newsfirstkannada.com

ಲಾಯರ್ ಸಿಡಿಸಿರೋ ಬಾಂಬ್​​ಗೆ ಕಾಂಗ್ರೆಸ್​ ಕೋಟೆಯಲ್ಲಿ ನಡುಕ.. DCM ಬಗ್ಗೆ ದೇವರಾಜೇಗೌಡ ಗಂಭೀರ ಆರೋಪ

Share :

Published May 7, 2024 at 6:15am

    ಡಿಕೆಶಿ ವಿರುದ್ಧ ವಕೀಲ ದೇವರಾಜೇಗೌಡ ಸ್ಫೋಟಕ ಆರೋಪ

    ದೇವರಾಜೇಗೌಡ- ಕಾರ್ತಿಕ್ ಭೇಟಿಯಾದ ವಿಡಿಯೋ ರಿಲೀಸ್​

    ಕ್ಷಣ ಕ್ಷಣಕ್ಕೂ ಟ್ವಿಸ್ಟ್​​.. ಒಬ್ಬೊಬ್ಬರದ್ದೂ ಒಂದೊಂದು ಹೇಳಿಕೆ

ಹಾಸನ ಅಶ್ಲೀಲ ವಿಡಿಯೋ ಹರಿದಾಟ ಪ್ರಕರಣ ರಾಜಕೀಯ ನಾಯಕರನ್ನೇ ಬೆಂಬಿಡದೆ ಕಾಡಲಾರಂಭಿಸಿದೆ. ಇದರ ಹಿಂದಿರೋರು ಯಾರು ಅನ್ನೋ ಪ್ರಶ್ನೆ ಮಧ್ಯೆ, ಜೆಡಿಎಸ್​-ಬಿಜೆಪಿ ಅಂತ ಸುರುಳಿ ಹೊಡೀತಿದ್ದ ಕೇಸ್​ ಸದ್ಯ ಡಿಸಿಎಂ ಸಾಹೇಬರ ಬುಡಕ್ಕೆ ಬಂದು ನಿಂತಿದೆ. ವಕೀಲ ದೇವರಾಜೇಗೌಡ ಇಟ್ಟ ಡೈನಮೆಟ್​ ಕಾಂಗ್ರೆಸ್​ ಕೋಟೆಯನ್ನ ಶೇಕ್​ ಶೇಕ್​ ಮಾಡಿದೆ.

ಕ್ಷಣ ಕ್ಷಣಕ್ಕೂ ಟ್ವಿಸ್ಟ್​​.. ಒಬ್ಬೊಬ್ಬರದ್ದೂ ಒಂದೊಂದು ಹೇಳಿಕೆ.. ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣ ಕ್ಷಣದಿಂದ ಕ್ಷಣಕ್ಕೆ ಹೊಸ ಹೊಸ ತಿರುವು ಪಡೆಯುತ್ತಿದೆ.. ಲೈಂಗಿಕ ದೌರ್ಜನ್ಯದ ಕೇಸ್​ನಲ್ಲಿ ಸುರುಳಿ ಹೊಡೆಯುತ್ತಿದ್ದ ಕೇಸ್​ ಸದ್ಯ​ ರಾಜಕೀಯ ಪಡಸಾಲೆಗೆ ಬಂದು ನಿಂತಿದೆ. ಸುದ್ದಿಗೋಷ್ಠಿ ನಡೆಸಿದ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಸಿಡಿಸಿರೋ ಬಾಂಬ್ ಕಾಂಗ್ರೆಸ್​ ಕೋಟೆಯಲ್ಲಿ ನಡುಕ ಹುಟ್ಟಿಸಿದೆ.

ಇದನ್ನೂ ಓದಿ: ರಾಜ್ಯದ ಹಲವೆಡೆ ಇಂದಿನಿಂದ ಮೇ 11ರವರೆಗೆ ಮಳೆ ಮುನ್ಸೂಚನೆ.. ಬೆಂಗಳೂರು ಸೇರಿ ಎಲ್ಲೆಲ್ಲಿ ಮಳೆ ಸಾಧ್ಯತೆ? 

