ಪಾಕಿಸ್ತಾನ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ್ದ ರಿಷಬ್ ಪಂತ್
ಮತ್ತೆ ಟೀಮ್ ಇಂಡಿಯಾಕ್ಕೆ ಮರಳಲು ಭಾರೀ ಕಷ್ಟ ಪಟ್ಟಿದ್ದರು
ರಿಷಬ್ ಪಂತ್ರನ್ನ ಆಸ್ಪತ್ರೆಯಲ್ಲಿ ನೋಡಿದಾಗ ನೋವಾಗಿತ್ತು
ನ್ಯೂಯಾರ್ಕ್ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಮೆಗಾ ಟೂರ್ನಿಯ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತ ಭರ್ಜರಿಯಾಗಿ ಗೆಲುವು ಪಡೆದಿದೆ. ಈಗಾಗಲೇ ರೋಹಿತ್ ಬಾಯ್ಸ್ ಈ ಗೆಲುವನ್ನು ಸಖತ್ ಆಗಿಯೇ ಎಂಜಾಯ್ ಮಾಡಿದ್ದಾರೆ. ಪಾಕ್ ವಿರುದ್ಧ ಗೆಲವು ಎಂದರೆ ಅದು ಇಂಡಿಯನ್ ಪ್ಲೇಯರ್ಸ್ಗೆ ವಿಶ್ವಕಪ್ ಗೆದ್ದಷ್ಟು ಸಂತಸ. ಇಂತಹ ಸಂದರ್ಭದಲ್ಲಿ ಕ್ರಿಕೆಟ್ ಲೆಜೆಂಡರಿ ರವಿಶಾಸ್ತ್ರಿಯವರು ರಿಷಬ್ ಪಂತ್ ಬಗ್ಗೆ ಮನದ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ: ಆದರ್ಶಗಳ ದೇಗುಲ ದೊಡ್ಮನೆಯಲ್ಲಿ ಬಿರುಗಾಳಿ.. ಯುವ ರಾಜ್, ಶ್ರೀದೇವಿ ಬಾಳಲ್ಲಿ ಅಸಲಿಗೆ ನಡೆದಿದ್ದೇನು?
ರಿಷಬ್ ಪಂತ್ ಸದ್ಯ ಟೀಮ್ ಇಂಡಿಯಾ ಕಷ್ಟ ಕಾಲದಲ್ಲೂ ರನ್ ಗಳಿಸುವ ಯುವ ಪ್ಲೇಯರ್. ಏಕೆಂದರೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್, ಶಿವಂ ದುಬೆ ಸೇರಿದಂತೆ ಎಲ್ಲರೂ ಬ್ಯಾಟಿಂಗ್ನಲ್ಲಿ ಕೈಕೊಟ್ಟಿದ್ದರು. ಆದರೆ ರಿಷಬ್ ಪಂತ್ ಮಾತ್ರ ಕ್ರೀಸ್ ಕಚ್ಚಿ ನಿಂತು 31 ಎಸೆತದಲ್ಲಿ 42 ರನ್ ಗಳಿಸಿ ಭಾರತದ ಗೆಲುವಿಗೆ ಕಾರಣವಾದರು. ಇದರಿಂದ ಪಂತ್ ಪಾಕ್ ಜೊತೆಗಿನ ಮ್ಯಾಚ್ನಲ್ಲಿ ಹೀರೋ ಆಗಿದ್ದರು ಎನ್ನಬಹುದು. ಸದ್ಯ ರವಿಶಾಸ್ತ್ರಿ ಕೂಡ ರಿಷಬ್ ಪಂತ್ಗೆ ಆ್ಯಕ್ಸಿಡೆಂಟ್ ಆಗಿದ್ದಾಗ ಕಣ್ಣೀರು ಹಾಕಿದ್ದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 3ನೇ ವ್ಯಕ್ತಿ ವಿಚಾರ ಕೇಳಿ ಬಂದ ಕೂಡಲೇ ನಾನೇ ಅವರಿಗೆ ಕಾಲ್ ಮಾಡಿದೆ’ -ನಿವೇದಿತಾ ಹೇಳಿದ್ದೇನು?
