ಚಿನ್ನಾಭರಣ ಬ್ಯಾಗ್ ಕಳೆದುಕೊಂಡು ಕಂಗಾಲು ಆಗಿದ್ದ ಮಹಿಳೆ
ಬೆಲೆಬಾಳುವ ಒಡವೆಗಳನ್ನು ಹಿಂತಿರುಗಿಸಿದ ಚಾಲಕ, ಕಂಡಕ್ಟರ್
ಚಾಲಕ ಹಾಗೂ ಕಂಡಕ್ಟರ್ ಪ್ರಾಮಾಣಿಕತೆಗೆ ಮೆಚ್ಚಿದ ಸಾರ್ವಜನಿಕರು
ತುಮಕೂರು: ಕೆಎಸ್ಆರ್ಟಿಸಿ ಬಸ್ನಲ್ಲಿ ಆಕಸ್ಮಿಕವಾಗಿ ಬಿಟ್ಟು ಹೋಗಿದ್ದ ಚಿನ್ನಾಭರಣದ ಬ್ಯಾಗ್ವೊಂದನ್ನು ಮಹಿಳೆಗೆ ಹಿಂತಿರುಗಿಸಿ ಚಾಲಕ ಹಾಗೂ ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ. ಹೌದು, ಕೆಎಸ್ಆರ್ಟಿಸಿ ಬಸ್ನಲ್ಲಿ ಬರೋಬ್ಬರಿ 3 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಬ್ಯಾಗ್ವೊಂದನ್ನು ಮಹಿಳೆ ಮರೆತು ಬಿಟ್ಟು ಹೋಗಿದ್ದಳು.
ಇದನ್ನೂ ಓದಿ: VIDEO: ಹುಸಿಯಾದ AAP ನಾಯಕನ ಪ್ರತಿಜ್ಞೆ! BJP ಕಾರ್ಯಕರ್ತರಿಂದ ತಲೆ ಬೋಳಿಸಿಕೊಂಡ ವ್ಯಕ್ತಿ
ಬ್ಯಾಗ್ ಕಳೆದುಕೊಂಡ ಪ್ರಮಿಳಾ ಎಂಬ ಮಹಿಳೆಯು ಅದೋನಿಯಿಂದ ಬಳ್ಳಾರಿಗೆ ಪ್ರಯಾಣ ಬೆಳೆಸಿದ್ದಳು. ಆದರೆ ಇದೇ ವೇಳೆ ಆ ಬ್ಯಾಗ್ ಬಳ್ಳಾರಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ಮರೆತು ಹೋಗಿದ್ದಾರೆ. ಇನ್ನು, ಹೀಗೆ ಬಸ್ ಪರಿಶೀಲನೆ ವೇಳೆ ಬ್ಯಾಗ್ನಲ್ಲಿ ಬೆಲೆಬಾಳುವ ಒಡವೆಗಳನ್ನು ಚಾಲಕ ಸಂತೋಷ್ ಕಣವಿ ಹಾಗೂ ನಿರ್ವಾಹಕ ಕಲ್ಲಪ್ಪ ಹನುಮಂತ್ ಕವಣಿ ನೋಡಿದ್ದಾರೆ. ಬಳಿಕ ಹೊಸಪೇಟೆ ಬಳ್ಳಾರಿ ಹಾಗೂ ಶಿರಾ ಡಿಪೋಗಳ ಸಹಕಾರದೊಂದಿಗೆ ಮಹಿಳೆಯನ್ನು ಪತ್ತೆ ಹಚ್ಚಿ ಬ್ಯಾಗ್ ಅನ್ನು ವಾಪಸ್ ನೀಡಿದ್ದಾರೆ. ಇನ್ನು, ಚಾಲಕ ಹಾಗೂ ನಿರ್ವಾಹಕರ ಮಾನವೀಯತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಚಿನ್ನಾಭರಣ ಬ್ಯಾಗ್ ಕಳೆದುಕೊಂಡು ಕಂಗಾಲು ಆಗಿದ್ದ ಮಹಿಳೆ
ಬೆಲೆಬಾಳುವ ಒಡವೆಗಳನ್ನು ಹಿಂತಿರುಗಿಸಿದ ಚಾಲಕ, ಕಂಡಕ್ಟರ್
ಚಾಲಕ ಹಾಗೂ ಕಂಡಕ್ಟರ್ ಪ್ರಾಮಾಣಿಕತೆಗೆ ಮೆಚ್ಚಿದ ಸಾರ್ವಜನಿಕರು
ತುಮಕೂರು: ಕೆಎಸ್ಆರ್ಟಿಸಿ ಬಸ್ನಲ್ಲಿ ಆಕಸ್ಮಿಕವಾಗಿ ಬಿಟ್ಟು ಹೋಗಿದ್ದ ಚಿನ್ನಾಭರಣದ ಬ್ಯಾಗ್ವೊಂದನ್ನು ಮಹಿಳೆಗೆ ಹಿಂತಿರುಗಿಸಿ ಚಾಲಕ ಹಾಗೂ ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ. ಹೌದು, ಕೆಎಸ್ಆರ್ಟಿಸಿ ಬಸ್ನಲ್ಲಿ ಬರೋಬ್ಬರಿ 3 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಬ್ಯಾಗ್ವೊಂದನ್ನು ಮಹಿಳೆ ಮರೆತು ಬಿಟ್ಟು ಹೋಗಿದ್ದಳು.
ಇದನ್ನೂ ಓದಿ: VIDEO: ಹುಸಿಯಾದ AAP ನಾಯಕನ ಪ್ರತಿಜ್ಞೆ! BJP ಕಾರ್ಯಕರ್ತರಿಂದ ತಲೆ ಬೋಳಿಸಿಕೊಂಡ ವ್ಯಕ್ತಿ
ಬ್ಯಾಗ್ ಕಳೆದುಕೊಂಡ ಪ್ರಮಿಳಾ ಎಂಬ ಮಹಿಳೆಯು ಅದೋನಿಯಿಂದ ಬಳ್ಳಾರಿಗೆ ಪ್ರಯಾಣ ಬೆಳೆಸಿದ್ದಳು. ಆದರೆ ಇದೇ ವೇಳೆ ಆ ಬ್ಯಾಗ್ ಬಳ್ಳಾರಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ಮರೆತು ಹೋಗಿದ್ದಾರೆ. ಇನ್ನು, ಹೀಗೆ ಬಸ್ ಪರಿಶೀಲನೆ ವೇಳೆ ಬ್ಯಾಗ್ನಲ್ಲಿ ಬೆಲೆಬಾಳುವ ಒಡವೆಗಳನ್ನು ಚಾಲಕ ಸಂತೋಷ್ ಕಣವಿ ಹಾಗೂ ನಿರ್ವಾಹಕ ಕಲ್ಲಪ್ಪ ಹನುಮಂತ್ ಕವಣಿ ನೋಡಿದ್ದಾರೆ. ಬಳಿಕ ಹೊಸಪೇಟೆ ಬಳ್ಳಾರಿ ಹಾಗೂ ಶಿರಾ ಡಿಪೋಗಳ ಸಹಕಾರದೊಂದಿಗೆ ಮಹಿಳೆಯನ್ನು ಪತ್ತೆ ಹಚ್ಚಿ ಬ್ಯಾಗ್ ಅನ್ನು ವಾಪಸ್ ನೀಡಿದ್ದಾರೆ. ಇನ್ನು, ಚಾಲಕ ಹಾಗೂ ನಿರ್ವಾಹಕರ ಮಾನವೀಯತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