ಪೆನ್​ಡ್ರೈವ್ ರಿಲೀಸ್ ಹಿಂದೆ ಡಿ.ಕೆ ಶಿವಕುಮಾರ್ ಕೈವಾಡವಿದೆ

ಹಾಸನದಲ್ಲಿ ಅಶ್ಲೀಲ ವಿಡಿಯೋ ಹರಿದಾಟ ಪ್ರಕರಣದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಕೈವಾಡವಿದೆ ಅಂತ ವಕೀಲ ದೇವರಾಜೇಗೌಡ ಸ್ಫೋಟಕ ಆರೋಪ ಮಾಡಿದ್ದಾರೆ. ಪೆನ್​ಡ್ರೈವ್ ಪ್ರಕರಣದಲ್ಲಿ ನನ್ನನ್ನ ಆರೋಪಿ ಮಾಡಲು ಡಿಕೆಶಿ ಪ್ಲಾನ್ ಮಾಡಿದ್ದಾರೆ.. ಪೊಲೀಸರ ರಹಸ್ಯ ಸಭೆಯಲ್ಲಿ ಯಾಱರು ಈ ಕೇಸ್​ನಲ್ಲಿ ಇರಬೇಕು ಎಂಬುದನ್ನ ಡಿ.ಕೆ ಶಿವಕುಮಾರ್​ ಹೇಳಿದ್ದಾರೆ ಅಂತ ನೇರವಾಗಿ ದೇವರಾಜೇಗೌಡ ಆರೋಪಿಸಿದ್ದಾರೆ. ಈ ಪ್ರಕರಣದ ಕಥಾನಾಯಕ ಡಿ.ಕೆ ಶಿವಕುಮಾರ್​ ಅಂತ ಆರೋಪದ ಸಿಡಿಗುಂಡು ಸಿಡಿಸಿದ್ದಾರೆ.

‘ನನ್ನ ಫಿಕ್ಸ್​ ಮಾಡಲು ಪ್ಲಾನ್’

ತುರ್ತು ಅಧಿಕಾರಿಗಳ ಸಭೆ ಕರೆದು ಅಶ್ಲೀಲ ವಿಡಿಯೋ ಬಗ್ಗೆ ಬಿಟ್ಟರು, ಸಂತ್ರಸ್ತ ಮಹಿಳೆಯರ ಇವರಿಗೆ ಲೆಕ್ಕನೇ ಇಲ್ಲ. ಆದರೆ ವಿಡಿಯೋ ಹಂಚಿಕೆ ಮಾಡಿರುವ ಬಗ್ಗೆ ದೇವರಾಜೇಗೌಡರನ್ನ ಫಿಕ್ಸ್ ಮಾಡಬೇಕು ಎನ್ನುವ ಭಾವನೆಯಲ್ಲಿ ನೋಟಿಸ್​ ಅನ್ನು ನೀಡಲು ತುರ್ತು ಸಭೆ ಕರೆದು ಮಾತಾಡಿದ್ದಾರೆ. ನನಗೆ ಎಸ್​ಐಟಿಯಿಂದ ಫೋನ್ ಬಂತು. ನಿಮಗೆ ನೋಟಿಸ್ ಬರುತ್ತಿದೆ, ನೀವು ಬರಬೇಕು ಎಂದು ಹೇಳಿದ್ದಾರೆ. ಈ ಎಲ್ಲ ಗೇಮ್​ನ ಮಾಸ್ಟರ್ ಯಾರು ಅಂದರೆ ಡಿ.ಕೆ ಶಿವಕುಮಾರ್.

ದೇವರಾಜೇಗೌಡ, ವಕೀಲ

ಡಿಕೆಶಿ-ದೇವರಾಜೇಗೌಡ ಮಾತನಾಡಿರುವ ಆಡಿಯೋ ಬಿಡುಗಡೆ

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಕೇಸ್​ಗೆ ಮತ್ತೊಂದು ಟ್ವಿಸ್ಟ್​​​.. ಡಿಕೆಶಿ ಬಗ್ಗೆ ದೇವರಾಜೇಗೌಡ ಸ್ಫೋಟಕ ಸುಳಿವು

