ಬೆಂಗಳೂರಿನಲ್ಲಿ 25 ಸಾವಿರಕ್ಕೂ ಅಧಿಕ ಹೋಟೆಲ್ಗಳಿವೆ
ಅನೇಕ ಹೋಟೆಲ್ಗಳ ಮೇಲೆ ಟ್ರೇಡ್ ಲೈಸೆನ್ಸ್ ಇಲ್ಲದ ಆರೋಪ
ಟ್ರೇಡ್ ಲೈಸೆನ್ಸ್ ಪಡೆಯಲು ಕೆಲ ಹೋಟೆಲ್ ಮಾಲೀಕರು ನಿರಾಸಕ್ತಿ
ಬೆಂಗಳೂರು: ಸಿಲಿಕಾನ್ ಸಿಟಿಯ ಗಲ್ಲಿ ಗಲ್ಲಿಯಲ್ಲೂ ಹೋಟೆಲ್ಗಳದ್ದೇ ಕಾರುಬಾರು. ಎತ್ತ ಕಣ್ಣಾಡಿಸಿದ್ರೂ ಭೋಜನ ಮನೆಗಳಿಗೇನೂ ಕಮ್ಮಿ ಇಲ್ಲ. ಆದ್ರೆ ಇಂತಹ ಅನೇಕ ಹೋಟೆಲ್ಗಳು ಟ್ರೇಡ್ ಲೈಸೆನ್ಸ್ ಪಡೆದಿಲ್ಲ ಅನ್ನೋ ಆರೋಪ ಕೇಳಿಬಂದಿದೆ.
ಆಹಾರ ಉತ್ಪನ್ನ ತಯಾರಿ ಮಾಡುವ ಎಲ್ಲ ಘಟಕಗಳು ಪರವಾನಗಿಯನ್ನು ಕಡ್ಡಾಯವಾಗಿ ಪಡೆಯಬೇಕೆಂಬ ನಿಯಮವಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದಲೂ ಲೈಸೆನ್ಸ್ ಪಡೆದಿರಬೇಕು ಅನ್ನೋ ಕಾನೂನು ಇದೆ. ಆದರೆ, ಇದಕ್ಕೆ ಬಹುತೇಕರು ಕಿಮ್ಮತ್ತು ನೀಡುತ್ತಿಲ್ಲ ಅನ್ನೋ ಆರೋಪ ಇದೆ. ಬೆಂಗಳೂರು ಗ್ರಾಮಾಂತರದಲ್ಲಿ 207 ಮತ್ತು ಬೆಂಗಳೂರು ನಗರದಲ್ಲಿ 316 ಹೋಟೆಲ್ಗಳು ಮಾತ್ರವೇ ಟ್ರೇಡ್ ಲೈಸೆನ್ಸ್ ಪಡೆದುಕೊಂಡಿವೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂದಾಜು 7 ಸಾವಿರ ಮತ್ತು ಬೆಂಗಳೂರಿನಲ್ಲಿ 25 ಸಾವಿರಕ್ಕೂ ಅಧಿಕ ಹೋಟೆಲ್ಗಳಿವೆ.
