ವಸೀಂ ಕಳೆದ ಹಲವು ವರ್ಷಗಳಿಂದ ದಿಲ್ ಷಾದ್ ಎಂಬಾಕೆ ಜತೆ ಪ್ರೀತಿ
ಪುಟ್ಟೇನಹಳ್ಳಿಯ ಇಲಿಯಾಸ್ ನಗರದಲ್ಲಿ ನಡೆದ ವಿಚಿತ್ರ ಘಟನೆ ಇದು
7 ವರ್ಷಗಳ ಹಿಂದೆ ಮದುವೆ ಆಗಿದ್ದ ಸುಮೈಯಾ ಬಾನು ಮತ್ತು ವಸೀಂ
ಬೆಂಗಳೂರು: ಹೆಂಡತಿ ಬೇಕು ಅಂತ ಗಂಡ ಹಾಗೂ ಗಂಡ ಬೇಕು ಅಂತ ಹೆಂಡತಿ ಪೊಲೀಸ್ ಠಾಣೆ ಮೆಟ್ಟಿಲೇರಿರೋ ವಿಚಿತ್ರ ಘಟನೆ ಪುಟ್ಟೇನಹಳ್ಳಿಯ ಇಲಿಯಾಸ್ ನಗರದಲ್ಲಿ ನಡೆದಿದೆ. ಪುಟ್ಟೇನಹಳ್ಳಿಯ ಇಲಿಯಾಸ್ ನಗರದ ನಿವಾಸಿಯಾದ ಸುಮೈಯಾ ಬಾನು ಮತ್ತು ವಸೀಂ ಇಬ್ಬರು 7 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಎರಡೂವರೆ ವರ್ಷದ ಹೆಣ್ಣು ಮಗು ಕೂಡ ಇದೆ. ಆದರೆ ಇತ್ತೀಚೆಗೆ ಪತಿ ವಸೀಂಗೆ ದಿಲ್ ಷಾದ್ ಎಂಬಾಕೆಯನ್ನು ಪ್ರೀತಿಸುತ್ತಿದ್ದ.
ಇದನ್ನು ಓದಿ: BIGG BOSS: ಇಶಾನಿ, ರಕ್ಷಕ್ಗೆ ಬೆಂಡೆತ್ತಿದ ಕಿಚ್ಚ ಸುದೀಪ್.. ಬಿಗ್ಬಾಸ್ ವಾರದ ಕತೆಯಲ್ಲಿ ಬೆಂಕಿ, ಬಿರುಗಾಳಿ!
ಕಳೆದ ತಿಂಗಳು ವಸೀಂ ಹಾಗೂ ದಿಲ್ಷಾದ್ ಇಬ್ಬರು ಒಂದೇ ಹೋಟೆಲ್ನಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಸುಮೈದಾಭಾನು ಹಾಗೂ ಕುಟುಂಬದವರು ಇಬ್ಬರನ್ನು ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದರು. ಈ ವೇಳೆ ಹೋಟೆಲ್ನಲ್ಲಿ ದೊಡ್ಡ ಜಗಳವೇ ನಡೆದು ಹೋಗಿತ್ತು. ಬಳಿಕ ಪುಟ್ಟೇನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕೂಡ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಆದರೆ ಈಗ ವಸೀಂ ಹಾಗೂ ದಿಲ್ಷಾದ್ ಇಬ್ಬರು ಪರಾರಿಯಾಗಿದ್ದಾರೆ.
ಹೀಗಾಗಿ ಸುಮೈದಾಭಾನು ನನ್ನ ಗಂಡನನ್ನು ಹುಡುಕಿಕೊಡಿ ಅಂತ ಠಾಣೆಗೆ ದೂರು ನೀಡಿದ್ದಾಳೆ. ಇತ್ತ ದಿಲ್ ಷಾದ್ ಗಂಡ ನಯೀಂ ಕೂಡ ಠಾಣೆ ಮೆಟ್ಟಿಲೇರಿದ್ದಾರೆ. ನನ್ನ ಹೆಂಡತಿ ವಸೀಂ ಜೊತೆ ಪರಾರಿಯಾಗಿದ್ದಾಳೆ, ಹುಡುಕಿಕೊಡಿ ಅಂತ ದೂರು ನೀಡಿದ್ದಾರೆ. ಸದ್ಯ ಎರಡು ದೂರುಗಳನ್ನು ಪಡೆದುಕೊಂಡ ಪೊಲೀಸರು ಪರಾರಿಯಾದ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಒಂದು ಕಡೆ ಗಂಡ ಬೇಕು ಅಂತ ಸುಮೈದಾ ಇದ್ರೆ ಮತ್ತೊಂದು ಕಡೆ ಹೆಂಡತಿಬೇಕು ಅಂತಿರೋ ನಯೀಂ ಮಧ್ಯೆ ಪೊಲೀಸರಿಂದ ತನಿಖೆ ಮುಂದುವರೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಸೀಂ ಕಳೆದ ಹಲವು ವರ್ಷಗಳಿಂದ ದಿಲ್ ಷಾದ್ ಎಂಬಾಕೆ ಜತೆ ಪ್ರೀತಿ