ಸುದ್ದಿಗೋಷ್ಠಿಯಲ್ಲಿ ಹಲವು ವಿಚಾರಗಳನ್ನ ಬಿಚ್ಚಿಟ್ಟ ವಕೀಲ ದೇವರಾಜೇಗೌಡ ಡಿ.ಕೆ ಶಿವಕುಮಾರ್​ ಜೊತೆ ತಾವು ಮಾತನಾಡಿರೋ ಆಡಿಯೋವನ್ನ ಬಿಡುಗಡೆಮಾಡಿದ್ದಾರೆ. ಇನ್ನೂ ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ತಮ್ಮನ್ನ ಭೇಟಿ ಮಾಡಿರೋ ವಿಡಿಯೋವನ್ನ ಸಹ ದೇವರಾಜೇಗೌಡ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ನನಗೆ ರಾಜ್ಯದ ಮಹಾನ್ ನಾಯಕ ಬಿಗ್ ಆಫರ್ಕೊಟ್ಟಿದ್ರು ಅಂತ ಡಿಕೆಶಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಇನ್ನೂ ಹೆಚ್.ಡಿ ರೇವಣ್ಣ ವಿರುದ್ಧ ನಾನು ಹೋರಾಟ ಮಾಡಿಕೊಂಡು ಬಂದಿದ್ದೇನೆ.. ಆದ್ರೆ ಇದನ್ನ ಕೆಲ ಕಿಡಿಗೇಡಿ ರಾಜಕಾರಣಿಗಳು, ತಮ್ಮ ರಾಜಕಾರಣಕ್ಕೆ ಬಳಕೆ ಮಾಡುತ್ತಿದ್ದಾರೆ.. ಎಸ್ಐಟಿ ತಂಡ ಸಾಕ್ಷಿ ಹಾಗೂ ಹೇಳಿಕೆಯನ್ನ ನನ್ನಿಂದ ಪಡೆದುಕೊಂಡಿದ್ದಾರೆ. ತಡೆಯಾಜ್ಞೆ ಇದ್ದರೂ ಪೆನ್ ಡ್ರೈವ್ ವಿಡಿಯೋ ಬಿಡುಗಡೆ ಮಾಡಿದ್ದಾರೆ, ಮುಖ ಸಹ ಬ್ಲರ್ ಮಾಡಿಲ್ಲ ಅಂತ ದೇವರಾಜೇಗೌಡ ಆರೋಪಗಳ ಸುರಿಮಳೆಗೈದಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಕೊರಳಿಗೆ ಸುತ್ತಿಕೊಂಡ ಅಶ್ಲೀಲ ವಿಡಿಯೋ ಹರಿದಾಟ ಪ್ರಕರಣ ಮತ್ಯಾವ ಮಜಲು ಪಡೆಯುತ್ತೆ ಅನ್ನೋದೆ ಕುತೂಹಲವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಾಯರ್ ಸಿಡಿಸಿರೋ ಬಾಂಬ್​​ಗೆ ಕಾಂಗ್ರೆಸ್​ ಕೋಟೆಯಲ್ಲಿ ನಡುಕ.. DCM ಬಗ್ಗೆ ದೇವರಾಜೇಗೌಡ ಗಂಭೀರ ಆರೋಪ

https://newsfirstlive.com/wp-content/uploads/2024/05/DKS_LAWYER.jpg

    ಡಿಕೆಶಿ ವಿರುದ್ಧ ವಕೀಲ ದೇವರಾಜೇಗೌಡ ಸ್ಫೋಟಕ ಆರೋಪ

    ದೇವರಾಜೇಗೌಡ- ಕಾರ್ತಿಕ್ ಭೇಟಿಯಾದ ವಿಡಿಯೋ ರಿಲೀಸ್​

    ಕ್ಷಣ ಕ್ಷಣಕ್ಕೂ ಟ್ವಿಸ್ಟ್​​.. ಒಬ್ಬೊಬ್ಬರದ್ದೂ ಒಂದೊಂದು ಹೇಳಿಕೆ

ಹಾಸನ ಅಶ್ಲೀಲ ವಿಡಿಯೋ ಹರಿದಾಟ ಪ್ರಕರಣ ರಾಜಕೀಯ ನಾಯಕರನ್ನೇ ಬೆಂಬಿಡದೆ ಕಾಡಲಾರಂಭಿಸಿದೆ. ಇದರ ಹಿಂದಿರೋರು ಯಾರು ಅನ್ನೋ ಪ್ರಶ್ನೆ ಮಧ್ಯೆ, ಜೆಡಿಎಸ್​-ಬಿಜೆಪಿ ಅಂತ ಸುರುಳಿ ಹೊಡೀತಿದ್ದ ಕೇಸ್​ ಸದ್ಯ ಡಿಸಿಎಂ ಸಾಹೇಬರ ಬುಡಕ್ಕೆ ಬಂದು ನಿಂತಿದೆ. ವಕೀಲ ದೇವರಾಜೇಗೌಡ ಇಟ್ಟ ಡೈನಮೆಟ್​ ಕಾಂಗ್ರೆಸ್​ ಕೋಟೆಯನ್ನ ಶೇಕ್​ ಶೇಕ್​ ಮಾಡಿದೆ.

