/newsfirstlive-kannada/media/post_attachments/wp-content/uploads/2024/09/DARSHAN_BALLARY_JAIL.jpg)
ಬಳ್ಳಾರಿ: ರೇಣುಕಾಸ್ವಾಮಿ ಕೇಸ್ನಲ್ಲಿ ಚಾರ್ಜ್ಶೀಟ್ ಸಲ್ಲಿಕೆಯಾದ ಬಳಿಕ ನಟ ದರ್ಶನ್ ಅಕ್ಷರಶಃ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಬಳ್ಳಾರಿ ಜೈಲಿನಲ್ಲಿರುವ ಆರೋಪಿ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ತೂಗುದೀಪ ಅವರು ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದಾರೆ.
ಸಂದರ್ಶಕರ ಕೊಠಡಿಯಲ್ಲಿ ಕುಟುಂಬ ಸದಸ್ಯರಿಗೆ ದರ್ಶನ್ ಅವರನ್ನು ಭೇಟಿಯಾಗಲು ಅವಕಾಶ ನೀಡಲಾಗಿದೆ.
ಕಾರಾಗೃಹದಲ್ಲಿ ಸೆಲ್ ನಂಬರ್ 15ರಲ್ಲಿರುವ ದರ್ಶನ್ ಅವರನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಸಂದರ್ಶಕರ ಕೊಠಡಿಗೆ ಕರೆ ತಂದರು.
ಬಳ್ಳಾರಿ ಜೈಲಿಗೆ ಬಂದ ಮೇಲೆ ಸೊರಗಿರುವ ನಟ ದರ್ಶನ್ ಅವರು ಬೇಸರ ಮುಖದಲ್ಲೇ ಸೆಲ್ನಿಂದ ಹೊರಗೆ ಬಂದಿದ್ದಾರೆ.
ಪೊಲೀಸರ ಜೊತೆ ಹೆಜ್ಜೆ ಹಾಕಿದ ದರ್ಶನ್ ಅವರು ನಗು ಮುಖದಿಂದ ಕುಟುಂಬ ಸದಸ್ಯರನ್ನು ಭೇಟಿಯಾಗಲು ಆಗಮಿಸಿದ್ದಾರೆ.
ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಆದ ಮೇಲೆ ಪತ್ನಿ ವಿಜಯಲಕ್ಷ್ಮಿ ಅವರು 2ನೇ ಬಾರಿ ಭೇಟಿ ಮಾಡುತ್ತಿದ್ದಾರೆ. ಸಹೋದರ ದಿನಕರ್ ತೂಗುದೀಪ ಅವರು ಬಳ್ಳಾರಿಯಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