ನನ್ನ ಮತ್ತು ಸಿಎಂ ಹೆಸರು ಹೇಳಿದ್ರೆ ಮಾತ್ರ ನೀವು ಸುದ್ದಿ ಮಾಡೋದು
ಅಮಿತ್ ಷಾ, ಕುಮಾರಸ್ವಾಮಿ ಒಪ್ಪಿಕೊಂಡ ಮೇಲೆ ಯಾಕೆ ಹರ್ಕೊತಾರೆ ಎಲ್ಲಾ
ಬಿಜೆಪಿಯವರು ಜೆಡಿಎಸ್ರವರನ್ನ ಬಳಸಿಕೊಂಡು ಏನೇನು ಬೇಕು ಮಾಡಿಸಿಕೊಳ್ತಿದ್ದಾರೆ
ಬೆಂಗಳೂರು: ಪಾಪ ಬಿಜೆಪಿಯವರು ಜೆಡಿಎಸ್ರವರನ್ನ ಬಳಸಿಕೊಂಡು ಏನೇನು ಬೇಕು ಮಾಡಿಸಿಕೊಳ್ತಾ ಇದ್ದಾರೆ. ಇದು ಹಾಸನ ಜಿಲ್ಲೆಗೆ ರಾಜ್ಯಕ್ಕೆ ಗೊತ್ತಿರೋ ವಿಚಾರ. ಅವರಿಗೆ ಅವಮಾನ ಆಗಿದೆ ಹಿಟ್ ಅಂಡ್ ರನ್ ಮಾಡಿಕೊಂಡಿದ್ದಾರೆ ಎಂದು ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಹಾಸನ ಅಶ್ಲೀಲ ವಿಡಿಯೋ ಕೇಸ್ಗೆ ಸಂಬಂಧಿಸಿ ಬಿಜೆಪಿ ಮುಖಂಡ ದೇವರಾಜೇಗೌಡರವರು ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದರು ಅದರಲ್ಲಿ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಎಂದು ಹೇಳಿದ್ದರು. ಈ ವಿಚಾರವಾಗಿ ಡಿಕೆಶಿವರು ಪ್ರಕ್ರಿಯಿಸಿದ್ದಾರೆ. ಏನಾದ್ರು ಮಾಡಿ ಡೈವರ್ಟ್ ಮಾಡಬೇಕು ಮಾಡ್ತಾವ್ರೆ. ಅವನು ಮಾಡಲಿ ಅವನಿಗೆ ಹೇಳಿಕಳಿಸುತ್ತಿದ್ದವನು ಮಾಡಲಿ. ಅವನು ಹೇಳಿದ ಕೂಡಲೇ ಟಿವಿ ಚಾನಲ್ ಅವರಿಗೆ ಯಾರು ಕಾಲ್ ಮಾಡಿ ಮಾತನಾಡಿದ್ದಾರೆ ಎಲ್ಲ ನನಗೆ ಗೋತ್ತು. ಈ ಬ್ಲಾಕ್ ಮೇಲ್ ಗೆ ಎಲ್ಲಾ ನಾವು ತಲೆಕೆಡಿಸಿಕೊಳ್ಳಲ್ಲ. ಅಮಿತ್ ಷಾ, ಕುಮಾರಸ್ವಾಮಿ ಒಪ್ಪಿಕೊಂಡ ಮೇಲೆ ಯಾಕೆ ಹರ್ಕೊತಾರೆ ಎಲ್ಲಾ. ಇದರ ಹಿಂದೆ ಯಾರಿದ್ದಾರೆ. ಹಿನ್ನಲೆ ಗಾಯಕರು ಯಾರಿದ್ದಾರೆ ಮ್ಯೂಜಿಕ್ ಯಾರು ಮಾಡ್ತಾರೆ ಅನ್ನೋದು ಗೊತ್ತು ಎಂದಿದ್ದಾರೆ.
