newsfirstkannada.com

VIDEO: ಹುಸಿಯಾದ AAP ನಾಯಕನ ಪ್ರತಿಜ್ಞೆ! BJP ಕಾರ್ಯಕರ್ತರಿಂದ ತಲೆ ಬೋಳಿಸಿಕೊಂಡ ವ್ಯಕ್ತಿ 

Share :

Published June 4, 2024 at 11:04pm

Update June 4, 2024 at 11:11pm

    ಮೋದಿ 3ನೇ ಬಾರಿಗೆ ಪ್ರಧಾನಿಯಾದರೆ ತಲೆ ಬೋಳಿಸ್ತೇನೆ

    AAP ನಾಯಕನ ಪ್ರತಿಜ್ಞೆಯನ್ನು ಅಣಕಿಸಿದ ಬಿಜೆಪಿ ಕಾರ್ಯಕರ್ತರು

    ರಾಜೀನಾಮೆ ಕೊಡ್ತೇನೆ ಎಂದಿದ್ದ ಕಾಂಗ್ರೆಸ್​ ಶಾಸಕ ಪ್ರದೀಪ್​ ಈಶ್ವರ್​

ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಮತ್ತೆ ಗದ್ದುಗೆ ಏರಿದೆ. ದೆಹಲಿಯಲ್ಲಿ ಎಲ್ಲಾ 7 ಲೋಕಸಭಾ ಕ್ಷೇತಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಆದರೆ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ವ್ಯಕ್ತಿಯೊಬ್ಬನ ತಲೆ ಬೋಳಿಸಿದ್ದಾರೆ. ಆ ಮೂಲಕ ಆಮ್​ ಆದ್ಮಿ ಪಕ್ಷದ ನಾಯಕ ಸೋಮನಾಥ್​ ಭಾರ್ತಿ ನೀಡಿದ ಹೇಳಿಕೆಯನ್ನು ಅಣಕಿಸಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ವೈರಲ್ ಆಗಿದೆ. ನವದೆಹಲಿಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದಂತೆ ಕಾರ್ಯಕರ್ತರು ವ್ಯಕ್ತಿಯ ತಲೆ ಬೋಳಿಸುವ ಮೂಲಕ ಸೋಮನಾಥ್​ ಭಾರ್ತಿ ಹೇಳಿದ ಪ್ರತಿಜ್ಞೆಯನ್ನು ಅಣಕಿಸಿದ್ದಾರೆ.

ಇದನ್ನೂ ಓದಿ: VIDEO: ತಲೆಕೆಳಗಾದ ಚುನಾವಣಾ ಫಲಿತಾಂಶದ ಅಂಕಿ ಅಂಶ.. ಲೈವ್​ನಲ್ಲೇ ಗಳಗಳನೆ ಅತ್ತ ಪ್ರದೀಪ್​ ಗುಪ್ತಾ 

ತಲೆ ಬೋಳಿಸ್ತೇನೆ ಎಂದಿದ್ದ ಸೋಮನಾಥ್​ ಭಾರ್ತಿ

ಜೂನ್​ 1ರಂದು ಆಮ್​ ಆದ್ಮಿ ಪಕ್ಷದ ನಾಯಕ ಸೋಮನಾಥ್​ ಭಾರ್ತಿಯವರು, ನರೇಂದ್ರ ಮೋದಿ ಅವರು ಪ್ರಧಾನಿ ಸ್ಥಾನವನ್ನು ಉಳಿಸಿಕೊಂಡರೆ ತಲೆ ಬೋಳಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದರು. “ಮೋದಿ 3ನೇ ಬಾರಿಗೆ ಪ್ರಧಾನಿಯಾದರೆ ನಾನು ನನ್ನ ತಲೆ ಬೋಳಿಸಿಕೊಳ್ಳುತ್ತೇನೆ. ನನ್ನ ಮಾತನ್ನು ನೆನಪಿಟ್ಟುಕೊಳ್ಳಿ. ಎಲ್ಲಾ ಎಕ್ಸಿಟ್ ಪೋಲ್‌ಗಳು ಜೂನ್ 4 ರಂದು ತಪ್ಪಾಗುತ್ತವೆ ಮತ್ತು ಮೋದಿ ಜಿ 3ನೇ ಬಾರಿಗೆ ಪ್ರಧಾನಿಯಾಗುವುದಿಲ್ಲ” ಎಂದು ಹೇಳಿದ್ದರು.

