ಅಭ್ಯಾಸ ಪಂದ್ಯದಲ್ಲಿ ಆಲ್ರೌಂಡರ್ ಆಟ ಪ್ರದರ್ಶನ
ಜೂನ್ ಐದರಿಂದ ಟೀಂ ಇಂಡಿಯಾ ವಿಶ್ವಕಪ್ ಜರ್ನಿ
ನಿನ್ನೆಯ ಪಂದ್ಯದಲ್ಲಿ ಭಾರತಕ್ಕೆ 60 ರನ್ಗಳ ಜಯ
ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಎಕ್ಸ್ಪರಿಮೆಂಟ್ ವರ್ಕೌಟ್ ಆಗಲಿಲ್ಲ. ಸಂಜು ಸ್ಯಾಮ್ಸನ್ ಸಿಕ್ಕ ಅವಕಾಶ ಮತ್ತೆ ಕೈಚೆಲ್ಲಿದರು. ನ್ಯೂಯಾರ್ಕ್ನ ಡ್ರಾಪಿಂಗ್ ಪಿಚ್ನಲ್ಲಿ ಪರದಾಡಿದ ಟೀಮ್ ಇಂಡಿಯಾದಿಂದ ನಿರೀಕ್ಷೆಯ ಪ್ರದರ್ಶನ ಬರಲಿಲ್ಲ. ಆದರೆ ತಂಡಕ್ಕೆ ಹಾರ್ದಿಕ್ ಪಾಂಡ್ಯ ಹೊಸ ಭರವಸೆ ಹುಟ್ಟಿಸಿದ್ದಾರೆ.
ಇದನ್ನೂ ಓದಿ:ಮಹಿಳೆ ಸತ್ತ ನಂತರ 14 ವರ್ಷಗಳ ಕಾಲ ಕಚೇರಿಯಲ್ಲಿ ಕೆಲಸ ಮಾಡಿದಳು.. ಭಯ ಹುಟ್ಟಿಸುತ್ತೆ..!
ನಿನ್ನೆಯ ಪಂದ್ಯದಲ್ಲಿ ಉಪನಾಯಕ ಪಾಂಡ್ಯ ಆಲ್ರೌಂಡರ್ ಆಟವನ್ನಾಡಿದ್ದು, ಸಮಸ್ಯೆಗಳಿಂದ ಹೊರಬಂದಂತೆ ಕಾಣ್ತಿದೆ. 23 ಬಾಲ್ಗಳನ್ನು ಎದುರಿಸಿದ ಹಾರ್ದಿಕ್, 4 ಸಿಕ್ಸರ್, ಎರಡು ಬೌಂಡರಿ ಬಾರಿಸಿ ಗಮನ ಸೆಳೆದರು. ಒಟ್ಟಾರೆ 174 ಸ್ಟ್ರೈಕ್ ರೇಟ್ನಲ್ಲಿ ಆಡಿರುವ ಅವರು 40 ರನ್ಗಳನ್ನು ಬಾರಿಸಿ ನಾಟೌಟ್ ಆಗಿ ಉಳಿದರು. ಇನ್ನು ಬೌಲಿಂಗ್ನಲ್ಲೂ ಮಿಂಚಿದ ಪಾಂಡ್ಯ ಮೂರು ಓವರ್ ಮಾಡಿ ಒಂದು ವಿಕೆಟ್ ಪಡೆದುಕೊಂಡರು.
ಇದನ್ನೂ ಓದಿ:20 ತಂಡಗಳು.. 28 ದಿನಗಳ ಕಾದಾಟ.. ಟಿ20 ವಿಶ್ವಕಪ್ ಗೆಲ್ಲುವ ತಂಡದ ಹೆಸರು ತಿಳಿಸಿದ ತಜ್ಞರು..!
