newsfirstkannada.com

VIDEO: ಅನ್ಯಕೋಮಿನ ಯುವಕರಿಂದ ಹಲ್ಲೆ ಆರೋಪ; ಈ ಬಗ್ಗೆ ನಟ ಪೊನ್ನಣ್ಣ ಹೇಳಿದ್ದೇನು?

Share :

Published April 20, 2024 at 6:36pm

    ಕಮಿಷನರ್​ ಕಚೇರಿಗೆ ದೂರು ನೀಡಲು ಬಂದ ನಟ ಭುವನ್ ಪೊನ್ನಣ್ಣ ದಂಪತಿ

    ವಿಡಿಯೋವನ್ನು ಶೇರ್​ ಮಾಡಿ ಬೇಸರಗೊಂಡ ನಟಿ ಹರ್ಷಿಕಾ ಪೂಣಚ್ಚ

    ಸ್ಯಾಂಡಲ್​ವುಡ್​ ನಟ ಭುವನ್ ಪೊನ್ನಣ್ಣ ಮೇಲೆ ಕೆಲ ಯುವಕರಿಂದ ಹಲ್ಲೆ

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಹರ್ಷಿಕಾ ಪೂಣಚ್ಚ ಅವರ ಪತಿ ಭುವನ್ ಪೊನ್ನಣ್ಣ ಅವರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಇದೀಗ ಇದೇ ಕೇಸ್​ ಸಂಬಂಧ ದೂರು ನೀಡಲು ಕಮಿಷನರ್ ಕಚೇರಿಗೆ ಬಂದ ಹರ್ಷಿಕಾ ಪೂಣಚ್ಚ ಹಾಗೂ ಪತಿ ಭುವನ್ ಪೊನ್ನಣ್ಣ ಅವರು ಕಮಿಷನರ್​ ಕಚೇರಿಗೆ ದೂರು ನೀಡಲು ಬಂದಿದ್ದಾರೆ.

ಇದನ್ನೂ ಓದಿ: ನೇಹಾಳ ಒಳ್ಳೆಯ ಗುಣ ನೋಡಿ ಡ್ರೈವರ್ ತನ್ನ ಮಗಳಿಗೆ ಆಕೆಯ ಹೆಸರನ್ನೇ ಇಟ್ಟಿದ್ದರು..!

ಇದನ್ನೂ ಓದಿ: ನಟಿ ಹರ್ಷಿಕಾ ಪೂಣಚ್ಚ ಪತಿ ಭುವನ್​ ಪೊನ್ನಣ್ಣ ಮೇಲೆ ಪುಂಡರಿಂದ ಹಲ್ಲೆ.. ವಿಡಿಯೋ ಇಲ್ಲಿದೆ

ಇನ್ನು, ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ನಟ ಭುವನ್​ ಪೊನ್ನಣ್ಣ, ನಾವು ಕಮಿಷನರ್ ಭೇಟಿಗೆ ಬಂದಿದ್ದೇವೆ. ಅವರು ಇಲ್ಲದ ಕಾರಣ ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತರನ್ನ ಭೇಟಿಯಾಗಿದ್ದೇವೆ. ಎಫ್​ಐಆರ್ ಮಾಡಿ ಕ್ರಮ ತೆಗೆದುಕೊಳ್ತೀವಿ ಅಂತ ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬೇರೆ ರೂಪ ತೆಗೆದುಕೊಳ್ಳುತ್ತದೆ ಅಂತ ಆಗ ದೂರು ಕೊಟ್ಟಿರಲಿಲ್ಲ. ಮತ್ತೆ ಇಂಜೆಕ್ಷನ್ ತೆಗೆದುಕೊಳ್ಳಬೇಕು ಅಂತ ಅಂದಾಗ ನನ್ನ ಕಷ್ಟ ನೋಡಿ ಹರ್ಷಿಕಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಾಕಿದ್ದಾರೆ.

ಅಂದು ಆ ಸಂದರ್ಭದಲ್ಲಿ ಹೊಯ್ಸಳ ಇತ್ತು. ಅಲ್ಲಿ ಹೋಗಿ ಅವರ ಬಳಿ ಮಾತನಾಡಿದ್ವಿ. ಅವತ್ತಿನ ಸ್ಥಿತಿಯಲ್ಲಿ ದೂರು ಕೊಡುವುದಕ್ಕೆ ಆಗಲಿಲ್ಲ. ತುಂಬಾ ಜನ ಫೋನ್ ಮಾಡಿ ದೂರು ಕೊಡದಿದ್ರೆ ತಪ್ಪಾಗುತ್ತೆ ಅಂತ ಹೇಳಿದ್ರು. ಈ ಕಾರಣಕ್ಕೆ ಮೊನ್ನೆ ಪೋಸ್ಟ್ ಮಾಡಿದ್ದೆ. ಈ ತರಹದ ಘಟನೆಗಳು ಬೆಂಗಳೂರಿನಲ್ಲಿ ಹಲವಾರು ಬಾರಿ ನಡೆದಿದೆ. ಕರ್ನಾಟಕದಲ್ಲಿ ನಾವೆಲ್ಲ ಒಂದೆ. ಯಾವುದೇ ಏರಿಯಾಗೆ ಹೋದ್ರು ಭಯವಿಲ್ಲದೇ ಹೋಗಬೇಕು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಅನ್ಯಕೋಮಿನ ಯುವಕರಿಂದ ಹಲ್ಲೆ ಆರೋಪ; ಈ ಬಗ್ಗೆ ನಟ ಪೊನ್ನಣ್ಣ ಹೇಳಿದ್ದೇನು?

