newsfirstkannada.com

ಮಾಜಿ ಪ್ಲೇಯರ್​ ಹೇಳಿದ 6 ಸಿಕ್ಸರ್​ ಸುಳ್ಳು.. ಸಂಜು ಸ್ಯಾಮ್ಸನ್​​​​​​ ಕರಿಯರ್ ಫುಲ್​ ಚೇಂಜ್!

Share :

Published May 8, 2024 at 2:13pm

    ಈಗ ರಾಜಸ್ಥಾನ ಅಂದ್ರೆ ಸ್ಯಾಮ್ಸನ್​​, ಸ್ಯಾಮ್ಸನ್ ಅಂದ್ರೆ ರಾಜಸ್ಥಾನ

    ಸಂಜು ಸ್ಯಾಮ್ಸನ್​​ IPL​ಗೆ ಬರಲು ಮಾಜಿ ಪ್ಲೇಯರ್ ಕಾರಣನಾ..?

    ಐಪಿಎಲ್​ ವೇಳೆ ಹೋಟೆಲ್​​​ನಲ್ಲಿ ರಾಹುಲ್​ ದ್ರಾವಿಡ್​ರನ್ನ ಭೇಟಿ

ಶ್ರೀಶಾಂತ್​ ಹೇಳಿದ ಒಂದೇ ಒಂದು ಸುಳ್ಳು ಬಿಗ್​​ ಹಿಟ್ಟರ್​​​ ಸಂಜು ಸ್ಯಾಮ್ಸನ್​​​​​​ ಕರಿಯರ್ ಚೇಂಜ್ ಮಾಡ್ತು. ಆ ಸುಳ್ಳುನಿಂದ ಸ್ಯಾಮ್ಸನ್ ವಿಶ್ವದಗಲಕ್ಕೆ ಪರಿಚಯವಾದ್ರು. ಅಷ್ಟಕ್ಕೂ ಒಂದು ಸುಳ್ಳು ಫೈರಿ ಬ್ಯಾಟರ್​ ಸ್ಯಾಮ್ಸನ್ ಬದುಕನ್ನ ಕಲರ್​​ಫುಲ್ ಆಗಿಸಿದ್ದೇಗೆ?.

ಸಂಜು ಸ್ಯಾಮ್ಸನ್​​​.. ರಾಜಸ್ಥಾನ ರಾಯಲ್ಸ್​ ತಂಡದ ಬ್ಯಾಟಿಂಗ್ ಬೆನ್ನೆಲುಬು. ನಾಯಕನಾಗಿ ತಂಡವನ್ನ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ರಾಜಸ್ಥಾನ ಅಂದ್ರೆ ಸ್ಯಾಮ್ಸನ್​​, ಸ್ಯಾಮ್ಸನ್ ಅಂದ್ರೆ ರಾಜಸ್ಥಾನ ಅನ್ನುವಷ್ಟರ ಮಟ್ಟಿಗೆ ಪ್ರಖ್ಯಾತಿ ಗಳಿಸಿದ್ದಾರೆ. ಇಂತಹ ಸಂಜು ಸ್ಯಾಮ್ಸನ್​​ ಐಪಿಎಲ್​ಗೆ ಡೆಬ್ಯು ಮಾಡಲು ಕಾರಣ ಎಸ್ ಶ್ರೀಶಾಂತ್​. ಟೀಮ್ ಇಂಡಿಯಾ ಮಾಜಿ ವೇಗಿ ಹೇಳಿದ ಒಂದು ಸುಳ್ಳು ಸ್ಯಾಮ್ಸನ್​​​ ಕರಿಯರ್​​ರನ್ನೇ ಬದಲಿಸ್ತು. ಆ ಕಥೆಯನ್ನ ಬಿಗ್​ ಹಿಟ್ಟರ್ ಸ್ಯಾಮ್ಸನ್​ ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿ‌ ಅಭಿಮನ್ಯು ಮಿಥುನ್ ಸ್ಥಾನ ಕಳೆದುಕೊಂಡಿದ್ದು ಯಾಕೆ..? Exclusive ಸಂದರ್ಶನ

