ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಸ್ಪರ್ಧೆ ಬಗ್ಗೆ ಚರ್ಚೆ
ತಮ್ಮ ಅಭಿಪ್ರಾಯ ನ್ಯೂಸ್ಫಸ್ಟ್ಗೆ ತಿಳಿಸಿದ ಕುಮಾರಸ್ವಾಮಿ
ಈ ವಿಚಾರದಲ್ಲಿ ಬಿಜೆಪಿ ಕುಮಾರಸ್ವಾಮಿಗೆ ಏನ್ ಹೇಳಿದ್ಯಂತೆ ಗೊತ್ತಾ?
ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಚರ್ಚೆ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನ್ಯೂಸ್ಫಸ್ಟ್ಗೆ ಎಕ್ಸ್ಕ್ಲೂಸೀವ್ ಆಗಿ ಮಾತನಾಡಿದ್ದಾರೆ.
ನ್ಯೂಸ್ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು.. ಮಂಜುನಾಥ್ ಅವರನ್ನು ಲೋಕಸಭೆ ಚುನಾವಣೆ ಸ್ಪರ್ಧೆ ಬಗ್ಗೆ ಚರ್ಚೆ ಇದೆ. ನಮ್ಮ ಮಿತ್ರ ಪಕ್ಷ ಬಿಜೆಪಿ ಅವರಿಂದಲೂ ನನಗೆ ಸಲಹೆ ಬಂದಿದೆ. ನಿಮ್ಮ ಪಕ್ಷದಿಂದ ಅವರನ್ನು ನಿಲ್ಲಿಸಬೇಡಿ. ನಮ್ಮ ಪಕ್ಷದಿಂದ ಅಭ್ಯರ್ಥಿ ಮಾಡಿಕೊಳ್ತೇವೆ ಬಿಟ್ಟುಬಿಡಿ ಎಂಬ ಸಲಹೆ ಬಂದಿದೆ.
ಇದನ್ನೂ ಓದಿ: ಸರ್ಕಾರ ಜಾತಿ ರಾಜಕಾರಣ ಮಾಡಿ ಡಾ. ಸಿ.ಎನ್.ಮಂಜುನಾಥ್ರನ್ನು ತೆಗೆದಿದೆ -HDK ಗಂಭೀರ ಆರೋಪ
ಬಿಜೆಪಿಯಿಂದಲೇ ಸಲಹೆ ಬಂದಿದೆ, ನಮ್ಮ ಪಕ್ಷದಿಂದಲೇ ನಿಲ್ಲಿಸಿಕೊಳ್ತೇವೆ ಎಂದು. ಅವರು ಲೋಕಸಭೆ ಚುನಾವಣೆಯಲ್ಲಿ ನಿಲ್ಲುವ ಬಗ್ಗೆ ಸ್ಪರ್ಧೆ ಮಾಡೋದಾದ್ರೆ, ಅವರು ಈ ಹಿಂದೆ ಮಾಡಿರುವ ಸಮಾಜ ಸೇವೆಯನ್ನು ನೋಡೋದಾದ್ರೆ, ಲೋಕಸಭೆ ಚುನಾವಣೆಗೆ ಒಪ್ಪಿಗೆ ನೀಡೋದಾದ್ರೆ ನಾಡಿನ ನಾಗರಿಕನಾಗಿ ನನಗೆ ಅದಕ್ಕಿಂತ ಒಳ್ಳೆಯ ಸುದ್ದಿ ಇಲ್ಲ. ಅವರು ಚುನಾವಣೆಗೆ ಸ್ಪರ್ಧಿಸಲು ಒಪ್ಪಿಗೆ ನೀಡಿದ್ರೆ ಅದಕ್ಕಿಂತ ಒಳ್ಳೆಯ ತೀರ್ಮಾನ ಮತ್ತೊಂದಿಲ್ಲ ಅನ್ನೋದು ನನ್ನ ಅಭಿಪ್ರಾಯ. ಯಾವುದೇ ಕ್ಷೇತ್ರದಲ್ಲೂ ನಿಂತರೂ ಕೂಡ ಜನ ಅವರನ್ನು ಆರಿಸಲು ಬಯಸುತ್ತಾರೆ ಎಂದಿದ್ದಾರೆ.
ಡಾ. ಮಂಜುನಾಥ್ ಲೋಕಸಭೆಗೆ ಸ್ಪರ್ಧಿಸಬೇಕು ಎಂದು ಬಿಜೆಪಿಯಿಂದಲೂ ಸಲಹೆ ಇದೆ. ಅವರು ಯಾವ ಕ್ಷೇತ್ರದಲ್ಲಿ ನಿಂತರೂ ಮಂಜುನಾಥ್ ಆಯ್ಕೆಯಾಗ್ತಾರೆ ಎಂದು ನ್ಯೂಸ್ಫಸ್ಟ್ EXCLUSIVE ಸಂದರ್ಶನದಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.@hd_kumaraswamy #CNManjunath #LokSabha2024 #BJP #Congress #NewsFirstKannada pic.twitter.com/qG1v3eYebY
— NewsFirst Kannada (@NewsFirstKan) February 3, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಸ್ಪರ್ಧೆ ಬಗ್ಗೆ ಚರ್ಚೆ
ತಮ್ಮ ಅಭಿಪ್ರಾಯ ನ್ಯೂಸ್ಫಸ್ಟ್ಗೆ ತಿಳಿಸಿದ ಕುಮಾರಸ್ವಾಮಿ
ಈ ವಿಚಾರದಲ್ಲಿ ಬಿಜೆಪಿ ಕುಮಾರಸ್ವಾಮಿಗೆ ಏನ್ ಹೇಳಿದ್ಯಂತೆ ಗೊತ್ತಾ?
ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಚರ್ಚೆ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನ್ಯೂಸ್ಫಸ್ಟ್ಗೆ ಎಕ್ಸ್ಕ್ಲೂಸೀವ್ ಆಗಿ ಮಾತನಾಡಿದ್ದಾರೆ.
ನ್ಯೂಸ್ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು.. ಮಂಜುನಾಥ್ ಅವರನ್ನು ಲೋಕಸಭೆ ಚುನಾವಣೆ ಸ್ಪರ್ಧೆ ಬಗ್ಗೆ ಚರ್ಚೆ ಇದೆ. ನಮ್ಮ ಮಿತ್ರ ಪಕ್ಷ ಬಿಜೆಪಿ ಅವರಿಂದಲೂ ನನಗೆ ಸಲಹೆ ಬಂದಿದೆ. ನಿಮ್ಮ ಪಕ್ಷದಿಂದ ಅವರನ್ನು ನಿಲ್ಲಿಸಬೇಡಿ. ನಮ್ಮ ಪಕ್ಷದಿಂದ ಅಭ್ಯರ್ಥಿ ಮಾಡಿಕೊಳ್ತೇವೆ ಬಿಟ್ಟುಬಿಡಿ ಎಂಬ ಸಲಹೆ ಬಂದಿದೆ.
ಇದನ್ನೂ ಓದಿ: ಸರ್ಕಾರ ಜಾತಿ ರಾಜಕಾರಣ ಮಾಡಿ ಡಾ. ಸಿ.ಎನ್.ಮಂಜುನಾಥ್ರನ್ನು ತೆಗೆದಿದೆ -HDK ಗಂಭೀರ ಆರೋಪ
ಬಿಜೆಪಿಯಿಂದಲೇ ಸಲಹೆ ಬಂದಿದೆ, ನಮ್ಮ ಪಕ್ಷದಿಂದಲೇ ನಿಲ್ಲಿಸಿಕೊಳ್ತೇವೆ ಎಂದು. ಅವರು ಲೋಕಸಭೆ ಚುನಾವಣೆಯಲ್ಲಿ ನಿಲ್ಲುವ ಬಗ್ಗೆ ಸ್ಪರ್ಧೆ ಮಾಡೋದಾದ್ರೆ, ಅವರು ಈ ಹಿಂದೆ ಮಾಡಿರುವ ಸಮಾಜ ಸೇವೆಯನ್ನು ನೋಡೋದಾದ್ರೆ, ಲೋಕಸಭೆ ಚುನಾವಣೆಗೆ ಒಪ್ಪಿಗೆ ನೀಡೋದಾದ್ರೆ ನಾಡಿನ ನಾಗರಿಕನಾಗಿ ನನಗೆ ಅದಕ್ಕಿಂತ ಒಳ್ಳೆಯ ಸುದ್ದಿ ಇಲ್ಲ. ಅವರು ಚುನಾವಣೆಗೆ ಸ್ಪರ್ಧಿಸಲು ಒಪ್ಪಿಗೆ ನೀಡಿದ್ರೆ ಅದಕ್ಕಿಂತ ಒಳ್ಳೆಯ ತೀರ್ಮಾನ ಮತ್ತೊಂದಿಲ್ಲ ಅನ್ನೋದು ನನ್ನ ಅಭಿಪ್ರಾಯ. ಯಾವುದೇ ಕ್ಷೇತ್ರದಲ್ಲೂ ನಿಂತರೂ ಕೂಡ ಜನ ಅವರನ್ನು ಆರಿಸಲು ಬಯಸುತ್ತಾರೆ ಎಂದಿದ್ದಾರೆ.
ಡಾ. ಮಂಜುನಾಥ್ ಲೋಕಸಭೆಗೆ ಸ್ಪರ್ಧಿಸಬೇಕು ಎಂದು ಬಿಜೆಪಿಯಿಂದಲೂ ಸಲಹೆ ಇದೆ. ಅವರು ಯಾವ ಕ್ಷೇತ್ರದಲ್ಲಿ ನಿಂತರೂ ಮಂಜುನಾಥ್ ಆಯ್ಕೆಯಾಗ್ತಾರೆ ಎಂದು ನ್ಯೂಸ್ಫಸ್ಟ್ EXCLUSIVE ಸಂದರ್ಶನದಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.@hd_kumaraswamy #CNManjunath #LokSabha2024 #BJP #Congress #NewsFirstKannada pic.twitter.com/qG1v3eYebY
— NewsFirst Kannada (@NewsFirstKan) February 3, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