ಮನೆಯಲ್ಲಿ ಶುಭಕಾರ್ಯಗಳು ಸ್ಥಗಿತವಾಗುವ ಭಯ ಕಾಡಬಹುದು
ಸ್ನೇಹಿತರೊಂದಿಗೆ ಚರ್ಚೆ ಮಾಡುವುದರಿಂದ ಸಮಾಧಾನ ಆಗಲಿದೆ
ದೊಡ್ಡ ಉದ್ಯೋಗಸ್ಥರಿಗೆ ರಾಷ್ಟ್ರಮಟ್ಟದಲ್ಲಿ ಹಿನ್ನಡೆಯಾಗಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ರೋಹಿಣಿ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12:00 ರಿಂದ 1:30 ರವರೆಗೆ
ಮೇಷ ರಾಶಿ
- ನಿಂತು ಹೋಗಿದ್ದ ಕೆಲಸ ಪುನಾರಂಭವಾಗಲಿದೆ
- ಸ್ನೇಹಿತರ ಸಹಾಯದಿಂದ ಹಿಂದೆ ಸರಿಯಬಾರದು
- ಚಿತ್ರರಂಗದವರಿಗೆ ಉತ್ತಮವಾದ ಕಾಲ
- ಗುತ್ತಿಗೆದಾರರಿಗೆ ಹಿನ್ನಡೆಯಾಗಬಹುದು
- ಅನುಭವಿಗಳ ಮಾತು ವಿರುದ್ಧವಾಗಿ ಪರಿಣಮಿಸಬಹುದು
- ಹಣದ ವಿಚಾರದಲ್ಲಿ ಕೋಪ ಬರಬಹುದು
- ಗುರು ದತ್ತಾತ್ರೇಯರನ್ನು ಪೂಜಿಸಿ
ವೃಷಭ
- ನಿಮ್ಮ ಸ್ವಭಾವವು ಜನರಿಗೆ ಸ್ಫೂರ್ತಿದಾಯಕವಾಗಿರಲಿದೆ
- ವ್ಯವಹಾರದಲ್ಲಿ ದೊಡ್ಡ ಮೋಸವಾಗಬಹುದು
- ಇಂದು ಆರ್ಥಿಕ ನಷ್ಟ ಉಂಟಾಗಬಹುದು
- ಹೊಸ ಕೆಲಸಕ್ಕೆ ಉತ್ತಮ ದಿನವಲ್ಲ
- ಧಾರ್ಮಿಕ ಚಟುವಟಿಕೆ ಆತ್ಮಸ್ಥೈರ್ಯ ತುಂಬಬಹುದು
- ಉಮಾ ಮಹೇಶ್ವರನನ್ನು ಆರಾಧನೆ ಮಾಡಿ
ಮಿಥುನ
- ಸಹೋದ್ಯೋಗಿಗಳ ಸಹಕಾರ ಇಲ್ಲದಿರುವುದರಿಂದ ಬೇಸರವಾಗಬಹುದು
- ಮಧುಮೇಹಿಗಳಿಗೆ ತುಂಬಾ ತೊಂದರೆಯ ಸೂಚನೆಯಿದೆ ಜಾಗ್ರತೆವಹಿಸಿ
- ಮನೆಯವರಿಗೆ ಆತಂಕ ಉಂಟಾಗಬಹುದು
- ಯಾರನ್ನೂ ಕೂಡ ಅತಿಯಾಗಿ ನಂಬಬಾರದು
- ಹಳೆಯ ವಿಚಾರಗಳು ನಿಮಗೆ ಒತ್ತಡ ತರಬಹುದು
- ಮಕ್ಕಳ ಬಗ್ಗೆ ಕಾಳಜಿ ವಹಿಸಿ
- ವಿಷ್ಣುವಿನ ಮಂತ್ರ ಜಪಿಸಿ
ಕಟಕ
- ಮನೆಗೆ ಗಣ್ಯವ್ಯಕ್ತಿಗಳು ಬರಬಹುದು
- ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ
- ವ್ಯವಹಾರದಲ್ಲಿ ದೊಡ್ಡ ಸಾಧನೆಗೆ ಅವಕಾಶವಿದೆ
- ಸರ್ಕಾರಿ ನೌಕರರಿಗೆ ಬಡ್ತಿ ಸಿಗಬಹುದು
- ಖಾಸಗಿ ಉದ್ಯೋಗಿಗಳ ಕಾರ್ಯಕ್ಷೇತ್ರ ವಿಸ್ತರಣೆಯಾಗಬಹುದು
