ಎಸ್ಐಟಿ ಪರ ಎಸ್ಪಿಪಿ ರವಿವರ್ಮಕುಮಾರ್ ವಾದ ಮಂಡಿಸಿದ್ರು
HD ರೇವಣ್ಣಗೆ ಪ್ರಕರಣದಲ್ಲಿ ಜಾಮೀನು ನೀಡಿರೋದು ಸರಿ ಅಲ್ವಾ?
ಜಾಮೀನು ಪಡೆದು ನಿರಾಳರಾಗಿದ್ದ ಮಾಜಿ ಸಚಿವ ರೇವಣ್ಣಗೆ ಸಂಕಷ್ಟ
ಸಂತ್ರಸ್ತ ಮಹಿಳೆಯ ಕಿಡ್ನಾಪ್ ಕೇಸ್ನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ನೀಡಿದೆ ಸರಿ. ಆದ್ರೆ ಜಾಮೀನು ರದ್ದು ಕೋರಿ ಎಸ್ಐಟಿ ಮೇಲ್ಮನವಿ ಸಲ್ಲಿಸಿದೆ. ಅರ್ಜಿಯನ್ನ ಹೈಕೋರ್ಟ್ ವಿಚಾರಣೆ ಮಾಡ್ತು. ಇದೇ ವೇಳೆ ಮಹಿಳೆಯ ಅಪಹರಣ ಕೇಸ್ ರದ್ದು ಕೋರಿ ಹೆಚ್.ಡಿ.ರೇವಣ್ಣ ಕೂಡ ಸಲ್ಲಿಸಿದ್ದ ಅರ್ಜಿ ಸೇರಿ ಎರಡೂ ಅರ್ಜಿಗಳ ವಿಚಾರಣೆ ನಡೆಸ್ತಿರುವ ಹೈಕೋರ್ಟ್ ಸೋಮವಾರಕ್ಕೆ ವಿಚಾರಣೆ ಮುಂದೂಡಿದೆ.
ಕೆ.ಆರ್. ನಗರ ಠಾಣೆಯಲ್ಲಿ ದಾಖಲಾಗಿದ್ದ ಕಿಡ್ನಾಪ್ ಕೇಸ್ನಲ್ಲಿ ಜಾಮೀನು ಪಡೆದು ನಿರಾಳರಾಗಿದ್ದ ಮಾಜಿ ಸಚಿವ ರೇವಣ್ಣಗೆ ಮತ್ತೆ ಸಂಕಷ್ಟ ಎದುರಾಗಿದೆ. ಜಾಮೀನಿನ ಮೇಲೆ ಹೊರಗೆ ಬಂದರೂ ಕೂಡ ತೂಗುಗತ್ತಿ ತೂಗುತ್ತಲೇ ಇದೆ.
ಹೈಕೋರ್ಟ್ನಲ್ಲಿ ರೇವಣ್ಣ ಜಾಮೀನು ರದ್ದು ಅರ್ಜಿ ವಿಚಾರಣೆ
ತಮ್ಮ ಮನೆಯಲ್ಲಿ ಮನೆಗೆಲಸಕ್ಕಿದ್ದ ಸಂತ್ರಸ್ತ ಮಹಿಳೆಯ ಅಪಹರಣ ಕೇಸ್ನಲ್ಲಿ ಹೆಚ್.ಡಿ.ರೇವಣ್ಣಗೆ ಮತ್ತಷ್ಟ ಸಂಕಟ ಎದುರಾಗುವ ಸಾಧ್ಯತೆ ಇದೆ. ಮೇ 13ರಂದು ಜನಪ್ರತಿನಿಧಿಗಳ ನ್ಯಾಯಾಲಯದಿಂದ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಹೆಚ್ಡಿ. ರೇವಣ್ಣ ನಿರಾಳರಾಗಿದ್ದರು.. ಈ ಬೆನ್ನಲ್ಲೇ ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ರೇವಣ್ಣಗೆ ನೀಡಿರುವ ಜಾಮೀನು ರದ್ದು ಮಾಡಬೇಕೆಂದು ಕೋರಲಾಗಿತ್ತು. ಮತ್ತೊಂದೆಡೆ ಇದೇ ಕೇಸ್ ರದ್ದು ಮಾಡುವಂತೆ ರೇವಣ್ಣ ಕೂಡ ಅರ್ಜಿ ಸಲ್ಲಿಸಿದ್ದರು. ಎರಡೂ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಪೀಠದಲ್ಲಿ ನಡೀತು. ಹೆಚ್.ಡಿ.ರೇವಣ್ಣ ಪರ ಸಿನಿಯರ್ ಕೌನ್ಸಿಲ್ ಸಿ.ವಿ.ನಾಗೇಶ್ ವಾದ ಮಂಡಿಸಿದ್ರು. ಎಸ್ಐಟಿ ಪರವಾಗಿ ಎಸ್ಪಿಪಿ ರವಿವರ್ಮಕುಮಾರ್ ಪ್ರತಿವಾದ ಮಂಡಿಸಿದ್ರು. ರೇವಣ್ಣಗೆ ಈ ಪ್ರಕರಣದಲ್ಲಿ ಜಾಮೀನು ನೀಡಿರೋದು ಸರಿಯಲ್ಲ. ಜಾಮೀನು ರದ್ದು ಮಾಡುವಂತೆ ಮನವಿ ಮಾಡಿದ್ರು. ಎಸ್ಐಟಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದ ನ್ಯಾಯಾಲಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.
