಾ ಸಹೋದ್ಯೋಗಿ ಜತೆ ಅಸಭ್ಯ ವರ್ತನೆ ಮಾಡಿದ ಪಿಡಿಓ ಮತ್ತು ಕರವಸೂಲಿಗಾರನಿಗೆ ಧರ್ಮದೇಟು ನೀಡಲಾಗಿದೆ. ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪಿಡಿಓ ಯೋಗೀಶ್​ ಹಿರೇಮಠ ಮತ್ತು ಕರವಸೂಲಿಗಾರ ಮಿಥುನ್​ ಎಂಬಾತನಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಗ್ರಾಮ ಪಂಚಾಯಿತಿಯಲ್ಲೇ ಕೆಲಸ ಮಾಡುತ್ತಿದ್ದ ಮಹಿಳೆ ಜತೆ ಇವ್ರು ಅಸಭ್ಯ ವರ್ತನೆ ತೋರಿದ್ದರು. ಈ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದಿದೆ. ಗ್ರಾಮಸ್ಥರೊಂದಿಗೆ ಮಾತಿಗಿಳಿದ ಪಿಡಿಓ ಮತ್ತು ಕರವಸೂಲಿಗಾರನಿಗೆ ಧರ್ಮದೇಟು ನೀಡಿದ್ದಾರೆ.

ಇನ್ನು, ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಮುಡಬಿ ಠಾಣಾ ಪೊಲೀಸ್ರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ತಾಲೂಕು ಪಂಚಾಯತಿ ಇಡಿ ಸಂತೋಷ್​ ಕೂಡ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಇಬ್ಬರು ಮಹಿಳೆ ಕ್ಷಮೆ ಕೇಳಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ರೀಮಲ್ ಚಂಡಮಾರುತ ಅವಾಂತರ; ಬಿರುಗಾಳಿ ಸಮೇತ ಭಾರೀ ಮಳೆಗೆ 7 ಮಂದಿ ಸಾವು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಿಳೆ ಜತೆ ಅಸಭ್ಯ ವರ್ತನೆ ಮಾಡಿದ್ದ ಪಿಡಿಓ ಮತ್ತು ಕರವಸೂಲಿಗಾರನಿಗೆ ಧರ್ಮದೇಟು; ಆಮೇಲೇನಾಯ್ತು?

https://newsfirstlive.com/wp-content/uploads/2024/05/Goosa.jpg

    ಮಹಿಳಾ ಸಹೋದ್ಯೋಗಿ ಜತೆ ಅಸಭ್ಯ ವರ್ತನೆ ಮಾಡಿದ ಪಿಡಿಓ

    ಗ್ರಾಮಸ್ಥರಿಂದ ಪಿಡಿಓ ಮತ್ತು ಕರವಸೂಲಿಗಾರನಿಗೆ ಧರ್ಮದೇಟು

    ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದಲ್ಲಿ ನಡೆದ ಘಟನೆ

ಬೀದರ್​​: ಮಹಿಳಾ ಸಹೋದ್ಯೋಗಿ ಜತೆ ಅಸಭ್ಯ ವರ್ತನೆ ಮಾಡಿದ ಪಿಡಿಓ ಮತ್ತು ಕರವಸೂಲಿಗಾರನಿಗೆ ಧರ್ಮದೇಟು ನೀಡಲಾಗಿದೆ. ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪಿಡಿಓ ಯೋಗೀಶ್​ ಹಿರೇಮಠ ಮತ್ತು ಕರವಸೂಲಿಗಾರ ಮಿಥುನ್​ ಎಂಬಾತನಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಗ್ರಾಮ ಪಂಚಾಯಿತಿಯಲ್ಲೇ ಕೆಲಸ ಮಾಡುತ್ತಿದ್ದ ಮಹಿಳೆ ಜತೆ ಇವ್ರು ಅಸಭ್ಯ ವರ್ತನೆ ತೋರಿದ್ದರು. ಈ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದಿದೆ. ಗ್ರಾಮಸ್ಥರೊಂದಿಗೆ ಮಾತಿಗಿಳಿದ ಪಿಡಿಓ ಮತ್ತು ಕರವಸೂಲಿಗಾರನಿಗೆ ಧರ್ಮದೇಟು ನೀಡಿದ್ದಾರೆ.

ಇನ್ನು, ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಮುಡಬಿ ಠಾಣಾ ಪೊಲೀಸ್ರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ತಾಲೂಕು ಪಂಚಾಯತಿ ಇಡಿ ಸಂತೋಷ್​ ಕೂಡ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಇಬ್ಬರು ಮಹಿಳೆ ಕ್ಷಮೆ ಕೇಳಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ರೀಮಲ್ ಚಂಡಮಾರುತ ಅವಾಂತರ; ಬಿರುಗಾಳಿ ಸಮೇತ ಭಾರೀ ಮಳೆಗೆ 7 ಮಂದಿ ಸಾವು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More