ಇದನ್ನೂ ಓದಿ: ಲಾಯರ್ ಸಿಡಿಸಿರೋ ಬಾಂಬ್ಗೆ ಕಾಂಗ್ರೆಸ್ ಕೋಟೆಯಲ್ಲಿ ನಡುಕ.. DCM ಬಗ್ಗೆ ದೇವರಾಜೇಗೌಡ ಗಂಭೀರ ಆರೋಪ
ಕುಮಾರ ಸ್ವಾಮಿ ಹೇಳಿದ್ದಾರೆ ತಾನೇ. ನಮಗೂ ಅವರಿಗೂ ಸಂಬಂಧ ಇಲ್ಲ. ಮತ್ಯಾಕೆ ಇದೆಲ್ಲ. ಯಾರು ಮಾಡಿಸುತ್ತಿದ್ದಾರೋ ಅವರೆ ಧೈರ್ಯ ಇದ್ದರೆ ಬಂದು ಹೊರಗಡೆ ಬಂದು ಹೇಳಲಿ. ನನ್ನ ಮತ್ತು ಸಿಎಂ ಹೆಸರು ಹೇಳಿದ್ರೆ ಮಾತ್ರ ನೀವು ಸುದ್ದಿ ಮಾಡೋದು. ಹಾಗಾಗಿ ಹೇಳ್ತಾರೆ ನನ್ನ ಸಿಎಂ ಹೆಸರು ಹೇಳಲಿ ಬಿಡಿ ಎಂದು ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಏನಿದು ಘಟನೆ?
ಹಾಸನದಲ್ಲಿ ಅಶ್ಲೀಲ ವಿಡಿಯೋ ಹರಿದಾಟ ಪ್ರಕರಣದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಕೈವಾಡವಿದೆ ಅಂತ ವಕೀಲ ದೇವರಾಜೇಗೌಡ ಸ್ಫೋಟಕ ಆರೋಪ ಮಾಡಿದ್ದಾರೆ. ಪೆನ್ಡ್ರೈವ್ ಪ್ರಕರಣದಲ್ಲಿ ನನ್ನನ್ನ ಆರೋಪಿ ಮಾಡಲು ಡಿಕೆಶಿ ಪ್ಲಾನ್ ಮಾಡಿದ್ದಾರೆ.. ಪೊಲೀಸರ ರಹಸ್ಯ ಸಭೆಯಲ್ಲಿ ಯಾಱರು ಈ ಕೇಸ್ನಲ್ಲಿ ಇರಬೇಕು ಎಂಬುದನ್ನ ಡಿ.ಕೆ ಶಿವಕುಮಾರ್ ಹೇಳಿದ್ದಾರೆ ಅಂತ ನೇರವಾಗಿ ದೇವರಾಜೇಗೌಡ ಆರೋಪಿಸಿದ್ದಾರೆ. ಈ ಪ್ರಕರಣದ ಕಥಾನಾಯಕ ಡಿ.ಕೆ ಶಿವಕುಮಾರ್ ಅಂತ ಆರೋಪದ ಸಿಡಿಗುಂಡು ಸಿಡಿಸಿದ್ದಾರೆ.
‘ನನ್ನ ಫಿಕ್ಸ್ ಮಾಡಲು ಪ್ಲಾನ್’
ನಿನ್ನೆ ದೇವರಾಜೇಗೌಡರವರು, ‘ತುರ್ತು ಅಧಿಕಾರಿಗಳ ಸಭೆ ಕರೆದು ಅಶ್ಲೀಲ ವಿಡಿಯೋ ಬಗ್ಗೆ ಬಿಟ್ಟರು, ಸಂತ್ರಸ್ತ ಮಹಿಳೆಯರ ಇವರಿಗೆ ಲೆಕ್ಕನೇ ಇಲ್ಲ. ಆದರೆ ವಿಡಿಯೋ ಹಂಚಿಕೆ ಮಾಡಿರುವ ಬಗ್ಗೆ ದೇವರಾಜೇಗೌಡರನ್ನ ಫಿಕ್ಸ್ ಮಾಡಬೇಕು ಎನ್ನುವ ಭಾವನೆಯಲ್ಲಿ ನೋಟಿಸ್ ಅನ್ನು ನೀಡಲು ತುರ್ತು ಸಭೆ ಕರೆದು ಮಾತಾಡಿದ್ದಾರೆ. ನನಗೆ ಎಸ್ಐಟಿಯಿಂದ ಫೋನ್ ಬಂತು. ನಿಮಗೆ ನೋಟಿಸ್ ಬರುತ್ತಿದೆ, ನೀವು ಬರಬೇಕು ಎಂದು ಹೇಳಿದ್ದಾರೆ. ಈ ಎಲ್ಲ ಗೇಮ್ನ ಮಾಸ್ಟರ್ ಯಾರು ಅಂದರೆ ಡಿ.