ಕೋರ್ಟ್ನಲ್ಲಿ ನಡೆದ ವಾದ-ಪ್ರತಿವಾದ
ಸೀನಿಯರ್ ಕೌನ್ಸಿಲ್ ಸಿ.ವಿ.ನಾಗೇಶ್: ಪ್ರಕರಣದಲ್ಲಿ ಸೆಕ್ಷನ್ 364A ಹೇಗೆ ಹಾಕಿದ್ರು? ಇದು ಅನ್ಯಾಯ, ಸೆಕ್ಷನ್ 362ರ ಅಡಿಯಲ್ಲಿ ಕಿಡ್ನಾಪ್ ಪ್ರಕರಣಕ್ಕೆ ಬೇರೆ ವ್ಯಾಖ್ಯಾನ ಇದೆ, ಬಲವಂತವಾಗಿ ಅಥವಾ ವಂಚಿಸಿ ಕರೆದೊಯ್ದಿದ್ದರೆ ಅದು ಅಪಹರಣ.
ನ್ಯಾ.ಕೃಷ್ಣ ಎಸ್.ದೀಕ್ಷಿತ್: ಇದನ್ನ ನಾವು ಪ್ರಾಸಿಕ್ಯೂಷನ್ ಕೇಳೋಣ
ಎಸ್ಪಿಪಿ ರವಿವರ್ಮಕುಮಾರ್: ಕೇಸ್ನಲ್ಲಿ ರೇವಣ್ಣ ವಿರುದ್ಧ ಹಾಕಿರುವ ಸೆಕ್ಷನ್ ಸರಿಯಿದ್ದರೂ ಜಾಮೀನು ಮಂಜೂರಾಗಿದೆ. ಸೆಕ್ಷನ್ 364A ಹಾಕಿದ್ದು ಇದು ಜೀವಾವಧಿ ಶಿಕ್ಷೆ ಮತ್ತು ಮರಣದಂಡನೆ ನೀಡುವ ಸೆಕ್ಷನ್ ಆಗಿದೆ. ಹೀಗಿದ್ದಾಗ ಆರೋಪಿಗೆ ಜಾಮೀನು ನೀಡಿರೋದು ಸರಿಯಲ್ಲ.
ಸೀನಿಯರ್ ಕೌನ್ಸಿಲ್ ಸಿ.ವಿ.ನಾಗೇಶ್: ಇಲ್ಲಿ ಅಪಹರಣದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮಹಿಳೆ 10 ವರ್ಷದಿಂದ ಮನೆಗೆಲಸ ಮಾಡ್ತಿದ್ದರಿಂದ ಅವರಿಗೆ ಪರಿಚಯ ಇತ್ತು. ರೇವಣ್ಣ ಸಾಹೇಬ್ರು ಕರೆದ್ರು ಅಂತಾ ಸತೀಶ್ ಬಾಬಣ್ಣ ಕರೆದೊಯ್ದಿದ್ದಾರೆ, ಗೊತ್ತಿರುವ ವ್ಯಕ್ತಿ ಆಗಿರುವಾಗ ಅಪಹರಣ ಎನ್ನಲು ಆಗಲ್ಲ.
