/newsfirstlive-kannada/media/post_attachments/wp-content/uploads/2024/06/G-Parameshwar-1.jpg)
ಜೆಡಿಎಸ್ MLC ಸೂರಜ್ ರೇವಣ್ಣ ವಿರುದ್ಧ ಸಲಿಂಗ ಲೈಂಗಿಕ ದೌರ್ಜನ್ಯ ಪ್ರಕರಣ ವಿಚಾರವಾಗಿ ಗೃಹ ಸಚಿವರು ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ. ಸಿಐಡಿ ತನಿಖೆಗೆ ಕೊಡೋದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಲೈಫ್ ಸೆಟ್ಲ್ ಮಾಡ್ತೀನಿ, ತೋಟದ ಮನೆಗೆ ಬಾ.. ಸೂರಜ್ ರೇವಣ್ಣ ವಿರುದ್ಧ ಸಂತ್ರಸ್ತನ ಆರೋಪಗಳೇನು?
ನಿನ್ನೆವರೆಗೂ ಕಂಪ್ಲೆಂಟ್ ಬಂದಿರಲಿಲ್ಲ. ಕಂಪ್ಲೇಂಟ್ ಬಂದ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ, ಅವರನ್ನು ಸೆಕ್ಯೂರ್ ಮಾಡಿದ್ದಾರೆ. ಎಫ್ಐಆರ್ ಆಗಿದೆ. ಈ ಕೇಸನ್ನ ಸಿಐಡಿ ತನಿಖೆಗೆ ಕೊಡ್ತೀವಿ. ಈ ರೀತಿಯ ಕೇಸ್ಗಳನ್ನ ಸಿಐಡಿಗೆ ಕೊಡಬೇಕಾಗುತ್ತೆ ಎಂದು ಡಾ. ಜಿ.ಪರಮೆಶ್ವರ್ ಹೇಳಿದ್ದಾರೆ.
ಇದನ್ನೂ ಓದಿ: ತಮ್ಮ ಪ್ರಜ್ವಲ್ ಬಳಿಕ ಅಣ್ಣ ಸೂರಜ್ ಬಂಧನ.. ರೇವಣ್ಣ ಕುಟುಂಬದ ಮೇಲಿರುವ ಆರೋಪಗಳು ಹೀಗಿವೆ
ಬಳಿಕ ‘ನನಗೇನು ಗೊತ್ತೋ ಅಷ್ಟನ್ನೇ ನಾನು ಹೇಳ್ತೀನಿ. ಕಂಪ್ಲೇಂಟ್ ಬಂದಿದೆ. ಏನ್ ಕ್ರಮ ತಗೋಬೇಕೋ ಪೊಲೀಸರು ಕ್ರಮ ತಗೋತಾರೆ. ಅದನ್ನ ಬಿಟ್ಟು ರಾಜಕೀಯ ಪ್ರೇರಿತ ಅಂತ ಕೆಲವರು ಹೇಳಿದ್ದಾರೆ. ಆ ಥರಹದ್ದು ನನಗಂತೂ ಯಾವ್ದು ಏನೂ ಗೊತ್ತಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