ಉದ್ದಿಮೆ ಪರವಾನಗಿ ವಿತರಣೆಯಿಂದ 2023-24ರಲ್ಲಿ ಸರಕಾರಕ್ಕೆ ಬಂದಿರುವ ಆದಾಯ ಕೇವಲ 214 ಕೋಟಿ ರೂಪಾಯಿಗಳು ಮಾತ್ರ. ಇನ್ನು ಈ ಬಗ್ಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್, ಮತ್ತು ಬಿಬಿಎಂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನ ಕೇಳಿದಾಗ ಅಸಡ್ಡೆಯಾಗಿ ಪ್ರತಿಕ್ರಿಯೆ ನೀಡುತ್ತಾರೆ. ಒಟ್ಟಿನಲ್ಲಿ ಟ್ರೇಡ್ ಲೈಸೆನ್ಸ್ ಬಗ್ಗೆ ಮಾಹಿತಿ ಇದ್ರು ಕೆಲ ಹೋಟೆಲ್ ಮಾಲೀಕರು ನಿರಾಸಕ್ತಿ ವಹಿಸ್ತಿರೋದಂತು ಸುಳ್ಳಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬೆಂಗಳೂರಿನಲ್ಲಿ 25 ಸಾವಿರಕ್ಕೂ ಅಧಿಕ ಹೋಟೆಲ್ಗಳಿವೆ
ಅನೇಕ ಹೋಟೆಲ್ಗಳ ಮೇಲೆ ಟ್ರೇಡ್ ಲೈಸೆನ್ಸ್ ಇಲ್ಲದ ಆರೋಪ
ಟ್ರೇಡ್ ಲೈಸೆನ್ಸ್ ಪಡೆಯಲು ಕೆಲ ಹೋಟೆಲ್ ಮಾಲೀಕರು ನಿರಾಸಕ್ತಿ
ಬೆಂಗಳೂರು: ಸಿಲಿಕಾನ್ ಸಿಟಿಯ ಗಲ್ಲಿ ಗಲ್ಲಿಯಲ್ಲೂ ಹೋಟೆಲ್ಗಳದ್ದೇ ಕಾರುಬಾರು. ಎತ್ತ ಕಣ್ಣಾಡಿಸಿದ್ರೂ ಭೋಜನ ಮನೆಗಳಿಗೇನೂ ಕಮ್ಮಿ ಇಲ್ಲ. ಆದ್ರೆ ಇಂತಹ ಅನೇಕ ಹೋಟೆಲ್ಗಳು ಟ್ರೇಡ್ ಲೈಸೆನ್ಸ್ ಪಡೆದಿಲ್ಲ ಅನ್ನೋ ಆರೋಪ ಕೇಳಿಬಂದಿದೆ.
ಆಹಾರ ಉತ್ಪನ್ನ ತಯಾರಿ ಮಾಡುವ ಎಲ್ಲ ಘಟಕಗಳು ಪರವಾನಗಿಯನ್ನು ಕಡ್ಡಾಯವಾಗಿ ಪಡೆಯಬೇಕೆಂಬ ನಿಯಮವಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದಲೂ ಲೈಸೆನ್ಸ್ ಪಡೆದಿರಬೇಕು ಅನ್ನೋ ಕಾನೂನು ಇದೆ. ಆದರೆ, ಇದಕ್ಕೆ ಬಹುತೇಕರು ಕಿಮ್ಮತ್ತು ನೀಡುತ್ತಿಲ್ಲ ಅನ್ನೋ ಆರೋಪ ಇದೆ. ಬೆಂಗಳೂರು ಗ್ರಾಮಾಂತರದಲ್ಲಿ 207 ಮತ್ತು ಬೆಂಗಳೂರು ನಗರದಲ್ಲಿ 316 ಹೋಟೆಲ್ಗಳು ಮಾತ್ರವೇ ಟ್ರೇಡ್ ಲೈಸೆನ್ಸ್ ಪಡೆದುಕೊಂಡಿವೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂದಾಜು 7 ಸಾವಿರ ಮತ್ತು ಬೆಂಗಳೂರಿನಲ್ಲಿ 25 ಸಾವಿರಕ್ಕೂ ಅಧಿಕ ಹೋಟೆಲ್ಗಳಿವೆ.
ಉದ್ದಿಮೆ ಪರವಾನಗಿ ವಿತರಣೆಯಿಂದ 2023-24ರಲ್ಲಿ ಸರಕಾರಕ್ಕೆ ಬಂದಿರುವ ಆದಾಯ ಕೇವಲ 214 ಕೋಟಿ ರೂಪಾಯಿಗಳು ಮಾತ್ರ. ಇನ್ನು ಈ ಬಗ್ಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್, ಮತ್ತು ಬಿಬಿಎಂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನ ಕೇಳಿದಾಗ ಅಸಡ್ಡೆಯಾಗಿ ಪ್ರತಿಕ್ರಿಯೆ ನೀಡುತ್ತಾರೆ. ಒಟ್ಟಿನಲ್ಲಿ ಟ್ರೇಡ್ ಲೈಸೆನ್ಸ್ ಬಗ್ಗೆ ಮಾಹಿತಿ ಇದ್ರು ಕೆಲ ಹೋಟೆಲ್ ಮಾಲೀಕರು ನಿರಾಸಕ್ತಿ ವಹಿಸ್ತಿರೋದಂತು ಸುಳ್ಳಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