https://newsfirstlive.com/wp-content/uploads/2024/04/harshika5.jpg

    ಕಮಿಷನರ್​ ಕಚೇರಿಗೆ ದೂರು ನೀಡಲು ಬಂದ ನಟ ಭುವನ್ ಪೊನ್ನಣ್ಣ ದಂಪತಿ

    ವಿಡಿಯೋವನ್ನು ಶೇರ್​ ಮಾಡಿ ಬೇಸರಗೊಂಡ ನಟಿ ಹರ್ಷಿಕಾ ಪೂಣಚ್ಚ

    ಸ್ಯಾಂಡಲ್​ವುಡ್​ ನಟ ಭುವನ್ ಪೊನ್ನಣ್ಣ ಮೇಲೆ ಕೆಲ ಯುವಕರಿಂದ ಹಲ್ಲೆ

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಹರ್ಷಿಕಾ ಪೂಣಚ್ಚ ಅವರ ಪತಿ ಭುವನ್ ಪೊನ್ನಣ್ಣ ಅವರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಇದೀಗ ಇದೇ ಕೇಸ್​ ಸಂಬಂಧ ದೂರು ನೀಡಲು ಕಮಿಷನರ್ ಕಚೇರಿಗೆ ಬಂದ ಹರ್ಷಿಕಾ ಪೂಣಚ್ಚ ಹಾಗೂ ಪತಿ ಭುವನ್ ಪೊನ್ನಣ್ಣ ಅವರು ಕಮಿಷನರ್​ ಕಚೇರಿಗೆ ದೂರು ನೀಡಲು ಬಂದಿದ್ದಾರೆ.

ಇದನ್ನೂ ಓದಿ: ನೇಹಾಳ ಒಳ್ಳೆಯ ಗುಣ ನೋಡಿ ಡ್ರೈವರ್ ತನ್ನ ಮಗಳಿಗೆ ಆಕೆಯ ಹೆಸರನ್ನೇ ಇಟ್ಟಿದ್ದರು..!

ಇದನ್ನೂ ಓದಿ: ನಟಿ ಹರ್ಷಿಕಾ ಪೂಣಚ್ಚ ಪತಿ ಭುವನ್​ ಪೊನ್ನಣ್ಣ ಮೇಲೆ ಪುಂಡರಿಂದ ಹಲ್ಲೆ.. ವಿಡಿಯೋ ಇಲ್ಲಿದೆ

ಇನ್ನು, ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ನಟ ಭುವನ್​ ಪೊನ್ನಣ್ಣ, ನಾವು ಕಮಿಷನರ್ ಭೇಟಿಗೆ ಬಂದಿದ್ದೇವೆ. ಅವರು ಇಲ್ಲದ ಕಾರಣ ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತರನ್ನ ಭೇಟಿಯಾಗಿದ್ದೇವೆ. ಎಫ್​ಐಆರ್ ಮಾಡಿ ಕ್ರಮ ತೆಗೆದುಕೊಳ್ತೀವಿ ಅಂತ ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬೇರೆ ರೂಪ ತೆಗೆದುಕೊಳ್ಳುತ್ತದೆ ಅಂತ ಆಗ ದೂರು ಕೊಟ್ಟಿರಲಿಲ್ಲ. ಮತ್ತೆ ಇಂಜೆಕ್ಷನ್ ತೆಗೆದುಕೊಳ್ಳಬೇಕು ಅಂತ ಅಂದಾಗ ನನ್ನ ಕಷ್ಟ ನೋಡಿ ಹರ್ಷಿಕಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಾಕಿದ್ದಾರೆ.

ಅಂದು ಆ ಸಂದರ್ಭದಲ್ಲಿ ಹೊಯ್ಸಳ ಇತ್ತು. ಅಲ್ಲಿ ಹೋಗಿ ಅವರ ಬಳಿ ಮಾತನಾಡಿದ್ವಿ. ಅವತ್ತಿನ ಸ್ಥಿತಿಯಲ್ಲಿ ದೂರು ಕೊಡುವುದಕ್ಕೆ ಆಗಲಿಲ್ಲ. ತುಂಬಾ ಜನ ಫೋನ್ ಮಾಡಿ ದೂರು ಕೊಡದಿದ್ರೆ ತಪ್ಪಾಗುತ್ತೆ ಅಂತ ಹೇಳಿದ್ರು. ಈ ಕಾರಣಕ್ಕೆ ಮೊನ್ನೆ ಪೋಸ್ಟ್ ಮಾಡಿದ್ದೆ. ಈ ತರಹದ ಘಟನೆಗಳು ಬೆಂಗಳೂರಿನಲ್ಲಿ ಹಲವಾರು ಬಾರಿ ನಡೆದಿದೆ. ಕರ್ನಾಟಕದಲ್ಲಿ ನಾವೆಲ್ಲ ಒಂದೆ. ಯಾವುದೇ ಏರಿಯಾಗೆ ಹೋದ್ರು ಭಯವಿಲ್ಲದೇ ಹೋಗಬೇಕು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More