ಪಾಂಡ್ಯ ಅವರ ನಿನ್ನೆಯ ಪ್ರದರ್ಶನಿಂದ ತಂಡಕ್ಕೆ ಹೊಸ ಶಕ್ತಿ ಬಂದಿದೆ. ಯಾಕೆಂದರೆ ಐಪಿಎಲ್ನಲ್ಲಿ ಅವರ ಪ್ರದರ್ಶನ ತುಂಬಾ ಕೆಟ್ಟದಾಗಿತ್ತು. ಅವರನ್ನು ವಿಶ್ವಕಪ್ಗೆ ಆಯ್ಕೆ ಮಾಡಿದ್ದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಅವರ ವೈಯಕ್ತಿಕ ಜೀವನದ ವಿಚಾರಗಳು ಮುನ್ನಲೆಗೆ ಬಂದಿದ್ದವು. ಅದೆಲ್ಲವನ್ನೂ ಮೆಟ್ಟಿ ನಿಂತಂತೆ ಪಾಂಡ್ಯ ಕಾಣ್ತಿದ್ದು, ತಂಡಕ್ಕೆ ಹೊಸ ಕಳೆ ತಂದುಕೊಟ್ಟಿದ್ದಾರೆ.
ಇದನ್ನೂ ಓದಿ:6, 6, 6, 6 ರಿಷಬ್ ಪಂತ್ ಸ್ಫೋಟಕ ಅರ್ಧ ಶತಕ.. ರೋಹಿತ್ಗೆ ಖಡಕ್ ಮೆಸ್ಸೇಜ್..!
ಇನ್ನು ಬಾಂಗ್ಲಾ ವಿರುದ್ಧ 60 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ ರೋಹಿತ್ ಪಡೆ. ನಿಗದಿತ 20 ಓವರ್ನಲ್ಲಿ ಐದು ವಿಕೆಟ್ ಕಳೆದುಕೊಂಡ ಭಾರತ 182 ರನ್ ಕಲೆ ಹಾಕಿತ್ತು. ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 23, ರಿಷಬ್ ಪಂತ್ 53, ಸೂರ್ಯಕುಮಾರ್ ಯಾದವ್ 31, ಹಾರ್ದಿಕ್ ಪಾಂಡ್ಯ 40 ರನ್ಗಳ ಕಾಣಿಕೆ ನೀಡಿದರು. 183 ರನ್ಗಳ ಗುರಿ ಬೆನ್ನು ಹತ್ತಿದ್ದ ಬಾಂಗ್ಲಾದೇಶ 20 ಓವರ್ನಲ್ಲಿ 9 ವಿಕೆಟ್ ಕಳೆದುಕೊಂಡು 122 ರನ್ಗಳಿಸಿ ಸೋಲಿಗೆ ಶರಣಾಯ್ತು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಅಭ್ಯಾಸ ಪಂದ್ಯದಲ್ಲಿ ಆಲ್ರೌಂಡರ್ ಆಟ ಪ್ರದರ್ಶನ
ಜೂನ್ ಐದರಿಂದ ಟೀಂ ಇಂಡಿಯಾ ವಿಶ್ವಕಪ್ ಜರ್ನಿ
ನಿನ್ನೆಯ ಪಂದ್ಯದಲ್ಲಿ ಭಾರತಕ್ಕೆ 60 ರನ್ಗಳ ಜಯ
ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಎಕ್ಸ್ಪರಿಮೆಂಟ್ ವರ್ಕೌಟ್ ಆಗಲಿಲ್ಲ. ಸಂಜು ಸ್ಯಾಮ್ಸನ್ ಸಿಕ್ಕ ಅವಕಾಶ ಮತ್ತೆ ಕೈಚೆಲ್ಲಿದರು. ನ್ಯೂಯಾರ್ಕ್ನ ಡ್ರಾಪಿಂಗ್ ಪಿಚ್ನಲ್ಲಿ ಪರದಾಡಿದ ಟೀಮ್ ಇಂಡಿಯಾದಿಂದ ನಿರೀಕ್ಷೆಯ ಪ್ರದರ್ಶನ ಬರಲಿಲ್ಲ. ಆದರೆ ತಂಡಕ್ಕೆ ಹಾರ್ದಿಕ್ ಪಾಂಡ್ಯ ಹೊಸ ಭರವಸೆ ಹುಟ್ಟಿಸಿದ್ದಾರೆ.
ಇದನ್ನೂ ಓದಿ:ಮಹಿಳೆ ಸತ್ತ ನಂತರ 14 ವರ್ಷಗಳ ಕಾಲ ಕಚೇರಿಯಲ್ಲಿ ಕೆಲಸ ಮಾಡಿದಳು.. ಭಯ ಹುಟ್ಟಿಸುತ್ತೆ..!