ಆಗ ನಾನು ಕೆಕೆಆರ್ ತಂಡದಲ್ಲಿದ್ದೆ. ಆದರೆ ಆಡಲು ಅವಕಾಶ ಸಿಗಲಿಲ್ಲ. ಎಸ್​ ಶ್ರೀಶಾಂತ್​ ರಾಜಸ್ಥಾನ ರಾಯಲ್ಸ್​ ತಂಡದಲ್ಲಿದ್ರು. ಕೆಕೆಆರ್ ಎದುರಿನ ಪಂದ್ಯ ಮುಗಿದ ಬಳಿಕ ಶ್ರೀಶಾಂತ್ ರಾಜಸ್ಥಾನ ತಂಡದ ಕ್ಯಾಪ್ಟನ್​​ ರಾಹುಲ್​ ದ್ರಾವಿಡ್​ರನ್ನ ಹೋಟೆಲ್​​​ನಲ್ಲಿ ತಡೆದು, ಈ ಹುಡುಗ ಕೇರಳದವನು. ಸ್ಥಳೀಯ ಟೂರ್ನಿಯಲ್ಲಿ ಒಂದೇ ಓವರ್​ನಲ್ಲಿ 6 ಸಿಕ್ಸರ್​​ ಸಿಡಿಸಿದ್ದಾರೆ. ನಾವು ಈತನಿಗೆ ಟ್ರಯಲ್​ ಕೊಡಬಹುದು ಎಂದು ಹೇಳುತ್ತಾರೆ. ಆದರೆ ಅದೆಲ್ಲವೂ ಶುದ್ಧ ಸುಳ್ಳು. ನಾನು ಒಂದೂ ಸಿಕ್ಸ್ ಅನ್ನ ಹೊಡೆದಿರಲಿಲ್ಲ. ಆದರೆ ರಾಹುಲ್​​ ಭಾಯ್​​, ಶ್ರೀಶಾಂತ್ ಮಾತನ್ನ​​​ ನಂಬಿ ನನ್ನನ್ನ ಟ್ರಯಲ್ಸ್​ಗೆ ಕರೆಸಿದ್ರು. ಕೊನೆಗೆ ರಾಜಸ್ಥಾನ ರಾಯಲ್ಸ್​ ತಂಡ ಸೇರಿಕೊಂಡೆ ಎಂದು ಸ್ಯಾಮ್ಸನ್​ ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಮಾಜಿ ಪ್ಲೇಯರ್​ ಹೇಳಿದ 6 ಸಿಕ್ಸರ್​ ಸುಳ್ಳು.. ಸಂಜು ಸ್ಯಾಮ್ಸನ್​​​​​​ ಕರಿಯರ್ ಫುಲ್​ ಚೇಂಜ್!

https://newsfirstlive.com/wp-content/uploads/2024/05/SAMJU_SAMSON_RR.jpg

    ಈಗ ರಾಜಸ್ಥಾನ ಅಂದ್ರೆ ಸ್ಯಾಮ್ಸನ್​​, ಸ್ಯಾಮ್ಸನ್ ಅಂದ್ರೆ ರಾಜಸ್ಥಾನ

    ಸಂಜು ಸ್ಯಾಮ್ಸನ್​​ IPL​ಗೆ ಬರಲು ಮಾಜಿ ಪ್ಲೇಯರ್ ಕಾರಣನಾ..?

    ಐಪಿಎಲ್​ ವೇಳೆ ಹೋಟೆಲ್​​​ನಲ್ಲಿ ರಾಹುಲ್​ ದ್ರಾವಿಡ್​ರನ್ನ ಭೇಟಿ

ಶ್ರೀಶಾಂತ್​ ಹೇಳಿದ ಒಂದೇ ಒಂದು ಸುಳ್ಳು ಬಿಗ್​​ ಹಿಟ್ಟರ್​​​ ಸಂಜು ಸ್ಯಾಮ್ಸನ್​​​​​​ ಕರಿಯರ್ ಚೇಂಜ್ ಮಾಡ್ತು. ಆ ಸುಳ್ಳುನಿಂದ ಸ್ಯಾಮ್ಸನ್ ವಿಶ್ವದಗಲಕ್ಕೆ ಪರಿಚಯವಾದ್ರು. ಅಷ್ಟಕ್ಕೂ ಒಂದು ಸುಳ್ಳು ಫೈರಿ ಬ್ಯಾಟರ್​ ಸ್ಯಾಮ್ಸನ್ ಬದುಕನ್ನ ಕಲರ್​​ಫುಲ್ ಆಗಿಸಿದ್ದೇಗೆ?.