- ಸ್ನೇಹಿತರೊಂದಿಗೆ ಚರ್ಚೆ ಮಾಡುವುದರಿಂದ ಸಮಾಧಾನ ಆಗಲಿದೆ
- ಗೋಮಾತೆಯನ್ನು ಪ್ರಾರ್ಥನೆ ಮಾಡಿ
ಸಿಂಹ
- ಸಾಮಾಜಿಕವಾಗಿ ನಿಮ್ಮ ಹೆಸರು ಪರಿಗಣಿಸಲ್ಪಡುತ್ತದೆ
- ಮನೆ ಅಥವಾ ಉದ್ಯೋಗ ಎರಡೂ ಕಡೆಗಳಲ್ಲಿ ಸಮಸ್ಯೆ ಕಾಣಲಿದೆ
- ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
- ಹೊಟ್ಟೆಕಿಚ್ಚಿನ ಜನ ನಿಮ್ಮನ್ನು ದೂಷಿಸಬಹುದು
- ಅಲ್ಪ ತೃಪ್ತಿಯ ಕೆಲಸವನ್ನು ಮಾಡಬೇಡಿ
- ಮನೆಯ ಅಲಂಕಾರಕ್ಕೆ ಹಣ ಖರ್ಚು ಆಗಲಿದೆ
- ಕುಲದೇವತಾರಾಧನೆ ಮಾಡಿ
ಕನ್ಯಾ
- ಹಣ್ಣು ವ್ಯಾಪಾರಿಗಳಿಗೆ ಲಾಭದ ದಿನ
- ದೊಡ್ಡ ಉದ್ಯೋಗಸ್ಥರಿಗೆ ರಾಷ್ಟ್ರಮಟ್ಟದಲ್ಲಿ ಹಿನ್ನಡೆಯಾಗಬಹುದು
- ಇಂದು ಧನಾಗಮನದ ಸೂಚನೆಯಿದೆ
- ಶೈಕ್ಷಣಿಕವಾಗಿ ಗುಣಮಟ್ಟ ಕಾಪಾಡಿಕೊಳ್ಳಬಹುದು
- ಆತ್ಮೀಯರ ಭೇಟಿ, ಭೋಜನ ಸುಖವೆನಿಸುತ್ತದೆ
- ಮಕ್ಕಳು ಜಾಗ್ರತೆಯಲ್ಲಿದ್ದರೆ ಒಳ್ಳೆಯದು
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ತುಲಾ
- ಮನೆಯಲ್ಲಿ ಶುಭಕಾರ್ಯಗಳು ಸ್ಥಗಿತವಾಗುವ ಭಯ ಕಾಡಬಹುದು
- ಮನೆಯವರಲ್ಲಿ ಪರಸ್ಪರ ಹೊಂದಾಣಿಕೆಯಿರುವುದಿಲ್ಲ
- ಸಾಲದ ವಿಚಾರದಲ್ಲಿ ತೊಂದರೆಯಾಗಬಹುದು
- ಇಂದು ವ್ಯವಹಾರದಲ್ಲಿ ಬದಲಾವಣೆಯಾಗಲಿದೆ
- ಲೆಕ್ಕ ಪರಿಶೋಧಕರಿಗೆ ಲಾಭದ ದಿನ
- ಹವಾಮಾನ ವೈಪರೀತ್ಯದಿಂದ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಪುಣ್ಯಕ್ಷೇತ್ರದ ದರ್ಶನಕ್ಕಾಗಿ ಹೋಗಬಹುದು
- ಹೊಸ ಜವಾಬ್ದಾರಿಗಳು ನಿಮ್ಮ ಮೇಲಿರುತ್ತದೆ
- ಸಾಮಾಜಿಕ ಕೆಲಸಗಳಲ್ಲಿ ಆಸಕ್ತಿ ಇರುವುದಿಲ್ಲ
- ಪೋಷಕರಿಗೆ ದುಃಖದ ದಿನವಾಗಬಹುದು
- ನಿರ್ಮಾಣ ಹಂತದಲ್ಲಿರುವ ಕಟ್ಟಡದ ಬಗ್ಗೆ ಮಾತುಕತೆ ಆಗಲಿದೆ
- ಆಭರಣಗಳ ಬಗ್ಗೆ ಕಾಳಜಿವಹಿಸಿ
- ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ಸಹೋದ್ಯೋಗಿಗಳ ಸ್ವಭಾವ ಅಥವಾ ವರ್ತನೆ ಬೇಸರ ತರಬಹುದು