ಕೆ ಶಿವಕುಮಾರ್’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನನ್ನ ಮತ್ತು ಸಿಎಂ ಹೆಸರು ಹೇಳಿದ್ರೆ ಮಾತ್ರ ನೀವು ಸುದ್ದಿ ಮಾಡೋದು
ಅಮಿತ್ ಷಾ, ಕುಮಾರಸ್ವಾಮಿ ಒಪ್ಪಿಕೊಂಡ ಮೇಲೆ ಯಾಕೆ ಹರ್ಕೊತಾರೆ ಎಲ್ಲಾ
ಬಿಜೆಪಿಯವರು ಜೆಡಿಎಸ್ರವರನ್ನ ಬಳಸಿಕೊಂಡು ಏನೇನು ಬೇಕು ಮಾಡಿಸಿಕೊಳ್ತಿದ್ದಾರೆ
ಬೆಂಗಳೂರು: ಪಾಪ ಬಿಜೆಪಿಯವರು ಜೆಡಿಎಸ್ರವರನ್ನ ಬಳಸಿಕೊಂಡು ಏನೇನು ಬೇಕು ಮಾಡಿಸಿಕೊಳ್ತಾ ಇದ್ದಾರೆ. ಇದು ಹಾಸನ ಜಿಲ್ಲೆಗೆ ರಾಜ್ಯಕ್ಕೆ ಗೊತ್ತಿರೋ ವಿಚಾರ. ಅವರಿಗೆ ಅವಮಾನ ಆಗಿದೆ ಹಿಟ್ ಅಂಡ್ ರನ್ ಮಾಡಿಕೊಂಡಿದ್ದಾರೆ ಎಂದು ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಹಾಸನ ಅಶ್ಲೀಲ ವಿಡಿಯೋ ಕೇಸ್ಗೆ ಸಂಬಂಧಿಸಿ ಬಿಜೆಪಿ ಮುಖಂಡ ದೇವರಾಜೇಗೌಡರವರು ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದರು ಅದರಲ್ಲಿ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಎಂದು ಹೇಳಿದ್ದರು. ಈ ವಿಚಾರವಾಗಿ ಡಿಕೆಶಿವರು ಪ್ರಕ್ರಿಯಿಸಿದ್ದಾರೆ. ಏನಾದ್ರು ಮಾಡಿ ಡೈವರ್ಟ್ ಮಾಡಬೇಕು ಮಾಡ್ತಾವ್ರೆ. ಅವನು ಮಾಡಲಿ ಅವನಿಗೆ ಹೇಳಿಕಳಿಸುತ್ತಿದ್ದವನು ಮಾಡಲಿ. ಅವನು ಹೇಳಿದ ಕೂಡಲೇ ಟಿವಿ ಚಾನಲ್ ಅವರಿಗೆ ಯಾರು ಕಾಲ್ ಮಾಡಿ ಮಾತನಾಡಿದ್ದಾರೆ ಎಲ್ಲ ನನಗೆ ಗೋತ್ತು. ಈ ಬ್ಲಾಕ್ ಮೇಲ್ ಗೆ ಎಲ್ಲಾ ನಾವು ತಲೆಕೆಡಿಸಿಕೊಳ್ಳಲ್ಲ. ಅಮಿತ್ ಷಾ, ಕುಮಾರಸ್ವಾಮಿ ಒಪ್ಪಿಕೊಂಡ ಮೇಲೆ ಯಾಕೆ ಹರ್ಕೊತಾರೆ ಎಲ್ಲಾ. ಇದರ ಹಿಂದೆ ಯಾರಿದ್ದಾರೆ. ಹಿನ್ನಲೆ ಗಾಯಕರು ಯಾರಿದ್ದಾರೆ ಮ್ಯೂಜಿಕ್ ಯಾರು ಮಾಡ್ತಾರೆ ಅನ್ನೋದು ಗೊತ್ತು ಎಂದಿದ್ದಾರೆ.