Ravi Shastri said, “I had tears in my eyes when I heard about Rishabh Pant’s accident. When I saw him in the hospital, it was worse. For him to come back from there and be back in the A-zone playing one of the biggest games, India Vs Pakistan, is heartwarming”. pic.twitter.com/odMTTSKuPl
— Mufaddal Vohra (@mufaddal_vohra) June 10, 2024
ಕಾರು ಆ್ಯಕ್ಸಿಡೆಂಟ್ನಲ್ಲಿ ಪಂತ್ ತೀವ್ರವಾಗಿ ಗಾಯಗೊಂಡ ವಿಷಯವನ್ನು ಕೇಳಿದಾಗ ನನ್ನ ಕಣ್ಣುಗಳಿಂದ ನೀರು ಬಂದವು. ಆದರೆ ಪಂತ್ರನ್ನ ಆಸ್ಪತ್ರೆಯಲ್ಲಿ ನೋಡಿದಾಗ ಮನಸಿಗೆ ಇನ್ನಷ್ಟು ನೋವಾಗಿತ್ತು. ಆ ಪರಿಸ್ಥಿತಿಯಲ್ಲಿ ಯುವ ಆಟಗಾರನನ್ನ ನೋಡಲಾಗಲಿಲ್ಲ. ಪಂತ್ ಗಾಯಗಳಿಂದ ಚೇತರಿಸಿಕೊಂಡು ಟೀಮ್ ಇಂಡಿಯಾದಲ್ಲಿ ಮತ್ತೆ ಸ್ಥಾನ ಪಡೆಯಲು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಅದರಲ್ಲಿ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ರಿಷಬ್ ಪಂತ್ ಹೃದಯಸ್ಪರ್ಶಿ ಬ್ಯಾಟಿಂಗ್ ಮಾಡಿ ಎಲ್ಲರ ಮನ ಗೆದ್ದರು ಎಂದು ರವಿಶಾಸ್ತ್ರಿಯವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪಾಕಿಸ್ತಾನ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ್ದ ರಿಷಬ್ ಪಂತ್
ಮತ್ತೆ ಟೀಮ್ ಇಂಡಿಯಾಕ್ಕೆ ಮರಳಲು ಭಾರೀ ಕಷ್ಟ ಪಟ್ಟಿದ್ದರು
ರಿಷಬ್ ಪಂತ್ರನ್ನ ಆಸ್ಪತ್ರೆಯಲ್ಲಿ ನೋಡಿದಾಗ ನೋವಾಗಿತ್ತು
ನ್ಯೂಯಾರ್ಕ್ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಮೆಗಾ ಟೂರ್ನಿಯ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತ ಭರ್ಜರಿಯಾಗಿ ಗೆಲುವು ಪಡೆದಿದೆ. ಈಗಾಗಲೇ ರೋಹಿತ್ ಬಾಯ್ಸ್ ಈ ಗೆಲುವನ್ನು ಸಖತ್ ಆಗಿಯೇ ಎಂಜಾಯ್ ಮಾಡಿದ್ದಾರೆ. ಪಾಕ್ ವಿರುದ್ಧ ಗೆಲವು ಎಂದರೆ ಅದು ಇಂಡಿಯನ್ ಪ್ಲೇಯರ್ಸ್ಗೆ ವಿಶ್ವಕಪ್ ಗೆದ್ದಷ್ಟು ಸಂತಸ. ಇಂತಹ ಸಂದರ್ಭದಲ್ಲಿ ಕ್ರಿಕೆಟ್ ಲೆಜೆಂಡರಿ ರವಿಶಾಸ್ತ್ರಿಯವರು ರಿಷಬ್ ಪಂತ್ ಬಗ್ಗೆ ಮನದ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ: ಆದರ್ಶಗಳ ದೇಗುಲ ದೊಡ್ಮನೆಯಲ್ಲಿ ಬಿರುಗಾಳಿ.. ಯುವ ರಾಜ್, ಶ್ರೀದೇವಿ ಬಾಳಲ್ಲಿ ಅಸಲಿಗೆ ನಡೆದಿದ್ದೇನು?
