newsfirstkannada.com

×

ಡಿಕೆ ಬ್ರದರ್ಸ್‌ ವಿರುದ್ಧ ಮತ್ತೆ ರೊಚ್ಚಿಗೆದ್ದ HD ಕುಮಾರಸ್ವಾಮಿ; ಚುನಾವಣೆಗೂ ಮೊದ್ಲೇ ಅಕ್ರಮ ಆರೋಪ

Share :

Published February 26, 2024 at 2:35pm

    ‘ಚುನಾವಣೆ ಘೋಷಣೆಗೂ ಮೊದಲೇ ಡಿ.ಕೆ ಬ್ರದರ್ಸ್ ಅಕ್ರಮ’

    ಕೊಳ್ಳೆ ಹೊಡೆದಿರುವ ಹಣದಲ್ಲೇ ಇದೆಲ್ಲಾ ಮಾಡುತ್ತಿದ್ದಾರೆ- HDK

    ‘ದೊಡ್ಡಆಲಹಳ್ಳಿಯಲ್ಲಿ ಜನರಿಗೆ ಯಾವ ರೀಲ್ ತೋರಿಸಿ ಬಂದ್ರಿ’

ಕೋಲಾರ: ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಂಸದ ಡಿ.ಕೆ ಸುರೇಶ್ ವಿರುದ್ಧ ಮತ್ತೆ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ. ಲೋಕಸಭಾ ಚುನಾವಣೆ ಘೋಷಣೆಗೂ ಮೊದಲೇ ಡಿ.ಕೆ ಬ್ರದರ್ಸ್ ಅಕ್ರಮದಲ್ಲಿ ಭಾಗಿಯಾಗಿರುವ ಗಂಭೀರ ಆರೋಪ ಮಾಡಿದ್ದಾರೆ.

ಖಾಸಗಿ ಕಾರ್ಯಕ್ರಮದ ಹಿನ್ನೆಲೆ ಕೋಲಾರಕ್ಕೆ ಭೇಟಿ ನೀಡಿರುವ ಕುಮಾರಸ್ವಾಮಿ ಅವರು, ಡಿ.ಕೆ ಶಿವಕುಮಾರ್ ಅವರಿಗೆ ಅಸಹನೆ ಶುರುವಾಗಿದೆ. ಲೋಕಸಭಾ ಚುನಾವಣೆಯ ದಿನಾಂಕ ಇನ್ನೂ ಘೋಷಣೆಯೇ ಆಗಿಲ್ಲ. ಆಗಲೇ ಗಿಫ್ಟ್‌ಗಳ ಹಂಚಿಕೆ ಆರಂಭಿಸಿದ್ದಾರೆ. ಅಭಿವೃದ್ಧಿ ಮಾಡಿದ್ರೆ ಯಾಕೆ ಗಿಫ್ಟ್ ಹಂಚುತ್ತಿದ್ದರು. ಅವರು ಕೊಳ್ಳೆ ಹೊಡೆದಿರುವ ಹಣದಲ್ಲೇ ಇದೆಲ್ಲಾ ಮಾಡುತ್ತಿದ್ದಾರೆ. ಬಾಕ್ಸ್‌ಗಳಲ್ಲಿ ಫೋಟೊಗಳನ್ನ ಹಾಕಿಕೊಂಡು ಚೈನಾದಿಂದ ಕುಕ್ಕರು, ಮಿಕ್ಸಿ ಹಂಚಲು ಮುಂದಾಗಿದ್ದಾರೆ ಎಂದು ಹೆಚ್‌ಡಿಕೆ ಕಿಡಿಕಾರಿದ್ದಾರೆ.