ಇದನ್ನೂ ಓದಿ: ಲಾಯರ್ ಸಿಡಿಸಿರೋ ಬಾಂಬ್ಗೆ ಕಾಂಗ್ರೆಸ್ ಕೋಟೆಯಲ್ಲಿ ನಡುಕ.. DCM ಬಗ್ಗೆ ದೇವರಾಜೇಗೌಡ ಗಂಭೀರ ಆರೋಪ
ಕುಮಾರ ಸ್ವಾಮಿ ಹೇಳಿದ್ದಾರೆ ತಾನೇ. ನಮಗೂ ಅವರಿಗೂ ಸಂಬಂಧ ಇಲ್ಲ. ಮತ್ಯಾಕೆ ಇದೆಲ್ಲ. ಯಾರು ಮಾಡಿಸುತ್ತಿದ್ದಾರೋ ಅವರೆ ಧೈರ್ಯ ಇದ್ದರೆ ಬಂದು ಹೊರಗಡೆ ಬಂದು ಹೇಳಲಿ. ನನ್ನ ಮತ್ತು ಸಿಎಂ ಹೆಸರು ಹೇಳಿದ್ರೆ ಮಾತ್ರ ನೀವು ಸುದ್ದಿ ಮಾಡೋದು. ಹಾಗಾಗಿ ಹೇಳ್ತಾರೆ ನನ್ನ ಸಿಎಂ ಹೆಸರು ಹೇಳಲಿ ಬಿಡಿ ಎಂದು ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಏನಿದು ಘಟನೆ?
ಹಾಸನದಲ್ಲಿ ಅಶ್ಲೀಲ ವಿಡಿಯೋ ಹರಿದಾಟ ಪ್ರಕರಣದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಕೈವಾಡವಿದೆ ಅಂತ ವಕೀಲ ದೇವರಾಜೇಗೌಡ ಸ್ಫೋಟಕ ಆರೋಪ ಮಾಡಿದ್ದಾರೆ. ಪೆನ್ಡ್ರೈವ್ ಪ್ರಕರಣದಲ್ಲಿ ನನ್ನನ್ನ ಆರೋಪಿ ಮಾಡಲು ಡಿಕೆಶಿ ಪ್ಲಾನ್ ಮಾಡಿದ್ದಾರೆ.. ಪೊಲೀಸರ ರಹಸ್ಯ ಸಭೆಯಲ್ಲಿ ಯಾಱರು ಈ ಕೇಸ್ನಲ್ಲಿ ಇರಬೇಕು ಎಂಬುದನ್ನ ಡಿ.ಕೆ ಶಿವಕುಮಾರ್ ಹೇಳಿದ್ದಾರೆ ಅಂತ ನೇರವಾಗಿ ದೇವರಾಜೇಗೌಡ ಆರೋಪಿಸಿದ್ದಾರೆ. ಈ ಪ್ರಕರಣದ ಕಥಾನಾಯಕ ಡಿ.ಕೆ ಶಿವಕುಮಾರ್ ಅಂತ ಆರೋಪದ ಸಿಡಿಗುಂಡು ಸಿಡಿಸಿದ್ದಾರೆ.
‘ನನ್ನ ಫಿಕ್ಸ್ ಮಾಡಲು ಪ್ಲಾನ್’
ನಿನ್ನೆ ದೇವರಾಜೇಗೌಡರವರು, ‘ತುರ್ತು ಅಧಿಕಾರಿಗಳ ಸಭೆ ಕರೆದು ಅಶ್ಲೀಲ ವಿಡಿಯೋ ಬಗ್ಗೆ ಬಿಟ್ಟರು, ಸಂತ್ರಸ್ತ ಮಹಿಳೆಯರ ಇವರಿಗೆ ಲೆಕ್ಕನೇ ಇಲ್ಲ. ಆದರೆ ವಿಡಿಯೋ ಹಂಚಿಕೆ ಮಾಡಿರುವ ಬಗ್ಗೆ ದೇವರಾಜೇಗೌಡರನ್ನ ಫಿಕ್ಸ್ ಮಾಡಬೇಕು ಎನ್ನುವ ಭಾವನೆಯಲ್ಲಿ ನೋಟಿಸ್ ಅನ್ನು ನೀಡಲು ತುರ್ತು ಸಭೆ ಕರೆದು ಮಾತಾಡಿದ್ದಾರೆ. ನನಗೆ ಎಸ್ಐಟಿಯಿಂದ ಫೋನ್ ಬಂತು. ನಿಮಗೆ ನೋಟಿಸ್ ಬರುತ್ತಿದೆ, ನೀವು ಬರಬೇಕು ಎಂದು ಹೇಳಿದ್ದಾರೆ. ಈ ಎಲ್ಲ ಗೇಮ್ನ ಮಾಸ್ಟರ್ ಯಾರು ಅಂದರೆ ಡಿ.ಕೆ ಶಿವಕುಮಾರ್’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