ನಿನ್ನೆಯ ಪಂದ್ಯದಲ್ಲಿ ಉಪನಾಯಕ ಪಾಂಡ್ಯ ಆಲ್ರೌಂಡರ್ ಆಟವನ್ನಾಡಿದ್ದು, ಸಮಸ್ಯೆಗಳಿಂದ ಹೊರಬಂದಂತೆ ಕಾಣ್ತಿದೆ. 23 ಬಾಲ್ಗಳನ್ನು ಎದುರಿಸಿದ ಹಾರ್ದಿಕ್, 4 ಸಿಕ್ಸರ್, ಎರಡು ಬೌಂಡರಿ ಬಾರಿಸಿ ಗಮನ ಸೆಳೆದರು. ಒಟ್ಟಾರೆ 174 ಸ್ಟ್ರೈಕ್ ರೇಟ್ನಲ್ಲಿ ಆಡಿರುವ ಅವರು 40 ರನ್ಗಳನ್ನು ಬಾರಿಸಿ ನಾಟೌಟ್ ಆಗಿ ಉಳಿದರು. ಇನ್ನು ಬೌಲಿಂಗ್ನಲ್ಲೂ ಮಿಂಚಿದ ಪಾಂಡ್ಯ ಮೂರು ಓವರ್ ಮಾಡಿ ಒಂದು ವಿಕೆಟ್ ಪಡೆದುಕೊಂಡರು.
ಇದನ್ನೂ ಓದಿ:20 ತಂಡಗಳು.. 28 ದಿನಗಳ ಕಾದಾಟ.. ಟಿ20 ವಿಶ್ವಕಪ್ ಗೆಲ್ಲುವ ತಂಡದ ಹೆಸರು ತಿಳಿಸಿದ ತಜ್ಞರು..!
ಪಾಂಡ್ಯ ಅವರ ನಿನ್ನೆಯ ಪ್ರದರ್ಶನಿಂದ ತಂಡಕ್ಕೆ ಹೊಸ ಶಕ್ತಿ ಬಂದಿದೆ. ಯಾಕೆಂದರೆ ಐಪಿಎಲ್ನಲ್ಲಿ ಅವರ ಪ್ರದರ್ಶನ ತುಂಬಾ ಕೆಟ್ಟದಾಗಿತ್ತು. ಅವರನ್ನು ವಿಶ್ವಕಪ್ಗೆ ಆಯ್ಕೆ ಮಾಡಿದ್ದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಅವರ ವೈಯಕ್ತಿಕ ಜೀವನದ ವಿಚಾರಗಳು ಮುನ್ನಲೆಗೆ ಬಂದಿದ್ದವು. ಅದೆಲ್ಲವನ್ನೂ ಮೆಟ್ಟಿ ನಿಂತಂತೆ ಪಾಂಡ್ಯ ಕಾಣ್ತಿದ್ದು, ತಂಡಕ್ಕೆ ಹೊಸ ಕಳೆ ತಂದುಕೊಟ್ಟಿದ್ದಾರೆ.
ಇದನ್ನೂ ಓದಿ:6, 6, 6, 6 ರಿಷಬ್ ಪಂತ್ ಸ್ಫೋಟಕ ಅರ್ಧ ಶತಕ.. ರೋಹಿತ್ಗೆ ಖಡಕ್ ಮೆಸ್ಸೇಜ್..!
ಇನ್ನು ಬಾಂಗ್ಲಾ ವಿರುದ್ಧ 60 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ ರೋಹಿತ್ ಪಡೆ. ನಿಗದಿತ 20 ಓವರ್ನಲ್ಲಿ ಐದು ವಿಕೆಟ್ ಕಳೆದುಕೊಂಡ ಭಾರತ 182 ರನ್ ಕಲೆ ಹಾಕಿತ್ತು. ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 23, ರಿಷಬ್ ಪಂತ್ 53, ಸೂರ್ಯಕುಮಾರ್ ಯಾದವ್ 31, ಹಾರ್ದಿಕ್ ಪಾಂಡ್ಯ 40 ರನ್ಗಳ ಕಾಣಿಕೆ ನೀಡಿದರು. 183 ರನ್ಗಳ ಗುರಿ ಬೆನ್ನು ಹತ್ತಿದ್ದ ಬಾಂಗ್ಲಾದೇಶ 20 ಓವರ್ನಲ್ಲಿ 9 ವಿಕೆಟ್ ಕಳೆದುಕೊಂಡು 122 ರನ್ಗಳಿಸಿ ಸೋಲಿಗೆ ಶರಣಾಯ್ತು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್