ಕ್ಷಣ ಕ್ಷಣಕ್ಕೂ ಟ್ವಿಸ್ಟ್​​.. ಒಬ್ಬೊಬ್ಬರದ್ದೂ ಒಂದೊಂದು ಹೇಳಿಕೆ.. ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣ ಕ್ಷಣದಿಂದ ಕ್ಷಣಕ್ಕೆ ಹೊಸ ಹೊಸ ತಿರುವು ಪಡೆಯುತ್ತಿದೆ.. ಲೈಂಗಿಕ ದೌರ್ಜನ್ಯದ ಕೇಸ್​ನಲ್ಲಿ ಸುರುಳಿ ಹೊಡೆಯುತ್ತಿದ್ದ ಕೇಸ್​ ಸದ್ಯ​ ರಾಜಕೀಯ ಪಡಸಾಲೆಗೆ ಬಂದು ನಿಂತಿದೆ. ಸುದ್ದಿಗೋಷ್ಠಿ ನಡೆಸಿದ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಸಿಡಿಸಿರೋ ಬಾಂಬ್ ಕಾಂಗ್ರೆಸ್​ ಕೋಟೆಯಲ್ಲಿ ನಡುಕ ಹುಟ್ಟಿಸಿದೆ.

ಇದನ್ನೂ ಓದಿ: ರಾಜ್ಯದ ಹಲವೆಡೆ ಇಂದಿನಿಂದ ಮೇ 11ರವರೆಗೆ ಮಳೆ ಮುನ್ಸೂಚನೆ.. ಬೆಂಗಳೂರು ಸೇರಿ ಎಲ್ಲೆಲ್ಲಿ ಮಳೆ ಸಾಧ್ಯತೆ? 

ಪೆನ್​ಡ್ರೈವ್ ರಿಲೀಸ್ ಹಿಂದೆ ಡಿ.ಕೆ ಶಿವಕುಮಾರ್ ಕೈವಾಡವಿದೆ

ಹಾಸನದಲ್ಲಿ ಅಶ್ಲೀಲ ವಿಡಿಯೋ ಹರಿದಾಟ ಪ್ರಕರಣದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಕೈವಾಡವಿದೆ ಅಂತ ವಕೀಲ ದೇವರಾಜೇಗೌಡ ಸ್ಫೋಟಕ ಆರೋಪ ಮಾಡಿದ್ದಾರೆ. ಪೆನ್​ಡ್ರೈವ್ ಪ್ರಕರಣದಲ್ಲಿ ನನ್ನನ್ನ ಆರೋಪಿ ಮಾಡಲು ಡಿಕೆಶಿ ಪ್ಲಾನ್ ಮಾಡಿದ್ದಾರೆ.. ಪೊಲೀಸರ ರಹಸ್ಯ ಸಭೆಯಲ್ಲಿ ಯಾಱರು ಈ ಕೇಸ್​ನಲ್ಲಿ ಇರಬೇಕು ಎಂಬುದನ್ನ ಡಿ.ಕೆ ಶಿವಕುಮಾರ್​ ಹೇಳಿದ್ದಾರೆ ಅಂತ ನೇರವಾಗಿ ದೇವರಾಜೇಗೌಡ ಆರೋಪಿಸಿದ್ದಾರೆ. ಈ ಪ್ರಕರಣದ ಕಥಾನಾಯಕ ಡಿ.ಕೆ ಶಿವಕುಮಾರ್​ ಅಂತ ಆರೋಪದ ಸಿಡಿಗುಂಡು ಸಿಡಿಸಿದ್ದಾರೆ.

‘ನನ್ನ ಫಿಕ್ಸ್​ ಮಾಡಲು ಪ್ಲಾನ್’