ಇದನ್ನೂ ಓದಿ: ‘ನನ್ನ ಅಣ್ಣ ಗೆದ್ದು ಬಿಟ್ಟ’.. ಯೂಸುಫ್​ ಪಠಾಣ್​ ಗೆಲುವಿನ ಸಂತಸವನ್ನು ಕೊಂಡಾಡಿದ ಇರ್ಫಾನ್​

ಆದರೆ ಇಂದು ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಸೋಮನಾಥ್​ ಭಾರ್ತಿ ನೀಡಿರುವ ಹೇಳಿಕೆಯನ್ನು ನೆನಪಿಸಿದ್ದಾರೆ. ನೀವು ತಲೆ ಬೋಳಿಸಬೇಕು ಎಂದು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ರಾಜೀನಾಮೆ ಕೊಡ್ತೇನೆ ಎಂದ ಪ್ರದೀಪ್​ ಈಶ್ವರ್​ 

ಚಿಕ್ಕಬಳ್ಲಾಪುರದ ಶಾಸಕ ಪ್ರದೀಪ್​ ಈಶ್ವರ್​ ಕೂಡ ಇದೇ ರೀತಿಯ ಪ್ರತಿಜ್ಞೆ  ಮಾಡಿ ಸೋತಿದ್ದಾರೆ. ಬಿಜೆಪಿಯಲ್ಲಿ ಸ್ಪರ್ಧಿಸಿದ್ದ ಡಾ. ಸುಧಾಕರ್​ಗೆ ಒಂದು ಮತ ಹೆಚ್ಚಿಗೆ ಬಂದರು ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು. ಆದರೆ ಡಾ. ಸುಧಾಕರ್​ ಜಯಭೇರಿ ಬಾರಿಸಿದ್ದಾರೆ. ಬಿಜೆಪಿ ನಾಯಕರುಗಳು ಪ್ರದೀಪ್​ ಈಶ್ವರ್​ ಹೇಳಿಕೆಯನ್ನು ನೆನಪಿಸಿದ್ದಾರೆ. ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಹುಸಿಯಾದ AAP ನಾಯಕನ ಪ್ರತಿಜ್ಞೆ! BJP ಕಾರ್ಯಕರ್ತರಿಂದ ತಲೆ ಬೋಳಿಸಿಕೊಂಡ ವ್ಯಕ್ತಿ 

https://newsfirstlive.com/wp-content/uploads/2024/06/Delhi.jpg

    ಮೋದಿ 3ನೇ ಬಾರಿಗೆ ಪ್ರಧಾನಿಯಾದರೆ ತಲೆ ಬೋಳಿಸ್ತೇನೆ

    AAP ನಾಯಕನ ಪ್ರತಿಜ್ಞೆಯನ್ನು ಅಣಕಿಸಿದ ಬಿಜೆಪಿ ಕಾರ್ಯಕರ್ತರು

    ರಾಜೀನಾಮೆ ಕೊಡ್ತೇನೆ ಎಂದಿದ್ದ ಕಾಂಗ್ರೆಸ್​ ಶಾಸಕ ಪ್ರದೀಪ್​ ಈಶ್ವರ್​

ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಮತ್ತೆ ಗದ್ದುಗೆ ಏರಿದೆ. ದೆಹಲಿಯಲ್ಲಿ ಎಲ್ಲಾ 7 ಲೋಕಸಭಾ ಕ್ಷೇತಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಆದರೆ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ವ್ಯಕ್ತಿಯೊಬ್ಬನ ತಲೆ ಬೋಳಿಸಿದ್ದಾರೆ. ಆ ಮೂಲಕ ಆಮ್​ ಆದ್ಮಿ ಪಕ್ಷದ ನಾಯಕ ಸೋಮನಾಥ್​ ಭಾರ್ತಿ ನೀಡಿದ ಹೇಳಿಕೆಯನ್ನು ಅಣಕಿಸಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ವೈರಲ್ ಆಗಿದೆ. ನವದೆಹಲಿಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದಂತೆ ಕಾರ್ಯಕರ್ತರು ವ್ಯಕ್ತಿಯ ತಲೆ ಬೋಳಿಸುವ ಮೂಲಕ ಸೋಮನಾಥ್​ ಭಾರ್ತಿ ಹೇಳಿದ ಪ್ರತಿಜ್ಞೆಯನ್ನು ಅಣಕಿಸಿದ್ದಾರೆ.