ಸಂಜು ಸ್ಯಾಮ್ಸನ್​​​.. ರಾಜಸ್ಥಾನ ರಾಯಲ್ಸ್​ ತಂಡದ ಬ್ಯಾಟಿಂಗ್ ಬೆನ್ನೆಲುಬು. ನಾಯಕನಾಗಿ ತಂಡವನ್ನ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ರಾಜಸ್ಥಾನ ಅಂದ್ರೆ ಸ್ಯಾಮ್ಸನ್​​, ಸ್ಯಾಮ್ಸನ್ ಅಂದ್ರೆ ರಾಜಸ್ಥಾನ ಅನ್ನುವಷ್ಟರ ಮಟ್ಟಿಗೆ ಪ್ರಖ್ಯಾತಿ ಗಳಿಸಿದ್ದಾರೆ. ಇಂತಹ ಸಂಜು ಸ್ಯಾಮ್ಸನ್​​ ಐಪಿಎಲ್​ಗೆ ಡೆಬ್ಯು ಮಾಡಲು ಕಾರಣ ಎಸ್ ಶ್ರೀಶಾಂತ್​. ಟೀಮ್ ಇಂಡಿಯಾ ಮಾಜಿ ವೇಗಿ ಹೇಳಿದ ಒಂದು ಸುಳ್ಳು ಸ್ಯಾಮ್ಸನ್​​​ ಕರಿಯರ್​​ರನ್ನೇ ಬದಲಿಸ್ತು. ಆ ಕಥೆಯನ್ನ ಬಿಗ್​ ಹಿಟ್ಟರ್ ಸ್ಯಾಮ್ಸನ್​ ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿ‌ ಅಭಿಮನ್ಯು ಮಿಥುನ್ ಸ್ಥಾನ ಕಳೆದುಕೊಂಡಿದ್ದು ಯಾಕೆ..? Exclusive ಸಂದರ್ಶನ

ಆಗ ನಾನು ಕೆಕೆಆರ್ ತಂಡದಲ್ಲಿದ್ದೆ. ಆದರೆ ಆಡಲು ಅವಕಾಶ ಸಿಗಲಿಲ್ಲ. ಎಸ್​ ಶ್ರೀಶಾಂತ್​ ರಾಜಸ್ಥಾನ ರಾಯಲ್ಸ್​ ತಂಡದಲ್ಲಿದ್ರು. ಕೆಕೆಆರ್ ಎದುರಿನ ಪಂದ್ಯ ಮುಗಿದ ಬಳಿಕ ಶ್ರೀಶಾಂತ್ ರಾಜಸ್ಥಾನ ತಂಡದ ಕ್ಯಾಪ್ಟನ್​​ ರಾಹುಲ್​ ದ್ರಾವಿಡ್​ರನ್ನ ಹೋಟೆಲ್​​​ನಲ್ಲಿ ತಡೆದು, ಈ ಹುಡುಗ ಕೇರಳದವನು. ಸ್ಥಳೀಯ ಟೂರ್ನಿಯಲ್ಲಿ ಒಂದೇ ಓವರ್​ನಲ್ಲಿ 6 ಸಿಕ್ಸರ್​​ ಸಿಡಿಸಿದ್ದಾರೆ. ನಾವು ಈತನಿಗೆ ಟ್ರಯಲ್​ ಕೊಡಬಹುದು ಎಂದು ಹೇಳುತ್ತಾರೆ. ಆದರೆ ಅದೆಲ್ಲವೂ ಶುದ್ಧ ಸುಳ್ಳು. ನಾನು ಒಂದೂ ಸಿಕ್ಸ್ ಅನ್ನ ಹೊಡೆದಿರಲಿಲ್ಲ. ಆದರೆ ರಾಹುಲ್​​ ಭಾಯ್​​, ಶ್ರೀಶಾಂತ್ ಮಾತನ್ನ​​​ ನಂಬಿ ನನ್ನನ್ನ ಟ್ರಯಲ್ಸ್​ಗೆ ಕರೆಸಿದ್ರು. ಕೊನೆಗೆ ರಾಜಸ್ಥಾನ ರಾಯಲ್ಸ್​ ತಂಡ ಸೇರಿಕೊಂಡೆ ಎಂದು ಸ್ಯಾಮ್ಸನ್​ ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More