ತುರ್ತು ಅಧಿಕಾರಿಗಳ ಸಭೆ ಕರೆದು ಅಶ್ಲೀಲ ವಿಡಿಯೋ ಬಗ್ಗೆ ಬಿಟ್ಟರು, ಸಂತ್ರಸ್ತ ಮಹಿಳೆಯರ ಇವರಿಗೆ ಲೆಕ್ಕನೇ ಇಲ್ಲ. ಆದರೆ ವಿಡಿಯೋ ಹಂಚಿಕೆ ಮಾಡಿರುವ ಬಗ್ಗೆ ದೇವರಾಜೇಗೌಡರನ್ನ ಫಿಕ್ಸ್ ಮಾಡಬೇಕು ಎನ್ನುವ ಭಾವನೆಯಲ್ಲಿ ನೋಟಿಸ್​ ಅನ್ನು ನೀಡಲು ತುರ್ತು ಸಭೆ ಕರೆದು ಮಾತಾಡಿದ್ದಾರೆ. ನನಗೆ ಎಸ್​ಐಟಿಯಿಂದ ಫೋನ್ ಬಂತು. ನಿಮಗೆ ನೋಟಿಸ್ ಬರುತ್ತಿದೆ, ನೀವು ಬರಬೇಕು ಎಂದು ಹೇಳಿದ್ದಾರೆ. ಈ ಎಲ್ಲ ಗೇಮ್​ನ ಮಾಸ್ಟರ್ ಯಾರು ಅಂದರೆ ಡಿ.ಕೆ ಶಿವಕುಮಾರ್.

ದೇವರಾಜೇಗೌಡ, ವಕೀಲ

ಡಿಕೆಶಿ-ದೇವರಾಜೇಗೌಡ ಮಾತನಾಡಿರುವ ಆಡಿಯೋ ಬಿಡುಗಡೆ

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಕೇಸ್​ಗೆ ಮತ್ತೊಂದು ಟ್ವಿಸ್ಟ್​​​.. ಡಿಕೆಶಿ ಬಗ್ಗೆ ದೇವರಾಜೇಗೌಡ ಸ್ಫೋಟಕ ಸುಳಿವು

ಸುದ್ದಿಗೋಷ್ಠಿಯಲ್ಲಿ ಹಲವು ವಿಚಾರಗಳನ್ನ ಬಿಚ್ಚಿಟ್ಟ ವಕೀಲ ದೇವರಾಜೇಗೌಡ ಡಿ.ಕೆ ಶಿವಕುಮಾರ್​ ಜೊತೆ ತಾವು ಮಾತನಾಡಿರೋ ಆಡಿಯೋವನ್ನ ಬಿಡುಗಡೆಮಾಡಿದ್ದಾರೆ. ಇನ್ನೂ ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ತಮ್ಮನ್ನ ಭೇಟಿ ಮಾಡಿರೋ ವಿಡಿಯೋವನ್ನ ಸಹ ದೇವರಾಜೇಗೌಡ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ನನಗೆ ರಾಜ್ಯದ ಮಹಾನ್ ನಾಯಕ ಬಿಗ್ ಆಫರ್ಕೊಟ್ಟಿದ್ರು ಅಂತ ಡಿಕೆಶಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಇನ್ನೂ ಹೆಚ್.ಡಿ ರೇವಣ್ಣ ವಿರುದ್ಧ ನಾನು ಹೋರಾಟ ಮಾಡಿಕೊಂಡು ಬಂದಿದ್ದೇನೆ.. ಆದ್ರೆ ಇದನ್ನ ಕೆಲ ಕಿಡಿಗೇಡಿ ರಾಜಕಾರಣಿಗಳು, ತಮ್ಮ ರಾಜಕಾರಣಕ್ಕೆ ಬಳಕೆ ಮಾಡುತ್ತಿದ್ದಾರೆ.. ಎಸ್ಐಟಿ ತಂಡ ಸಾಕ್ಷಿ ಹಾಗೂ ಹೇಳಿಕೆಯನ್ನ ನನ್ನಿಂದ ಪಡೆದುಕೊಂಡಿದ್ದಾರೆ. ತಡೆಯಾಜ್ಞೆ ಇದ್ದರೂ ಪೆನ್ ಡ್ರೈವ್ ವಿಡಿಯೋ ಬಿಡುಗಡೆ ಮಾಡಿದ್ದಾರೆ, ಮುಖ ಸಹ ಬ್ಲರ್ ಮಾಡಿಲ್ಲ ಅಂತ ದೇವರಾಜೇಗೌಡ ಆರೋಪಗಳ ಸುರಿಮಳೆಗೈದಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಕೊರಳಿಗೆ ಸುತ್ತಿಕೊಂಡ ಅಶ್ಲೀಲ ವಿಡಿಯೋ ಹರಿದಾಟ ಪ್ರಕರಣ ಮತ್ಯಾವ ಮಜಲು ಪಡೆಯುತ್ತೆ ಅನ್ನೋದೆ ಕುತೂಹಲವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More