ನ್ಯಾ.ಕೃಷ್ಣ ಎಸ್.ದೀಕ್ಷಿತ್: ದಾವೂದ್ ಇಬ್ರಾಹಿಂ ಕರೆದಿದ್ದಾನೆ ಬಾ ಎಂದು ಕರೆದರೆ, ಅದೇ ರೀತಿ ಆಕೆ ಬರೆದಿದ್ದರೆ ಪರಿಸ್ಥಿತಿ ಏನಾಗುತ್ತದೆ. ಇದನ್ನ ಸಹ ನ್ಯಾಯಾಲಯದ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತೆ, ಇದನ್ನು ನೋಟಿಸ್ ಮಾಡೋಣ.
ಎಸ್ಪಿಪಿ ರವಿವರ್ಮಕುಮಾರ್: ದಿನಾಂಕ ಸಹಿತ ಕೇಸ್ನ ಬೆಳವಣಿಗೆಗಳನ್ನು ನೀಡುತ್ತೇನೆ. ತನಿಖೆಯ ಅಂಶಗಳನ್ನು ಸಲ್ಲಿಸಲಾಗುವುದು, ಪ್ರಕರಣದ ಕ್ರೋನಾಲಜಿಯನ್ನ ನೀಡುತ್ತೇವೆ.
ಇದನ್ನೂ ಓದಿ: ತ್ರಿವರ್ಣ ಧ್ವಜ ಹಿಡಿದು ಉಸಿರು ಚೆಲ್ಲಿದ ಯೋಧ; ದೇಶಭಕ್ತಿ ಗೀತೆಗೆ ಡ್ಯಾನ್ಸ್ ಮಾಡುವಾಗ ಸಾವು
ಸೀನಿಯರ್ ಕೌನ್ಸಿಲ್ ಸಿ.ವಿ.ನಾಗೇಶ್ : ಇಲ್ಲಿ ಯಾವುದೇ ಚಾನೆಲ್ ಹಾಕಿದ್ರೂ ಇದೇ ಇದೆ, ಬೇರೆ ವಿಚಾರವೇ ಇಲ್ಲ ಸ್ವಾಮಿ.
ನ್ಯಾ.ಕೃಷ್ಣ ಎಸ್.ದೀಕ್ಷಿತ್: ಹಾಗಿದ್ರೆ, ಸರಿ ಸೋಮವಾರ ಇತ್ಯರ್ಥಪಡಿಸೋಣ.
ಎಸ್ಪಿಪಿ ರವಿವರ್ಮಕುಮಾರ್: ಜಾಮೀನು ವಿರೋಧಿಸಿರುವ ಅರ್ಜಿ ಹಾಗೂ ಮತ್ತು ಅಪಹರಣ ರದ್ದು ಕೋರಿರುವ ಅರ್ಜಿ ಎರಡನ್ನೂ ಒಟ್ಟಿಗೆ ವಿಚಾರಣೆ ನಡೆಸಬೇಕು. ನ್ಯಾಯಾಲಯದ ಸಮಯ ಉಳಿಸುವುದಕ್ಕಾಗಿ ಹಾಗೆ ಮಾಡುವುದು ಒಳಿತು, ಎರಡೂ ಪ್ರಕರಣವನ್ನು ಒಟ್ಟಿಗೆ ತೆಗೆದುಕೊಳ್ಳಲು ನಮ್ಮ ತಕರಾರು ಇಲ್ಲ.
ನ್ಯಾ.ಕೃಷ್ಣ ಎಸ್.ದೀಕ್ಷಿತ್: ಇಡೀ ಕುಟುಂಬ ಪ್ರಾಸಿಕ್ಯೂಷನ್ ಕಸ್ಟಡಿಯಲ್ಲಿಯೇ ಇದೆ, ಅಪ್ಪ-ಅಮ್ಮ, ಮಗ ಎಲ್ಲರೂ ಅಲ್ಲೇ ಇದ್ದಾರೆ
ಹೈಕೋರ್ಟ್ ಜೂನ್ 3ಕ್ಕೆ ಅರ್ಜಿ ವಿಚಾರಣೆ ಮುಂದೂಡಿದ್ದು ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಸಂಕಷ್ಟ ತರುತ್ತಾ, ಅಥವಾ ರಿಲೀಫ್ ಕೊಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಎಸ್ಐಟಿ ಪರ ಎಸ್ಪಿಪಿ ರವಿವರ್ಮಕುಮಾರ್ ವಾದ ಮಂಡಿಸಿದ್ರು
HD ರೇವಣ್ಣಗೆ ಪ್ರಕರಣದಲ್ಲಿ ಜಾಮೀನು ನೀಡಿರೋದು ಸರಿ ಅಲ್ವಾ?