ಇದನ್ನೂ ಓದಿ: VIDEO: ‘ಜೆಡಿಎಸ್‌ಗೆ ಸೋಲು ಖಚಿತ’- ಹೆಚ್‌.ಡಿ ಕುಮಾರಸ್ವಾಮಿಗೆ ಜಮೀರ್ ಅಹ್ಮದ್ ಸವಾಲು

ಕಲ್ಲು ಒಡೆಯುತ್ತೀವೋ ಕಸ ಎತ್ತುತ್ತಿವೋ ಅನ್ನೋ ಡಿ.ಕೆ ಸುರೇಶ್ ಅವರ ಹೇಳಿಕೆಗೆ ಟಾಂಗ್ ಕೊಟ್ಟ ಕುಮಾರಸ್ವಾಮಿ, ನನ್ನ ಜೀವನವೇ ಬೇರೆ, ಅವರ ಜೀವನವೇ ಬೇರೆ. ದೊಡ್ಡಆಲಹಳ್ಳಿಯಲ್ಲಿ ಜನರಿಗೆ ಯಾವ ರೀಲ್ ತೋರಿಸಿ ಬಂದ್ರಿ ಅನ್ನೋದು ಗೊತ್ತು. ಲೂಟಿ ಮಾಡಿ ಬೆಳೆದಿದ್ದೀರಿ. ನಾನು ಜನರ ಜೀವನ ಸರಿ ಮಾಡೋ ರೀಲ್​ಗಳನ್ನ ತೋರಿಸಿಕೊಂಡು ಬಂದಿದ್ದೀನಿ. ಕಲ್ಲು ಒಡೆದು, ಕುಟುಂಬಗಳಿಗೆ ಬೆದರಿಕೆ ಹಾಕಿದೋಱರು? ಅವ್ರಂತೆ ಕುಟುಂಬಗಳನ್ನ ಬೀದಿಗೆ ತಳ್ಳಿ ದುಡ್ಡು ಮಾಡಿದವನಲ್ಲ. ನಾನು ಓದುವಾಗಲೇ 3 ಲಾರಿಗಳನ್ನ ಹೊಂದಿದ್ದೆ. ಅವರ ಹಾಗೆ ನಾನು ಸಾಕಷ್ಟು ಕುಟುಂಬಗಳನ್ನ ಬೀದಿಗೆ ತಳ್ಳಿ ಅದರಲ್ಲಿ ದುಡ್ಡು ಮಾಡಿದವನಲ್ಲ. ಕಲ್ಲುಹೊಡೆದು ನೂರಾರು ಕುಟುಂಬಗಳಿಗೆ ಬೆದರಿಕೆ ಹಾಕಿದವರು ಯಾರು ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿಕೆ ಬ್ರದರ್ಸ್‌ ವಿರುದ್ಧ ಮತ್ತೆ ರೊಚ್ಚಿಗೆದ್ದ HD ಕುಮಾರಸ್ವಾಮಿ; ಚುನಾವಣೆಗೂ ಮೊದ್ಲೇ ಅಕ್ರಮ ಆರೋಪ

https://newsfirstlive.com/wp-content/uploads/2023/10/HdK-on-Dkshi-Brothers.jpg

    ‘ಚುನಾವಣೆ ಘೋಷಣೆಗೂ ಮೊದಲೇ ಡಿ.ಕೆ ಬ್ರದರ್ಸ್ ಅಕ್ರಮ’

    ಕೊಳ್ಳೆ ಹೊಡೆದಿರುವ ಹಣದಲ್ಲೇ ಇದೆಲ್ಲಾ ಮಾಡುತ್ತಿದ್ದಾರೆ- HDK

    ‘ದೊಡ್ಡಆಲಹಳ್ಳಿಯಲ್ಲಿ ಜನರಿಗೆ ಯಾವ ರೀಲ್ ತೋರಿಸಿ ಬಂದ್ರಿ’

ಕೋಲಾರ: ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಂಸದ ಡಿ.ಕೆ ಸುರೇಶ್ ವಿರುದ್ಧ ಮತ್ತೆ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ. ಲೋಕಸಭಾ ಚುನಾವಣೆ ಘೋಷಣೆಗೂ ಮೊದಲೇ ಡಿ.ಕೆ ಬ್ರದರ್ಸ್ ಅಕ್ರಮದಲ್ಲಿ ಭಾಗಿಯಾಗಿರುವ ಗಂಭೀರ ಆರೋಪ ಮಾಡಿದ್ದಾರೆ.

