ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಭರ್ಜರಿ ಪ್ರಚಾರ
ಪ್ರಚಾರ ವೇಳೆ ಕಾರು ಚಾಲಕನಿಂದ ಹಿಟ್ ಆ್ಯಂಡ್ ರನ್ ಕೇಸ್
ಕಾರು ಗುದ್ದಿದ ರಭಸಕ್ಕೆ ಕಾರ್ಯಕರ್ತ ಸ್ಥಳದಲ್ಲೇ ಸಾವು, ಮತ್ತಿಬ್ಬರಿಗೆ ಗಾಯ
ಕೊಡಗು: ಬಿಜೆಪಿ ಪ್ರಚಾರದ ವೇಳೆ ಕಾರ್ಯಕರ್ತನೋರ್ವನಿಗೆ ಕಾರು ಅಪಘಾತವಾದ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿಯಲ್ಲಿ ನಡೆದಿದೆ. ಬಿಜೆಪಿ ಕಾರ್ಯಕರ್ತ ರಾಮಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಾಮಪ್ಪ ಮನೆ ಮನೆ ಪ್ರಚಾರಕ್ಕೆ ತೆರಳಿ ಹಿಂದಿರುಗುವಾಗ ಅಫಘಾತ ಸಂಭವಿಸಿದೆ. ಜೊತೆಗಿದ್ದ ರತೀಶ್ ಹಾಗೂ ಚೆನ್ನರಾಜ್ ಎಂಬ ಇಬ್ಬರಿಗೆ ಗಾಯವಾಗಿದೆ. ಗಾಯಗೊಂಡವರು ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ ಪ್ರಕರಣ.. ಮನೆಯ ಹಿಂಬದಿಯ ಚರಂಡಿಯಲ್ಲಿ ಚಿನ್ನದ ಬಳೆ, ಶೂಗಳು ಪತ್ತೆ
ಇನ್ನು ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗಿದೆ. ಕಾರು ಪ್ರಕರಣ ಸಂಬಂಧಿಸಿದಂತೆ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗುತ್ತಿದ್ದಂತೆಯೇ ಓರ್ವ ಯುವಕನ ಬಂಧನವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಭರ್ಜರಿ ಪ್ರಚಾರ
ಪ್ರಚಾರ ವೇಳೆ ಕಾರು ಚಾಲಕನಿಂದ ಹಿಟ್ ಆ್ಯಂಡ್ ರನ್ ಕೇಸ್
ಕಾರು ಗುದ್ದಿದ ರಭಸಕ್ಕೆ ಕಾರ್ಯಕರ್ತ ಸ್ಥಳದಲ್ಲೇ ಸಾವು, ಮತ್ತಿಬ್ಬರಿಗೆ ಗಾಯ
ಕೊಡಗು: ಬಿಜೆಪಿ ಪ್ರಚಾರದ ವೇಳೆ ಕಾರ್ಯಕರ್ತನೋರ್ವನಿಗೆ ಕಾರು ಅಪಘಾತವಾದ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿಯಲ್ಲಿ ನಡೆದಿದೆ. ಬಿಜೆಪಿ ಕಾರ್ಯಕರ್ತ ರಾಮಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಾಮಪ್ಪ ಮನೆ ಮನೆ ಪ್ರಚಾರಕ್ಕೆ ತೆರಳಿ ಹಿಂದಿರುಗುವಾಗ ಅಫಘಾತ ಸಂಭವಿಸಿದೆ. ಜೊತೆಗಿದ್ದ ರತೀಶ್ ಹಾಗೂ ಚೆನ್ನರಾಜ್ ಎಂಬ ಇಬ್ಬರಿಗೆ ಗಾಯವಾಗಿದೆ. ಗಾಯಗೊಂಡವರು ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ ಪ್ರಕರಣ.. ಮನೆಯ ಹಿಂಬದಿಯ ಚರಂಡಿಯಲ್ಲಿ ಚಿನ್ನದ ಬಳೆ, ಶೂಗಳು ಪತ್ತೆ
ಇನ್ನು ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗಿದೆ. ಕಾರು ಪ್ರಕರಣ ಸಂಬಂಧಿಸಿದಂತೆ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗುತ್ತಿದ್ದಂತೆಯೇ ಓರ್ವ ಯುವಕನ ಬಂಧನವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