ಜಾಮೀನು ಪಡೆದು ನಿರಾಳರಾಗಿದ್ದ ಮಾಜಿ ಸಚಿವ ರೇವಣ್ಣಗೆ ಸಂಕಷ್ಟ
ಸಂತ್ರಸ್ತ ಮಹಿಳೆಯ ಕಿಡ್ನಾಪ್ ಕೇಸ್ನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ನೀಡಿದೆ ಸರಿ. ಆದ್ರೆ ಜಾಮೀನು ರದ್ದು ಕೋರಿ ಎಸ್ಐಟಿ ಮೇಲ್ಮನವಿ ಸಲ್ಲಿಸಿದೆ. ಅರ್ಜಿಯನ್ನ ಹೈಕೋರ್ಟ್ ವಿಚಾರಣೆ ಮಾಡ್ತು. ಇದೇ ವೇಳೆ ಮಹಿಳೆಯ ಅಪಹರಣ ಕೇಸ್ ರದ್ದು ಕೋರಿ ಹೆಚ್.ಡಿ.ರೇವಣ್ಣ ಕೂಡ ಸಲ್ಲಿಸಿದ್ದ ಅರ್ಜಿ ಸೇರಿ ಎರಡೂ ಅರ್ಜಿಗಳ ವಿಚಾರಣೆ ನಡೆಸ್ತಿರುವ ಹೈಕೋರ್ಟ್ ಸೋಮವಾರಕ್ಕೆ ವಿಚಾರಣೆ ಮುಂದೂಡಿದೆ.
ಕೆ.ಆರ್. ನಗರ ಠಾಣೆಯಲ್ಲಿ ದಾಖಲಾಗಿದ್ದ ಕಿಡ್ನಾಪ್ ಕೇಸ್ನಲ್ಲಿ ಜಾಮೀನು ಪಡೆದು ನಿರಾಳರಾಗಿದ್ದ ಮಾಜಿ ಸಚಿವ ರೇವಣ್ಣಗೆ ಮತ್ತೆ ಸಂಕಷ್ಟ ಎದುರಾಗಿದೆ. ಜಾಮೀನಿನ ಮೇಲೆ ಹೊರಗೆ ಬಂದರೂ ಕೂಡ ತೂಗುಗತ್ತಿ ತೂಗುತ್ತಲೇ ಇದೆ.
ಹೈಕೋರ್ಟ್ನಲ್ಲಿ ರೇವಣ್ಣ ಜಾಮೀನು ರದ್ದು ಅರ್ಜಿ ವಿಚಾರಣೆ
ತಮ್ಮ ಮನೆಯಲ್ಲಿ ಮನೆಗೆಲಸಕ್ಕಿದ್ದ ಸಂತ್ರಸ್ತ ಮಹಿಳೆಯ ಅಪಹರಣ ಕೇಸ್ನಲ್ಲಿ ಹೆಚ್.ಡಿ.ರೇವಣ್ಣಗೆ ಮತ್ತಷ್ಟ ಸಂಕಟ ಎದುರಾಗುವ ಸಾಧ್ಯತೆ ಇದೆ. ಮೇ 13ರಂದು ಜನಪ್ರತಿನಿಧಿಗಳ ನ್ಯಾಯಾಲಯದಿಂದ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಹೆಚ್ಡಿ. ರೇವಣ್ಣ ನಿರಾಳರಾಗಿದ್ದರು.. ಈ ಬೆನ್ನಲ್ಲೇ ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ರೇವಣ್ಣಗೆ ನೀಡಿರುವ ಜಾಮೀನು ರದ್ದು ಮಾಡಬೇಕೆಂದು ಕೋರಲಾಗಿತ್ತು. ಮತ್ತೊಂದೆಡೆ ಇದೇ ಕೇಸ್ ರದ್ದು ಮಾಡುವಂತೆ ರೇವಣ್ಣ ಕೂಡ ಅರ್ಜಿ ಸಲ್ಲಿಸಿದ್ದರು. ಎರಡೂ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಪೀಠದಲ್ಲಿ ನಡೀತು. ಹೆಚ್.ಡಿ.ರೇವಣ್ಣ ಪರ ಸಿನಿಯರ್ ಕೌನ್ಸಿಲ್ ಸಿ.ವಿ.ನಾಗೇಶ್ ವಾದ ಮಂಡಿಸಿದ್ರು. ಎಸ್ಐಟಿ ಪರವಾಗಿ ಎಸ್ಪಿಪಿ ರವಿವರ್ಮಕುಮಾರ್ ಪ್ರತಿವಾದ ಮಂಡಿಸಿದ್ರು. ರೇವಣ್ಣಗೆ ಈ ಪ್ರಕರಣದಲ್ಲಿ ಜಾಮೀನು ನೀಡಿರೋದು ಸರಿಯಲ್ಲ. ಜಾಮೀನು ರದ್ದು ಮಾಡುವಂತೆ ಮನವಿ ಮಾಡಿದ್ರು. ಎಸ್ಐಟಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದ ನ್ಯಾಯಾಲಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.