ರಿಷಬ್ ಪಂತ್ ಸದ್ಯ ಟೀಮ್ ಇಂಡಿಯಾ ಕಷ್ಟ ಕಾಲದಲ್ಲೂ ರನ್ ಗಳಿಸುವ ಯುವ ಪ್ಲೇಯರ್. ಏಕೆಂದರೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್, ಶಿವಂ ದುಬೆ ಸೇರಿದಂತೆ ಎಲ್ಲರೂ ಬ್ಯಾಟಿಂಗ್ನಲ್ಲಿ ಕೈಕೊಟ್ಟಿದ್ದರು. ಆದರೆ ರಿಷಬ್ ಪಂತ್ ಮಾತ್ರ ಕ್ರೀಸ್ ಕಚ್ಚಿ ನಿಂತು 31 ಎಸೆತದಲ್ಲಿ 42 ರನ್ ಗಳಿಸಿ ಭಾರತದ ಗೆಲುವಿಗೆ ಕಾರಣವಾದರು. ಇದರಿಂದ ಪಂತ್ ಪಾಕ್ ಜೊತೆಗಿನ ಮ್ಯಾಚ್ನಲ್ಲಿ ಹೀರೋ ಆಗಿದ್ದರು ಎನ್ನಬಹುದು. ಸದ್ಯ ರವಿಶಾಸ್ತ್ರಿ ಕೂಡ ರಿಷಬ್ ಪಂತ್ಗೆ ಆ್ಯಕ್ಸಿಡೆಂಟ್ ಆಗಿದ್ದಾಗ ಕಣ್ಣೀರು ಹಾಕಿದ್ದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 3ನೇ ವ್ಯಕ್ತಿ ವಿಚಾರ ಕೇಳಿ ಬಂದ ಕೂಡಲೇ ನಾನೇ ಅವರಿಗೆ ಕಾಲ್ ಮಾಡಿದೆ’ -ನಿವೇದಿತಾ ಹೇಳಿದ್ದೇನು?
Ravi Shastri said, “I had tears in my eyes when I heard about Rishabh Pant’s accident. When I saw him in the hospital, it was worse. For him to come back from there and be back in the A-zone playing one of the biggest games, India Vs Pakistan, is heartwarming”. pic.twitter.com/odMTTSKuPl
— Mufaddal Vohra (@mufaddal_vohra) June 10, 2024
ಕಾರು ಆ್ಯಕ್ಸಿಡೆಂಟ್ನಲ್ಲಿ ಪಂತ್ ತೀವ್ರವಾಗಿ ಗಾಯಗೊಂಡ ವಿಷಯವನ್ನು ಕೇಳಿದಾಗ ನನ್ನ ಕಣ್ಣುಗಳಿಂದ ನೀರು ಬಂದವು. ಆದರೆ ಪಂತ್ರನ್ನ ಆಸ್ಪತ್ರೆಯಲ್ಲಿ ನೋಡಿದಾಗ ಮನಸಿಗೆ ಇನ್ನಷ್ಟು ನೋವಾಗಿತ್ತು. ಆ ಪರಿಸ್ಥಿತಿಯಲ್ಲಿ ಯುವ ಆಟಗಾರನನ್ನ ನೋಡಲಾಗಲಿಲ್ಲ. ಪಂತ್ ಗಾಯಗಳಿಂದ ಚೇತರಿಸಿಕೊಂಡು ಟೀಮ್ ಇಂಡಿಯಾದಲ್ಲಿ ಮತ್ತೆ ಸ್ಥಾನ ಪಡೆಯಲು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಅದರಲ್ಲಿ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ರಿಷಬ್ ಪಂತ್ ಹೃದಯಸ್ಪರ್ಶಿ ಬ್ಯಾಟಿಂಗ್ ಮಾಡಿ ಎಲ್ಲರ ಮನ ಗೆದ್ದರು ಎಂದು ರವಿಶಾಸ್ತ್ರಿಯವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