- ಹಲ್ಲಿಗೆ ಸಂಬಂಧಿಸಿದ ತೊಂದರೆ ಅಥವಾ ನೋವು ಕಾಣಬಹುದು
- ರಾಜಕೀಯ ವ್ಯಕ್ತಿಗಳು ಸಂಪರ್ಕಕ್ಕೆ ಬಂದು ಸಹಾಯ ಮಾಡಬಹುದು
- ವಿದ್ಯಾರ್ಥಿಗಳಿಗೆ ಸ್ವಲ್ಪ ಸಮಸ್ಯೆಗಳಾಗಬಹುದು
- ಅನಾವಶ್ಯಕ ವಿಚಾರಗಳಿಂದ ಮನಸ್ತಾಪ ಉಂಟಾಗಬಹುದು
- ಶತ್ರುಗಳ ವಿರುದ್ಧ ಹೋರಾಟ ಮಾಡಬೇಡಿ ಶಾಂತವಾಗಿರಿ
- ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ
ಮಕರ
- ಸ್ಥಳ ಬದಲಾವಣೆಯಿಂದ ಅನುಕೂಲವಿದೆ
- ವ್ಯಾಪಾರದಲ್ಲಿ ಹಿನ್ನಡೆ, ಪದಾರ್ಥಗಳ ಬೆಲೆಯಲ್ಲಿ ವ್ಯತ್ಯಯ
- ಆದಾಯದ ಜಾಡು ಹಿಡಿದು ಹೋದಲ್ಲಿ ಸಫಲತೆಯಿದೆ
- ಮಾನಸಿಕ ಸಮಾಧಾನ ಇರುವುದಿಲ್ಲ
- ಸಾಯಂಕಾಲಕ್ಕೆ ಸ್ವಲ್ಪ ನೆಮ್ಮದಿಯ ನಿಟ್ಟುಸಿರು
- ಐಶ್ವರ್ಯಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಕುಂಭ
- ಬಂಧುಗಳಲ್ಲಿ ಪರಸ್ಪರ ವಿರೋಧ ಉಂಟಾಗಬಹುದು
- ಮಂಗಳ ಕಾರ್ಯ ನಿಂತು ಹೋಗುವ ಭಯ ಇರುತ್ತದೆ
- ಹಣದ ಸಮಸ್ಯೆ ಇಲ್ಲದಿದ್ದರೂ ವಿನಾಕಾರಣ ವೆಚ್ಚ
- ಮಾನಸಿಕ ಅದಃ ಪತನವಾಗುವುದು
- ಸಮಾಜದಲ್ಲಿ ಅವಮಾನ, ಅಪಕೀರ್ತಿ ದಿನ
- ಕುಟುಂಬದವರಲ್ಲಿ ಮಾತುಕತೆ ತುಂಬಾ ಪರಿಣಾಮಕಾರಿಯಾಗಿರುತ್ತದೆ
- ವೆಂಕಟರಮಣನನ್ನು ಪ್ರಾರ್ಥನೆ ಮಾಡಿ
ಮೀನ
- ಶಾಂತಿಯಾಗಿರುವುದು, ಮೌನವಾಗಿರುವುದು ನಿಮಗೆ ಉತ್ತಮ
- ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಬಹುದು
- ಲೇಖಕರಿಗೆ, ಪುಸ್ತಕ ವ್ಯಾಪಾರಸ್ಥರಿಗೆ ಅನುಕೂಲವಿದೆ
- ಹಳೆಯ ಬಾಕಿ ಅಥವಾ ನಿರೀಕ್ಷೆಯಲ್ಲಿದ್ದ ವಿಚಾರ ಮುನ್ನೆಲೆಗೆ ಬರಬಹುದು
- ನಿಮ್ಮ ಆರೋಗ್ಯ ಗಮನಿಸಿ ತಾತ್ಸಾರ ಮಾಡಬೇಡಿ
- ಹಳೆಯ ನೆನಪುಗಳು ಕಾಡಬಹುದು
- ಚೌಡೇಶ್ವರಿ ದೇವಿಯನ್ನು ಕೆಂಪು ಹೂಗಳಿಂದ ಪೂಜೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