ಕೋರ್ಟ್ನಲ್ಲಿ ನಡೆದ ವಾದ-ಪ್ರತಿವಾದ
ಸೀನಿಯರ್ ಕೌನ್ಸಿಲ್ ಸಿ.ವಿ.ನಾಗೇಶ್: ಪ್ರಕರಣದಲ್ಲಿ ಸೆಕ್ಷನ್ 364A ಹೇಗೆ ಹಾಕಿದ್ರು? ಇದು ಅನ್ಯಾಯ, ಸೆಕ್ಷನ್ 362ರ ಅಡಿಯಲ್ಲಿ ಕಿಡ್ನಾಪ್ ಪ್ರಕರಣಕ್ಕೆ ಬೇರೆ ವ್ಯಾಖ್ಯಾನ ಇದೆ, ಬಲವಂತವಾಗಿ ಅಥವಾ ವಂಚಿಸಿ ಕರೆದೊಯ್ದಿದ್ದರೆ ಅದು ಅಪಹರಣ.
ನ್ಯಾ.ಕೃಷ್ಣ ಎಸ್.ದೀಕ್ಷಿತ್: ಇದನ್ನ ನಾವು ಪ್ರಾಸಿಕ್ಯೂಷನ್ ಕೇಳೋಣ
ಎಸ್ಪಿಪಿ ರವಿವರ್ಮಕುಮಾರ್: ಕೇಸ್ನಲ್ಲಿ ರೇವಣ್ಣ ವಿರುದ್ಧ ಹಾಕಿರುವ ಸೆಕ್ಷನ್ ಸರಿಯಿದ್ದರೂ ಜಾಮೀನು ಮಂಜೂರಾಗಿದೆ. ಸೆಕ್ಷನ್ 364A ಹಾಕಿದ್ದು ಇದು ಜೀವಾವಧಿ ಶಿಕ್ಷೆ ಮತ್ತು ಮರಣದಂಡನೆ ನೀಡುವ ಸೆಕ್ಷನ್ ಆಗಿದೆ. ಹೀಗಿದ್ದಾಗ ಆರೋಪಿಗೆ ಜಾಮೀನು ನೀಡಿರೋದು ಸರಿಯಲ್ಲ.
ಸೀನಿಯರ್ ಕೌನ್ಸಿಲ್ ಸಿ.ವಿ.ನಾಗೇಶ್: ಇಲ್ಲಿ ಅಪಹರಣದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮಹಿಳೆ 10 ವರ್ಷದಿಂದ ಮನೆಗೆಲಸ ಮಾಡ್ತಿದ್ದರಿಂದ ಅವರಿಗೆ ಪರಿಚಯ ಇತ್ತು. ರೇವಣ್ಣ ಸಾಹೇಬ್ರು ಕರೆದ್ರು ಅಂತಾ ಸತೀಶ್ ಬಾಬಣ್ಣ ಕರೆದೊಯ್ದಿದ್ದಾರೆ, ಗೊತ್ತಿರುವ ವ್ಯಕ್ತಿ ಆಗಿರುವಾಗ ಅಪಹರಣ ಎನ್ನಲು ಆಗಲ್ಲ.
