ಹೂವಿನ ಅಂಗಡಿಯಲ್ಲಿ ಹಣ, ಚಿನ್ನದ ಬ್ಯಾಗ್ ಬಿಟ್ಟು ಹೋಗಿದ್ದ ಗ್ರಾಹಕ
ಕಂತೆ, ಕಂತೆ ದುಡ್ಡು, ಚಿನ್ನಾಭರಣಗಳನ್ನು ನೋಡಿ ಶಾಕ್ ಆದ ವ್ಯಾಪಾರಿ
ಹೂವಿನ ವ್ಯಾಪಾರಿ ಪ್ರಾಮಾಣಿಕತೆಗೆ ಮೆಚ್ಚಿದ ಗಜೇಂದ್ರಗಡ ಪೊಲೀಸರು
ಗದಗ: ಹೂವಿನ ಅಂಗಡಿಯಲ್ಲಿ ಗ್ರಾಹಕರೊಬ್ಬರು ಬಿಟ್ಟು ಹೋಗಿದ್ದ ಚಿನ್ನಾಭರಣದ ಬ್ಯಾಗ್ವೊಂದನ್ನು ವ್ಯಾಪಾರಿಯೊಬ್ಬರು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಹೂವಿನ ವ್ಯಾಪಾರಿ ಮುರ್ತುಜಾ ಎಂಬುವವರು ಪ್ರಾಮಾಣಿಕತೆ ಪ್ರದರ್ಶಿಸಿ ಮೆಚ್ಚುಗೆಗಳಿಸಿದ್ದಾರೆ.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಮುರ್ತುಜಾ ದಿಂಡವಾಡ ಎಂಬುವವರು ಹೂವಿನ ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರಿ ಮುರ್ತುಜಾ ದಿಂಡವಾಡ ಅವರ ಅಂಗಡಿಗೆ ಬಂದ ಮುತ್ತಪ್ಪ ಹಿರೇಕೊಪ್ಪ ಎಂಬುವವರು ಕೆಲಸದ ತರಾತುರಿಯಲ್ಲಿ ತಮ್ಮ ಚಿನ್ನಾಭರಣದ ಬ್ಯಾಗ್ ಅನ್ನು ಅಲ್ಲಿಯೇ ಬಿಟ್ಟು ಊರಿಗೆ ತೆರಳಿದ್ದರು. ಈ ವೇಳೆ ಬ್ಯಾಗ್ ಅನ್ನು ಗಮನಿಸಿದ ಹೂವಿನ ವ್ಯಾಪಾರಿ ಮುರ್ತುಜಾ ನೇರವಾಗಿ ಗಜೇಂದ್ರಗಡ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಬಳಿಕ ಬ್ಯಾಗ್ನಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣವನ್ನು ಪೊಲೀಸರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಹೂವಿನ ವ್ಯಾಪಾರಿಯ ಪ್ರಾಮಾಣಿಕತೆಗೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಅವರಿಗೆ ಸನ್ಮಾನವನ್ನೂ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಹೂವಿನ ಅಂಗಡಿಯಲ್ಲಿ ಹಣ, ಚಿನ್ನದ ಬ್ಯಾಗ್ ಬಿಟ್ಟು ಹೋಗಿದ್ದ ಗ್ರಾಹಕ
ಕಂತೆ, ಕಂತೆ ದುಡ್ಡು, ಚಿನ್ನಾಭರಣಗಳನ್ನು ನೋಡಿ ಶಾಕ್ ಆದ ವ್ಯಾಪಾರಿ
ಹೂವಿನ ವ್ಯಾಪಾರಿ ಪ್ರಾಮಾಣಿಕತೆಗೆ ಮೆಚ್ಚಿದ ಗಜೇಂದ್ರಗಡ ಪೊಲೀಸರು
ಗದಗ: ಹೂವಿನ ಅಂಗಡಿಯಲ್ಲಿ ಗ್ರಾಹಕರೊಬ್ಬರು ಬಿಟ್ಟು ಹೋಗಿದ್ದ ಚಿನ್ನಾಭರಣದ ಬ್ಯಾಗ್ವೊಂದನ್ನು ವ್ಯಾಪಾರಿಯೊಬ್ಬರು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಹೂವಿನ ವ್ಯಾಪಾರಿ ಮುರ್ತುಜಾ ಎಂಬುವವರು ಪ್ರಾಮಾಣಿಕತೆ ಪ್ರದರ್ಶಿಸಿ ಮೆಚ್ಚುಗೆಗಳಿಸಿದ್ದಾರೆ.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಮುರ್ತುಜಾ ದಿಂಡವಾಡ ಎಂಬುವವರು ಹೂವಿನ ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರಿ ಮುರ್ತುಜಾ ದಿಂಡವಾಡ ಅವರ ಅಂಗಡಿಗೆ ಬಂದ ಮುತ್ತಪ್ಪ ಹಿರೇಕೊಪ್ಪ ಎಂಬುವವರು ಕೆಲಸದ ತರಾತುರಿಯಲ್ಲಿ ತಮ್ಮ ಚಿನ್ನಾಭರಣದ ಬ್ಯಾಗ್ ಅನ್ನು ಅಲ್ಲಿಯೇ ಬಿಟ್ಟು ಊರಿಗೆ ತೆರಳಿದ್ದರು. ಈ ವೇಳೆ ಬ್ಯಾಗ್ ಅನ್ನು ಗಮನಿಸಿದ ಹೂವಿನ ವ್ಯಾಪಾರಿ ಮುರ್ತುಜಾ ನೇರವಾಗಿ ಗಜೇಂದ್ರಗಡ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಬಳಿಕ ಬ್ಯಾಗ್ನಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣವನ್ನು ಪೊಲೀಸರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಹೂವಿನ ವ್ಯಾಪಾರಿಯ ಪ್ರಾಮಾಣಿಕತೆಗೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಅವರಿಗೆ ಸನ್ಮಾನವನ್ನೂ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