ಖಾಸಗಿ ಕಾರ್ಯಕ್ರಮದ ಹಿನ್ನೆಲೆ ಕೋಲಾರಕ್ಕೆ ಭೇಟಿ ನೀಡಿರುವ ಕುಮಾರಸ್ವಾಮಿ ಅವರು, ಡಿ.ಕೆ ಶಿವಕುಮಾರ್ ಅವರಿಗೆ ಅಸಹನೆ ಶುರುವಾಗಿದೆ. ಲೋಕಸಭಾ ಚುನಾವಣೆಯ ದಿನಾಂಕ ಇನ್ನೂ ಘೋಷಣೆಯೇ ಆಗಿಲ್ಲ. ಆಗಲೇ ಗಿಫ್ಟ್‌ಗಳ ಹಂಚಿಕೆ ಆರಂಭಿಸಿದ್ದಾರೆ. ಅಭಿವೃದ್ಧಿ ಮಾಡಿದ್ರೆ ಯಾಕೆ ಗಿಫ್ಟ್ ಹಂಚುತ್ತಿದ್ದರು. ಅವರು ಕೊಳ್ಳೆ ಹೊಡೆದಿರುವ ಹಣದಲ್ಲೇ ಇದೆಲ್ಲಾ ಮಾಡುತ್ತಿದ್ದಾರೆ. ಬಾಕ್ಸ್‌ಗಳಲ್ಲಿ ಫೋಟೊಗಳನ್ನ ಹಾಕಿಕೊಂಡು ಚೈನಾದಿಂದ ಕುಕ್ಕರು, ಮಿಕ್ಸಿ ಹಂಚಲು ಮುಂದಾಗಿದ್ದಾರೆ ಎಂದು ಹೆಚ್‌ಡಿಕೆ ಕಿಡಿಕಾರಿದ್ದಾರೆ.

ಇದನ್ನೂ ಓದಿ: VIDEO: ‘ಜೆಡಿಎಸ್‌ಗೆ ಸೋಲು ಖಚಿತ’- ಹೆಚ್‌.ಡಿ ಕುಮಾರಸ್ವಾಮಿಗೆ ಜಮೀರ್ ಅಹ್ಮದ್ ಸವಾಲು

ಕಲ್ಲು ಒಡೆಯುತ್ತೀವೋ ಕಸ ಎತ್ತುತ್ತಿವೋ ಅನ್ನೋ ಡಿ.ಕೆ ಸುರೇಶ್ ಅವರ ಹೇಳಿಕೆಗೆ ಟಾಂಗ್ ಕೊಟ್ಟ ಕುಮಾರಸ್ವಾಮಿ, ನನ್ನ ಜೀವನವೇ ಬೇರೆ, ಅವರ ಜೀವನವೇ ಬೇರೆ. ದೊಡ್ಡಆಲಹಳ್ಳಿಯಲ್ಲಿ ಜನರಿಗೆ ಯಾವ ರೀಲ್ ತೋರಿಸಿ ಬಂದ್ರಿ ಅನ್ನೋದು ಗೊತ್ತು. ಲೂಟಿ ಮಾಡಿ ಬೆಳೆದಿದ್ದೀರಿ. ನಾನು ಜನರ ಜೀವನ ಸರಿ ಮಾಡೋ ರೀಲ್​ಗಳನ್ನ ತೋರಿಸಿಕೊಂಡು ಬಂದಿದ್ದೀನಿ. ಕಲ್ಲು ಒಡೆದು, ಕುಟುಂಬಗಳಿಗೆ ಬೆದರಿಕೆ ಹಾಕಿದೋಱರು? ಅವ್ರಂತೆ ಕುಟುಂಬಗಳನ್ನ ಬೀದಿಗೆ ತಳ್ಳಿ ದುಡ್ಡು ಮಾಡಿದವನಲ್ಲ. ನಾನು ಓದುವಾಗಲೇ 3 ಲಾರಿಗಳನ್ನ ಹೊಂದಿದ್ದೆ. ಅವರ ಹಾಗೆ ನಾನು ಸಾಕಷ್ಟು ಕುಟುಂಬಗಳನ್ನ ಬೀದಿಗೆ ತಳ್ಳಿ ಅದರಲ್ಲಿ ದುಡ್ಡು ಮಾಡಿದವನಲ್ಲ. ಕಲ್ಲುಹೊಡೆದು ನೂರಾರು ಕುಟುಂಬಗಳಿಗೆ ಬೆದರಿಕೆ ಹಾಕಿದವರು ಯಾರು ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More