ನ್ಯಾ.ಕೃಷ್ಣ ಎಸ್.ದೀಕ್ಷಿತ್: ದಾವೂದ್ ಇಬ್ರಾಹಿಂ ಕರೆದಿದ್ದಾನೆ ಬಾ ಎಂದು ಕರೆದರೆ, ಅದೇ ರೀತಿ ಆಕೆ ಬರೆದಿದ್ದರೆ ಪರಿಸ್ಥಿತಿ ಏನಾಗುತ್ತದೆ. ಇದನ್ನ ಸಹ ನ್ಯಾಯಾಲಯದ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತೆ, ಇದನ್ನು ನೋಟಿಸ್ ಮಾಡೋಣ.
ಎಸ್ಪಿಪಿ ರವಿವರ್ಮಕುಮಾರ್: ದಿನಾಂಕ ಸಹಿತ ಕೇಸ್ನ ಬೆಳವಣಿಗೆಗಳನ್ನು ನೀಡುತ್ತೇನೆ. ತನಿಖೆಯ ಅಂಶಗಳನ್ನು ಸಲ್ಲಿಸಲಾಗುವುದು, ಪ್ರಕರಣದ ಕ್ರೋನಾಲಜಿಯನ್ನ ನೀಡುತ್ತೇವೆ.
ಇದನ್ನೂ ಓದಿ: ತ್ರಿವರ್ಣ ಧ್ವಜ ಹಿಡಿದು ಉಸಿರು ಚೆಲ್ಲಿದ ಯೋಧ; ದೇಶಭಕ್ತಿ ಗೀತೆಗೆ ಡ್ಯಾನ್ಸ್ ಮಾಡುವಾಗ ಸಾವು
ಸೀನಿಯರ್ ಕೌನ್ಸಿಲ್ ಸಿ.ವಿ.ನಾಗೇಶ್ : ಇಲ್ಲಿ ಯಾವುದೇ ಚಾನೆಲ್ ಹಾಕಿದ್ರೂ ಇದೇ ಇದೆ, ಬೇರೆ ವಿಚಾರವೇ ಇಲ್ಲ ಸ್ವಾಮಿ.
ನ್ಯಾ.ಕೃಷ್ಣ ಎಸ್.ದೀಕ್ಷಿತ್: ಹಾಗಿದ್ರೆ, ಸರಿ ಸೋಮವಾರ ಇತ್ಯರ್ಥಪಡಿಸೋಣ.
ಎಸ್ಪಿಪಿ ರವಿವರ್ಮಕುಮಾರ್: ಜಾಮೀನು ವಿರೋಧಿಸಿರುವ ಅರ್ಜಿ ಹಾಗೂ ಮತ್ತು ಅಪಹರಣ ರದ್ದು ಕೋರಿರುವ ಅರ್ಜಿ ಎರಡನ್ನೂ ಒಟ್ಟಿಗೆ ವಿಚಾರಣೆ ನಡೆಸಬೇಕು. ನ್ಯಾಯಾಲಯದ ಸಮಯ ಉಳಿಸುವುದಕ್ಕಾಗಿ ಹಾಗೆ ಮಾಡುವುದು ಒಳಿತು, ಎರಡೂ ಪ್ರಕರಣವನ್ನು ಒಟ್ಟಿಗೆ ತೆಗೆದುಕೊಳ್ಳಲು ನಮ್ಮ ತಕರಾರು ಇಲ್ಲ.
ನ್ಯಾ.ಕೃಷ್ಣ ಎಸ್.ದೀಕ್ಷಿತ್: ಇಡೀ ಕುಟುಂಬ ಪ್ರಾಸಿಕ್ಯೂಷನ್ ಕಸ್ಟಡಿಯಲ್ಲಿಯೇ ಇದೆ, ಅಪ್ಪ-ಅಮ್ಮ, ಮಗ ಎಲ್ಲರೂ ಅಲ್ಲೇ ಇದ್ದಾರೆ
ಹೈಕೋರ್ಟ್ ಜೂನ್ 3ಕ್ಕೆ ಅರ್ಜಿ ವಿಚಾರಣೆ ಮುಂದೂಡಿದ್ದು ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಸಂಕಷ್ಟ ತರುತ್ತಾ, ಅಥವಾ ರಿಲೀಫ್ ಕೊಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