ಇದನ್ನೂ ಓದಿ: VIDEO: ತಲೆಕೆಳಗಾದ ಚುನಾವಣಾ ಫಲಿತಾಂಶದ ಅಂಕಿ ಅಂಶ.. ಲೈವ್​ನಲ್ಲೇ ಗಳಗಳನೆ ಅತ್ತ ಪ್ರದೀಪ್​ ಗುಪ್ತಾ 

ತಲೆ ಬೋಳಿಸ್ತೇನೆ ಎಂದಿದ್ದ ಸೋಮನಾಥ್​ ಭಾರ್ತಿ

ಜೂನ್​ 1ರಂದು ಆಮ್​ ಆದ್ಮಿ ಪಕ್ಷದ ನಾಯಕ ಸೋಮನಾಥ್​ ಭಾರ್ತಿಯವರು, ನರೇಂದ್ರ ಮೋದಿ ಅವರು ಪ್ರಧಾನಿ ಸ್ಥಾನವನ್ನು ಉಳಿಸಿಕೊಂಡರೆ ತಲೆ ಬೋಳಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದರು. “ಮೋದಿ 3ನೇ ಬಾರಿಗೆ ಪ್ರಧಾನಿಯಾದರೆ ನಾನು ನನ್ನ ತಲೆ ಬೋಳಿಸಿಕೊಳ್ಳುತ್ತೇನೆ. ನನ್ನ ಮಾತನ್ನು ನೆನಪಿಟ್ಟುಕೊಳ್ಳಿ. ಎಲ್ಲಾ ಎಕ್ಸಿಟ್ ಪೋಲ್‌ಗಳು ಜೂನ್ 4 ರಂದು ತಪ್ಪಾಗುತ್ತವೆ ಮತ್ತು ಮೋದಿ ಜಿ 3ನೇ ಬಾರಿಗೆ ಪ್ರಧಾನಿಯಾಗುವುದಿಲ್ಲ” ಎಂದು ಹೇಳಿದ್ದರು.

ಇದನ್ನೂ ಓದಿ: ‘ನನ್ನ ಅಣ್ಣ ಗೆದ್ದು ಬಿಟ್ಟ’.. ಯೂಸುಫ್​ ಪಠಾಣ್​ ಗೆಲುವಿನ ಸಂತಸವನ್ನು ಕೊಂಡಾಡಿದ ಇರ್ಫಾನ್​

ಆದರೆ ಇಂದು ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಸೋಮನಾಥ್​ ಭಾರ್ತಿ ನೀಡಿರುವ ಹೇಳಿಕೆಯನ್ನು ನೆನಪಿಸಿದ್ದಾರೆ. ನೀವು ತಲೆ ಬೋಳಿಸಬೇಕು ಎಂದು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ರಾಜೀನಾಮೆ ಕೊಡ್ತೇನೆ ಎಂದ ಪ್ರದೀಪ್​ ಈಶ್ವರ್​ 

ಚಿಕ್ಕಬಳ್ಲಾಪುರದ ಶಾಸಕ ಪ್ರದೀಪ್​ ಈಶ್ವರ್​ ಕೂಡ ಇದೇ ರೀತಿಯ ಪ್ರತಿಜ್ಞೆ  ಮಾಡಿ ಸೋತಿದ್ದಾರೆ. ಬಿಜೆಪಿಯಲ್ಲಿ ಸ್ಪರ್ಧಿಸಿದ್ದ ಡಾ. ಸುಧಾಕರ್​ಗೆ ಒಂದು ಮತ ಹೆಚ್ಚಿಗೆ ಬಂದರು ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು. ಆದರೆ ಡಾ. ಸುಧಾಕರ್​ ಜಯಭೇರಿ ಬಾರಿಸಿದ್ದಾರೆ. ಬಿಜೆಪಿ ನಾಯಕರುಗಳು ಪ್ರದೀಪ್​ ಈಶ್ವರ್​ ಹೇಳಿಕೆಯನ್ನು ನೆನಪಿಸಿದ್ದಾರೆ. ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More