ಪುಟ್ಟೇನಹಳ್ಳಿಯ ಇಲಿಯಾಸ್ ನಗರದಲ್ಲಿ ನಡೆದ ವಿಚಿತ್ರ ಘಟನೆ ಇದು
7 ವರ್ಷಗಳ ಹಿಂದೆ ಮದುವೆ ಆಗಿದ್ದ ಸುಮೈಯಾ ಬಾನು ಮತ್ತು ವಸೀಂ
ಬೆಂಗಳೂರು: ಹೆಂಡತಿ ಬೇಕು ಅಂತ ಗಂಡ ಹಾಗೂ ಗಂಡ ಬೇಕು ಅಂತ ಹೆಂಡತಿ ಪೊಲೀಸ್ ಠಾಣೆ ಮೆಟ್ಟಿಲೇರಿರೋ ವಿಚಿತ್ರ ಘಟನೆ ಪುಟ್ಟೇನಹಳ್ಳಿಯ ಇಲಿಯಾಸ್ ನಗರದಲ್ಲಿ ನಡೆದಿದೆ. ಪುಟ್ಟೇನಹಳ್ಳಿಯ ಇಲಿಯಾಸ್ ನಗರದ ನಿವಾಸಿಯಾದ ಸುಮೈಯಾ ಬಾನು ಮತ್ತು ವಸೀಂ ಇಬ್ಬರು 7 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಎರಡೂವರೆ ವರ್ಷದ ಹೆಣ್ಣು ಮಗು ಕೂಡ ಇದೆ. ಆದರೆ ಇತ್ತೀಚೆಗೆ ಪತಿ ವಸೀಂಗೆ ದಿಲ್ ಷಾದ್ ಎಂಬಾಕೆಯನ್ನು ಪ್ರೀತಿಸುತ್ತಿದ್ದ.
ಇದನ್ನು ಓದಿ: BIGG BOSS: ಇಶಾನಿ, ರಕ್ಷಕ್ಗೆ ಬೆಂಡೆತ್ತಿದ ಕಿಚ್ಚ ಸುದೀಪ್.. ಬಿಗ್ಬಾಸ್ ವಾರದ ಕತೆಯಲ್ಲಿ ಬೆಂಕಿ, ಬಿರುಗಾಳಿ!
ಕಳೆದ ತಿಂಗಳು ವಸೀಂ ಹಾಗೂ ದಿಲ್ಷಾದ್ ಇಬ್ಬರು ಒಂದೇ ಹೋಟೆಲ್ನಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಸುಮೈದಾಭಾನು ಹಾಗೂ ಕುಟುಂಬದವರು ಇಬ್ಬರನ್ನು ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದರು. ಈ ವೇಳೆ ಹೋಟೆಲ್ನಲ್ಲಿ ದೊಡ್ಡ ಜಗಳವೇ ನಡೆದು ಹೋಗಿತ್ತು. ಬಳಿಕ ಪುಟ್ಟೇನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕೂಡ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಆದರೆ ಈಗ ವಸೀಂ ಹಾಗೂ ದಿಲ್ಷಾದ್ ಇಬ್ಬರು ಪರಾರಿಯಾಗಿದ್ದಾರೆ.
ಹೀಗಾಗಿ ಸುಮೈದಾಭಾನು ನನ್ನ ಗಂಡನನ್ನು ಹುಡುಕಿಕೊಡಿ ಅಂತ ಠಾಣೆಗೆ ದೂರು ನೀಡಿದ್ದಾಳೆ. ಇತ್ತ ದಿಲ್ ಷಾದ್ ಗಂಡ ನಯೀಂ ಕೂಡ ಠಾಣೆ ಮೆಟ್ಟಿಲೇರಿದ್ದಾರೆ. ನನ್ನ ಹೆಂಡತಿ ವಸೀಂ ಜೊತೆ ಪರಾರಿಯಾಗಿದ್ದಾಳೆ, ಹುಡುಕಿಕೊಡಿ ಅಂತ ದೂರು ನೀಡಿದ್ದಾರೆ. ಸದ್ಯ ಎರಡು ದೂರುಗಳನ್ನು ಪಡೆದುಕೊಂಡ ಪೊಲೀಸರು ಪರಾರಿಯಾದ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಒಂದು ಕಡೆ ಗಂಡ ಬೇಕು ಅಂತ ಸುಮೈದಾ ಇದ್ರೆ ಮತ್ತೊಂದು ಕಡೆ ಹೆಂಡತಿಬೇಕು ಅಂತಿರೋ ನಯೀಂ ಮಧ್ಯೆ ಪೊಲೀಸರಿಂದ ತನಿಖೆ ಮುಂದುವರೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